<p><strong>ಕೂಡ್ಲಿಗಿ: </strong>ತಾಲ್ಲೂಕಿನಾದ್ಯಂತ ಸೋಮವಾರ ಮಳೆ ಸುರಿದಿದ್ದು, ಕೃಷಿ ಚಟುವಟಿಕೆಗಳು ಚುರುಕುಗೊಂಡಿವೆ. ಮುಂಗಾರು ಮಳೆ ಸಂಪೂರ್ಣ ಕೈಕೊಟ್ಟು ರೈತರೆಲ್ಲ ಗುಳೆ ಹೋಗುತ್ತಿರುವಾಗ ಸೋಮವಾರ ಮಳೆ ಸುರಿದು ಆಶಾಭಾವನೆಯನ್ನು ಮೂಡಿಸಿದೆ.<br /> <br /> ತಾಲ್ಲೂಕಿನಲ್ಲಿ ಸೋಮವಾರ ಸುರಿದ ಮಳೆಯ ಪ್ರಮಾಣ, ಕೂಡ್ಲಿಗಿ-33.6 ಮಿ.ಮೀ, ಗುಡೇಕೋಟೆ-14.6 ಮಿ.ಮೀ, ಹೊಸಹಳ್ಳಿ-33.6 ಮಿ.ಮೀ, ಕೊಟ್ಟೂರು-12.4 ಮಿ.ಮೀ, ಬಣವಿಕಲ್ಲು-9.9 ಮಿ.ಮೀ, ಚಿಕ್ಕಜೋಗಿಹಳ್ಳಿ-23.4 ಮಿ.ಮೀ.ನಷ್ಟು ಮಳೆ ಸುರಿದಿದೆ. <br /> <br /> ತಾಲ್ಲೂಕಿನಲ್ಲಿ ರೈತರು ಈಗಾಗಲೇ ಶೇ 50ರಷ್ಟು ಬಿತ್ತನೆ ಮಾಡ್ದ್ದಿದು, ಇದೇ ರೀತಿಯಲ್ಲಿ ಮಳೆ ಸುರಿದರೆ ಬಿತ್ತನೆಯು ಮತ್ತಷ್ಟು ಚುರುಕುಗೊಳ್ಳುವುದು ಎಂದು ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಕೆ.ಎಂ.ಚನ್ನಬಸಯ್ಯ ತಿಳಿಸಿದ್ದಾರೆ. <br /> <br /> ಪ್ರಸ್ತುತ ಮೆಕ್ಕೆಜೋಳ, ಜೋಳ, ಸಜ್ಜೆ, ನವಣೆ, ಶೇಂಗಾ ಬೀಜ ಬಿತ್ತನೆ ಆರಂಭಗೊಳ್ಳುವುದು ಎಂದು ಅವರು ತಿಳಿಸಿದ್ದಾರೆ. ತಾಲ್ಲೂಕಿನಾದ್ಯಂತ ಮೋಡ ಕವಿದ ವಾತಾವರಣ ಮುಂದುವರಿದಿದ್ದು, ತಮ್ಮ ಬವಣೆ ನೀಗಿಸಲು ಮತ್ತಷ್ಟು ಮಳೆ ಸುರಿಯಲೆಂದು ರೈತರು ಪ್ರಾರ್ಥಿಸುತ್ತಿದ್ದಾರೆ.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕೂಡ್ಲಿಗಿ: </strong>ತಾಲ್ಲೂಕಿನಾದ್ಯಂತ ಸೋಮವಾರ ಮಳೆ ಸುರಿದಿದ್ದು, ಕೃಷಿ ಚಟುವಟಿಕೆಗಳು ಚುರುಕುಗೊಂಡಿವೆ. ಮುಂಗಾರು ಮಳೆ ಸಂಪೂರ್ಣ ಕೈಕೊಟ್ಟು ರೈತರೆಲ್ಲ ಗುಳೆ ಹೋಗುತ್ತಿರುವಾಗ ಸೋಮವಾರ ಮಳೆ ಸುರಿದು ಆಶಾಭಾವನೆಯನ್ನು ಮೂಡಿಸಿದೆ.<br /> <br /> ತಾಲ್ಲೂಕಿನಲ್ಲಿ ಸೋಮವಾರ ಸುರಿದ ಮಳೆಯ ಪ್ರಮಾಣ, ಕೂಡ್ಲಿಗಿ-33.6 ಮಿ.ಮೀ, ಗುಡೇಕೋಟೆ-14.6 ಮಿ.ಮೀ, ಹೊಸಹಳ್ಳಿ-33.6 ಮಿ.ಮೀ, ಕೊಟ್ಟೂರು-12.4 ಮಿ.ಮೀ, ಬಣವಿಕಲ್ಲು-9.9 ಮಿ.ಮೀ, ಚಿಕ್ಕಜೋಗಿಹಳ್ಳಿ-23.4 ಮಿ.ಮೀ.ನಷ್ಟು ಮಳೆ ಸುರಿದಿದೆ. <br /> <br /> ತಾಲ್ಲೂಕಿನಲ್ಲಿ ರೈತರು ಈಗಾಗಲೇ ಶೇ 50ರಷ್ಟು ಬಿತ್ತನೆ ಮಾಡ್ದ್ದಿದು, ಇದೇ ರೀತಿಯಲ್ಲಿ ಮಳೆ ಸುರಿದರೆ ಬಿತ್ತನೆಯು ಮತ್ತಷ್ಟು ಚುರುಕುಗೊಳ್ಳುವುದು ಎಂದು ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಕೆ.ಎಂ.ಚನ್ನಬಸಯ್ಯ ತಿಳಿಸಿದ್ದಾರೆ. <br /> <br /> ಪ್ರಸ್ತುತ ಮೆಕ್ಕೆಜೋಳ, ಜೋಳ, ಸಜ್ಜೆ, ನವಣೆ, ಶೇಂಗಾ ಬೀಜ ಬಿತ್ತನೆ ಆರಂಭಗೊಳ್ಳುವುದು ಎಂದು ಅವರು ತಿಳಿಸಿದ್ದಾರೆ. ತಾಲ್ಲೂಕಿನಾದ್ಯಂತ ಮೋಡ ಕವಿದ ವಾತಾವರಣ ಮುಂದುವರಿದಿದ್ದು, ತಮ್ಮ ಬವಣೆ ನೀಗಿಸಲು ಮತ್ತಷ್ಟು ಮಳೆ ಸುರಿಯಲೆಂದು ರೈತರು ಪ್ರಾರ್ಥಿಸುತ್ತಿದ್ದಾರೆ.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>