<p>ಕನ್ನಡದ ಮೂಲಕ ಕನ್ನಡಿಗ ತನ್ನ `ಮೋಕ್ಷ~ವ ಗಳಿಸಿಕೊಳ್ಳುವುದಾದರೆ ಸಂಸ್ಕೃತದ ಹಂಗೇನು? ಎಂದು ಪ್ರಶ್ನಿಸಿದ ಧೀಮಂತ ಕವಿ ಮಹಲಿಂಗರಂಗ. 17ನೇ ಶತಮಾನದ ಈ ಕವಿಯ `ಅನುಭವಾಮೃತ~ ಕನ್ನಡದ ಗಣ್ಯಕೃತಿಗಳಲ್ಲೊಂದು. <br /> <br /> ಕ್ರಿ.ಶ. 1840ರಲ್ಲಿ ಮೈಸೂರು ಅರಮನೆಯ ಕಲ್ಲಚ್ಚಿನಲ್ಲಿ ಮುದ್ರಿತ ಕೃತಿಯಿಂದ ಹಿಡಿದು ಇಂದಿನವರೆಗೆ ಹತ್ತಾರು ವಿದ್ವಾಂಸರಿಂದ ಅನೇಕ ಸಲ ಸಂಪಾದಿತಗೊಂಡು ಪುನರ್ ಮುದ್ರಣಗೊಂಡಿದೆ. ಕ್ರಿ.ಶ. 1813ರಲ್ಲಿ ಸಂಸ್ಕೃತಕ್ಕೂ, ಕಳೆದ ಶತಮಾನದಲ್ಲಿ ತೆಲುಗಿಗೂ ಭಾಷಾಂತರಗೊಂಡಿದೆ.<br /> <br /> ಕವಿಯು ದಾವಣಗೆರೆಯ ಪರಿಸರದವನು. ಜಗಳೂರು ದೇವಿಕೆರೆಯ ಸಮೀಪದ ಕೊಣಚಗಲ್ಲು ಗುಡ್ಡದಲ್ಲಿ ತಪಸ್ಸು ಮಾಡಿದ ಜಾಗ ತರುವಾಯ ರಂಗನಾಥಸ್ವಾಮಿ ದೇವಾಲಯವಾಗಿದೆ. ಕವಿಯ ಮೂಲ ಸಮಾಧಿ ಅದೇ ಪರಿಸರದಲ್ಲಿದೆ.<br /> <br /> ಅಲ್ಲಿಯ ಸಮಾಧಿಯ ಮಣ್ಣನ್ನು ತಂದು ಶ್ರದ್ಧಾಳುಗಳು ದಾವಣಗೆರೆಯಲ್ಲಿ ಸಮಾಧಿ ಸ್ಮಾರಕವನ್ನು ಬಹು ಹಿಂದೆ ನಿರ್ಮಿಸಿದ್ದಾರೆ. ರೈಲು ಹಳಿಗಳ ಪಕ್ಕದಲ್ಲಿ ಗಿಡಮಗಳಿಂದ ಕೂಡಿದ್ದ ಬಹು ವಿಶಾಲ ಪ್ರಾಂಗಣ. ಸಭಾ ಮಂಟಪವನ್ನೊಳಗೊಂಡ ಈ ಸ್ಮಾರಕವು ಒತ್ತುವರಿಯಾಗಿದೆ. ಸುತ್ತ ವಸತಿ ನಿಲಯಗಳು ತಲೆ ಎತ್ತಿವೆ. <br /> <br /> ಸ್ಮಾರಕವೂ ಒತ್ತುವರಿಯಿಂದ ಮುಕ್ತವಾಗಬೇಕಿದೆ. ಕವಿಯ ಹೆಸರಿನಲ್ಲಿ ಪ್ರಶಸ್ತಿಯೊಂದನ್ನು ಸ್ಥಾಪಿಸಿದ ದಾವಣಗೆರೆಯ ಪ್ರಜ್ಞಾವಂತ ಜನತೆ, ಕನ್ನಡ ಸಾಹಿತ್ಯ ಪರಿಷತ್ತು, ಕನ್ನಡ ಸಂಘಟನೆಗಳು ಕೈಜೋಡಿಸಿ ಈ ಕಾರ್ಯವನ್ನು ಕೈಗೆತ್ತಿಕೊಳ್ಳಲಿ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಕನ್ನಡದ ಮೂಲಕ ಕನ್ನಡಿಗ ತನ್ನ `ಮೋಕ್ಷ~ವ ಗಳಿಸಿಕೊಳ್ಳುವುದಾದರೆ ಸಂಸ್ಕೃತದ ಹಂಗೇನು? ಎಂದು ಪ್ರಶ್ನಿಸಿದ ಧೀಮಂತ ಕವಿ ಮಹಲಿಂಗರಂಗ. 17ನೇ ಶತಮಾನದ ಈ ಕವಿಯ `ಅನುಭವಾಮೃತ~ ಕನ್ನಡದ ಗಣ್ಯಕೃತಿಗಳಲ್ಲೊಂದು. <br /> <br /> ಕ್ರಿ.ಶ. 1840ರಲ್ಲಿ ಮೈಸೂರು ಅರಮನೆಯ ಕಲ್ಲಚ್ಚಿನಲ್ಲಿ ಮುದ್ರಿತ ಕೃತಿಯಿಂದ ಹಿಡಿದು ಇಂದಿನವರೆಗೆ ಹತ್ತಾರು ವಿದ್ವಾಂಸರಿಂದ ಅನೇಕ ಸಲ ಸಂಪಾದಿತಗೊಂಡು ಪುನರ್ ಮುದ್ರಣಗೊಂಡಿದೆ. ಕ್ರಿ.ಶ. 1813ರಲ್ಲಿ ಸಂಸ್ಕೃತಕ್ಕೂ, ಕಳೆದ ಶತಮಾನದಲ್ಲಿ ತೆಲುಗಿಗೂ ಭಾಷಾಂತರಗೊಂಡಿದೆ.<br /> <br /> ಕವಿಯು ದಾವಣಗೆರೆಯ ಪರಿಸರದವನು. ಜಗಳೂರು ದೇವಿಕೆರೆಯ ಸಮೀಪದ ಕೊಣಚಗಲ್ಲು ಗುಡ್ಡದಲ್ಲಿ ತಪಸ್ಸು ಮಾಡಿದ ಜಾಗ ತರುವಾಯ ರಂಗನಾಥಸ್ವಾಮಿ ದೇವಾಲಯವಾಗಿದೆ. ಕವಿಯ ಮೂಲ ಸಮಾಧಿ ಅದೇ ಪರಿಸರದಲ್ಲಿದೆ.<br /> <br /> ಅಲ್ಲಿಯ ಸಮಾಧಿಯ ಮಣ್ಣನ್ನು ತಂದು ಶ್ರದ್ಧಾಳುಗಳು ದಾವಣಗೆರೆಯಲ್ಲಿ ಸಮಾಧಿ ಸ್ಮಾರಕವನ್ನು ಬಹು ಹಿಂದೆ ನಿರ್ಮಿಸಿದ್ದಾರೆ. ರೈಲು ಹಳಿಗಳ ಪಕ್ಕದಲ್ಲಿ ಗಿಡಮಗಳಿಂದ ಕೂಡಿದ್ದ ಬಹು ವಿಶಾಲ ಪ್ರಾಂಗಣ. ಸಭಾ ಮಂಟಪವನ್ನೊಳಗೊಂಡ ಈ ಸ್ಮಾರಕವು ಒತ್ತುವರಿಯಾಗಿದೆ. ಸುತ್ತ ವಸತಿ ನಿಲಯಗಳು ತಲೆ ಎತ್ತಿವೆ. <br /> <br /> ಸ್ಮಾರಕವೂ ಒತ್ತುವರಿಯಿಂದ ಮುಕ್ತವಾಗಬೇಕಿದೆ. ಕವಿಯ ಹೆಸರಿನಲ್ಲಿ ಪ್ರಶಸ್ತಿಯೊಂದನ್ನು ಸ್ಥಾಪಿಸಿದ ದಾವಣಗೆರೆಯ ಪ್ರಜ್ಞಾವಂತ ಜನತೆ, ಕನ್ನಡ ಸಾಹಿತ್ಯ ಪರಿಷತ್ತು, ಕನ್ನಡ ಸಂಘಟನೆಗಳು ಕೈಜೋಡಿಸಿ ಈ ಕಾರ್ಯವನ್ನು ಕೈಗೆತ್ತಿಕೊಳ್ಳಲಿ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>