<p><strong>ಶ್ರೀನಿವಾಸಪುರ:</strong> ತಾಲ್ಲೂಕಿನಲ್ಲಿ ಬೆಳೆದಿರುವ ಮಾವಿನ ಕಾಯಿಗೆ ಅಂಟು ನೊಣದ ಹಾವಳಿ ಹೆಚ್ಚಿದ್ದು, ಕಾಯಿ ನೊಣಗಳು ಸ್ರವಿಸುವ ಅಂಟಿನಿಂದ ಕಳೆಗುಂದುತ್ತಿದೆ. ಇದು ಈಗಾಗಲೆ ಬೆಲೆ ಕುಸಿತದಿಂದ ಬೇಸತ್ತಿರುವ ಬೆಳೆಗಾರರಿಗೆ ದೊಡ್ಡ ಹೊಡೆತವಾಗಿ ಪರಿಣಮಿಸಿದೆ.<br /> <br /> ಚಿಕ್ಕ ಗಾತ್ರದ ಮಿಡತೆ ಆಕಾರದ ಕೀಟಗಳು ಎಲೆಗಳ ಮೇಲೆ ನೆಲೆಸಿ, ಕಾಯಿಯ ಮೇಲೆ ಅಂಟು ಸುರಿಸುತ್ತಿವೆ. ಇದು ತುಂಬಾ ದಟ್ಟವಾಗಿದ್ದು, ಕಾಯಿ ಕೀಳಲೂ ಅಸಹ್ಯಪಡುವಂತಾಗಿದೆ.<br /> <br /> ಕಾಯಿ ಕಿತ್ತು ಕೆಳಗೆ ಹಾಕಿದರೆ ಮಣ್ಣು, ಕಸಕಡ್ಡಿ ಕಾಯಿಗೆ ಅಂಟಿಕೊಂಡು ಕಸದಂತೆ ಕಾಣುತ್ತದೆ. ಇಂಥ ಕಾಯಿಯನ್ನು ಮಾರುಕಟ್ಟೆಗೆ ಕೊಂಡೊಯ್ದರೆ, ವ್ಯಾಪಾರಿಗಳು ತೀರಾ ಕಡಿಮೆ ಬೆಲೆಗೆ ಕೇಳುತ್ತಾರೆ.<br /> <br /> ಹಿಂದಿನ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಮಾವಿನ ಕಾಯಿ ಬೆಲೆಯಲ್ಲಿ ತೀರಾ ಇಳಿತ ಉಂಟಾಗಿದೆ.<br /> <br /> ಸಾಲದ್ದಕ್ಕೆ ಅಂಟು ನೊಣದ ಹಾವಳಿ ಬೇರೆ. ಇದರಿಂದ ಮಾವು ಬೆಳೆಗಾರರ ಸ್ಥಿತಿ ಬೆಂಕಿಯಿಂದ ಬಾಣಲೆಗೆ ಬಿದ್ದಂತಾಗಿದೆ. ಈ ಹಿಂದೆ ಈ ಸಮಸ್ಯೆ ಹೂವಿನ ಹಂತದಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಿತ್ತು. ಆದರೆ ಕಳೆದ ವರ್ಷದಿಂದ ಈಚೆಗೆ ಮಾವು ಕಟಾವು ಕಾಲಕ್ಕೆ ಸರಿಯಾಗಿ ಈ ಅಂಟು ಕೀಟಗಳ ಬಾಧೆ ಹೆಚ್ಚಿದೆ.<br /> <br /> ಈಗ ಮಾವು ಬೆಳೆಗಾರರು ಮಾವಿನ ಕಾಯಿ ಇಳಿಸುವುದನ್ನು ಬಿಟ್ಟು ಅಂಟು ನೊಣಗಳ ನಿಯಂತ್ರಣಕ್ಕೆ ದುಬಾರಿ ಬೆಲೆಯ ಔಷಧಿ ಸಿಂಪಡಣೆ ಮಾಡುವ ಕಾಯಕದಲ್ಲಿ ತೊಡಗಿದ್ದಾರೆ. ಮೋಡ ಮುಸುಕಿದ ವಾತಾವರಣ ಹಾಗೂ ಆಗೊಮ್ಮೆ ಈಗೊಮ್ಮೆ ಹನಿಯುವ ತುಂತುರು ಮಳೆ ಔಷಧಿ ಸಿಂಪಡನೆಗೆ ಅಡ್ಡಿ ಉಂಟುಮಾಡಿದೆ. ಈ ಪರಿಸ್ಥಿತಿಯಲ್ಲಿ ರೈತರು ಏನು ಮಾಡಬೇಕೆಂದು ತೋಚದೆ ತಲೆಯ ಮೇಲೆ ಕೈ ಹೊತ್ತು ಕುಳಿತಿದ್ದಾರೆ.<br /> <br /> ಜ್ಯೂಸ್ ತಯಾರಿಕೆಯಲ್ಲಿ ಹೆಚ್ಚಾಗಿ ಬಳಸುವ ತೋತಾಪುರಿ ಜಾತಿಯ ಮಾವು ಇನ್ನೂ ಪೂರ್ಣ ಪ್ರಮಾಣದಲ್ಲಿ ಕೊಯಿಲಿಗೆ ಬಂದಿಲ್ಲ. ದೊಡ್ಡ ಪ್ರಮಾಣದಲ್ಲಿ ಬೆಳೆಯುವ ನೀಲಂ ಜಾತಿಯ ಮಾವು ಕೊಯಿಲಿಗೆ ಬರಬೇಕಾದರೆ ಇನ್ನೂ ಕನಿಷ್ಟ 20 ದಿನ ಬೇಕು. ಈ ಹಂತದಲ್ಲಿ ಸಮಸ್ಯೆ ತಲೆದೋರಿರುವುದು ದೊಡ್ಡ ತಲೆನೋವಾಗಿ ಪರಿಣಮಿಸಿದೆ.<br /> <br /> ಇದು ಸಾಲದೆಂಬಂತೆ ತೋಟಗಳಲ್ಲಿ ಕಪ್ಪು ಚುಕ್ಕೆ ರೋಗ ಹೆಚ್ಚಿದೆ. ಹೂಜಿ ನೊಣದ ಹಾವಳಿಯೂ ಹೆಚ್ಚಾಗಿದೆ. ಒಟ್ಟಾರೆ ಮಾವು ಬೆಳೆಗಾರರು ಬೇರೆ ಬೇರೆ ಸಮಸ್ಯೆಗಳ ಸುಳಿಗೆ ಸಿಕ್ಕಿ ನಲಗುವಂತಾಗಿದೆ.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಶ್ರೀನಿವಾಸಪುರ:</strong> ತಾಲ್ಲೂಕಿನಲ್ಲಿ ಬೆಳೆದಿರುವ ಮಾವಿನ ಕಾಯಿಗೆ ಅಂಟು ನೊಣದ ಹಾವಳಿ ಹೆಚ್ಚಿದ್ದು, ಕಾಯಿ ನೊಣಗಳು ಸ್ರವಿಸುವ ಅಂಟಿನಿಂದ ಕಳೆಗುಂದುತ್ತಿದೆ. ಇದು ಈಗಾಗಲೆ ಬೆಲೆ ಕುಸಿತದಿಂದ ಬೇಸತ್ತಿರುವ ಬೆಳೆಗಾರರಿಗೆ ದೊಡ್ಡ ಹೊಡೆತವಾಗಿ ಪರಿಣಮಿಸಿದೆ.<br /> <br /> ಚಿಕ್ಕ ಗಾತ್ರದ ಮಿಡತೆ ಆಕಾರದ ಕೀಟಗಳು ಎಲೆಗಳ ಮೇಲೆ ನೆಲೆಸಿ, ಕಾಯಿಯ ಮೇಲೆ ಅಂಟು ಸುರಿಸುತ್ತಿವೆ. ಇದು ತುಂಬಾ ದಟ್ಟವಾಗಿದ್ದು, ಕಾಯಿ ಕೀಳಲೂ ಅಸಹ್ಯಪಡುವಂತಾಗಿದೆ.<br /> <br /> ಕಾಯಿ ಕಿತ್ತು ಕೆಳಗೆ ಹಾಕಿದರೆ ಮಣ್ಣು, ಕಸಕಡ್ಡಿ ಕಾಯಿಗೆ ಅಂಟಿಕೊಂಡು ಕಸದಂತೆ ಕಾಣುತ್ತದೆ. ಇಂಥ ಕಾಯಿಯನ್ನು ಮಾರುಕಟ್ಟೆಗೆ ಕೊಂಡೊಯ್ದರೆ, ವ್ಯಾಪಾರಿಗಳು ತೀರಾ ಕಡಿಮೆ ಬೆಲೆಗೆ ಕೇಳುತ್ತಾರೆ.<br /> <br /> ಹಿಂದಿನ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಮಾವಿನ ಕಾಯಿ ಬೆಲೆಯಲ್ಲಿ ತೀರಾ ಇಳಿತ ಉಂಟಾಗಿದೆ.<br /> <br /> ಸಾಲದ್ದಕ್ಕೆ ಅಂಟು ನೊಣದ ಹಾವಳಿ ಬೇರೆ. ಇದರಿಂದ ಮಾವು ಬೆಳೆಗಾರರ ಸ್ಥಿತಿ ಬೆಂಕಿಯಿಂದ ಬಾಣಲೆಗೆ ಬಿದ್ದಂತಾಗಿದೆ. ಈ ಹಿಂದೆ ಈ ಸಮಸ್ಯೆ ಹೂವಿನ ಹಂತದಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಿತ್ತು. ಆದರೆ ಕಳೆದ ವರ್ಷದಿಂದ ಈಚೆಗೆ ಮಾವು ಕಟಾವು ಕಾಲಕ್ಕೆ ಸರಿಯಾಗಿ ಈ ಅಂಟು ಕೀಟಗಳ ಬಾಧೆ ಹೆಚ್ಚಿದೆ.<br /> <br /> ಈಗ ಮಾವು ಬೆಳೆಗಾರರು ಮಾವಿನ ಕಾಯಿ ಇಳಿಸುವುದನ್ನು ಬಿಟ್ಟು ಅಂಟು ನೊಣಗಳ ನಿಯಂತ್ರಣಕ್ಕೆ ದುಬಾರಿ ಬೆಲೆಯ ಔಷಧಿ ಸಿಂಪಡಣೆ ಮಾಡುವ ಕಾಯಕದಲ್ಲಿ ತೊಡಗಿದ್ದಾರೆ. ಮೋಡ ಮುಸುಕಿದ ವಾತಾವರಣ ಹಾಗೂ ಆಗೊಮ್ಮೆ ಈಗೊಮ್ಮೆ ಹನಿಯುವ ತುಂತುರು ಮಳೆ ಔಷಧಿ ಸಿಂಪಡನೆಗೆ ಅಡ್ಡಿ ಉಂಟುಮಾಡಿದೆ. ಈ ಪರಿಸ್ಥಿತಿಯಲ್ಲಿ ರೈತರು ಏನು ಮಾಡಬೇಕೆಂದು ತೋಚದೆ ತಲೆಯ ಮೇಲೆ ಕೈ ಹೊತ್ತು ಕುಳಿತಿದ್ದಾರೆ.<br /> <br /> ಜ್ಯೂಸ್ ತಯಾರಿಕೆಯಲ್ಲಿ ಹೆಚ್ಚಾಗಿ ಬಳಸುವ ತೋತಾಪುರಿ ಜಾತಿಯ ಮಾವು ಇನ್ನೂ ಪೂರ್ಣ ಪ್ರಮಾಣದಲ್ಲಿ ಕೊಯಿಲಿಗೆ ಬಂದಿಲ್ಲ. ದೊಡ್ಡ ಪ್ರಮಾಣದಲ್ಲಿ ಬೆಳೆಯುವ ನೀಲಂ ಜಾತಿಯ ಮಾವು ಕೊಯಿಲಿಗೆ ಬರಬೇಕಾದರೆ ಇನ್ನೂ ಕನಿಷ್ಟ 20 ದಿನ ಬೇಕು. ಈ ಹಂತದಲ್ಲಿ ಸಮಸ್ಯೆ ತಲೆದೋರಿರುವುದು ದೊಡ್ಡ ತಲೆನೋವಾಗಿ ಪರಿಣಮಿಸಿದೆ.<br /> <br /> ಇದು ಸಾಲದೆಂಬಂತೆ ತೋಟಗಳಲ್ಲಿ ಕಪ್ಪು ಚುಕ್ಕೆ ರೋಗ ಹೆಚ್ಚಿದೆ. ಹೂಜಿ ನೊಣದ ಹಾವಳಿಯೂ ಹೆಚ್ಚಾಗಿದೆ. ಒಟ್ಟಾರೆ ಮಾವು ಬೆಳೆಗಾರರು ಬೇರೆ ಬೇರೆ ಸಮಸ್ಯೆಗಳ ಸುಳಿಗೆ ಸಿಕ್ಕಿ ನಲಗುವಂತಾಗಿದೆ.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>