<p><strong>ಕೃಷ್ಣರಾಜಪುರ: </strong>ವಾರ್ಡ್ ವ್ಯಾಪ್ತಿಯ ವಿಭೂತಿಪುರ ಸಮುದಾಯ ಭವನಕ್ಕೆ ಎರಡು ವರ್ಷಗಳಿಂದ ಬೀಗ ಜಡಿಯಲಾಗಿದ್ದು, ಸಮುದಾಯದ ಪಾಲಿಗೆ ಇದ್ದೂ ಇಲ್ಲದಂತಾಗಿದೆ ಎಂದು ಸ್ಥಳೀಯರು ದೂರಿದ್ದಾರೆ.‘ಭವನಕ್ಕೆ ಬೀಗ ಹಾಕಿರುವುದರಿಂದ ಇಲ್ಲಿ ಇಡಲಾಗಿರುವ ಹೊಲಿಗೆ ಯಂತ್ರಗಳಿಗೆ ಹಾಗೂ ಕಂಪ್ಯೂಟರ್ಗಳಿಗೆ ದೂಳು ಹಿಡಿದಿದೆ. ಈ ಯಂತ್ರಗಳು ಯಾವುದೇ ಪ್ರಯೋಜನಕ್ಕೆ ಬಾರದಂತಾಗಿವೆ’ ಎಂದು ಅವರು ದೂರಿದ್ದಾರೆ. <br /> <br /> ‘ಈ ಅವ್ಯವಸ್ಥೆಯನ್ನು ಸರಿಪಡಿಸಿ, ಇಲ್ಲಿ ಹೊಲಿಗೆ ಹಾಗೂ ಕಂಪ್ಯೂಟರ್ ತರಬೇತಿ ತರಗತಿಗಳನ್ನು ಸದ್ಯದಲ್ಲಿಯೇ ನಡೆಸುವುದಾಗಿ ಪಾಲಿಕೆ ಸದಸ್ಯ ಸಿದ್ದಲಿಂಗಯ್ಯ ಅವರು ಕಾರ್ಯಕ್ರಮವೊಂದರಲ್ಲಿ ಹೇಳಿದ್ದರು. ಇದುವರೆಗೆ ಈ ಮಾತು ಭರವಸೆಯಾಗಿಯೇ ಉಳಿದಿದೆ ಹೊರತು ಈಡೇರಿಲ್ಲ’ ಎಂದು ಸ್ಥಳೀಯ ವಾಸಿ ನಾಗೇಂದ್ರ ಬೇಸರ ವ್ಯಕ್ತಪಡಿಸಿದ್ದಾರೆ.<br /> <br /> ಇದಕ್ಕೂ ಮುಂಚೆ ಇಲ್ಲಿ ಬಡ ಮಹಿಳೆಯರು ಹೊಲಿಗೆ ತರಬೇತಿ ಹಾಗೂ ಕಂಪ್ಯೂಟರ್ ತರಬೇತಿ ಪಡೆಯುತ್ತಿದ್ದರು. ಇವರಲ್ಲಿ ಎಷ್ಟೋ ಮಹಿಳೆಯರು ಪರಿಣತಿ ಪಡೆದ ನಂತರ ಸ್ವಉದ್ಯೋಗ ಕೈಗೊಂಡ ಉದಾಹರಣೆಗಳೂ ಇವೆ ಎಂದು ಅವರು ನೆನಪಿಸಿಕೊಂಡರು.<br /> <br /> ‘ಒಂದು ವರ್ಷದ ಹಿಂದೆ ಬಿಬಿಎಂಪಿ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರಷ್ಟೇ, ಆದರೆ ಇದುವರೆಗೆ ಯಾವುದೇ ಪ್ರಗತಿ ಕಾಣಲಿಲ್ಲ. ಪ್ರತಿ ವಾರ್ಡಿಗೆ ಒಂದೊಂದು ಸಮುದಾಯ ಭವನ ಕಡ್ಡಾಯ ಎಂದು ಮೇಯರ್ ಆದೇಶಿಸಿದ್ದಾರೆ. <br /> <br /> ಈ ಆದೇಶಕ್ಕೆ ಇಲ್ಲಿ ಬೆಲೆಯೇ ಇಲ್ಲದಂತಾಗಿದೆ. ಇಲ್ಲಿರುವ ಸಮುದಾಯ ಭವನವನ್ನು ನಾಗರಿಕರು ಸಮರ್ಪಕವಾಗಿ ಬಳಸಲು ಆಗುತ್ತಿಲ್ಲ. ಅವ್ಯವಸ್ಥೆ ಸರಿಪಡಿಸುವಂತೆ ಸಂಬಂಧಿಸಿದವರಿಗೆ ದೂರು ನೀಡಿದರೂ ಫಲ ನೀಡಿಲ್ಲ’ ಎಂದರು . <br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕೃಷ್ಣರಾಜಪುರ: </strong>ವಾರ್ಡ್ ವ್ಯಾಪ್ತಿಯ ವಿಭೂತಿಪುರ ಸಮುದಾಯ ಭವನಕ್ಕೆ ಎರಡು ವರ್ಷಗಳಿಂದ ಬೀಗ ಜಡಿಯಲಾಗಿದ್ದು, ಸಮುದಾಯದ ಪಾಲಿಗೆ ಇದ್ದೂ ಇಲ್ಲದಂತಾಗಿದೆ ಎಂದು ಸ್ಥಳೀಯರು ದೂರಿದ್ದಾರೆ.‘ಭವನಕ್ಕೆ ಬೀಗ ಹಾಕಿರುವುದರಿಂದ ಇಲ್ಲಿ ಇಡಲಾಗಿರುವ ಹೊಲಿಗೆ ಯಂತ್ರಗಳಿಗೆ ಹಾಗೂ ಕಂಪ್ಯೂಟರ್ಗಳಿಗೆ ದೂಳು ಹಿಡಿದಿದೆ. ಈ ಯಂತ್ರಗಳು ಯಾವುದೇ ಪ್ರಯೋಜನಕ್ಕೆ ಬಾರದಂತಾಗಿವೆ’ ಎಂದು ಅವರು ದೂರಿದ್ದಾರೆ. <br /> <br /> ‘ಈ ಅವ್ಯವಸ್ಥೆಯನ್ನು ಸರಿಪಡಿಸಿ, ಇಲ್ಲಿ ಹೊಲಿಗೆ ಹಾಗೂ ಕಂಪ್ಯೂಟರ್ ತರಬೇತಿ ತರಗತಿಗಳನ್ನು ಸದ್ಯದಲ್ಲಿಯೇ ನಡೆಸುವುದಾಗಿ ಪಾಲಿಕೆ ಸದಸ್ಯ ಸಿದ್ದಲಿಂಗಯ್ಯ ಅವರು ಕಾರ್ಯಕ್ರಮವೊಂದರಲ್ಲಿ ಹೇಳಿದ್ದರು. ಇದುವರೆಗೆ ಈ ಮಾತು ಭರವಸೆಯಾಗಿಯೇ ಉಳಿದಿದೆ ಹೊರತು ಈಡೇರಿಲ್ಲ’ ಎಂದು ಸ್ಥಳೀಯ ವಾಸಿ ನಾಗೇಂದ್ರ ಬೇಸರ ವ್ಯಕ್ತಪಡಿಸಿದ್ದಾರೆ.<br /> <br /> ಇದಕ್ಕೂ ಮುಂಚೆ ಇಲ್ಲಿ ಬಡ ಮಹಿಳೆಯರು ಹೊಲಿಗೆ ತರಬೇತಿ ಹಾಗೂ ಕಂಪ್ಯೂಟರ್ ತರಬೇತಿ ಪಡೆಯುತ್ತಿದ್ದರು. ಇವರಲ್ಲಿ ಎಷ್ಟೋ ಮಹಿಳೆಯರು ಪರಿಣತಿ ಪಡೆದ ನಂತರ ಸ್ವಉದ್ಯೋಗ ಕೈಗೊಂಡ ಉದಾಹರಣೆಗಳೂ ಇವೆ ಎಂದು ಅವರು ನೆನಪಿಸಿಕೊಂಡರು.<br /> <br /> ‘ಒಂದು ವರ್ಷದ ಹಿಂದೆ ಬಿಬಿಎಂಪಿ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರಷ್ಟೇ, ಆದರೆ ಇದುವರೆಗೆ ಯಾವುದೇ ಪ್ರಗತಿ ಕಾಣಲಿಲ್ಲ. ಪ್ರತಿ ವಾರ್ಡಿಗೆ ಒಂದೊಂದು ಸಮುದಾಯ ಭವನ ಕಡ್ಡಾಯ ಎಂದು ಮೇಯರ್ ಆದೇಶಿಸಿದ್ದಾರೆ. <br /> <br /> ಈ ಆದೇಶಕ್ಕೆ ಇಲ್ಲಿ ಬೆಲೆಯೇ ಇಲ್ಲದಂತಾಗಿದೆ. ಇಲ್ಲಿರುವ ಸಮುದಾಯ ಭವನವನ್ನು ನಾಗರಿಕರು ಸಮರ್ಪಕವಾಗಿ ಬಳಸಲು ಆಗುತ್ತಿಲ್ಲ. ಅವ್ಯವಸ್ಥೆ ಸರಿಪಡಿಸುವಂತೆ ಸಂಬಂಧಿಸಿದವರಿಗೆ ದೂರು ನೀಡಿದರೂ ಫಲ ನೀಡಿಲ್ಲ’ ಎಂದರು . <br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>