<p><strong>ಬೆಂಗಳೂರು:</strong> ವಕೀಲರು, ಮಾಧ್ಯಮದವರು ಮತ್ತು ಪೊಲೀಸರ ನಡುವಿನ ಸಂಘರ್ಷ ಅಂತ್ಯಗೊಂಡು, ಸಾಮರಸ್ಯ ಮೂಡಬೇಕೆಂದು ಚಿತ್ರದುರ್ಗದ ಮುರುಘಾಮಠದ ಡಾ.ಶಿವಮೂರ್ತಿ ಮುರುಘಾ ಶರಣರು ನಗರದಲ್ಲಿ ಮಂಗಳವಾರ ಸಾಂಕೇತಿಕ ನಿರಶನ ಆರಂಭಿಸಿದರು.</p>.<p>ಗಾಂಧಿನಗರದ ಮುರುಘಾ ಮಠದ ಆವರಣದಲ್ಲಿ ನಿರಶನ ಕೈಗೊಂಡ ಶರಣರು, `ಸಮಾಜದ ಸ್ವಾಸ್ಥ ಉಳಿಸುವ ಸಲುವಾಗಿ ವಕೀಲರು, ಮಾಧ್ಯಮದವರು ಮತ್ತು ಪೊಲೀಸರ ನಡುವಿನ ಸಂಘರ್ಷ ಕೊನೆಗೊಳ್ಳಲಿ~ ಎಂದು ಆಶಿಸಿದರು.</p>.<p>`ನಗರದ ಸಿಟಿ ಸಿವಿಲ್ ಕೋರ್ಟ್ ಆವರಣದಲ್ಲಿ ನಡೆದಿರುವ ಈ ಸಂಘರ್ಷವು ನಿಜಕ್ಕೂ ಕೆಟ್ಟ ಘಟನೆ. ಒಂದು ವೃತ್ತಿ ಯವರು ಮತ್ತೊಂದು ವೃತ್ತಿಯನ್ನು ಅವ ಮಾನಿಸುವುದು ಸರಿಯಲ್ಲ. ಸಮಾಜದ ಒಳಿತಿಗಾಗಿ ಈ ಮೂರು ವೃತ್ತಿಯಲ್ಲಿ ರುವವರು ಪರಸ್ಪರ ಸಾಮರಸ್ಯದಿಂದ ಬದುಕಬೇಕಿದೆ~ ಎಂದು ಹೇಳಿದರು. ನಿರಶನದಲ್ಲಿ ಭಾಗವಹಿಸಿದ್ದ ಸಮತಾ ಸೈನಿಕ ದಳದ ಅಧ್ಯಕ್ಷ ಎನ್.ವೆಂಕಟಸ್ವಾಮಿ, ಅವರು, `ವಕೀಲರು ನ್ಯಾಯಾಲಯ ಕಲಾಪಗಳ ಬಹಿಷ್ಕಾರ ನಿರ್ಧಾರದಿಂದ ದೂರ ಸರಿಯಬೇಕು~ ಎಂದು ವಕೀಲ ಸಮುದಾಯಕ್ಕೆ ಮನವಿ ಮಾಡಿದರು.</p>.<p><strong>ಸದ್ಯದಲ್ಲಿಯೇ ಎರಡನೇ ಸುತ್ತಿನ ಮಾತುಕತೆ</strong></p>.<p>ನಿರಶನ ಸ್ಥಳಕ್ಕೆ ಭೇಟಿ ನೀಡಿದ ಕಾನೂನು ಸಚಿವ ಎಸ್. ಸುರೇಶ್ಕುಮಾರ್ ಮುರುಘಾ ಶರಣ ರೊಂದಿಗೆ ಮಾತುಕತೆ ನಡೆಸಿದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, `ವಕೀಲರು, ಮಾಧ್ಯಮದವರು ಮತ್ತು ಪೊಲೀಸರ ನಡುವೆ ಉಂಟಾಗಿರುವ ಸಂಘರ್ಷ ಕುರಿತಂತೆ ಮುಖ್ಯಮಂತ್ರಿ ಅವರು ಎರಡನೇ ಸುತ್ತಿನ ಮಾತುಕತೆಯನ್ನು ಸದ್ಯದಲ್ಲೇ ನಡೆಸಲಿದ್ದಾರೆ~ ಎಂದು ಹೇಳಿದರು. `ಪೊಲೀಸ್ ವೈಫಲ್ಯದ ಬಗ್ಗೆ ಹಿರಿಯ ಪೊಲೀಸ್ ಅಧಿಕಾರಿ ಗಳಾದ ಆರ್.ಕೆ.ದತ್ತ ಮತ್ತು ವೈದ್ಯ ನಾಥನ್ ಅವರು ಈಗಾಗಲೇ ತನಿಖೆ ಆರಂಭಿಸಿದ್ದಾರೆ. ಸರ್ಕಾರವು ಸಂಘರ್ಷವನ್ನು ಕೊನೆಗಾಣಿಸಲು ಪ್ರಾಮಾಣಿಕ ಪ್ರಯತ್ನ ನಡೆಸಲಿದೆ~ ಎಂದು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ವಕೀಲರು, ಮಾಧ್ಯಮದವರು ಮತ್ತು ಪೊಲೀಸರ ನಡುವಿನ ಸಂಘರ್ಷ ಅಂತ್ಯಗೊಂಡು, ಸಾಮರಸ್ಯ ಮೂಡಬೇಕೆಂದು ಚಿತ್ರದುರ್ಗದ ಮುರುಘಾಮಠದ ಡಾ.ಶಿವಮೂರ್ತಿ ಮುರುಘಾ ಶರಣರು ನಗರದಲ್ಲಿ ಮಂಗಳವಾರ ಸಾಂಕೇತಿಕ ನಿರಶನ ಆರಂಭಿಸಿದರು.</p>.<p>ಗಾಂಧಿನಗರದ ಮುರುಘಾ ಮಠದ ಆವರಣದಲ್ಲಿ ನಿರಶನ ಕೈಗೊಂಡ ಶರಣರು, `ಸಮಾಜದ ಸ್ವಾಸ್ಥ ಉಳಿಸುವ ಸಲುವಾಗಿ ವಕೀಲರು, ಮಾಧ್ಯಮದವರು ಮತ್ತು ಪೊಲೀಸರ ನಡುವಿನ ಸಂಘರ್ಷ ಕೊನೆಗೊಳ್ಳಲಿ~ ಎಂದು ಆಶಿಸಿದರು.</p>.<p>`ನಗರದ ಸಿಟಿ ಸಿವಿಲ್ ಕೋರ್ಟ್ ಆವರಣದಲ್ಲಿ ನಡೆದಿರುವ ಈ ಸಂಘರ್ಷವು ನಿಜಕ್ಕೂ ಕೆಟ್ಟ ಘಟನೆ. ಒಂದು ವೃತ್ತಿ ಯವರು ಮತ್ತೊಂದು ವೃತ್ತಿಯನ್ನು ಅವ ಮಾನಿಸುವುದು ಸರಿಯಲ್ಲ. ಸಮಾಜದ ಒಳಿತಿಗಾಗಿ ಈ ಮೂರು ವೃತ್ತಿಯಲ್ಲಿ ರುವವರು ಪರಸ್ಪರ ಸಾಮರಸ್ಯದಿಂದ ಬದುಕಬೇಕಿದೆ~ ಎಂದು ಹೇಳಿದರು. ನಿರಶನದಲ್ಲಿ ಭಾಗವಹಿಸಿದ್ದ ಸಮತಾ ಸೈನಿಕ ದಳದ ಅಧ್ಯಕ್ಷ ಎನ್.ವೆಂಕಟಸ್ವಾಮಿ, ಅವರು, `ವಕೀಲರು ನ್ಯಾಯಾಲಯ ಕಲಾಪಗಳ ಬಹಿಷ್ಕಾರ ನಿರ್ಧಾರದಿಂದ ದೂರ ಸರಿಯಬೇಕು~ ಎಂದು ವಕೀಲ ಸಮುದಾಯಕ್ಕೆ ಮನವಿ ಮಾಡಿದರು.</p>.<p><strong>ಸದ್ಯದಲ್ಲಿಯೇ ಎರಡನೇ ಸುತ್ತಿನ ಮಾತುಕತೆ</strong></p>.<p>ನಿರಶನ ಸ್ಥಳಕ್ಕೆ ಭೇಟಿ ನೀಡಿದ ಕಾನೂನು ಸಚಿವ ಎಸ್. ಸುರೇಶ್ಕುಮಾರ್ ಮುರುಘಾ ಶರಣ ರೊಂದಿಗೆ ಮಾತುಕತೆ ನಡೆಸಿದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, `ವಕೀಲರು, ಮಾಧ್ಯಮದವರು ಮತ್ತು ಪೊಲೀಸರ ನಡುವೆ ಉಂಟಾಗಿರುವ ಸಂಘರ್ಷ ಕುರಿತಂತೆ ಮುಖ್ಯಮಂತ್ರಿ ಅವರು ಎರಡನೇ ಸುತ್ತಿನ ಮಾತುಕತೆಯನ್ನು ಸದ್ಯದಲ್ಲೇ ನಡೆಸಲಿದ್ದಾರೆ~ ಎಂದು ಹೇಳಿದರು. `ಪೊಲೀಸ್ ವೈಫಲ್ಯದ ಬಗ್ಗೆ ಹಿರಿಯ ಪೊಲೀಸ್ ಅಧಿಕಾರಿ ಗಳಾದ ಆರ್.ಕೆ.ದತ್ತ ಮತ್ತು ವೈದ್ಯ ನಾಥನ್ ಅವರು ಈಗಾಗಲೇ ತನಿಖೆ ಆರಂಭಿಸಿದ್ದಾರೆ. ಸರ್ಕಾರವು ಸಂಘರ್ಷವನ್ನು ಕೊನೆಗಾಣಿಸಲು ಪ್ರಾಮಾಣಿಕ ಪ್ರಯತ್ನ ನಡೆಸಲಿದೆ~ ಎಂದು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>