<p>ಇತ್ತೀಚಿನ ವರ್ಷಗಳಲ್ಲಿ ಮುಸ್ಲಿಂ ಸಂಘಟನೆಗಳು ಸಾಮಾಜಿಕ ನ್ಯಾಯ,ಸಮಾನತೆ, ಸಬಲೀಕರಣ, ಜನರ ಕೈಗೆ ಅಧಿಕಾರ ಮುಂತಾದ ಘೋಷಣೆಗಳ ಹೆಸರಿನಲ್ಲಿ ಮುಸ್ಲಿಂ ಸಮುದಾಯದ ಜನರಲ್ಲಿ ರಾಜಕೀಯ ಸಂಚಲನೆ ಉಂಟು ಮಾಡುತ್ತಿವೆ. <br /> <br /> ಪ್ರಜಾಸತ್ತಾತ್ಮಕ ವ್ಯವಸ್ಥೆಯಲ್ಲಿ ಅಲ್ಪಸಂಖ್ಯಾತ ಸಮುದಾಯಗಳಿಗೆ ಗೌರವ ಗಳಿಸಿಕೊಡುವುದು ಹೇಗೆಂಬ ಬಗ್ಗೆ ಚಿಂತನೆ ನಡೆಸುವುದು ನ್ಯಾಯಬದ್ಧವಾಗಿದೆ. ಆದರೆ ಇದರಿಂದ ಆಗುತ್ತಿರುವುದೇನು? <br /> <br /> ಮಠಾಧೀಶರು ರಾಜ್ಯದ ರಾಜಕೀಯದಲ್ಲಿ ಹಸ್ತಕ್ಷೇಪ ಮಾಡುವ ಬಗ್ಗೆ ಸಾರ್ವಜನಿಕ ವಲಯದಲ್ಲಿ ವಿರೋಧ ವ್ಯಕ್ತವಾಗಿದೆ. ಇದೀಗ ಮಸೀದಿಗಳ ಇಮಾಮರು, ಕೆಲವು ಮೌಲವಿಗಳು ಮತ್ತು ತಂಙಳ್ಗಳು ದಿಢೀರನೆ ರಾಜಕೀಯ ವೇದಿಕೆಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇದರಿಂದ ಅವರ ಧಾರ್ಮಿಕ ಕರ್ತವ್ಯ-ಉತ್ತರದಾಯಿತ್ವಗಳ ಬಗ್ಗೆ ಜನರು ಅನುಮಾನ ಪಡುವಂತಾಗಿದೆ.<br /> <br /> ದಕ್ಷಿಣ ಕನ್ನಡ ಸೇರಿದಂತೆ ಕರಾವಳಿ ಜಿಲ್ಲೆಗಳಲ್ಲಿ ಕೋಮು ದ್ವೇಷದಿಂದ ನಲುಗಿದ ಪ್ರದೇಶಗಳಲ್ಲಿ ಕೆಲವು ಮುಸ್ಲಿಂ ಉಲಮಾಗಳು ಕೋಮು ಆಧಾರದಲ್ಲಿ ರಾಜಕೀಯ ಧ್ರುವೀಕರಣವನ್ನು ಬೆಂಬಲಿಸುವುದು ಸಮುದಾಯದ ಹಿತದೃಷ್ಟಿಯಿಂದ ಅಪಾಯಕಾರಿ. <br /> <br /> ಮುಸ್ಲಿಮರ ಶೈಕ್ಷಣಿಕ, ಸಾಮಾಜಿಕ ಸಮಸ್ಯೆಗಳ ಬಗ್ಗೆ ಚರ್ಚಿಸಿ, ಜಾಗೃತಿ ಮೂಡಿಸುವ ಕೆಲಸ ಕಾರ್ಯಗಳೇ ಸಾಕಷ್ಟಿವೆ. ಅವನ್ನೆಲ್ಲ ಬಿಟ್ಟು ಒಂದು ರಾಜಕೀಯ ಪಕ್ಷದ ಮುಖವಾಣಿಯಂತೆ ಅವರು ಗುರುತಿಸಿಕೊಳ್ಳುವುದು ಅವರಿಗೆ ಶೋಭೆ ತರುವುದಿಲ್ಲ.<br /> <br /> ಮುಸ್ಲಿಮರು ವಿಭಿನ್ನ ಪಕ್ಷ-ಸಿದ್ಧಾಂತಗಳನ್ನು ಬೆಂಬಲಿಸುವವರಾದರೂ ಧರ್ಮ ಗುರುವಿನ ವಿಚಾರದಲ್ಲಿ ಅವರಿಗೆ ಪೂರ್ವಗ್ರಹಗಳಿರುವುದಿಲ್ಲ. ಅದೇ ರೀತಿ ಧರ್ಮ ಗುರು ಜಮಾಅತರೆಲ್ಲರನ್ನೂ ಸಮಾನವಾಗಿ ಕಾಣಬೇಕು. ಸಮುದಾಯಕ್ಕೆ ಧಾರ್ಮಿಕ ನಾಯಕತ್ವ ನೀಡಬೇಕಾದ ಉಲಮಾಗಳು ಸಕ್ರಿಯ ರಾಜಕೀಯದಲ್ಲಿ ತೊಡಗುವುದು ಸರಿಯೇ?</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಇತ್ತೀಚಿನ ವರ್ಷಗಳಲ್ಲಿ ಮುಸ್ಲಿಂ ಸಂಘಟನೆಗಳು ಸಾಮಾಜಿಕ ನ್ಯಾಯ,ಸಮಾನತೆ, ಸಬಲೀಕರಣ, ಜನರ ಕೈಗೆ ಅಧಿಕಾರ ಮುಂತಾದ ಘೋಷಣೆಗಳ ಹೆಸರಿನಲ್ಲಿ ಮುಸ್ಲಿಂ ಸಮುದಾಯದ ಜನರಲ್ಲಿ ರಾಜಕೀಯ ಸಂಚಲನೆ ಉಂಟು ಮಾಡುತ್ತಿವೆ. <br /> <br /> ಪ್ರಜಾಸತ್ತಾತ್ಮಕ ವ್ಯವಸ್ಥೆಯಲ್ಲಿ ಅಲ್ಪಸಂಖ್ಯಾತ ಸಮುದಾಯಗಳಿಗೆ ಗೌರವ ಗಳಿಸಿಕೊಡುವುದು ಹೇಗೆಂಬ ಬಗ್ಗೆ ಚಿಂತನೆ ನಡೆಸುವುದು ನ್ಯಾಯಬದ್ಧವಾಗಿದೆ. ಆದರೆ ಇದರಿಂದ ಆಗುತ್ತಿರುವುದೇನು? <br /> <br /> ಮಠಾಧೀಶರು ರಾಜ್ಯದ ರಾಜಕೀಯದಲ್ಲಿ ಹಸ್ತಕ್ಷೇಪ ಮಾಡುವ ಬಗ್ಗೆ ಸಾರ್ವಜನಿಕ ವಲಯದಲ್ಲಿ ವಿರೋಧ ವ್ಯಕ್ತವಾಗಿದೆ. ಇದೀಗ ಮಸೀದಿಗಳ ಇಮಾಮರು, ಕೆಲವು ಮೌಲವಿಗಳು ಮತ್ತು ತಂಙಳ್ಗಳು ದಿಢೀರನೆ ರಾಜಕೀಯ ವೇದಿಕೆಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇದರಿಂದ ಅವರ ಧಾರ್ಮಿಕ ಕರ್ತವ್ಯ-ಉತ್ತರದಾಯಿತ್ವಗಳ ಬಗ್ಗೆ ಜನರು ಅನುಮಾನ ಪಡುವಂತಾಗಿದೆ.<br /> <br /> ದಕ್ಷಿಣ ಕನ್ನಡ ಸೇರಿದಂತೆ ಕರಾವಳಿ ಜಿಲ್ಲೆಗಳಲ್ಲಿ ಕೋಮು ದ್ವೇಷದಿಂದ ನಲುಗಿದ ಪ್ರದೇಶಗಳಲ್ಲಿ ಕೆಲವು ಮುಸ್ಲಿಂ ಉಲಮಾಗಳು ಕೋಮು ಆಧಾರದಲ್ಲಿ ರಾಜಕೀಯ ಧ್ರುವೀಕರಣವನ್ನು ಬೆಂಬಲಿಸುವುದು ಸಮುದಾಯದ ಹಿತದೃಷ್ಟಿಯಿಂದ ಅಪಾಯಕಾರಿ. <br /> <br /> ಮುಸ್ಲಿಮರ ಶೈಕ್ಷಣಿಕ, ಸಾಮಾಜಿಕ ಸಮಸ್ಯೆಗಳ ಬಗ್ಗೆ ಚರ್ಚಿಸಿ, ಜಾಗೃತಿ ಮೂಡಿಸುವ ಕೆಲಸ ಕಾರ್ಯಗಳೇ ಸಾಕಷ್ಟಿವೆ. ಅವನ್ನೆಲ್ಲ ಬಿಟ್ಟು ಒಂದು ರಾಜಕೀಯ ಪಕ್ಷದ ಮುಖವಾಣಿಯಂತೆ ಅವರು ಗುರುತಿಸಿಕೊಳ್ಳುವುದು ಅವರಿಗೆ ಶೋಭೆ ತರುವುದಿಲ್ಲ.<br /> <br /> ಮುಸ್ಲಿಮರು ವಿಭಿನ್ನ ಪಕ್ಷ-ಸಿದ್ಧಾಂತಗಳನ್ನು ಬೆಂಬಲಿಸುವವರಾದರೂ ಧರ್ಮ ಗುರುವಿನ ವಿಚಾರದಲ್ಲಿ ಅವರಿಗೆ ಪೂರ್ವಗ್ರಹಗಳಿರುವುದಿಲ್ಲ. ಅದೇ ರೀತಿ ಧರ್ಮ ಗುರು ಜಮಾಅತರೆಲ್ಲರನ್ನೂ ಸಮಾನವಾಗಿ ಕಾಣಬೇಕು. ಸಮುದಾಯಕ್ಕೆ ಧಾರ್ಮಿಕ ನಾಯಕತ್ವ ನೀಡಬೇಕಾದ ಉಲಮಾಗಳು ಸಕ್ರಿಯ ರಾಜಕೀಯದಲ್ಲಿ ತೊಡಗುವುದು ಸರಿಯೇ?</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>