<p><strong>ಕೋಲಾರ:</strong> 16, 17, 18ನೇ ವಾರ್ಡ್ ಗಳಿಗೆ ಮೂಲಸೌಕರ್ಯಗಳನ್ನು ಕಲ್ಪಿಸುವಂತೆ ಆಗ್ರಹಿಸಿ ಎಂದು ಕೋರಿ ಸೋಷಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ಜಿಲ್ಲಾ ಘಟಕದ ಪ್ರಮುಖರು ಕೋಲಾರ ನಗರಸಭೆ ಆಯುಕ್ತೆ ಆರ್.ಶಾಲಿನಿ ಅವರಿಗೆ ಈಚೆಗೆ ಮನವಿ ಸಲ್ಲಿಸಿದರು.<br /> <br /> ನೀರಿನ ಅಸಮರ್ಪಕ ಪೂರೈಕೆ, ಕಸ ವಿಲೇವಾರಿ ನಡೆಯದಿರುವುದು, ಚರಂಡಿಗಳನ್ನು ಸ್ವಚ್ಛಗೊಳಿಸುವ ಕೆಲಸ ನಡೆಯದಿರುವುದರಿಂದ ಜನರಿಗೆ ಹಲವು ಸಮಸ್ಯೆಗಳು ಎದುರಾಗಿವೆ. ಸಾಂಕ್ರಾಮಿಕ ರೋಗಗಳು ಹರಡುವ ಆತಂಕವೂ ಹೆಚ್ಚಿದೆ. ಈ ನಿಟ್ಟಿನಲ್ಲಿ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಕೋರಿದರು. <br /> <br /> ಮಿಲ್ಲತ್ ನಗರದಲ್ಲಿ ಕೊಳವೆ ಬಾವಿ ಕೊರೆದು 8-10 ತಿಂಗಳಾದರೂ ಪಂಪ್-ಮೋಟರ್ ಅಳವಡಿಸಿಲ್ಲ. ಮುಖ್ಯ ರಸ್ತೆಗಳಲ್ಲಿ ಬೀದಿದೀಪಗಳು ಕೆಟ್ಟಿವೆ. ಆಜಾದ್ ನಗರದಲ್ಲಿ ನೀರಿನ ಸಮಸ್ಯೆ ತೀವ್ರವಾಗಿದೆ. <br /> ಶಾದಿ ಮಹಲ್ ಪಕ್ಕದಲ್ಲಿರುವ ರಸ್ತೆಗಳಲ್ಲಿ ಚರಂಡಿ ವ್ಯವಸ್ಥೆಯೇ ಇಲ್ಲ ಎಂದು ದೂರಿದರು. <br /> <br /> ಷಹಿನ್ಶಾ ನಗರ, ಕ್ಲಾಕ್ ಟವರ, ಷಹೀದ್ ನಗರ, ದರ್ಗಾಶಾಹಿ ಮೊಹಲ್ಲಾ, ಹವೇಲಿ ಮೊಹಲ್ಲಾ, ಪೂಲ್ಷಾ ಮೊಹಲ್ಲಾ,ಖಾಕಿ ಷಾ ಮೊಹಲ್ಲಾಗಳಲ್ಲಿಯೂ ನೀರು, ಬೀದಿ ದೀಪ, ಚರಂಡಿ ಸಮಸ್ಯೆಗಳಿವೆ. <br /> ಕೂಡಲೇ ಕ್ರಮ ಕೈಗೊಂಡು ಪರಿಹರಿ ಸದಿದ್ದರೆ ರಸ್ತೆ ತಡೆ ಮಾಡಿ ಪ್ರತಿಭಟಿಸ ಲಾಗುವುದು ಎಂದು ತಿಳಿಸಿದರು. <br /> ಘಟಕದ ಪ್ರಮುಖ ಯಾಸೀನ್ ಖಾನ್ ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕೋಲಾರ:</strong> 16, 17, 18ನೇ ವಾರ್ಡ್ ಗಳಿಗೆ ಮೂಲಸೌಕರ್ಯಗಳನ್ನು ಕಲ್ಪಿಸುವಂತೆ ಆಗ್ರಹಿಸಿ ಎಂದು ಕೋರಿ ಸೋಷಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ಜಿಲ್ಲಾ ಘಟಕದ ಪ್ರಮುಖರು ಕೋಲಾರ ನಗರಸಭೆ ಆಯುಕ್ತೆ ಆರ್.ಶಾಲಿನಿ ಅವರಿಗೆ ಈಚೆಗೆ ಮನವಿ ಸಲ್ಲಿಸಿದರು.<br /> <br /> ನೀರಿನ ಅಸಮರ್ಪಕ ಪೂರೈಕೆ, ಕಸ ವಿಲೇವಾರಿ ನಡೆಯದಿರುವುದು, ಚರಂಡಿಗಳನ್ನು ಸ್ವಚ್ಛಗೊಳಿಸುವ ಕೆಲಸ ನಡೆಯದಿರುವುದರಿಂದ ಜನರಿಗೆ ಹಲವು ಸಮಸ್ಯೆಗಳು ಎದುರಾಗಿವೆ. ಸಾಂಕ್ರಾಮಿಕ ರೋಗಗಳು ಹರಡುವ ಆತಂಕವೂ ಹೆಚ್ಚಿದೆ. ಈ ನಿಟ್ಟಿನಲ್ಲಿ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಕೋರಿದರು. <br /> <br /> ಮಿಲ್ಲತ್ ನಗರದಲ್ಲಿ ಕೊಳವೆ ಬಾವಿ ಕೊರೆದು 8-10 ತಿಂಗಳಾದರೂ ಪಂಪ್-ಮೋಟರ್ ಅಳವಡಿಸಿಲ್ಲ. ಮುಖ್ಯ ರಸ್ತೆಗಳಲ್ಲಿ ಬೀದಿದೀಪಗಳು ಕೆಟ್ಟಿವೆ. ಆಜಾದ್ ನಗರದಲ್ಲಿ ನೀರಿನ ಸಮಸ್ಯೆ ತೀವ್ರವಾಗಿದೆ. <br /> ಶಾದಿ ಮಹಲ್ ಪಕ್ಕದಲ್ಲಿರುವ ರಸ್ತೆಗಳಲ್ಲಿ ಚರಂಡಿ ವ್ಯವಸ್ಥೆಯೇ ಇಲ್ಲ ಎಂದು ದೂರಿದರು. <br /> <br /> ಷಹಿನ್ಶಾ ನಗರ, ಕ್ಲಾಕ್ ಟವರ, ಷಹೀದ್ ನಗರ, ದರ್ಗಾಶಾಹಿ ಮೊಹಲ್ಲಾ, ಹವೇಲಿ ಮೊಹಲ್ಲಾ, ಪೂಲ್ಷಾ ಮೊಹಲ್ಲಾ,ಖಾಕಿ ಷಾ ಮೊಹಲ್ಲಾಗಳಲ್ಲಿಯೂ ನೀರು, ಬೀದಿ ದೀಪ, ಚರಂಡಿ ಸಮಸ್ಯೆಗಳಿವೆ. <br /> ಕೂಡಲೇ ಕ್ರಮ ಕೈಗೊಂಡು ಪರಿಹರಿ ಸದಿದ್ದರೆ ರಸ್ತೆ ತಡೆ ಮಾಡಿ ಪ್ರತಿಭಟಿಸ ಲಾಗುವುದು ಎಂದು ತಿಳಿಸಿದರು. <br /> ಘಟಕದ ಪ್ರಮುಖ ಯಾಸೀನ್ ಖಾನ್ ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>