<p><span style="font-size: medium"> <strong>ಮೈಸೂರು, (ಪಿಟಿಐ):</strong> ಇಲ್ಲಿಂದ 60 ಕಿ.ಮೀ ದೂರದ ಕೃಷ್ಣರಾಜನಗರದ ಹತ್ತಿರದಲ್ಲಿ ಗುರುವಾರ ನಡೆದ ರಸ್ತೆ ಅಪಘಾತವೊಂದರಲ್ಲಿ ಒಂದೇ ಕುಟುಂಬದ ನಾಲ್ವರು ಸ್ಥಳದಲ್ಲೇ ಮೃತಪಟ್ಟ ದಾರುಣ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.<br /> <br /> ತನ್ನ 4 ವರ್ಷದ ಮಗಳು ಮತ್ತು ಆರು ತಿಂಗಳ ಕೂಸು ಮುಂದೆ ಕೂಡಿಸಿಕೊಂಡು ಮಹದೇವ (30) ಮೋಟಾರ್ ಸೈಕಲ್ ಓಡಿಸುತ್ತಿದ್ದರು. ಅವರ ತಂಗಿ ಮಂಜುಳಾ ಹಿಂದೆ ಕುಳಿತಿದ್ದರು. ಅವರ ಮೋಟಾರ್ ಸೈಕಲ್ ಗೆ ಮಠವೊಂದಕ್ಕೆ ಸೇರಿದ್ದ ಶಾಲಾ ವಾಹನವೊಂದು ಡಿಕ್ಕಿ ಹೊಡೆದಾಗ ಈ ಅಪಘಾತ ಸಂಭವಿಸಿದೆ. </span></p>.<p dir="ltr"><span style="font-size: medium">ಭೀಕರವಾಗಿ ನಡೆದ ಈ ಅಪಘಾತದಲ್ಲಿ ಮೋಟಾರ್ ಸೈಕಲ್ ನಲ್ಲಿ ಪ್ರಯಾಣಿಸುತ್ತಿದ್ದ ಎಲ್ಲಾ ನಾಲ್ವರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ. </span></p>.<p dir="ltr"><span style="font-size: medium">ವಿಷಯ ತಿಳಿದ ರಸ್ತೆ ಪಕ್ಕದ ಗ್ರಾಮಸ್ಥರು ಆ ಶಾಲಾ ವಾಹನಕ್ಕೆ ಕಲ್ಲು ಹೊಡೆದು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜೊತೆಗೆ ಸ್ವಲ್ಪ ಸಮಯ ರಸ್ತೆ ತಡೆ ಕೂಡ ನಡೆಸಿದರೆಂದು ಪೊಲೀಸರು ತಿಳಿಸಿದ್ದಾರೆ.</span></p>.<p dir="ltr"><span style="font-size: medium">ನಾಲ್ವರ ಸಾವಿಗೆ ಕಾರಣವಾದ ಈ ಅಪಘಾತದ ನಂತರ ಸ್ಥಳದಿಂದ ನಾಪತ್ತೆಯಾಗಿರುವ ಶಾಲಾ ವಾಹನದ ಚಾಲಕನ ಪತ್ತೆಗೆ ಪೊಲೀಸರು ಕ್ರಮ ಕೈಗೊಂಡಿದ್ದಾರೆ.</span></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><span style="font-size: medium"> <strong>ಮೈಸೂರು, (ಪಿಟಿಐ):</strong> ಇಲ್ಲಿಂದ 60 ಕಿ.ಮೀ ದೂರದ ಕೃಷ್ಣರಾಜನಗರದ ಹತ್ತಿರದಲ್ಲಿ ಗುರುವಾರ ನಡೆದ ರಸ್ತೆ ಅಪಘಾತವೊಂದರಲ್ಲಿ ಒಂದೇ ಕುಟುಂಬದ ನಾಲ್ವರು ಸ್ಥಳದಲ್ಲೇ ಮೃತಪಟ್ಟ ದಾರುಣ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.<br /> <br /> ತನ್ನ 4 ವರ್ಷದ ಮಗಳು ಮತ್ತು ಆರು ತಿಂಗಳ ಕೂಸು ಮುಂದೆ ಕೂಡಿಸಿಕೊಂಡು ಮಹದೇವ (30) ಮೋಟಾರ್ ಸೈಕಲ್ ಓಡಿಸುತ್ತಿದ್ದರು. ಅವರ ತಂಗಿ ಮಂಜುಳಾ ಹಿಂದೆ ಕುಳಿತಿದ್ದರು. ಅವರ ಮೋಟಾರ್ ಸೈಕಲ್ ಗೆ ಮಠವೊಂದಕ್ಕೆ ಸೇರಿದ್ದ ಶಾಲಾ ವಾಹನವೊಂದು ಡಿಕ್ಕಿ ಹೊಡೆದಾಗ ಈ ಅಪಘಾತ ಸಂಭವಿಸಿದೆ. </span></p>.<p dir="ltr"><span style="font-size: medium">ಭೀಕರವಾಗಿ ನಡೆದ ಈ ಅಪಘಾತದಲ್ಲಿ ಮೋಟಾರ್ ಸೈಕಲ್ ನಲ್ಲಿ ಪ್ರಯಾಣಿಸುತ್ತಿದ್ದ ಎಲ್ಲಾ ನಾಲ್ವರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ. </span></p>.<p dir="ltr"><span style="font-size: medium">ವಿಷಯ ತಿಳಿದ ರಸ್ತೆ ಪಕ್ಕದ ಗ್ರಾಮಸ್ಥರು ಆ ಶಾಲಾ ವಾಹನಕ್ಕೆ ಕಲ್ಲು ಹೊಡೆದು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜೊತೆಗೆ ಸ್ವಲ್ಪ ಸಮಯ ರಸ್ತೆ ತಡೆ ಕೂಡ ನಡೆಸಿದರೆಂದು ಪೊಲೀಸರು ತಿಳಿಸಿದ್ದಾರೆ.</span></p>.<p dir="ltr"><span style="font-size: medium">ನಾಲ್ವರ ಸಾವಿಗೆ ಕಾರಣವಾದ ಈ ಅಪಘಾತದ ನಂತರ ಸ್ಥಳದಿಂದ ನಾಪತ್ತೆಯಾಗಿರುವ ಶಾಲಾ ವಾಹನದ ಚಾಲಕನ ಪತ್ತೆಗೆ ಪೊಲೀಸರು ಕ್ರಮ ಕೈಗೊಂಡಿದ್ದಾರೆ.</span></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>