<p>ನವದೆಹಲಿ (ಪಿಟಿಐ): ‘ಭಾರತದ ವಿರುದ್ಧದ ಯಾವುದೇ ಯುದ್ಧವನ್ನು ಪಾಕಿಸ್ತಾನವು ಗೆಲ್ಲುವುದಿಲ್ಲ’ ಎಂದು ಪ್ರಧಾನಿ ಮನಮೋಹನ್ ಸಿಂಗ್ ಬುಧವಾರ ಸ್ಪಷ್ಟವಾಗಿ ನುಡಿದರು. <br /> <br /> ಪಾಕಿಸ್ತಾನದ ಪ್ರಭಾವಿ ಪತ್ರಿಕೆಯೊಂದರಲ್ಲಿ ವರದಿಯಾಗಿರುವಂತೆ, ಪಾಕ್ ಪ್ರಧಾನಿ ನವಾಜ್ ಷರೀಫ್ ಅವರು ಕಾಶ್ಮೀರ ವಿವಾದಕ್ಕೆ ಸಂಬಂಧಿಸಿದಂತೆ ನೀಡಿದ್ದಾರೆ ಎನ್ನಲಾದ ‘ಭಾರತದ ವಿರುದ್ಧ ನಾಲ್ಕನೇ ಯುದ್ಧ ಸಾಧ್ಯತೆ’ಯ ಹೇಳಿಕೆ ಬಗ್ಗೆ ಪ್ರಧಾನಿ ಸಿಂಗ್ ಈ ಪ್ರತಿಕ್ರಿಯಿಸಿ, ‘ನನ್ನ ಜೀವಿತಾವಧಿಯಲ್ಲಿ ಪಾಕಿಸ್ತಾನವು ಭಾರತದ ವಿರುದ್ಧ ಯಾವುದೇ ಯುದ್ಧ ಗೆಲ್ಲುವುದಿಲ್ಲ’ ಎಂದು ತಿಳಿಸಿದರು.<br /> <br /> ಆದರೆ, ಪಾಕಿಸ್ತಾನದ ಪ್ರಧಾನಿ ಕಾರ್ಯಾಲಯವು ನವಾಜ್ ಷರೀಫ್ ಅವರು ಇಂತಹ ಹೇಳಿಕೆಯನ್ನು ನೀಡಿಲ್ಲ ಎಂದಿದೆ.<br /> ‘ಷರೀಫ್ ಇಂತಹ ಯಾವುದೇ ಶಬ್ದವನ್ನೂ ಬಳಸಿಲ್ಲ. ಪತ್ರಿಕೆಯಲ್ಲಿನ ವರದಿ ಸತ್ಯಕ್ಕೆ ದೂರ, ನಿರಾಧಾರ ಮತ್ತು ದುರುದ್ದೇಶಪೂರಿತ’ ಎಂದು ಪಾಕ್ ಹೇಳಿದೆ.<br /> <br /> <strong>ಯುದ್ಧದ ಪ್ರಸ್ತಾಪವೇ ಇಲ್ಲ:</strong> ಷರೀಫ್ ಸ್ಪಷ್ಟನೆ (ಇಸ್ಲಾಮಾಬಾದ್ ವರದಿ): ‘ಕಾಶ್ಮೀರ ವಿವಾದವು ಪಾಕಿಸ್ತಾನ– ಭಾರತದ ನಡುವೆ ನಾಲ್ಕನೇ ಯುದ್ಧಕ್ಕೆ ಕಾರಣವಾಗಬಹುದು’ ಎಂದು ಪಾಕ್ ಪ್ರಧಾನಿ ನವಾಜ್ ಷರೀಫ್ ಅವರು ಹೇಳಿಕೆ ನೀಡಿಯೇ ಇಲ್ಲ ಎಂದು ಸ್ಪಷ್ಟನೆ ನೀಡಲಾಗಿದೆ.<br /> <br /> ಈ ಸಂಬಂಧ ಪಾಕ್ನ ಪ್ರಮುಖ ಇಂಗ್ಲಿಷ್ ದಿನಪತ್ರಿಕೆಯೊಂದರಲ್ಲಿ ಬುಧವಾರ ಪ್ರಕಟವಾದ ‘ಸುದ್ದಿ ಆಧಾರರಹಿತ ಹಾಗೂ ದುರುದ್ದೇಶಪೂರಿತ’ ಎಂದು ಪ್ರಧಾನಿ ಕಚೇರಿ ತಿಳಿಸಿದೆ.<br /> <br /> ಮುಜಫರಾಬಾದ್ನಲ್ಲಿ ಮಂಗಳವಾರ ನಡೆದ ಪಾಕ್ ಆಕ್ರಮಿತ ಕಾಶ್ಮೀರದ ಪ್ರಮುಖರ ಸಭೆಯಲ್ಲಿ ನವಾಜ್ ಷರೀಫ್ ಅವರು ಮಾತನಾಡಿ, ‘ಕಾಶ್ಮೀರ ಬಿಕ್ಕಟ್ಟು ಸೂಕ್ಷ್ಮ ವಿಷಯವಾಗಿದ್ದು, ಎರಡು ಅಣ್ವಸ್ತ್ರ ರಾಷ್ಟ್ರಗಳ ನಡುವೆ ಯಾವುದೇ ಸಂದರ್ಭದಲ್ಲಿ ಯುದ್ಧಕ್ಕೆ ಕಾರಣವಾಗಬಹುದೆಂದು ಅಭಿಪ್ರಾಯಪಟ್ಟಿದ್ದರು’ ಎಂದು ವರದಿಯಾಗಿತ್ತು.</p>.<p>ಉಭಯ ರಾಷ್ಟ್ರಗಳ ನಡುವಣ ಯಾವುದೇ ಕಗ್ಗಂಟಿನ ಪರಿಹಾರಕ್ಕೆ ಮಾತುಕತೆಯೇ ಸೂಕ್ತ ವೇದಿಕೆ ಎಂಬುದೇ ಷರೀಫ್ ಅವರ ನಂಬಿಕೆ. ಮುಜಫರಾಬಾದ್ ಸಭೆಯಲ್ಲಿ ಪ್ರಧಾನಿ ಈ ವಿಷಯ ಪ್ರಸ್ತಾಪಿಸಿದ್ದು ನಿಜ. ಭಾರತದ ಸೇನಾ ನೀತಿಯಿಂದಾಗಿ ಪಾಕ್ ಕೂಡ ಶಸ್ತ್ರಾಸ್ತ್ರ ಸಂಗ್ರಹ ಪೈಪೋಟಿಗೆ ಇಳಿಯಬೇಕಾಗಿದೆ ಎಂದು ಷರೀಫ್ ಹೇಳಿದ್ದರೇ ವಿನಾ ಯುದ್ಧದ ಮಾತನ್ನು ಆಡಿಲ್ಲ ಎಂದು ಹೇಳಿಕೆಯಲ್ಲಿ ಸ್ಪಷ್ಟಪಡಿಸಲಾಗಿದೆ.<br /> <br /> ಮಾತುಕತೆ ಆರಂಭಿಸಿ– ಖರ್ ಸಲಹೆ (ನವದೆಹಲಿ ವರದಿ): ಭಾರತ– ಪಾಕ್ ಮಾತುಕತೆ ಪ್ರಕ್ರಿಯೆ ಪುನರಾರಂಭವಾಗಬೇಕು ಎಂದಿರುವ ಪಾಕ್ ವಿದೇಶಾಂಗ ಖಾತೆ ಮಾಜಿ ಸಚಿವೆ ಹೀನಾ ರಬ್ಬಾನಿ ಖರ್, ಈ ನಿಟ್ಟಿನಲ್ಲಿ ಎರಡೂ ದೇಶಗಳು ತಮ್ಮ ಹಳೆಯ ತಪ್ಪುಗಳ ಸರಕನ್ನು ಕೈಬಿಡಬೇಕು ಎಂದು ಸಲಹೆ ನೀಡಿದ್ದಾರೆ.<br /> <br /> ‘ನಾವಿಬ್ಬರೂ (ಭಾರತ–ಪಾಕ್) ಯುವ ಸಮುದಾಯದಲ್ಲಿ ಪರಸ್ಪರ ವಿಷಬೀಜ ಬಿತ್ತಿದ್ದೇವೆ. ಹಳೆಯ ಐತಿಹಾಸಿಕ ತಪ್ಪುಗಳನ್ನು ಪುನರಾವರ್ತಿಸುವುದು ಬೇಡ. ಅಂತಹ ಸರಕನ್ನು ಕಟ್ಟಿಡೋಣ. ಅದನ್ನೇ ಮುಂದಿಟ್ಟುಕೊಂಡು ನಡೆದರೆ ಭವಿಷ್ಯಕ್ಕೆ ಕತ್ತಲು ಕವಿಯುತ್ತದೆ’ ಎಂದು ಅವರು ನವದೆಹಲಿಯಲ್ಲಿ ನಡೆದ ‘ಅಂಜೆಡಾ ಆಜ್ತಕ್’ ಸಮ್ಮೇಳನದಲ್ಲಿ ಹೇಳಿದ್ದಾರೆ.<br /> <br /> ‘ಭಯೋತ್ಪಾದನೆಯು ಭಾರತಕ್ಕಿಂತ ನಮಗೇ ಹೆಚ್ಚು ಸವಾಲುಗಳನ್ನು ಒಡ್ಡಿದೆ. ಹಫೀಜ್ ಸಯೀದ್ನನ್ನು ಎರಡು ಸಾರಿ ಬಂಧಿಸಲಾಗಿತ್ತು. ಮುಂಬೈ ಮೇಲೆ ನಡೆದ ದಾಳಿ ಬಗ್ಗೆ ನ್ಯಾಯಾಲಯದಲ್ಲಿ ಗಟ್ಟಿಯಾಗಿ ನಿಲ್ಲುವಂತಹ ಸಾಕ್ಷ್ಯಗಳನ್ನು ನೀವು (ಭಾರತ) ಒದಗಿಸಿ. ಪಾಕ್ ಹಿತದೃಷ್ಟಿಯಿಂದ ಈ ಪ್ರಕರಣ ಎಷ್ಟು ಬೇಗ ಬಗೆಹರಿವುದೋ ಅಷ್ಟೂ ಒಳ್ಳೆಯದು’ ಎಂದಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ನವದೆಹಲಿ (ಪಿಟಿಐ): ‘ಭಾರತದ ವಿರುದ್ಧದ ಯಾವುದೇ ಯುದ್ಧವನ್ನು ಪಾಕಿಸ್ತಾನವು ಗೆಲ್ಲುವುದಿಲ್ಲ’ ಎಂದು ಪ್ರಧಾನಿ ಮನಮೋಹನ್ ಸಿಂಗ್ ಬುಧವಾರ ಸ್ಪಷ್ಟವಾಗಿ ನುಡಿದರು. <br /> <br /> ಪಾಕಿಸ್ತಾನದ ಪ್ರಭಾವಿ ಪತ್ರಿಕೆಯೊಂದರಲ್ಲಿ ವರದಿಯಾಗಿರುವಂತೆ, ಪಾಕ್ ಪ್ರಧಾನಿ ನವಾಜ್ ಷರೀಫ್ ಅವರು ಕಾಶ್ಮೀರ ವಿವಾದಕ್ಕೆ ಸಂಬಂಧಿಸಿದಂತೆ ನೀಡಿದ್ದಾರೆ ಎನ್ನಲಾದ ‘ಭಾರತದ ವಿರುದ್ಧ ನಾಲ್ಕನೇ ಯುದ್ಧ ಸಾಧ್ಯತೆ’ಯ ಹೇಳಿಕೆ ಬಗ್ಗೆ ಪ್ರಧಾನಿ ಸಿಂಗ್ ಈ ಪ್ರತಿಕ್ರಿಯಿಸಿ, ‘ನನ್ನ ಜೀವಿತಾವಧಿಯಲ್ಲಿ ಪಾಕಿಸ್ತಾನವು ಭಾರತದ ವಿರುದ್ಧ ಯಾವುದೇ ಯುದ್ಧ ಗೆಲ್ಲುವುದಿಲ್ಲ’ ಎಂದು ತಿಳಿಸಿದರು.<br /> <br /> ಆದರೆ, ಪಾಕಿಸ್ತಾನದ ಪ್ರಧಾನಿ ಕಾರ್ಯಾಲಯವು ನವಾಜ್ ಷರೀಫ್ ಅವರು ಇಂತಹ ಹೇಳಿಕೆಯನ್ನು ನೀಡಿಲ್ಲ ಎಂದಿದೆ.<br /> ‘ಷರೀಫ್ ಇಂತಹ ಯಾವುದೇ ಶಬ್ದವನ್ನೂ ಬಳಸಿಲ್ಲ. ಪತ್ರಿಕೆಯಲ್ಲಿನ ವರದಿ ಸತ್ಯಕ್ಕೆ ದೂರ, ನಿರಾಧಾರ ಮತ್ತು ದುರುದ್ದೇಶಪೂರಿತ’ ಎಂದು ಪಾಕ್ ಹೇಳಿದೆ.<br /> <br /> <strong>ಯುದ್ಧದ ಪ್ರಸ್ತಾಪವೇ ಇಲ್ಲ:</strong> ಷರೀಫ್ ಸ್ಪಷ್ಟನೆ (ಇಸ್ಲಾಮಾಬಾದ್ ವರದಿ): ‘ಕಾಶ್ಮೀರ ವಿವಾದವು ಪಾಕಿಸ್ತಾನ– ಭಾರತದ ನಡುವೆ ನಾಲ್ಕನೇ ಯುದ್ಧಕ್ಕೆ ಕಾರಣವಾಗಬಹುದು’ ಎಂದು ಪಾಕ್ ಪ್ರಧಾನಿ ನವಾಜ್ ಷರೀಫ್ ಅವರು ಹೇಳಿಕೆ ನೀಡಿಯೇ ಇಲ್ಲ ಎಂದು ಸ್ಪಷ್ಟನೆ ನೀಡಲಾಗಿದೆ.<br /> <br /> ಈ ಸಂಬಂಧ ಪಾಕ್ನ ಪ್ರಮುಖ ಇಂಗ್ಲಿಷ್ ದಿನಪತ್ರಿಕೆಯೊಂದರಲ್ಲಿ ಬುಧವಾರ ಪ್ರಕಟವಾದ ‘ಸುದ್ದಿ ಆಧಾರರಹಿತ ಹಾಗೂ ದುರುದ್ದೇಶಪೂರಿತ’ ಎಂದು ಪ್ರಧಾನಿ ಕಚೇರಿ ತಿಳಿಸಿದೆ.<br /> <br /> ಮುಜಫರಾಬಾದ್ನಲ್ಲಿ ಮಂಗಳವಾರ ನಡೆದ ಪಾಕ್ ಆಕ್ರಮಿತ ಕಾಶ್ಮೀರದ ಪ್ರಮುಖರ ಸಭೆಯಲ್ಲಿ ನವಾಜ್ ಷರೀಫ್ ಅವರು ಮಾತನಾಡಿ, ‘ಕಾಶ್ಮೀರ ಬಿಕ್ಕಟ್ಟು ಸೂಕ್ಷ್ಮ ವಿಷಯವಾಗಿದ್ದು, ಎರಡು ಅಣ್ವಸ್ತ್ರ ರಾಷ್ಟ್ರಗಳ ನಡುವೆ ಯಾವುದೇ ಸಂದರ್ಭದಲ್ಲಿ ಯುದ್ಧಕ್ಕೆ ಕಾರಣವಾಗಬಹುದೆಂದು ಅಭಿಪ್ರಾಯಪಟ್ಟಿದ್ದರು’ ಎಂದು ವರದಿಯಾಗಿತ್ತು.</p>.<p>ಉಭಯ ರಾಷ್ಟ್ರಗಳ ನಡುವಣ ಯಾವುದೇ ಕಗ್ಗಂಟಿನ ಪರಿಹಾರಕ್ಕೆ ಮಾತುಕತೆಯೇ ಸೂಕ್ತ ವೇದಿಕೆ ಎಂಬುದೇ ಷರೀಫ್ ಅವರ ನಂಬಿಕೆ. ಮುಜಫರಾಬಾದ್ ಸಭೆಯಲ್ಲಿ ಪ್ರಧಾನಿ ಈ ವಿಷಯ ಪ್ರಸ್ತಾಪಿಸಿದ್ದು ನಿಜ. ಭಾರತದ ಸೇನಾ ನೀತಿಯಿಂದಾಗಿ ಪಾಕ್ ಕೂಡ ಶಸ್ತ್ರಾಸ್ತ್ರ ಸಂಗ್ರಹ ಪೈಪೋಟಿಗೆ ಇಳಿಯಬೇಕಾಗಿದೆ ಎಂದು ಷರೀಫ್ ಹೇಳಿದ್ದರೇ ವಿನಾ ಯುದ್ಧದ ಮಾತನ್ನು ಆಡಿಲ್ಲ ಎಂದು ಹೇಳಿಕೆಯಲ್ಲಿ ಸ್ಪಷ್ಟಪಡಿಸಲಾಗಿದೆ.<br /> <br /> ಮಾತುಕತೆ ಆರಂಭಿಸಿ– ಖರ್ ಸಲಹೆ (ನವದೆಹಲಿ ವರದಿ): ಭಾರತ– ಪಾಕ್ ಮಾತುಕತೆ ಪ್ರಕ್ರಿಯೆ ಪುನರಾರಂಭವಾಗಬೇಕು ಎಂದಿರುವ ಪಾಕ್ ವಿದೇಶಾಂಗ ಖಾತೆ ಮಾಜಿ ಸಚಿವೆ ಹೀನಾ ರಬ್ಬಾನಿ ಖರ್, ಈ ನಿಟ್ಟಿನಲ್ಲಿ ಎರಡೂ ದೇಶಗಳು ತಮ್ಮ ಹಳೆಯ ತಪ್ಪುಗಳ ಸರಕನ್ನು ಕೈಬಿಡಬೇಕು ಎಂದು ಸಲಹೆ ನೀಡಿದ್ದಾರೆ.<br /> <br /> ‘ನಾವಿಬ್ಬರೂ (ಭಾರತ–ಪಾಕ್) ಯುವ ಸಮುದಾಯದಲ್ಲಿ ಪರಸ್ಪರ ವಿಷಬೀಜ ಬಿತ್ತಿದ್ದೇವೆ. ಹಳೆಯ ಐತಿಹಾಸಿಕ ತಪ್ಪುಗಳನ್ನು ಪುನರಾವರ್ತಿಸುವುದು ಬೇಡ. ಅಂತಹ ಸರಕನ್ನು ಕಟ್ಟಿಡೋಣ. ಅದನ್ನೇ ಮುಂದಿಟ್ಟುಕೊಂಡು ನಡೆದರೆ ಭವಿಷ್ಯಕ್ಕೆ ಕತ್ತಲು ಕವಿಯುತ್ತದೆ’ ಎಂದು ಅವರು ನವದೆಹಲಿಯಲ್ಲಿ ನಡೆದ ‘ಅಂಜೆಡಾ ಆಜ್ತಕ್’ ಸಮ್ಮೇಳನದಲ್ಲಿ ಹೇಳಿದ್ದಾರೆ.<br /> <br /> ‘ಭಯೋತ್ಪಾದನೆಯು ಭಾರತಕ್ಕಿಂತ ನಮಗೇ ಹೆಚ್ಚು ಸವಾಲುಗಳನ್ನು ಒಡ್ಡಿದೆ. ಹಫೀಜ್ ಸಯೀದ್ನನ್ನು ಎರಡು ಸಾರಿ ಬಂಧಿಸಲಾಗಿತ್ತು. ಮುಂಬೈ ಮೇಲೆ ನಡೆದ ದಾಳಿ ಬಗ್ಗೆ ನ್ಯಾಯಾಲಯದಲ್ಲಿ ಗಟ್ಟಿಯಾಗಿ ನಿಲ್ಲುವಂತಹ ಸಾಕ್ಷ್ಯಗಳನ್ನು ನೀವು (ಭಾರತ) ಒದಗಿಸಿ. ಪಾಕ್ ಹಿತದೃಷ್ಟಿಯಿಂದ ಈ ಪ್ರಕರಣ ಎಷ್ಟು ಬೇಗ ಬಗೆಹರಿವುದೋ ಅಷ್ಟೂ ಒಳ್ಳೆಯದು’ ಎಂದಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>