<p><strong>ಮಂಗಳೂರು: </strong>ಮಾಹಿತಿ ಹಕ್ಕು ಕಾಯ್ದೆಯಿಂದ (ಆರ್ಟಿಐ) ದೇಶದಲ್ಲಿ ನಿಜವಾದ ಅರ್ಥದಲ್ಲಿ ಪ್ರಜಾಪ್ರಭುತ್ವ ಅಸ್ತಿತ್ವಕ್ಕೆ ಬಂದಂತಾಗಿದ್ದು, ಪ್ರತಿಯೊಬ್ಬರೂ, ಮುಖ್ಯವಾಗಿ ಯುವಜನತೆ ಈ ಕಾಯ್ದೆಯ ಬಗ್ಗೆ ಸ್ಪಷ್ಟ ಮಾಹಿತಿ ಪಡೆದುಕೊಳ್ಳಬೇಕು. ಇದನ್ನು ಪ್ರಬಲ ಅಸ್ತ್ರವನ್ನಾಗಿ ಮಾಡಬೇಕು ಎಂಬ ಸಂದೇಶ ನಗರದಲ್ಲಿ ಗುರುವಾರ ನಡೆದ ಕಾರ್ಯಕ್ರಮದಲ್ಲಿ ಹೊರಬಿದ್ದಿತು.<br /> <br /> ಆರ್ಟಿಐ ಆರನೇ ವರ್ಷಾಚರಣೆ ಪ್ರಯುಕ್ತ ಪುರಭವನದಲ್ಲಿ ಹಲವು ಜನಪರ ಸಂಘಟನೆಗಳು ಒಟ್ಟುಗೂಡಿ ರಚಿಸಿಕೊಂಡ `ಪಾರದರ್ಶಕತೆಗಾಗಿ ನಾಗರಿಕರ ಕಾರ್ಯ~ ಸಂಘಟನೆಯ ವತಿಯಿಂದ ಹಮ್ಮಿಕೊಳ್ಳಲಾದ ಜಿಲ್ಲಾ ಮಟ್ಟದ ಕಾರ್ಯಾಗಾರದಲ್ಲಿ ಈ ಸಂದೇಶ ಕೇಳಿಬಂತು.<br /> <br /> ಕಾರ್ಯಾಗಾರ ಉದ್ಘಾಟಿಸಿದ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಎಚ್.ಆರ್.ದೇಶಪಾಂಡೆ ಮಾತನಾಡಿ, 21ನೇ ಶತಮಾನದ ಕ್ರಾಂತಿಕಾರಕ ಕಾಯ್ದೆ ಎಂದರೆ ಆರ್ಟಿಐ. ಇದನ್ನು ಸಮರ್ಥವಾಗಿ ಬಳಸಿದ್ದೇ ಆದರೆ ದೇಶದಲ್ಲಿ ಭ್ರಷ್ಟಾಚಾರವನ್ನು ನಿಗ್ರಹಿಸುವುದು ಸಾಧ್ಯವಿದೆ. <br /> <br /> ಆದರೆ ಇದನ್ನು ಸ್ವಾರ್ಥ ಸಾಧನೆಗಾಗಿ ಬಳಸದೆ, ಜನಸಾಮಾನ್ಯರ ಅನುಕೂಲಕ್ಕಾಗಿ, ಅಧಿಕಾರಿಗಳ ಕರ್ತವ್ಯ ಪ್ರಜ್ಞೆಯನ್ನು ಎಚ್ಚರಿಸುವುದಕ್ಕಾಗಿ ಬಳಸಬೇಕು ಎಂದು ಕಿವಿಮಾತು ಹೇಳಿದರು.ಪ್ರಜಾಪ್ರಭುತ್ವದಲ್ಲಿ ಪ್ರಜೆಗಳೇ ಪ್ರಭುಗಳು. <br /> <br /> ಆದರೆ ಮಾಹಿತಿ ಎಂಬ ಮೂಲ ವಿಚಾರ ಅವರ ಬಳಿ ಇಲ್ಲದಿದ್ದರೆ ಅವರ ಹೋರಾಟಕ್ಕೆ ಅರ್ಥವಿರುವುದಿಲ್ಲ. ರಾಷ್ಟ್ರದ ಭದ್ರತೆ, ಸಾರ್ವಭೌಮತೆಗೆ ಸಂಬಂಧಿಸಿದ ವಿಚಾರ ಹೊರತುಪಡಿಸಿ ಉಳಿದೆಲ್ಲಾ ಮಾಹಿತಿಗಳನ್ನು ಈ ಕಾಯ್ದೆ ಪ್ರಕಾರ ನೀಡಲೇಬೇಕಾಗುತ್ತದೆ. ಹೀಗಾಗಿ ಜನರು ತಮ್ಮ ಹಕ್ಕನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು. ಇದರಿಂದಾಗಿ ಪ್ರಜಾಪ್ರಭುತ್ವದ ಮೂರೂ ಅಂಗಗಳು ಸಮರ್ಪಕವಾಗಿ ಕೆಲಸ ಮಾಡಲು ಸಾಧ್ಯ ಎಂದು ಅವರು ನುಡಿದರು.<br /> <br /> <strong>ಹೋರಾಟ ಎಚ್ಚರಿಕೆ:</strong> ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎಸ್.ಪಿ.ಚೆಂಗಪ್ಪ ಮಾತನಾಡಿ, ಆರ್ಟಿಐನಿಂದಾಗಿ ಜನಪ್ರತಿನಿಧಿಗಳು ಇಂದು ತಿಹಾರ್ ಜೈಲು, ಪರಪ್ಪನ ಅಗ್ರಹಾರ ಜೈಲುಗಳಿಗೆ ತೆರಳಲು ಸರದಿಯಲ್ಲಿ ನಿಲ್ಲುವಂತಾಗಿದೆ. ಇದೇ ಕಾರಣಕ್ಕೆ ಈ ಕಾಯ್ದೆಗೆ ತಿದ್ದುಪಡಿ ತರುವ ಪ್ರಯತ್ನವೂ ನಡೆದಿವೆ. ಕೆಡುಕಿಗಾಗಿ ತಿದ್ದುಪಡಿ ತಂದರೆ ಉಗ್ರ ಹೋರಾಟ ನಡೆಸಬೇಕಾದೀತು ಎಂದು ಎಚ್ಚರಿಸಿದರು.<br /> <br /> ಪ್ರತಿಯೊಬ್ಬರೂ, ಮುಖ್ಯವಾಗಿ ಯುವಜನರು ಈ ಕಾಯ್ದೆಯನ್ನು ಸರಿಯಾಗಿ ಅರ್ಥಮಾಡಿಕೊಂಡರೆ ದೇಶ ಹಲವು ಸಂಕಷ್ಟಗಳಿಂದ ಪಾರಾಗಲು ಸಾಧ್ಯವಿದೆ. ಈ ಕಾಯ್ದೆಯಡಿ ಅರ್ಜಿ ಸಲ್ಲಿಸುವುದು ಬಹಳ ಸರಳ. ಎಲ್ಲಿಯೇ ಅನ್ಯಾಯವಾದರೂ ಮಾಹಿತಿ ತರಿಸಿಕೊಂಡು ಕಾನೂನುಬದ್ಧವಾಗಿ ಹೋರಾಟ ಮಾಡುವುದು ಸಾಧ್ಯವಿದೆ. <br /> <br /> ಮುಂದಿನ ದಿನಗಳಲ್ಲಿ ಜಿಲ್ಲಾ ಕಾನೂನು ಸಲಹಾ ಪ್ರಾಧಿಕಾರ ಮತ್ತು ವಕೀಲರ ಸಂಘಗಳ ನುರಿತ ವಕೀಲರು ಮತ್ತು ಕಾನೂನು ತಜ್ಞರಿಂದ ಉಚಿತ ತರಬೇತಿ ನೀಡಲಾಗುವುದು ಎಂದರು.ದೇಶದಲ್ಲಿ 800ಕ್ಕೂ ಅಧಿಕ ಕಾನೂನುಗಳಿದ್ದು, ಸ್ವತಃ ವಕೀಲರಿಗೇ ಅಷ್ಟೂ ಕಾನೂನು ತಿಳಿದಿಲ್ಲ. <br /> <br /> ಆರ್ಟಿಐ, ಮನೆಯೊಳಗೆ ನಡೆಯುವ ಹಿಂಸೆ ತಡೆ ಕಾಯ್ದೆಯಂತಹ ಅಗತ್ಯದ ಕಾಯ್ದೆಗಳ ಬಗ್ಗೆ ಜನರಿಗೆ ಮಾಹಿತಿ ಹೊಂದಿರಬೇಕು. ಮಾಹಿತಿ ನೀಡಲು ಜಿಲ್ಲೆಯ ವಕೀಲರೂ ಸಿದ್ಧ. ಯುವಜನತೆ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.<br /> <br /> ಸಾಮಾಜಿಕ ಕಾರ್ಯಕರ್ತೆ ರೀಟಾ ನರೋನ್ಹಾ, ಅಹಿಂದ ಜಿಲ್ಲಾ ಸಂಚಾಲಕ ಲೋಲಾಕ್ಷ, ಹರ್ಷರಾಜ ಗಟ್ಟಿ, ಅಡ್ಡೂರು ಕೃಷ್ಣರಾವ್ ಇದ್ದರು. ಆರು ವರ್ಷಗಳಲ್ಲಿ ದುಷ್ಕರ್ಮಿಗಳಿಂದ ಹತ್ಯೆಗೀಡಾದ ದೇಶದ ಪ್ರಮುಖ ಆರ್ಟಿಐ ಕಾರ್ಯಕರ್ತರನ್ನು ಸ್ಮರಿಸಿ 2 ನಿಮಿಷ ಮೌನ ಆಚರಿಸಲಾಯಿತು.<br /> <br /> <strong>ಆರ್ಟಿಐ ಅರ್ಜಿ ಬರೆಯುವ ಬಗೆ: </strong> ಗ್ರಾಹಕ ಹಕ್ಕು ಹೋರಾಟಗಾರ ಅಡ್ಡೂರು ಕೃಷ್ಣರಾವ್, ಆರ್ಟಿಐ ಅರ್ಜಿ ಬರೆಯುವ ಬಗ್ಗೆ ಮಾಹಿತಿ ನೀಡಿದರು. ಹಲವು ನಿದರ್ಶನ ಉದ್ಧರಿಸಿ ಆರ್ಟಿಐ ಗ್ರಾಹಕರಿಗೆ ಹೇಗೆ ನೆರವಾಗಿದೆ ಎಂಬುದನ್ನು ವಿವರಿಸಿದರು. <br /> <br /> ಬಿಳಿ ಹಾಳೆಯಲ್ಲಿ ಮೇಲೆ `ಮಾಹಿತಿ ಹಕ್ಕು ಕಾಯ್ದೆ ಪ್ರಕಾರ ಮಾಹಿತಿಗೆ ಅರ್ಜಿ~ ಎಂದು ಬರೆದು ವ್ಯಕ್ತಿ ಹೆಸರು-ವಿಳಾಸ ಹಾಗೂ ಯಾರಿಗೆ ಸಲ್ಲಿಸಬೇಕೋ ಅ ಇಲಾಖೆಯ ಸಾರ್ವಜನಿಕ ಮಾಹಿತಿ ಅಧಿಕಾರಿಗೆ ಬರೆಯಬೇಕು.ನೇರವಾಗಿ ಹೇಳಿಕೆ ರೂಪದಲ್ಲಿ ಅಥವಾ ಪ್ರಶ್ನೆ ಮೂಲಕ ಯಾವ ಮಾಹಿತಿ ಬೇಕೋ ಕೇಳಬೇಕು. <br /> <br /> ಕೊನೆಗೆ ರೂ. 10ರ ಡಿ.ಡಿ./ಪೋಸ್ಟಲ್ ಆರ್ಡರ್ ಖರೀದಿಸಿ ಅದರ ಪ್ರತಿ ಲಗತ್ತಿಸಬೇಕು. ಕೊನೆಗೆ ಸಹಿ ಅಗತ್ಯ. ಸಂಸ್ಥೆಯಲ್ಲ, ವ್ಯಕ್ತಿಗಳೇ ಅರ್ಜಿ ಸಲ್ಲಿಸಬೇಕು ಎಂದು ಮಾಹಿತಿ ನೀಡಿದರು.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಂಗಳೂರು: </strong>ಮಾಹಿತಿ ಹಕ್ಕು ಕಾಯ್ದೆಯಿಂದ (ಆರ್ಟಿಐ) ದೇಶದಲ್ಲಿ ನಿಜವಾದ ಅರ್ಥದಲ್ಲಿ ಪ್ರಜಾಪ್ರಭುತ್ವ ಅಸ್ತಿತ್ವಕ್ಕೆ ಬಂದಂತಾಗಿದ್ದು, ಪ್ರತಿಯೊಬ್ಬರೂ, ಮುಖ್ಯವಾಗಿ ಯುವಜನತೆ ಈ ಕಾಯ್ದೆಯ ಬಗ್ಗೆ ಸ್ಪಷ್ಟ ಮಾಹಿತಿ ಪಡೆದುಕೊಳ್ಳಬೇಕು. ಇದನ್ನು ಪ್ರಬಲ ಅಸ್ತ್ರವನ್ನಾಗಿ ಮಾಡಬೇಕು ಎಂಬ ಸಂದೇಶ ನಗರದಲ್ಲಿ ಗುರುವಾರ ನಡೆದ ಕಾರ್ಯಕ್ರಮದಲ್ಲಿ ಹೊರಬಿದ್ದಿತು.<br /> <br /> ಆರ್ಟಿಐ ಆರನೇ ವರ್ಷಾಚರಣೆ ಪ್ರಯುಕ್ತ ಪುರಭವನದಲ್ಲಿ ಹಲವು ಜನಪರ ಸಂಘಟನೆಗಳು ಒಟ್ಟುಗೂಡಿ ರಚಿಸಿಕೊಂಡ `ಪಾರದರ್ಶಕತೆಗಾಗಿ ನಾಗರಿಕರ ಕಾರ್ಯ~ ಸಂಘಟನೆಯ ವತಿಯಿಂದ ಹಮ್ಮಿಕೊಳ್ಳಲಾದ ಜಿಲ್ಲಾ ಮಟ್ಟದ ಕಾರ್ಯಾಗಾರದಲ್ಲಿ ಈ ಸಂದೇಶ ಕೇಳಿಬಂತು.<br /> <br /> ಕಾರ್ಯಾಗಾರ ಉದ್ಘಾಟಿಸಿದ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಎಚ್.ಆರ್.ದೇಶಪಾಂಡೆ ಮಾತನಾಡಿ, 21ನೇ ಶತಮಾನದ ಕ್ರಾಂತಿಕಾರಕ ಕಾಯ್ದೆ ಎಂದರೆ ಆರ್ಟಿಐ. ಇದನ್ನು ಸಮರ್ಥವಾಗಿ ಬಳಸಿದ್ದೇ ಆದರೆ ದೇಶದಲ್ಲಿ ಭ್ರಷ್ಟಾಚಾರವನ್ನು ನಿಗ್ರಹಿಸುವುದು ಸಾಧ್ಯವಿದೆ. <br /> <br /> ಆದರೆ ಇದನ್ನು ಸ್ವಾರ್ಥ ಸಾಧನೆಗಾಗಿ ಬಳಸದೆ, ಜನಸಾಮಾನ್ಯರ ಅನುಕೂಲಕ್ಕಾಗಿ, ಅಧಿಕಾರಿಗಳ ಕರ್ತವ್ಯ ಪ್ರಜ್ಞೆಯನ್ನು ಎಚ್ಚರಿಸುವುದಕ್ಕಾಗಿ ಬಳಸಬೇಕು ಎಂದು ಕಿವಿಮಾತು ಹೇಳಿದರು.ಪ್ರಜಾಪ್ರಭುತ್ವದಲ್ಲಿ ಪ್ರಜೆಗಳೇ ಪ್ರಭುಗಳು. <br /> <br /> ಆದರೆ ಮಾಹಿತಿ ಎಂಬ ಮೂಲ ವಿಚಾರ ಅವರ ಬಳಿ ಇಲ್ಲದಿದ್ದರೆ ಅವರ ಹೋರಾಟಕ್ಕೆ ಅರ್ಥವಿರುವುದಿಲ್ಲ. ರಾಷ್ಟ್ರದ ಭದ್ರತೆ, ಸಾರ್ವಭೌಮತೆಗೆ ಸಂಬಂಧಿಸಿದ ವಿಚಾರ ಹೊರತುಪಡಿಸಿ ಉಳಿದೆಲ್ಲಾ ಮಾಹಿತಿಗಳನ್ನು ಈ ಕಾಯ್ದೆ ಪ್ರಕಾರ ನೀಡಲೇಬೇಕಾಗುತ್ತದೆ. ಹೀಗಾಗಿ ಜನರು ತಮ್ಮ ಹಕ್ಕನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು. ಇದರಿಂದಾಗಿ ಪ್ರಜಾಪ್ರಭುತ್ವದ ಮೂರೂ ಅಂಗಗಳು ಸಮರ್ಪಕವಾಗಿ ಕೆಲಸ ಮಾಡಲು ಸಾಧ್ಯ ಎಂದು ಅವರು ನುಡಿದರು.<br /> <br /> <strong>ಹೋರಾಟ ಎಚ್ಚರಿಕೆ:</strong> ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎಸ್.ಪಿ.ಚೆಂಗಪ್ಪ ಮಾತನಾಡಿ, ಆರ್ಟಿಐನಿಂದಾಗಿ ಜನಪ್ರತಿನಿಧಿಗಳು ಇಂದು ತಿಹಾರ್ ಜೈಲು, ಪರಪ್ಪನ ಅಗ್ರಹಾರ ಜೈಲುಗಳಿಗೆ ತೆರಳಲು ಸರದಿಯಲ್ಲಿ ನಿಲ್ಲುವಂತಾಗಿದೆ. ಇದೇ ಕಾರಣಕ್ಕೆ ಈ ಕಾಯ್ದೆಗೆ ತಿದ್ದುಪಡಿ ತರುವ ಪ್ರಯತ್ನವೂ ನಡೆದಿವೆ. ಕೆಡುಕಿಗಾಗಿ ತಿದ್ದುಪಡಿ ತಂದರೆ ಉಗ್ರ ಹೋರಾಟ ನಡೆಸಬೇಕಾದೀತು ಎಂದು ಎಚ್ಚರಿಸಿದರು.<br /> <br /> ಪ್ರತಿಯೊಬ್ಬರೂ, ಮುಖ್ಯವಾಗಿ ಯುವಜನರು ಈ ಕಾಯ್ದೆಯನ್ನು ಸರಿಯಾಗಿ ಅರ್ಥಮಾಡಿಕೊಂಡರೆ ದೇಶ ಹಲವು ಸಂಕಷ್ಟಗಳಿಂದ ಪಾರಾಗಲು ಸಾಧ್ಯವಿದೆ. ಈ ಕಾಯ್ದೆಯಡಿ ಅರ್ಜಿ ಸಲ್ಲಿಸುವುದು ಬಹಳ ಸರಳ. ಎಲ್ಲಿಯೇ ಅನ್ಯಾಯವಾದರೂ ಮಾಹಿತಿ ತರಿಸಿಕೊಂಡು ಕಾನೂನುಬದ್ಧವಾಗಿ ಹೋರಾಟ ಮಾಡುವುದು ಸಾಧ್ಯವಿದೆ. <br /> <br /> ಮುಂದಿನ ದಿನಗಳಲ್ಲಿ ಜಿಲ್ಲಾ ಕಾನೂನು ಸಲಹಾ ಪ್ರಾಧಿಕಾರ ಮತ್ತು ವಕೀಲರ ಸಂಘಗಳ ನುರಿತ ವಕೀಲರು ಮತ್ತು ಕಾನೂನು ತಜ್ಞರಿಂದ ಉಚಿತ ತರಬೇತಿ ನೀಡಲಾಗುವುದು ಎಂದರು.ದೇಶದಲ್ಲಿ 800ಕ್ಕೂ ಅಧಿಕ ಕಾನೂನುಗಳಿದ್ದು, ಸ್ವತಃ ವಕೀಲರಿಗೇ ಅಷ್ಟೂ ಕಾನೂನು ತಿಳಿದಿಲ್ಲ. <br /> <br /> ಆರ್ಟಿಐ, ಮನೆಯೊಳಗೆ ನಡೆಯುವ ಹಿಂಸೆ ತಡೆ ಕಾಯ್ದೆಯಂತಹ ಅಗತ್ಯದ ಕಾಯ್ದೆಗಳ ಬಗ್ಗೆ ಜನರಿಗೆ ಮಾಹಿತಿ ಹೊಂದಿರಬೇಕು. ಮಾಹಿತಿ ನೀಡಲು ಜಿಲ್ಲೆಯ ವಕೀಲರೂ ಸಿದ್ಧ. ಯುವಜನತೆ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.<br /> <br /> ಸಾಮಾಜಿಕ ಕಾರ್ಯಕರ್ತೆ ರೀಟಾ ನರೋನ್ಹಾ, ಅಹಿಂದ ಜಿಲ್ಲಾ ಸಂಚಾಲಕ ಲೋಲಾಕ್ಷ, ಹರ್ಷರಾಜ ಗಟ್ಟಿ, ಅಡ್ಡೂರು ಕೃಷ್ಣರಾವ್ ಇದ್ದರು. ಆರು ವರ್ಷಗಳಲ್ಲಿ ದುಷ್ಕರ್ಮಿಗಳಿಂದ ಹತ್ಯೆಗೀಡಾದ ದೇಶದ ಪ್ರಮುಖ ಆರ್ಟಿಐ ಕಾರ್ಯಕರ್ತರನ್ನು ಸ್ಮರಿಸಿ 2 ನಿಮಿಷ ಮೌನ ಆಚರಿಸಲಾಯಿತು.<br /> <br /> <strong>ಆರ್ಟಿಐ ಅರ್ಜಿ ಬರೆಯುವ ಬಗೆ: </strong> ಗ್ರಾಹಕ ಹಕ್ಕು ಹೋರಾಟಗಾರ ಅಡ್ಡೂರು ಕೃಷ್ಣರಾವ್, ಆರ್ಟಿಐ ಅರ್ಜಿ ಬರೆಯುವ ಬಗ್ಗೆ ಮಾಹಿತಿ ನೀಡಿದರು. ಹಲವು ನಿದರ್ಶನ ಉದ್ಧರಿಸಿ ಆರ್ಟಿಐ ಗ್ರಾಹಕರಿಗೆ ಹೇಗೆ ನೆರವಾಗಿದೆ ಎಂಬುದನ್ನು ವಿವರಿಸಿದರು. <br /> <br /> ಬಿಳಿ ಹಾಳೆಯಲ್ಲಿ ಮೇಲೆ `ಮಾಹಿತಿ ಹಕ್ಕು ಕಾಯ್ದೆ ಪ್ರಕಾರ ಮಾಹಿತಿಗೆ ಅರ್ಜಿ~ ಎಂದು ಬರೆದು ವ್ಯಕ್ತಿ ಹೆಸರು-ವಿಳಾಸ ಹಾಗೂ ಯಾರಿಗೆ ಸಲ್ಲಿಸಬೇಕೋ ಅ ಇಲಾಖೆಯ ಸಾರ್ವಜನಿಕ ಮಾಹಿತಿ ಅಧಿಕಾರಿಗೆ ಬರೆಯಬೇಕು.ನೇರವಾಗಿ ಹೇಳಿಕೆ ರೂಪದಲ್ಲಿ ಅಥವಾ ಪ್ರಶ್ನೆ ಮೂಲಕ ಯಾವ ಮಾಹಿತಿ ಬೇಕೋ ಕೇಳಬೇಕು. <br /> <br /> ಕೊನೆಗೆ ರೂ. 10ರ ಡಿ.ಡಿ./ಪೋಸ್ಟಲ್ ಆರ್ಡರ್ ಖರೀದಿಸಿ ಅದರ ಪ್ರತಿ ಲಗತ್ತಿಸಬೇಕು. ಕೊನೆಗೆ ಸಹಿ ಅಗತ್ಯ. ಸಂಸ್ಥೆಯಲ್ಲ, ವ್ಯಕ್ತಿಗಳೇ ಅರ್ಜಿ ಸಲ್ಲಿಸಬೇಕು ಎಂದು ಮಾಹಿತಿ ನೀಡಿದರು.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>