<p>ಮಲ್ಲೇಶ್ವರದ ಈಸ್ಟ್ಪಾರ್ಕ್ ರಸ್ತೆಯಲ್ಲಿರುವ ಶ್ರೀರಾಮ ಮಂದಿರದಲ್ಲಿ ತ್ರಿವೇಣಿ ಚಾರಿಟಬಲ್ ಟ್ರಸ್ಟ್ ಇತ್ತೀಚೆಗೆ `ಹರಿದಾಸ ಕಲರವ' ಸಂಗೀತ ಕಾರ್ಯಕ್ರಮ ಹಮ್ಮಿಕೊಂಡಿತ್ತು.<br /> <br /> ನಿರೀಕ್ಷಾ ಅವರು `ಮೊದಲೊಂದಿಪೆ ನಿನಗೆ ಗಣನಾಥ' ಎಂಬ ವಿಘ್ನೇಶ್ವರನ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಆರಂಭಿಸಿದರು. `ದಾಸನೆನಿಸೋ ಎನ್ನ' `ಎಂದೆಂದೂ ನಿನ್ನ ಪಾದವೇ ಗತಿ' ಗೀತೆಗಳನ್ನು ಹಾಡಿದರು. `ಬಂದ ಕೃಷ್ಣ ಚಂದದಿಂದ', `ವೆಂಕಟರಮಣನೇ ಬಾರೋ', `ರಾಮ ರಾಮ ಎಂಬೆರಡಕ್ಷರದ' ಗೀತೆಗಳನ್ನು ನಿಸರ್ಗ ಹಾಡಿದರು.<br /> <br /> ಮೇಘನಾ ಮತ್ತು ಆದಿತ್ಯ `ಕೇಶವ ಮಾಧವ', `ತಾರಕ್ಕ ಬಿಂದಿಗೆ', `ದೃಷ್ಟಿ ನಿನ್ನ ಪಾದದಲ್ಲಿ' ಗೀತೆಗಳನ್ನು ಹಾಡಿ ರಂಜಿಸಿದರು. ಮಾನ್ಯ ಅವರು `ಶರಣು ಶರಣು', `ನಂಬಿದೆ ನಿನ್ನಾ ಪಾದ', `ಬಾರೆ ಭಾಗ್ಯದ ನಿಧಿಯೇ' ಮುಂತಾದ ಗೀತೆಗಳನ್ನು ಪ್ರಸ್ತುತಪಡಿಸಿದರು.<br /> <br /> ನಂತರ ಜಯಂತ್, ಚೇತಶ್ರೀ ಮತ್ತು ಪ್ರಿಯಾಂಕ ಅವರು ಹರಿದಾಸ ಕೃತಿಗಳಿಗೆ ನೃತ್ಯ ಮಾಡಿದರು. ಶ್ರೀನಿವಾಸ (ಕೀಬೋರ್ಡ್), ಮಾರುತಿ ಪ್ರಸಾದ್ (ತಬಲಾ) ವಾದ್ಯ ಸಹಕಾರ ನೀಡಿದರು.<br /> <br /> ಅರಳು ಮಲ್ಲಿಗೆ ಪಾರ್ಥಸಾರಥಿ, ಪುರಂದರ ಇಂಟರ್ನ್ಯಾಷನಲ್ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಸುವರ್ಣ ಮೋಹನ್, ವಿದುಷಿ ರಮಾ ಕೃಷ್ಣಮೂರ್ತಿ ಕಾರ್ಯಕ್ರಮಕ್ಕೆ ಸಾಕ್ಷಿಯಾದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಮಲ್ಲೇಶ್ವರದ ಈಸ್ಟ್ಪಾರ್ಕ್ ರಸ್ತೆಯಲ್ಲಿರುವ ಶ್ರೀರಾಮ ಮಂದಿರದಲ್ಲಿ ತ್ರಿವೇಣಿ ಚಾರಿಟಬಲ್ ಟ್ರಸ್ಟ್ ಇತ್ತೀಚೆಗೆ `ಹರಿದಾಸ ಕಲರವ' ಸಂಗೀತ ಕಾರ್ಯಕ್ರಮ ಹಮ್ಮಿಕೊಂಡಿತ್ತು.<br /> <br /> ನಿರೀಕ್ಷಾ ಅವರು `ಮೊದಲೊಂದಿಪೆ ನಿನಗೆ ಗಣನಾಥ' ಎಂಬ ವಿಘ್ನೇಶ್ವರನ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಆರಂಭಿಸಿದರು. `ದಾಸನೆನಿಸೋ ಎನ್ನ' `ಎಂದೆಂದೂ ನಿನ್ನ ಪಾದವೇ ಗತಿ' ಗೀತೆಗಳನ್ನು ಹಾಡಿದರು. `ಬಂದ ಕೃಷ್ಣ ಚಂದದಿಂದ', `ವೆಂಕಟರಮಣನೇ ಬಾರೋ', `ರಾಮ ರಾಮ ಎಂಬೆರಡಕ್ಷರದ' ಗೀತೆಗಳನ್ನು ನಿಸರ್ಗ ಹಾಡಿದರು.<br /> <br /> ಮೇಘನಾ ಮತ್ತು ಆದಿತ್ಯ `ಕೇಶವ ಮಾಧವ', `ತಾರಕ್ಕ ಬಿಂದಿಗೆ', `ದೃಷ್ಟಿ ನಿನ್ನ ಪಾದದಲ್ಲಿ' ಗೀತೆಗಳನ್ನು ಹಾಡಿ ರಂಜಿಸಿದರು. ಮಾನ್ಯ ಅವರು `ಶರಣು ಶರಣು', `ನಂಬಿದೆ ನಿನ್ನಾ ಪಾದ', `ಬಾರೆ ಭಾಗ್ಯದ ನಿಧಿಯೇ' ಮುಂತಾದ ಗೀತೆಗಳನ್ನು ಪ್ರಸ್ತುತಪಡಿಸಿದರು.<br /> <br /> ನಂತರ ಜಯಂತ್, ಚೇತಶ್ರೀ ಮತ್ತು ಪ್ರಿಯಾಂಕ ಅವರು ಹರಿದಾಸ ಕೃತಿಗಳಿಗೆ ನೃತ್ಯ ಮಾಡಿದರು. ಶ್ರೀನಿವಾಸ (ಕೀಬೋರ್ಡ್), ಮಾರುತಿ ಪ್ರಸಾದ್ (ತಬಲಾ) ವಾದ್ಯ ಸಹಕಾರ ನೀಡಿದರು.<br /> <br /> ಅರಳು ಮಲ್ಲಿಗೆ ಪಾರ್ಥಸಾರಥಿ, ಪುರಂದರ ಇಂಟರ್ನ್ಯಾಷನಲ್ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಸುವರ್ಣ ಮೋಹನ್, ವಿದುಷಿ ರಮಾ ಕೃಷ್ಣಮೂರ್ತಿ ಕಾರ್ಯಕ್ರಮಕ್ಕೆ ಸಾಕ್ಷಿಯಾದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>