<p><strong>ರಾಯಬಾಗ: </strong>ಈಚೆಗೆ ಸಸಾಲಟ್ಟಿ ಗ್ರಾಮದ ಈರಣ್ಣ ದೇವಾಲಯವನ್ನು ನವೀಕರಿ ಸುವ ಸಂದರ್ಭದಲ್ಲಿ ನೆಲ ಅಗೆಯುವಾಗ ನಾಲ್ಕು ಅಡಿ ಎತ್ತರದ ನೂತನ ಶಾಸನ ಪತ್ತೆಯಾಗಿದೆ.</p>.<p>ಇದನ್ನು ಹಾರೂಗೇರಿಯ ದರೂರ ವೃಷಭೇಂದ್ರ ಸಂಶೋಧನಾ ಕೇಂದ್ರದ ನಿರ್ದೇಶಕ ಡಾ.ವಿ.ಎಸ್. ಮಾಳಿ ಹಾಗೂ ವೃಷಭೇಂದ್ರ ಕಾಲೇಜಿನ ಇತಿಹಾಸ ವಿಭಾಗದ ಪ್ರಾಧ್ಯಾಪಕರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದಾಗ, ಸದರಿ ಶಾಸನ ಹಳೆಗನ್ನಡದಲ್ಲಿದ್ದು, ಇದರಲ್ಲಿ ಹನ್ನೆರಡು ಶಾಸನಗಳಿವೆ.<br /> <br /> ಶಾಸನದ ಹಿಂಬಾಗದಲ್ಲಿ ಶಿವಲಿಂಗ ಇದೆ. ಇದು 12 ಅಥವಾ 13ನೆಯ ಶತಮಾನದ ಶಾಸನ ಆಗಿರಬಹುದು ಎಂದು ತಿಳಿಸಿದ್ದಾರೆ.ಶಾಸನದಲ್ಲಿ ರಟ್ಟ ದೊರೆ ಕಾರ್ತವೀರ್ಯನ ಉಲ್ಲೇಖವಿದೆ. ಆದ್ದರಿಂದ ಇದು ರಟ್ಟರ ಶಾಸನವೆಂದು ಸ್ಪಷ್ಟವಾಗಿದೆ ಎಂದು ಡಾ. ಮಾಳಿ ತಿಳಿಸಿದ್ದಾರೆ.<br /> <br /> ಶಾಸನದಲ್ಲಿ ದಂಡನಾಯಕ ಕೇತರಸನ ಕುರಿತು ವಿವರಗಳಿಲ್ಲ. ರಟ್ಟರಾಜ ಕಾರ್ತವೀರ್ಯ ಎಷ್ಟನೆಯವನು ಎಂಬುದು ಸ್ಪಷ್ಟವಿಲ್ಲ. ರಟ್ಟ ಅರಸರಲ್ಲಿ ನಾಲ್ವರು ಕಾರ್ತವೀರ್ಯರಿದ್ದು ಶಾಸನದಲ್ಲಿ ಉಲ್ಲೇಖಿತ ಕಾರ್ತವೀರ್ಯನು ನಾಲ್ಕನೆಯವನು ಆಗಿರಬಹುದು ಎಂದು ಶಾಸನ ತಜ್ಞ ಡಾ.ಹನುಮಾಕ್ಷಿ ಗೋಗಿ ವಿವರಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ರಾಯಬಾಗ: </strong>ಈಚೆಗೆ ಸಸಾಲಟ್ಟಿ ಗ್ರಾಮದ ಈರಣ್ಣ ದೇವಾಲಯವನ್ನು ನವೀಕರಿ ಸುವ ಸಂದರ್ಭದಲ್ಲಿ ನೆಲ ಅಗೆಯುವಾಗ ನಾಲ್ಕು ಅಡಿ ಎತ್ತರದ ನೂತನ ಶಾಸನ ಪತ್ತೆಯಾಗಿದೆ.</p>.<p>ಇದನ್ನು ಹಾರೂಗೇರಿಯ ದರೂರ ವೃಷಭೇಂದ್ರ ಸಂಶೋಧನಾ ಕೇಂದ್ರದ ನಿರ್ದೇಶಕ ಡಾ.ವಿ.ಎಸ್. ಮಾಳಿ ಹಾಗೂ ವೃಷಭೇಂದ್ರ ಕಾಲೇಜಿನ ಇತಿಹಾಸ ವಿಭಾಗದ ಪ್ರಾಧ್ಯಾಪಕರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದಾಗ, ಸದರಿ ಶಾಸನ ಹಳೆಗನ್ನಡದಲ್ಲಿದ್ದು, ಇದರಲ್ಲಿ ಹನ್ನೆರಡು ಶಾಸನಗಳಿವೆ.<br /> <br /> ಶಾಸನದ ಹಿಂಬಾಗದಲ್ಲಿ ಶಿವಲಿಂಗ ಇದೆ. ಇದು 12 ಅಥವಾ 13ನೆಯ ಶತಮಾನದ ಶಾಸನ ಆಗಿರಬಹುದು ಎಂದು ತಿಳಿಸಿದ್ದಾರೆ.ಶಾಸನದಲ್ಲಿ ರಟ್ಟ ದೊರೆ ಕಾರ್ತವೀರ್ಯನ ಉಲ್ಲೇಖವಿದೆ. ಆದ್ದರಿಂದ ಇದು ರಟ್ಟರ ಶಾಸನವೆಂದು ಸ್ಪಷ್ಟವಾಗಿದೆ ಎಂದು ಡಾ. ಮಾಳಿ ತಿಳಿಸಿದ್ದಾರೆ.<br /> <br /> ಶಾಸನದಲ್ಲಿ ದಂಡನಾಯಕ ಕೇತರಸನ ಕುರಿತು ವಿವರಗಳಿಲ್ಲ. ರಟ್ಟರಾಜ ಕಾರ್ತವೀರ್ಯ ಎಷ್ಟನೆಯವನು ಎಂಬುದು ಸ್ಪಷ್ಟವಿಲ್ಲ. ರಟ್ಟ ಅರಸರಲ್ಲಿ ನಾಲ್ವರು ಕಾರ್ತವೀರ್ಯರಿದ್ದು ಶಾಸನದಲ್ಲಿ ಉಲ್ಲೇಖಿತ ಕಾರ್ತವೀರ್ಯನು ನಾಲ್ಕನೆಯವನು ಆಗಿರಬಹುದು ಎಂದು ಶಾಸನ ತಜ್ಞ ಡಾ.ಹನುಮಾಕ್ಷಿ ಗೋಗಿ ವಿವರಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>