<p><strong>ಗೋಕಾಕ: `</strong>ನಿಗದಿತ ದರದಲ್ಲಿ ರಸಗೊಬ್ಬರ ಮಾರಾಟ ಮಾಡುವ ಮೂಲಕ ನಿಯಮಾವಳಿ ಅನುಸರಿಸಿ ಹಾಗೂ ದರ ಪಟ್ಟಿ ಪ್ರದರ್ಶಿಸಿ' ಎಂದು ಸಹಾಯಕ ಕೃಷಿ ನಿರ್ದೇಶಕ ಆರ್.ಜಿ.ನಾಗಣ್ಣವರ ಕೃಷಿ ಪರಿಕರ ಮಾರಾಟಗಾರರಿಗೆ ಸೂಚನೆ ನೀಡಿದರು.<br /> <br /> ಇತ್ತೀಚೆಗೆ ನಗರದ ತಾ.ಪಂ. ಸಭಾಂಗಣದಲ್ಲಿ ಜರುಗಿದ ಕೃಷಿ ಪರಿಕರ ಮಾರಾಟಗಾರರ ಸಭೆಯಲ್ಲಿ ಮಾತನಾಡಿದ ಅವರು, ಸಾಕಷ್ಟು ಪ್ರಮಾಣದಲ್ಲಿ ದಾಸ್ತಾನು ಮಾಡಲು, ಬಿಲ್ ನೀಡಲು ಹಾಗೂ ಕಳಪೆ ಮಟ್ಟದ ಪರಿಕರಗಳನ್ನು ಮಾರಾಟ ಮಾಡದಂತೆ ಸೂಚನೆ ನೀಡಿದರು. ತಪ್ಪಿದಲ್ಲಿ ಕಾನೂನು ಕ್ರಮ ಜರುಗಿಸಲಾಗುವುದು ಎಂದರು.<br /> <br /> ರೈತ ಮುಖಂಡರಾದ ಶಿವನಗೌಡ ಗೌಡರ ಹಾಗೂ ಗಣಪತಿ ಇಳಿಗೇರ ಮಾತನಾಡಿ, ರೈತರಿಗೆ ಸಮಯಕ್ಕೆ ಸರಿಯಾಗಿ ಗುಣಮಟ್ಟದ ಪರಿಕರ ಸಿಗುವಂತೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.<br /> <br /> ಸಭೆಯ ಅಧ್ಯಕ್ಷತೆಯನ್ನು ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ವಿ.ಎಸ್.ಸಂಕ್ರಿ ವಹಿಸಿದ್ದರು.<br /> ಕೃಷಿ ಅಧಿಕಾರಿಗಳಾದ ಆರ್.ಬಿ.ನಾಯ್ಕರ, ಬಸವರಾಜ ದಳವಾಯಿ, ಮಂಜುನಾಥ ಜನಮಟ್ಟಿ, ಎಲ್.ಎನ್. ಕೌಜಗೇರಿ, ರೇಣುಕಾ ಹಿರೇಕುರುಬರ ಉಪಸ್ಥಿತರಿದ್ದರು.<br /> <br /> <strong>`ಉತ್ತಮ ಪರಿಸರ ಮುಖ್ಯ'</strong><br /> ಮೂಡಲಗಿ: `ಗಿಡ ಮರಗಳನ್ನು ಬೆಳೆಸಿ ಉತ್ತಮ ಪರಿಸರ ಹೊಂದುವುದು ಮುಖ್ಯ' ಎಂದು ಸಿ.ಪಿ.ಐ. ಎಸ್.ಎಂ. ಓಲೇಕಾರ ಅವರು ಹೇಳಿದರು.<br /> <br /> ಇಲ್ಲಿಯ ಪೊಲೀಸ್ ಠಾಣೆ ಆವರಣದಲ್ಲಿ ಸಸಿ ನೆಟ್ಟು ನೀರು ಹಾಕುವುದರ ಮೂಲಕ ವನಮಹೋತ್ಸಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಹಸಿರಿದ್ದರೆ ಮಾತ್ರ ಸಕಲ ಪ್ರಾಣಿ ಪಕ್ಷಿಗಳು ಭೂಮಿಯಲ್ಲಿ ಬದುಕಲು ಸಾಧ್ಯ ಎಂದರು.<br /> <br /> ಪಿ.ಎಸ್.ಐ. ಎಸ್.ವೈ. ಮರಡಿ ಮಾತನಾಡಿ, ಪ್ರತಿಯೊಬ್ಬ ವ್ಯಕ್ತಿ ಒಂದು ಗಿಡ ಬೆಳೆಸಿದರೆ ಪರಿಸರ ವಿನಾಶ ಎನ್ನುವ ಪ್ರಶ್ನೆಯೇ ಇರುವುದಿಲ್ಲ ಎಂದರು. ಠಾಣೆಯ ಆವಣದಲ್ಲಿ ಸದ್ಯ 50 ಸಸಿಗಳನ್ನು ನೆಡಲಾಗುತ್ತಿದೆ ಎಂದು ಅವರು ತಿಳಿಸಿದರು. ಠಾಣೆಯ ಸಿಬ್ಬಂದಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಗೋಕಾಕ: `</strong>ನಿಗದಿತ ದರದಲ್ಲಿ ರಸಗೊಬ್ಬರ ಮಾರಾಟ ಮಾಡುವ ಮೂಲಕ ನಿಯಮಾವಳಿ ಅನುಸರಿಸಿ ಹಾಗೂ ದರ ಪಟ್ಟಿ ಪ್ರದರ್ಶಿಸಿ' ಎಂದು ಸಹಾಯಕ ಕೃಷಿ ನಿರ್ದೇಶಕ ಆರ್.ಜಿ.ನಾಗಣ್ಣವರ ಕೃಷಿ ಪರಿಕರ ಮಾರಾಟಗಾರರಿಗೆ ಸೂಚನೆ ನೀಡಿದರು.<br /> <br /> ಇತ್ತೀಚೆಗೆ ನಗರದ ತಾ.ಪಂ. ಸಭಾಂಗಣದಲ್ಲಿ ಜರುಗಿದ ಕೃಷಿ ಪರಿಕರ ಮಾರಾಟಗಾರರ ಸಭೆಯಲ್ಲಿ ಮಾತನಾಡಿದ ಅವರು, ಸಾಕಷ್ಟು ಪ್ರಮಾಣದಲ್ಲಿ ದಾಸ್ತಾನು ಮಾಡಲು, ಬಿಲ್ ನೀಡಲು ಹಾಗೂ ಕಳಪೆ ಮಟ್ಟದ ಪರಿಕರಗಳನ್ನು ಮಾರಾಟ ಮಾಡದಂತೆ ಸೂಚನೆ ನೀಡಿದರು. ತಪ್ಪಿದಲ್ಲಿ ಕಾನೂನು ಕ್ರಮ ಜರುಗಿಸಲಾಗುವುದು ಎಂದರು.<br /> <br /> ರೈತ ಮುಖಂಡರಾದ ಶಿವನಗೌಡ ಗೌಡರ ಹಾಗೂ ಗಣಪತಿ ಇಳಿಗೇರ ಮಾತನಾಡಿ, ರೈತರಿಗೆ ಸಮಯಕ್ಕೆ ಸರಿಯಾಗಿ ಗುಣಮಟ್ಟದ ಪರಿಕರ ಸಿಗುವಂತೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.<br /> <br /> ಸಭೆಯ ಅಧ್ಯಕ್ಷತೆಯನ್ನು ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ವಿ.ಎಸ್.ಸಂಕ್ರಿ ವಹಿಸಿದ್ದರು.<br /> ಕೃಷಿ ಅಧಿಕಾರಿಗಳಾದ ಆರ್.ಬಿ.ನಾಯ್ಕರ, ಬಸವರಾಜ ದಳವಾಯಿ, ಮಂಜುನಾಥ ಜನಮಟ್ಟಿ, ಎಲ್.ಎನ್. ಕೌಜಗೇರಿ, ರೇಣುಕಾ ಹಿರೇಕುರುಬರ ಉಪಸ್ಥಿತರಿದ್ದರು.<br /> <br /> <strong>`ಉತ್ತಮ ಪರಿಸರ ಮುಖ್ಯ'</strong><br /> ಮೂಡಲಗಿ: `ಗಿಡ ಮರಗಳನ್ನು ಬೆಳೆಸಿ ಉತ್ತಮ ಪರಿಸರ ಹೊಂದುವುದು ಮುಖ್ಯ' ಎಂದು ಸಿ.ಪಿ.ಐ. ಎಸ್.ಎಂ. ಓಲೇಕಾರ ಅವರು ಹೇಳಿದರು.<br /> <br /> ಇಲ್ಲಿಯ ಪೊಲೀಸ್ ಠಾಣೆ ಆವರಣದಲ್ಲಿ ಸಸಿ ನೆಟ್ಟು ನೀರು ಹಾಕುವುದರ ಮೂಲಕ ವನಮಹೋತ್ಸಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಹಸಿರಿದ್ದರೆ ಮಾತ್ರ ಸಕಲ ಪ್ರಾಣಿ ಪಕ್ಷಿಗಳು ಭೂಮಿಯಲ್ಲಿ ಬದುಕಲು ಸಾಧ್ಯ ಎಂದರು.<br /> <br /> ಪಿ.ಎಸ್.ಐ. ಎಸ್.ವೈ. ಮರಡಿ ಮಾತನಾಡಿ, ಪ್ರತಿಯೊಬ್ಬ ವ್ಯಕ್ತಿ ಒಂದು ಗಿಡ ಬೆಳೆಸಿದರೆ ಪರಿಸರ ವಿನಾಶ ಎನ್ನುವ ಪ್ರಶ್ನೆಯೇ ಇರುವುದಿಲ್ಲ ಎಂದರು. ಠಾಣೆಯ ಆವಣದಲ್ಲಿ ಸದ್ಯ 50 ಸಸಿಗಳನ್ನು ನೆಡಲಾಗುತ್ತಿದೆ ಎಂದು ಅವರು ತಿಳಿಸಿದರು. ಠಾಣೆಯ ಸಿಬ್ಬಂದಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>