<p><strong>ಬೆಂಗಳೂರು: </strong>ಅಕಾಲಿಕ ಮರಣಕ್ಕೆ ತುತ್ತಾದ ರಾಕೇಶ್ ಸಿದ್ದರಾಮಯ್ಯ ಅವರ ಬಗ್ಗೆ ಅಪಪ್ರಚಾರ ಮಾಡಲು ಸಾಮಾಜಿಕ ಜಾಲತಾಣಗಳಲ್ಲಿ ಕಸರತ್ತು ನಡೆಸಲಾಗಿದೆ. ಬೇರೆ ಬೇರೆ ಸಂದರ್ಭದ ಛಾಯಾಚಿತ್ರಗಳನ್ನು ಬಳಸಿಕೊಂಡು ರಾಕೇಶ್ ಅವರ ಮಾನಹಾನಿಗೆ ಯತ್ನಿಸಲಾಗಿದೆ ಎಂಬ ಅಭಿಪ್ರಾಯಗಳು ಈಗ ಸಾಮಾಜಿಕ ಜಾಲತಾಣಗಳಲ್ಲೇ ವ್ಯಕ್ತವಾಗಿವೆ.</p>.<p>ರಾಕೇಶ್ ಅವರನ್ನು ಹೋಲುವ ವ್ಯಕ್ತಿಯೊಬ್ಬ ಸೆಕ್ಯುರಿಟಿ ಗಾರ್ಡ್ ಒಬ್ಬರಿಗೆ ಒದೆಯುತ್ತಿರುವ ಚಿತ್ರವನ್ನು ಫೇಸ್ಬುಕ್, ವಾಟ್ಸ್ಆ್ಯಪ್, ಟ್ವಿಟರ್ನಲ್ಲಿ ಹರಿಬಿಡಲಾಗಿದೆ. ಆದರೆ, ಈ ಚಿತ್ರವನ್ನು ದೆಹಲಿ ಮೂಲದ <strong><a href="https://twitter.com/INirajVerma/status/737856618151444480"><span style="color:#0099ff;">ನೀರಜ್ ವರ್ಮಾ</span></a></strong><span style="color:#40e0d0;"> </span>ಎಂಬುವವರು ಜೂನ್ 1ರಂದು ಟ್ವೀಟ್ ಮಾಡಿದ್ದಾರೆ. ಈ ಚಿತ್ರವನ್ನು 310 ಮಂದಿ ರಿಟ್ವೀಟ್ ಮಾಡಿದ್ದಾರೆ. ‘<strong><a href="https://twitter.com/search?q=%E0%A4%85%E0%A4%AE%E0%A5%80%E0%A4%B0%E0%A5%80%20%E0%A4%95%E0%A5%87%20%E0%A4%A8%E0%A4%B6%E0%A5%87%20%E0%A4%AE%E0%A5%87%E0%A4%82%20%E0%A4%8F%E0%A4%95%20%E0%A4%9C%E0%A4%B5%E0%A4%BE%E0%A4%A8%20&src=typd"><span style="color:#0099ff;">ಏಕ್ ದೇಶ್ ಏಕ್ ವಿಚಾರ್</span></a></strong>’ ಎಂಬ ಟ್ವಿಟರ್ ಖಾತೆಯಿಂದಲೂ ಈ ಚಿತ್ರ ಜೂನ್ 1ರಂದೇ ಟ್ವೀಟ್ ಆಗಿದೆ.</p>.<p>‘ಕಿರುತೆರೆ ನಟಿ ಹಾಗೂ ಗೆಳೆಯರೊಂದಿಗೆ ರಾಕೇಶ್ ‘ಟುಮಾರೊ ಲ್ಯಾಂಡ್’ ಎಂಬ ಮೋಜಿನಕೂಟಕ್ಕೆ ಹೋಗಿದ್ದರು. ಈ ಮೋಜಿನಕೂಟಕ್ಕೆ ಒಬ್ಬರಿಗೆ ಪ್ರವೇಶ ಶುಲ್ಕ ₹ 3 ಲಕ್ಷ. ಮದ್ಯ ಹಾಗೂ ಮಾದಕ ವಸ್ತುಗಳ ನಶೆ ಹೆಚ್ಚಾಗಿರುವುದೇ ಈ ಮೋಜಿನಕೂಟದ ವಿಶೇಷ’ ಎಂಬ ಸಂದೇಶ ಫೇಸ್ಬುಕ್, ವಾಟ್ಸ್ಆ್ಯಪ್ಗಳಲ್ಲಿ ಹರಿದಾಡುತ್ತಿದೆ.</p>.<p>ಈ ಸಂದೇಶದ ಜತೆಗೆ ರಾಕೇಶ್ ಅವರು ಬೆಂಗಳೂರಿನ ಚರ್ಚ್ ಸ್ಟ್ರೀಟ್ನ ರೆಸ್ಟೊರಂಟ್ನಲ್ಲಿ ತಿಂಗಳ ಹಿಂದೆ ಗೆಳೆಯರೊಂದಿಗೆ ಸೇರಿದ್ದ ವೇಳೆ ತೆಗೆಸಿಕೊಂಡಿದ್ದರು ಎನ್ನಲಾದ ಚಿತ್ರ ಹಾಕಲಾಗಿದೆ.</p>.<p>ಈ ಚಿತ್ರದ ಬಗ್ಗೆ ಸ್ಪಷ್ಟನೆ ನೀಡಿರುವ <strong><a href="https://www.facebook.com/photo.php?fbid=10155314413257619&set=a.454539497618.241232.733412618&type=3&theater"><span style="color:#0000ff;">ಅನಂತ್ ನಾರಾಯಣ್</span></a></strong> ಎಂಬ ರಾಕೇಶ್ ಅವರ ಗೆಳೆಯರು, ‘ತಿಂಗಳ ಹಿಂದೆ ಚರ್ಚ್ ಸ್ಟ್ರೀಟ್ನ ಬೀರ್ ರಿಪಬ್ಲಿಕ್ ರೆಸ್ಟೊರಂಟ್ನಲ್ಲಿ ರಾಕೇಶ್ ಗೆಳೆಯರೊಂದಿಗಿನ ಸಂತೋಷದ ಕ್ಷಣಗಳಲ್ಲಿ ತೆಗೆಸಿಕೊಂಡಿದ್ದ ಚಿತ್ರ ಇದು. ಅಂದು ಕೇವಲ ಊಟ ಮಾಡಲು ಮಾತ್ರ ನಾವು ರೆಸ್ಟೊರಂಟ್ನಲ್ಲಿ ಸೇರಿದ್ದೆವು. ಆದರೆ, ಈ ಚಿತ್ರವನ್ನು ಅಪಪ್ರಚಾರಕ್ಕಾಗಿ ಬಳಸಿಕೊಳ್ಳಲಾಗುತ್ತಿರುವುದು ದುರದೃಷ್ಟಕರ’ ಎಂದು ಫೇಸ್ಬುಕ್ನಲ್ಲಿ (<strong><a href="https://www.facebook.com/ananth.narayan.906"><span style="color:#0000ff;">Ananth Narayan</span></a></strong>) ಬರೆದುಕೊಂಡಿದ್ದಾರೆ.<br /> <br /> ಮೂಲ ಟ್ವೀಟ್ಗಳ ಕೊಂಡಿ: <span style="color:#ff0000;"><strong>http://bit.ly/2aJLTNS</strong></span></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು: </strong>ಅಕಾಲಿಕ ಮರಣಕ್ಕೆ ತುತ್ತಾದ ರಾಕೇಶ್ ಸಿದ್ದರಾಮಯ್ಯ ಅವರ ಬಗ್ಗೆ ಅಪಪ್ರಚಾರ ಮಾಡಲು ಸಾಮಾಜಿಕ ಜಾಲತಾಣಗಳಲ್ಲಿ ಕಸರತ್ತು ನಡೆಸಲಾಗಿದೆ. ಬೇರೆ ಬೇರೆ ಸಂದರ್ಭದ ಛಾಯಾಚಿತ್ರಗಳನ್ನು ಬಳಸಿಕೊಂಡು ರಾಕೇಶ್ ಅವರ ಮಾನಹಾನಿಗೆ ಯತ್ನಿಸಲಾಗಿದೆ ಎಂಬ ಅಭಿಪ್ರಾಯಗಳು ಈಗ ಸಾಮಾಜಿಕ ಜಾಲತಾಣಗಳಲ್ಲೇ ವ್ಯಕ್ತವಾಗಿವೆ.</p>.<p>ರಾಕೇಶ್ ಅವರನ್ನು ಹೋಲುವ ವ್ಯಕ್ತಿಯೊಬ್ಬ ಸೆಕ್ಯುರಿಟಿ ಗಾರ್ಡ್ ಒಬ್ಬರಿಗೆ ಒದೆಯುತ್ತಿರುವ ಚಿತ್ರವನ್ನು ಫೇಸ್ಬುಕ್, ವಾಟ್ಸ್ಆ್ಯಪ್, ಟ್ವಿಟರ್ನಲ್ಲಿ ಹರಿಬಿಡಲಾಗಿದೆ. ಆದರೆ, ಈ ಚಿತ್ರವನ್ನು ದೆಹಲಿ ಮೂಲದ <strong><a href="https://twitter.com/INirajVerma/status/737856618151444480"><span style="color:#0099ff;">ನೀರಜ್ ವರ್ಮಾ</span></a></strong><span style="color:#40e0d0;"> </span>ಎಂಬುವವರು ಜೂನ್ 1ರಂದು ಟ್ವೀಟ್ ಮಾಡಿದ್ದಾರೆ. ಈ ಚಿತ್ರವನ್ನು 310 ಮಂದಿ ರಿಟ್ವೀಟ್ ಮಾಡಿದ್ದಾರೆ. ‘<strong><a href="https://twitter.com/search?q=%E0%A4%85%E0%A4%AE%E0%A5%80%E0%A4%B0%E0%A5%80%20%E0%A4%95%E0%A5%87%20%E0%A4%A8%E0%A4%B6%E0%A5%87%20%E0%A4%AE%E0%A5%87%E0%A4%82%20%E0%A4%8F%E0%A4%95%20%E0%A4%9C%E0%A4%B5%E0%A4%BE%E0%A4%A8%20&src=typd"><span style="color:#0099ff;">ಏಕ್ ದೇಶ್ ಏಕ್ ವಿಚಾರ್</span></a></strong>’ ಎಂಬ ಟ್ವಿಟರ್ ಖಾತೆಯಿಂದಲೂ ಈ ಚಿತ್ರ ಜೂನ್ 1ರಂದೇ ಟ್ವೀಟ್ ಆಗಿದೆ.</p>.<p>‘ಕಿರುತೆರೆ ನಟಿ ಹಾಗೂ ಗೆಳೆಯರೊಂದಿಗೆ ರಾಕೇಶ್ ‘ಟುಮಾರೊ ಲ್ಯಾಂಡ್’ ಎಂಬ ಮೋಜಿನಕೂಟಕ್ಕೆ ಹೋಗಿದ್ದರು. ಈ ಮೋಜಿನಕೂಟಕ್ಕೆ ಒಬ್ಬರಿಗೆ ಪ್ರವೇಶ ಶುಲ್ಕ ₹ 3 ಲಕ್ಷ. ಮದ್ಯ ಹಾಗೂ ಮಾದಕ ವಸ್ತುಗಳ ನಶೆ ಹೆಚ್ಚಾಗಿರುವುದೇ ಈ ಮೋಜಿನಕೂಟದ ವಿಶೇಷ’ ಎಂಬ ಸಂದೇಶ ಫೇಸ್ಬುಕ್, ವಾಟ್ಸ್ಆ್ಯಪ್ಗಳಲ್ಲಿ ಹರಿದಾಡುತ್ತಿದೆ.</p>.<p>ಈ ಸಂದೇಶದ ಜತೆಗೆ ರಾಕೇಶ್ ಅವರು ಬೆಂಗಳೂರಿನ ಚರ್ಚ್ ಸ್ಟ್ರೀಟ್ನ ರೆಸ್ಟೊರಂಟ್ನಲ್ಲಿ ತಿಂಗಳ ಹಿಂದೆ ಗೆಳೆಯರೊಂದಿಗೆ ಸೇರಿದ್ದ ವೇಳೆ ತೆಗೆಸಿಕೊಂಡಿದ್ದರು ಎನ್ನಲಾದ ಚಿತ್ರ ಹಾಕಲಾಗಿದೆ.</p>.<p>ಈ ಚಿತ್ರದ ಬಗ್ಗೆ ಸ್ಪಷ್ಟನೆ ನೀಡಿರುವ <strong><a href="https://www.facebook.com/photo.php?fbid=10155314413257619&set=a.454539497618.241232.733412618&type=3&theater"><span style="color:#0000ff;">ಅನಂತ್ ನಾರಾಯಣ್</span></a></strong> ಎಂಬ ರಾಕೇಶ್ ಅವರ ಗೆಳೆಯರು, ‘ತಿಂಗಳ ಹಿಂದೆ ಚರ್ಚ್ ಸ್ಟ್ರೀಟ್ನ ಬೀರ್ ರಿಪಬ್ಲಿಕ್ ರೆಸ್ಟೊರಂಟ್ನಲ್ಲಿ ರಾಕೇಶ್ ಗೆಳೆಯರೊಂದಿಗಿನ ಸಂತೋಷದ ಕ್ಷಣಗಳಲ್ಲಿ ತೆಗೆಸಿಕೊಂಡಿದ್ದ ಚಿತ್ರ ಇದು. ಅಂದು ಕೇವಲ ಊಟ ಮಾಡಲು ಮಾತ್ರ ನಾವು ರೆಸ್ಟೊರಂಟ್ನಲ್ಲಿ ಸೇರಿದ್ದೆವು. ಆದರೆ, ಈ ಚಿತ್ರವನ್ನು ಅಪಪ್ರಚಾರಕ್ಕಾಗಿ ಬಳಸಿಕೊಳ್ಳಲಾಗುತ್ತಿರುವುದು ದುರದೃಷ್ಟಕರ’ ಎಂದು ಫೇಸ್ಬುಕ್ನಲ್ಲಿ (<strong><a href="https://www.facebook.com/ananth.narayan.906"><span style="color:#0000ff;">Ananth Narayan</span></a></strong>) ಬರೆದುಕೊಂಡಿದ್ದಾರೆ.<br /> <br /> ಮೂಲ ಟ್ವೀಟ್ಗಳ ಕೊಂಡಿ: <span style="color:#ff0000;"><strong>http://bit.ly/2aJLTNS</strong></span></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>