<p><strong> ಭರವಸೆಗಳ ಪಟ್ಟಿ</strong><br /> ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಅವರು ಮಂಡಿಸಿರುವ ಬಜೆಟ್ ಕೇವಲ ಭರವಸೆಗಳ ಪಟ್ಟಿ. ದೂರದೃಷ್ಟಿಯ ಯಾವುದೇ ಯೋಜನೆಗಳೂ ಅದರಲ್ಲಿಲ್ಲ. ಅಭಿವೃದ್ಧಿಗೆ ಪೂರಕವಾದ ಯಾವುದೇ ಅಂಶಗಳೂ ಬಜೆಟ್ನಲ್ಲಿ ಇಲ್ಲ.<br /> <br /> ಬಜೆಟ್ನಲ್ಲಿ ಹೊಸ ಕಾರ್ಯಕ್ರಮಗಳ ಘೋಷಣೆ, ಹೊಸ ಪ್ರಯೋಗಕ್ಕೆ ಆದ್ಯತೆ ನೀಡುತ್ತಾರೆ ಎಂಬ ನಿರೀಕ್ಷೆ ಇತ್ತು. ಆದರೆ, ಗೊಂದಲ ಮತ್ತು ಅನುಮಾನಗಳ ನಡುವೆ ಬಜೆಟ್ ಮಂಡಿಸಿರುವ ಅವರು, ಎಲ್ಲರ ನಿರೀಕ್ಷೆಯನ್ನೂ ಹುಸಿ ಮಾಡಿದ್ದಾರೆ. ಎಲ್ಲರಿಗೂ ಈ ಬಜೆಟ್ನಿಂದ ನಿರಾಸೆಯಾಗಿದೆ.<br /> <strong>-ಡಾ.ಜಿ.ಪರಮೇಶ್ವರ, ಕೆಪಿಸಿಸಿ ಅಧ್ಯಕ್ಷರು</strong><br /> <br /> <strong>ಪಾರದರ್ಶಕತೆ ಎಲ್ಲಿ?</strong><br /> ಆಡಳಿತದಲ್ಲಿ ಪಾರದರ್ಶಕತೆ ತರುವ ಕುರಿತು ಇಲ್ಲಿ ಪ್ರಸ್ತಾಪ ಇಲ್ಲ. ಬಿಜೆಪಿ ಸರ್ಕಾರ ಆಡಳಿತಕ್ಕೆ ಬಂದಾಗ ರಾಜ್ಯದ ಸಾಲ ರೂ 71 ಸಾವಿರ ಕೋಟಿ ಇತ್ತು. ಈಗ ಅದು ರೂ 1,14,744 ಕೋಟಿಗೆ ಏರಿಕೆಯಾಗಿದೆ. ಯೋಜನೇತರ ವೆಚ್ಚಗಳೂ ಅಧಿಕವಾಗಿವೆ.<br /> <strong>-ಎಂ.ಸಿ. ನಾಣಯ್ಯ, ಜೆಡಿಎಸ್, ವಿಧಾನ ಪರಿಷತ್ ಸದಸ್ಯ</strong><br /> <br /> <strong>ನೀರಾವರಿಗೆ ಹಣ ಕಡಿಮೆ</strong><br /> ರಾಜ್ಯದ ನೂರಕ್ಕೂ ಹೆಚ್ಚಿನ ತಾಲ್ಲೂಕುಗಳು ಬರಪೀಡಿತವಾಗಿವೆ. ಆದರೆ ಈ ಬಾರಿಯ ಬಜೆಟ್ನಲ್ಲಿ ನೀರಾವರಿಗೆ ಕಡಿಮೆ ಹಣ ನಿಗದಿ ಮಾಡಿದ್ದಾರೆ. ಇದು ದೂರದೃಷ್ಟಿಯಿಲ್ಲದೆ ಮಾಡಿದಂತಿದೆ. ವಿದ್ಯುತ್ ಉತ್ಪಾದನೆ ಹೆಚ್ಚಿಸುವ ಕುರಿತು ಪ್ರಸ್ತಾಪ ಇಲ್ಲ. ರಾಜ್ಯದ ಸಾಲದ ಹೊರೆಯೂ ಹೆಚ್ಚಾಗಿದೆ.<br /> <strong>-ಎಸ್.ಆರ್. ಪಾಟೀಲ, ಕಾಂಗ್ರೆಸ್, ವಿಧಾನ ಪರಿಷತ್ ಸದಸ್ಯ</strong><br /> <br /> <strong>ಜನಪರವಲ್ಲದ ಬಜೆಟ್</strong><br /> ಇದು ಜನಪ್ರಿಯತೆಯನ್ನು ಗಮನದಲ್ಲಿರಿಸಿಕೊಂಡ ಜನಪರವಲ್ಲದ ಬಜೆಟ್. ಕೃಷಿ ಮತ್ತು ಕೈಗಾರಿಕಾ ಕ್ಷೇತ್ರದಲ್ಲಿ ಉತ್ಪಾದಕತೆ ಹೆಚ್ಚಿಸಲು ಇದು ಸಹಾಯಕವಲ್ಲ. ಬೆಲೆ ಏರಿಕೆಯನ್ನು ಗಮನಿಸಿ ವಲಯವಾರು ಆದ್ಯತೆ ನೀಡಲುಆಗಿಲ್ಲ.<br /> <strong>- ಡಾ. ಸಿದ್ಧನಗೌಡ ಪಾಟೀಲ, ಸಿಪಿಐ, ರಾಷ್ಟ್ರೀಯ ಮಂಡಳಿ ಸದಸ್ಯ</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong> ಭರವಸೆಗಳ ಪಟ್ಟಿ</strong><br /> ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಅವರು ಮಂಡಿಸಿರುವ ಬಜೆಟ್ ಕೇವಲ ಭರವಸೆಗಳ ಪಟ್ಟಿ. ದೂರದೃಷ್ಟಿಯ ಯಾವುದೇ ಯೋಜನೆಗಳೂ ಅದರಲ್ಲಿಲ್ಲ. ಅಭಿವೃದ್ಧಿಗೆ ಪೂರಕವಾದ ಯಾವುದೇ ಅಂಶಗಳೂ ಬಜೆಟ್ನಲ್ಲಿ ಇಲ್ಲ.<br /> <br /> ಬಜೆಟ್ನಲ್ಲಿ ಹೊಸ ಕಾರ್ಯಕ್ರಮಗಳ ಘೋಷಣೆ, ಹೊಸ ಪ್ರಯೋಗಕ್ಕೆ ಆದ್ಯತೆ ನೀಡುತ್ತಾರೆ ಎಂಬ ನಿರೀಕ್ಷೆ ಇತ್ತು. ಆದರೆ, ಗೊಂದಲ ಮತ್ತು ಅನುಮಾನಗಳ ನಡುವೆ ಬಜೆಟ್ ಮಂಡಿಸಿರುವ ಅವರು, ಎಲ್ಲರ ನಿರೀಕ್ಷೆಯನ್ನೂ ಹುಸಿ ಮಾಡಿದ್ದಾರೆ. ಎಲ್ಲರಿಗೂ ಈ ಬಜೆಟ್ನಿಂದ ನಿರಾಸೆಯಾಗಿದೆ.<br /> <strong>-ಡಾ.ಜಿ.ಪರಮೇಶ್ವರ, ಕೆಪಿಸಿಸಿ ಅಧ್ಯಕ್ಷರು</strong><br /> <br /> <strong>ಪಾರದರ್ಶಕತೆ ಎಲ್ಲಿ?</strong><br /> ಆಡಳಿತದಲ್ಲಿ ಪಾರದರ್ಶಕತೆ ತರುವ ಕುರಿತು ಇಲ್ಲಿ ಪ್ರಸ್ತಾಪ ಇಲ್ಲ. ಬಿಜೆಪಿ ಸರ್ಕಾರ ಆಡಳಿತಕ್ಕೆ ಬಂದಾಗ ರಾಜ್ಯದ ಸಾಲ ರೂ 71 ಸಾವಿರ ಕೋಟಿ ಇತ್ತು. ಈಗ ಅದು ರೂ 1,14,744 ಕೋಟಿಗೆ ಏರಿಕೆಯಾಗಿದೆ. ಯೋಜನೇತರ ವೆಚ್ಚಗಳೂ ಅಧಿಕವಾಗಿವೆ.<br /> <strong>-ಎಂ.ಸಿ. ನಾಣಯ್ಯ, ಜೆಡಿಎಸ್, ವಿಧಾನ ಪರಿಷತ್ ಸದಸ್ಯ</strong><br /> <br /> <strong>ನೀರಾವರಿಗೆ ಹಣ ಕಡಿಮೆ</strong><br /> ರಾಜ್ಯದ ನೂರಕ್ಕೂ ಹೆಚ್ಚಿನ ತಾಲ್ಲೂಕುಗಳು ಬರಪೀಡಿತವಾಗಿವೆ. ಆದರೆ ಈ ಬಾರಿಯ ಬಜೆಟ್ನಲ್ಲಿ ನೀರಾವರಿಗೆ ಕಡಿಮೆ ಹಣ ನಿಗದಿ ಮಾಡಿದ್ದಾರೆ. ಇದು ದೂರದೃಷ್ಟಿಯಿಲ್ಲದೆ ಮಾಡಿದಂತಿದೆ. ವಿದ್ಯುತ್ ಉತ್ಪಾದನೆ ಹೆಚ್ಚಿಸುವ ಕುರಿತು ಪ್ರಸ್ತಾಪ ಇಲ್ಲ. ರಾಜ್ಯದ ಸಾಲದ ಹೊರೆಯೂ ಹೆಚ್ಚಾಗಿದೆ.<br /> <strong>-ಎಸ್.ಆರ್. ಪಾಟೀಲ, ಕಾಂಗ್ರೆಸ್, ವಿಧಾನ ಪರಿಷತ್ ಸದಸ್ಯ</strong><br /> <br /> <strong>ಜನಪರವಲ್ಲದ ಬಜೆಟ್</strong><br /> ಇದು ಜನಪ್ರಿಯತೆಯನ್ನು ಗಮನದಲ್ಲಿರಿಸಿಕೊಂಡ ಜನಪರವಲ್ಲದ ಬಜೆಟ್. ಕೃಷಿ ಮತ್ತು ಕೈಗಾರಿಕಾ ಕ್ಷೇತ್ರದಲ್ಲಿ ಉತ್ಪಾದಕತೆ ಹೆಚ್ಚಿಸಲು ಇದು ಸಹಾಯಕವಲ್ಲ. ಬೆಲೆ ಏರಿಕೆಯನ್ನು ಗಮನಿಸಿ ವಲಯವಾರು ಆದ್ಯತೆ ನೀಡಲುಆಗಿಲ್ಲ.<br /> <strong>- ಡಾ. ಸಿದ್ಧನಗೌಡ ಪಾಟೀಲ, ಸಿಪಿಐ, ರಾಷ್ಟ್ರೀಯ ಮಂಡಳಿ ಸದಸ್ಯ</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>