<p>ಮಂಡ್ಯ: `ಗ್ರಾಮೀಣ ಪ್ರದೇಶಗಳಲ್ಲಿ ಪಡಿತರ ಚೀಟಿ ಹೊಂದಿರುವ ಕುಟುಂಬಗಳು ನ್ಯಾಯಬೆಲೆ ಅಂಗಡಿಗೆ, ಮನೆಯ ವಿದ್ಯುತ್ ಸಂಪರ್ಕದ ಆರ್ಆರ್ ಸಂಖ್ಯೆಯನ್ನು ನೀಡಬೇಕು. ಇಲ್ಲದಿದ್ದರೆ ಪಡಿತರ ವಿತರಿಸುವುದಿಲ್ಲ~ ಎಂಬ ಆಹಾರ ಇಲಾಖೆಯ ಕ್ರಮಕ್ಕೆ ರಾಜ್ಯ ರೈತ ಸಂಘ ತೀವ್ರ ವಿರೋಧ ವ್ಯಕ್ತಪಡಿಸಿದೆ.<br /> <br /> `ಪಡಿತರ ವಿತರಣೆಗೂ, ವಿದ್ಯುತ್ ಮೀಟರ್ನ ಆರ್ಆರ್ ಸಂಖ್ಯೆಗೂ ಏನು ಸಂಬಂಧ ಎಂದು ಪ್ರಶ್ನಿಸಿರುವ ರೈತ ಸಂಘದ ಅಧ್ಯಕ್ಷ ಕೆ.ಎಸ್. ಪುಟ್ಟಣ್ಣಯ್ಯ ಅವರು, ಸರ್ಕಾರದ ಈ ಕ್ರಮವನ್ನು ವಿರೋಧಿಸಿ ಮಾರ್ಚ್ 5ರಂದು ಜಿಲ್ಲಾದ್ಯಂತ ಪ್ರತಿಭಟನೆ ನಡೆಸಲಾಗುವುದು~ ಎಂದು ಬುಧವಾರ ಪ್ರಕಟಿಸಿದರು.<br /> <br /> ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನ್ಯಾಯಬೆಲೆ ಅಂಗಡಿಗಳಿಗೆ ಈಗ ವಿದ್ಯುತ್ ಮೀಟರ್ ಸಂಖ್ಯೆ ಕೊಡಲು ಪಡಿತರ ಚೀಟಿದಾರರಿಗೆ ಸೂಚಿಸಲಾಗಿದೆ. ಜಿಲ್ಲಾಧಿಕಾರಿಗಳನ್ನೇ ನೇರವಾಗಿ ಸಂಪರ್ಕಿಸಿದರೆ `ಇಲ್ಲ ಅಂಥ ಷರತ್ತು ಇಲ್ಲ ಎನ್ನುತ್ತಾರೆ~. ಈ ಬಗೆಗೆ ಅಧಿಕಾರಿಗಳಿಗೆ ಗೊಂದಲ ಇರುವಂತಿದೆ ಎಂದು ಟೀಕಿಸಿದರು.<br /> <br /> ಗ್ರಾಮೀಣ ಪ್ರದೇಶದಲ್ಲಿ ಇದೇ ಕಾರಣವನ್ನು ನೆಪವಾಗಿರಿಸಿಕೊಂಡು ಪಡಿತರ ವಿತರಣೆಯನ್ನು ತಡೆಹಿಡಿಯ ಬಾರದು ಎಂದು ಆಗ್ರಹಪಡಿಸಿದ ಅವರು, ಈ ಕುರಿತು ಅಧಿಕಾರಿಗಳ ಗಮನಸೆಳೆದು ಸಮಸ್ಯೆಯನ್ನು ಅರಿವು ಮೂಡಿಸಲು 5ರಂದು (ಸೋಮವಾರ) ಜಿಲ್ಲಾದ್ಯಂತ ಪ್ರತಿಭಟನೆ ನಡೆಸ ಲಾಗುವುದು ಎಂದು ವಿವರಿಸಿದರು.<br /> <br /> <strong>ಕೃಷಿಗೆ ಹೆಚ್ಚಿನ ಆದ್ಯತೆಗೆ ಕರೆ: </strong>ಮುಂಬರುವ ಬಜೆಟ್ನಲ್ಲಿ ಕೃಷಿ ಕ್ಷೇತ್ರದ ಪ್ರಗತಿಗೆ ಹೆಚ್ಚಿನ ಒತ್ತುನೀಡಬೇಕು. ಆವರ್ತ ನಿಧಿಯಲ್ಲಿ ಹೆಚ್ಚಿನ ಮೊತ್ತ ಇಡುವುದರ ಜೊತೆಗೆ, ಖುಷ್ಕಿ ಪ್ರದೇಶವನ್ನು ಕೃಷಿ ಆದ್ಯತಾ ವಲಯವಾಗಿ ಪರಿಗಣಿಸಬೇಕು ಎಂದು ಸರ್ಕಾರವನ್ನು ಆಗ್ರಹಪಡಿಸಿದರು.<br /> <br /> ಹಿಂದೆ ಯಡಿಯೂರಪ್ಪ ಅವರಂತೇ ಸದಾನಂದಗೌಡರು ಕೃಷಿ ಆಯವ್ಯಯ ಮಂಡಿಸುವ ಮಾತು ಆಡುತ್ತಿದ್ದಾರೆ. ಕೃಷಿ ಕ್ಷೇತ್ರಕ್ಕೆ ಅಗತ್ಯ ಸಂಪನ್ಮೂಲವನ್ನೇ ಕಾಯ್ದಿರಿಸದೇ ಯೋಜನೆಗಳನ್ನು ಪ್ರಕಟಿಸಿದರೆ ಅರ್ಥವಿಲ್ಲ ಎಂದರು.<br /> <br /> ರೈಲ್ವೆ ಮಾದರಿಯಲ್ಲಿ ಕೃಷಿಗೆ ಪೂರ್ಣ ಪ್ರಮಾಣದ ಬಜೆಟ್ ಮಂಡನೆ ಯಾಗಬೇಕು. ಗ್ರಾಮ ಪಂಚಾಯಿತಿ ಗಳನ್ನು ಬಲಪಡಿಸುವುದು, ಖುಷ್ಕಿ ಭೂಮಿಯಲ್ಲಿನ ನೀರಾವರಿಗೆ ಒತ್ತು ನೀಡುವುದು, ಅಂತರ್ಜಲ ಮಟ್ಟವನ್ನು ಸುಧಾರಿಸಲು ಪ್ರಾತಿನಿಧ್ಯ ನೀಡುವುದು ಮತ್ತಿತರ ಕ್ರಮಗಳು ಅಗತ್ಯ ಎಂದು ಒತ್ತಾಯಿಸಿದರು.<br /> <br /> <strong>ಬೆಂಬಲ ಬೆಲೆ:</strong> ಪ್ರಸ್ತುತ ಜಿಲ್ಲೆಯಲ್ಲಿ ಭತ್ತ ಖರೀದಿಯಲ್ಲಿ ದಲ್ಲಾಳಿಗಳಿಗೇ ಹೆಚ್ಚಿನ ಲಾಭ ಆಗುತ್ತಿದೆ ಎಂದು ಟೀಕಿಸಿದ ಅವರು, ಭತ್ತ ಕಟಾವು ಆಗುವ ಮುನ್ನವೇ ಬೆಂಬಲ ಬೆಲೆಯನ್ನು ಘೋಷಿಸಿ, ಖರೀದಿ ಕೇಂದ್ರಗಳನ್ನು ತೆರೆದಾಗ ಮಾತ್ರವೇ ಈ ಸಮಸ್ಯೆ ಬಗೆಹರಿಯಲಿದೆ ಎಂದು ಹೇಳಿದರು.<br /> <br /> ಬಜೆಟ್ ಹಿನ್ನೆಲೆಯಲ್ಲಿ ಮಾರ್ಚ್ ಮೊದಲ ವಾರ ಮುಖ್ಯಮಂತ್ರಿಗಳು ಸಭೆ ಕರೆದಿದ್ದು, ಅಲ್ಲಿ ಈ ವಿಷಯವನ್ನು ಪ್ರಸ್ತಾಪಿಸಲಿದ್ದೇನೆ ಎಂದರು. ಗೋಷ್ಠಿ ಯಲ್ಲಿ ಮುಖಂಡ ಹನಿಯಂಬಾಡಿ ನಾಗರಾಜು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಮಂಡ್ಯ: `ಗ್ರಾಮೀಣ ಪ್ರದೇಶಗಳಲ್ಲಿ ಪಡಿತರ ಚೀಟಿ ಹೊಂದಿರುವ ಕುಟುಂಬಗಳು ನ್ಯಾಯಬೆಲೆ ಅಂಗಡಿಗೆ, ಮನೆಯ ವಿದ್ಯುತ್ ಸಂಪರ್ಕದ ಆರ್ಆರ್ ಸಂಖ್ಯೆಯನ್ನು ನೀಡಬೇಕು. ಇಲ್ಲದಿದ್ದರೆ ಪಡಿತರ ವಿತರಿಸುವುದಿಲ್ಲ~ ಎಂಬ ಆಹಾರ ಇಲಾಖೆಯ ಕ್ರಮಕ್ಕೆ ರಾಜ್ಯ ರೈತ ಸಂಘ ತೀವ್ರ ವಿರೋಧ ವ್ಯಕ್ತಪಡಿಸಿದೆ.<br /> <br /> `ಪಡಿತರ ವಿತರಣೆಗೂ, ವಿದ್ಯುತ್ ಮೀಟರ್ನ ಆರ್ಆರ್ ಸಂಖ್ಯೆಗೂ ಏನು ಸಂಬಂಧ ಎಂದು ಪ್ರಶ್ನಿಸಿರುವ ರೈತ ಸಂಘದ ಅಧ್ಯಕ್ಷ ಕೆ.ಎಸ್. ಪುಟ್ಟಣ್ಣಯ್ಯ ಅವರು, ಸರ್ಕಾರದ ಈ ಕ್ರಮವನ್ನು ವಿರೋಧಿಸಿ ಮಾರ್ಚ್ 5ರಂದು ಜಿಲ್ಲಾದ್ಯಂತ ಪ್ರತಿಭಟನೆ ನಡೆಸಲಾಗುವುದು~ ಎಂದು ಬುಧವಾರ ಪ್ರಕಟಿಸಿದರು.<br /> <br /> ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನ್ಯಾಯಬೆಲೆ ಅಂಗಡಿಗಳಿಗೆ ಈಗ ವಿದ್ಯುತ್ ಮೀಟರ್ ಸಂಖ್ಯೆ ಕೊಡಲು ಪಡಿತರ ಚೀಟಿದಾರರಿಗೆ ಸೂಚಿಸಲಾಗಿದೆ. ಜಿಲ್ಲಾಧಿಕಾರಿಗಳನ್ನೇ ನೇರವಾಗಿ ಸಂಪರ್ಕಿಸಿದರೆ `ಇಲ್ಲ ಅಂಥ ಷರತ್ತು ಇಲ್ಲ ಎನ್ನುತ್ತಾರೆ~. ಈ ಬಗೆಗೆ ಅಧಿಕಾರಿಗಳಿಗೆ ಗೊಂದಲ ಇರುವಂತಿದೆ ಎಂದು ಟೀಕಿಸಿದರು.<br /> <br /> ಗ್ರಾಮೀಣ ಪ್ರದೇಶದಲ್ಲಿ ಇದೇ ಕಾರಣವನ್ನು ನೆಪವಾಗಿರಿಸಿಕೊಂಡು ಪಡಿತರ ವಿತರಣೆಯನ್ನು ತಡೆಹಿಡಿಯ ಬಾರದು ಎಂದು ಆಗ್ರಹಪಡಿಸಿದ ಅವರು, ಈ ಕುರಿತು ಅಧಿಕಾರಿಗಳ ಗಮನಸೆಳೆದು ಸಮಸ್ಯೆಯನ್ನು ಅರಿವು ಮೂಡಿಸಲು 5ರಂದು (ಸೋಮವಾರ) ಜಿಲ್ಲಾದ್ಯಂತ ಪ್ರತಿಭಟನೆ ನಡೆಸ ಲಾಗುವುದು ಎಂದು ವಿವರಿಸಿದರು.<br /> <br /> <strong>ಕೃಷಿಗೆ ಹೆಚ್ಚಿನ ಆದ್ಯತೆಗೆ ಕರೆ: </strong>ಮುಂಬರುವ ಬಜೆಟ್ನಲ್ಲಿ ಕೃಷಿ ಕ್ಷೇತ್ರದ ಪ್ರಗತಿಗೆ ಹೆಚ್ಚಿನ ಒತ್ತುನೀಡಬೇಕು. ಆವರ್ತ ನಿಧಿಯಲ್ಲಿ ಹೆಚ್ಚಿನ ಮೊತ್ತ ಇಡುವುದರ ಜೊತೆಗೆ, ಖುಷ್ಕಿ ಪ್ರದೇಶವನ್ನು ಕೃಷಿ ಆದ್ಯತಾ ವಲಯವಾಗಿ ಪರಿಗಣಿಸಬೇಕು ಎಂದು ಸರ್ಕಾರವನ್ನು ಆಗ್ರಹಪಡಿಸಿದರು.<br /> <br /> ಹಿಂದೆ ಯಡಿಯೂರಪ್ಪ ಅವರಂತೇ ಸದಾನಂದಗೌಡರು ಕೃಷಿ ಆಯವ್ಯಯ ಮಂಡಿಸುವ ಮಾತು ಆಡುತ್ತಿದ್ದಾರೆ. ಕೃಷಿ ಕ್ಷೇತ್ರಕ್ಕೆ ಅಗತ್ಯ ಸಂಪನ್ಮೂಲವನ್ನೇ ಕಾಯ್ದಿರಿಸದೇ ಯೋಜನೆಗಳನ್ನು ಪ್ರಕಟಿಸಿದರೆ ಅರ್ಥವಿಲ್ಲ ಎಂದರು.<br /> <br /> ರೈಲ್ವೆ ಮಾದರಿಯಲ್ಲಿ ಕೃಷಿಗೆ ಪೂರ್ಣ ಪ್ರಮಾಣದ ಬಜೆಟ್ ಮಂಡನೆ ಯಾಗಬೇಕು. ಗ್ರಾಮ ಪಂಚಾಯಿತಿ ಗಳನ್ನು ಬಲಪಡಿಸುವುದು, ಖುಷ್ಕಿ ಭೂಮಿಯಲ್ಲಿನ ನೀರಾವರಿಗೆ ಒತ್ತು ನೀಡುವುದು, ಅಂತರ್ಜಲ ಮಟ್ಟವನ್ನು ಸುಧಾರಿಸಲು ಪ್ರಾತಿನಿಧ್ಯ ನೀಡುವುದು ಮತ್ತಿತರ ಕ್ರಮಗಳು ಅಗತ್ಯ ಎಂದು ಒತ್ತಾಯಿಸಿದರು.<br /> <br /> <strong>ಬೆಂಬಲ ಬೆಲೆ:</strong> ಪ್ರಸ್ತುತ ಜಿಲ್ಲೆಯಲ್ಲಿ ಭತ್ತ ಖರೀದಿಯಲ್ಲಿ ದಲ್ಲಾಳಿಗಳಿಗೇ ಹೆಚ್ಚಿನ ಲಾಭ ಆಗುತ್ತಿದೆ ಎಂದು ಟೀಕಿಸಿದ ಅವರು, ಭತ್ತ ಕಟಾವು ಆಗುವ ಮುನ್ನವೇ ಬೆಂಬಲ ಬೆಲೆಯನ್ನು ಘೋಷಿಸಿ, ಖರೀದಿ ಕೇಂದ್ರಗಳನ್ನು ತೆರೆದಾಗ ಮಾತ್ರವೇ ಈ ಸಮಸ್ಯೆ ಬಗೆಹರಿಯಲಿದೆ ಎಂದು ಹೇಳಿದರು.<br /> <br /> ಬಜೆಟ್ ಹಿನ್ನೆಲೆಯಲ್ಲಿ ಮಾರ್ಚ್ ಮೊದಲ ವಾರ ಮುಖ್ಯಮಂತ್ರಿಗಳು ಸಭೆ ಕರೆದಿದ್ದು, ಅಲ್ಲಿ ಈ ವಿಷಯವನ್ನು ಪ್ರಸ್ತಾಪಿಸಲಿದ್ದೇನೆ ಎಂದರು. ಗೋಷ್ಠಿ ಯಲ್ಲಿ ಮುಖಂಡ ಹನಿಯಂಬಾಡಿ ನಾಗರಾಜು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>