<p><strong>ಶಿವಮೊಗ್ಗ:</strong> ರಾಷ್ಟ್ರಕವಿ ಜಿ.ಎಸ್.ಶಿವರುದ್ರಪ್ಪ ಅವರ ನಿಧನಕ್ಕೆ ಸಾಹಿತಿಗಳು, ಸ್ವಾಮೀಜಿಗಳು, ಸಾಹಿತ್ಯಾಭಿಮಾನಿಗಳು ಸಂತಾಪ ಸೂಚಿಸಿದ್ದಾರೆ.<br /> <br /> ‘ಮೌಲ್ಯಗಳು ಪತನಗೊಳ್ಳುತ್ತಿರುವ ಈ ಕಾಲದಲ್ಲಿ ಒಬ್ಬ ವ್ಯಕ್ತಿಯಾಗಿ ಘನತೆಯಿಂದ ಹೇಗೆ ಬದುಕಬೇಕು ಎಂಬುದಕ್ಕೆ ಆದರ್ಶವಾಗಿದ್ದರು. ಮೇಲ್ನೋಟಕ್ಕೆ ಗಂಭೀರ ವ್ಯಕ್ತಿಯಾಗಿ ಕಂಡರೂ ಮನುಷ್ಯ ಪ್ರೀತಿ ಸ್ಥಾಯಿಯಾಗಿ ಇಟ್ಟುಕೊಂಡಿದ್ದರು. ಕುವೆಂಪು ಅವರ ನೆಚ್ಚಿನ ಶಿಷ್ಯನಾಗಿ ಕುವೆಂಪು ಪರಂಪರೆಯಲ್ಲಿ ಮುಂದುವರಿದಿದ್ದರು’ ಎಂದು ಸ್ಮರಿಸುತ್ತಾರೆ ಸಾಹಿತಿ ಡಾ.ಶ್ರೀಕಂಠ ಕೂಡಿಗೆ.<br /> <br /> ಸಂಸ್ಕೃತಿ ಚಿಂತಕ ಡಿ.ಎಸ್.ನಾಗಭೂಷಣ್, ‘ಜಿಎಸ್ಎಸ್ ಜೀವನ ಪ್ರೀತಿ, ಶ್ರದ್ಧೆ, ಶಿಸ್ತು, ಅಚ್ಚುಕಟ್ಟುತನ, ಹಿತಮಿತವಾದ ವಿನೋದ ಹಾಗೂ ಸಹಜ ಸಂಕೋಚದ ಆದರ್ಶ ವ್ಯಕ್ತಿತ್ವ. ಇದು ನಮ್ಮ ತಲೆಮಾರಿಗೆ ಮಾದರಿ’ ಎಂದು ಸ್ಮರಿಸುತ್ತಾರೆ ಅವರು.<br /> <br /> ಶಿವರುದ್ರಪ್ಪ ನಾಡಿನ ಒಬ್ಬ ಸಾಂಸ್ಕೃತಿಕ ಧೀಮಂತ ನಾಯಕ. ನಾಡಿನ ನಿಜವಾದ ನಾಡೋಜರಾಗಿದ್ದರು. ಸಾಹಿತ್ಯ ಜೀವನದ ನಿಜವಾದ ಗತಿಬಿಂಬ ಎಂದೇ ಅವರು ಪ್ರತಿಪಾದಿಸುತ್ತಿದ್ದರು. ಅವರ ನೆನಪು ನಮಗೆಲ್ಲಾ ಶಕ್ತಿ ಎಂದು ಸ್ಮರಿಸುತ್ತಾರೆ ಕವಿ ಸತ್ಯನಾರಾಯಣ ಅಣತಿ.<br /> <br /> ಜಿಎಸ್ಎಸ್ ಅವರ ನಿಧನಕ್ಕೆ ಬೆಕ್ಕಿನಕಲ್ಮಠದ ಮಲ್ಲಿಕಾರ್ಜುನ ಮುರುಘ ರಾಜೇಂದ್ರ ಸ್ವಾಮೀಜಿ, ಸಾಗರದ ಶಿರವಂತೆ ಚಿತ್ರಸಿರಿಯ ಚಂದ್ರಶೇಖರ್, ಸಂಸತ್ ಸದಸ್ಯ ಬಿ.ವೈ.ರಾಘವೇಂದ್ರ ಸಂತಾಪ ಸೂಚಿಸಿದ್ದಾರೆ.<br /> <br /> ಹಾಗೆಯೇ, ವಿನೋಬನಗರ ಕಲ್ಲಹಳ್ಳಿಯ ಪ್ರಿಯದರ್ಶನಿ ಆಂಗ್ಲ ಶಾಲೆಯಲ್ಲಿ ಸೋಮವಾರ ಸಂತಾಪ ಸಭೆ ನಡೆಸಿ, ಗಾಯಕರಾದ ಕೆ.ಯುವರಾಜ್, ಶಾಂತಾ ಶೆಟ್ಟಿ ಮತ್ತಿತರರು ಜಿಎಸ್ಎಸ್ ಅವರ ಗೀತೆಗಳನ್ನು ಹಾಡಿದರು. ಸಂಸ್ಥೆಯ ಎನ್.ರಮೇಶ್, ಪ್ರಾಂಶುಪಾಲೆ ಸುನೀತಾದೇವಿ ಮತ್ತಿತರರು ಉಪಸ್ಥಿತರಿದ್ದರು.<br /> ಬಸವಕೇಂದ್ರದಲ್ಲಿ ಬಸವ ಮರುಳಸಿದ್ಧ ಸ್ವಾಮೀಜಿ ನಡೆದ ಸಂತಾಪ ಸಭೆಯಲ್ಲಿ ಬೆನಕಪ್ಪ, ರುದ್ರಮುನಿ ಸಜ್ಜನ್, ಕತ್ತಿಗೆ ಚೆನ್ನಪ್ಪ ಮತ್ತಿತರರು ಜಿಎಸ್ಎಸ್ ಅವರಿಗೆ ಸಂತಾಪ ಸೂಚಿಸಿದರು.<br /> <br /> ಪಂಚಾಯತ್ ರಾಜ್ ಎಂಜಿನಿಯರಿಂಗ್ ಉಪವಿಭಾಗದಲ್ಲಿ ಶ್ರದ್ಧಾಂಜಲಿ ಸಭೆ ನಡೆಸಿ, ಜಿಎಸ್ಎಸ್ ಅವರ ಸಾಧನೆಗಳನ್ನು ಸ್ಮರಿಸಲಾಯಿತು.<br /> ಸಭೆಯಲ್ಲಿ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಎಸ್.ಎಂ.ಹರೀಶ್, ಗಣೇಶ್ ಮತ್ತು ಅಧಿಕಾರಿಗಳು ಸಿಬ್ಬಂದಿ ಉಪಸ್ಥಿತರಿದ್ದರು.<br /> <br /> <strong>ಕನ್ನಡವನ್ನು ವೈಚಾರಿಕ ನೆಲೆಯಲ್ಲಿ ಕಟ್ಟಿದ ಕವಿ<br /> ಸಾಗರ: </strong>ಕನ್ನಡವನ್ನು ವೈಚಾರಿಕ ನೆಲೆಯಲ್ಲಿ ಕಟ್ಟಿದ ಅಪರೂಪದ ಕವಿ ಜಿ.ಎಸ್.ಶಿವರುದ್ರಪ್ಪ ಅವರು ಎಂದು ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪುಂಡಲೀಕ ಹಾಲಂಬಿ ಸ್ಮರಿಸಿದರು.<br /> <br /> ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಸೋಮವಾರ ಏರ್ಪಡಿಸಿದ್ದ ರಾಷ್ಟ್ರಕವಿ ಡಾ.ಜಿ.ಎಸ್.ಶಿವರುದ್ರಪ್ಪ ಅವರಿಗೆ ಶ್ರದ್ದಾಂಜಲಿ ಸಲ್ಲಿಸುವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕನ್ನಡಿಗರ ಹೃದಯವನ್ನು ತಮ್ಮ ಕಾವ್ಯದ ಮೂಲಕ ತಟ್ಟಿರುವ ಜಿ.ಎಸ್.ಎಸ್ ಅಗಲಿದ ದಿನ ಕನ್ನಡ ಸಾಹಿತ್ಯಾಸಕ್ತರ ಪಾಲಿಗೆ ಅತ್ಯಂತ ದು:ಖದ ದಿನವಾಗಿದೆ ಎಂದರು.<br /> <br /> ಸಾಹಿತಿ ಡಾ.ಕಾಳೇಗಾಡ ನಾಗವಾರ ಮಾತನಾಡಿ, 1953ರಲ್ಲಿ ಶಿವಮೊಗ್ಗದ ಸಹ್ಯಾದ್ರಿ ಕಾಲೇಜಿನಲ್ಲಿ ಇಂಟರ್ಮೀಡಿಯಟ್ ವಿದ್ಯಾರ್ಥಿಯಾಗಿದ್ದಾಗ ಜಿ.ಎಸ್.ಎಸ್ ಕನ್ನಡ ಅಧ್ಯಾಪಕರಾಗಿ ಮಾಸ್ತಿ ವೆಂಕಟೇಶ್ ಅಯ್ಯಂಗಾರ್ರ ‘ಯಶೋಧರ’ ನಾಟಕವನ್ನು ಪಾಠ ಮಾಡಿದ ದಿನಗಳನ್ನು ನೆನಪಿಸಿಕೊಂಡ ನಾ.ಡಿಸೋಜ ಆ ನಾಟಕದ ಪಾಠದ ಜೊತೆಗೆ ಬುದ್ದನ ಸಮಗ್ರ ವ್ಯಕ್ತಿತ್ವವನ್ನು ಜಿ.ಎಸ್.ಎಸ್ ಪರಿಚಯ ಮಾಡಿಕೊಟ್ಟ ಬಗೆಯನ್ನು ವಿವರಿಸಿದರು.<br /> <br /> ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಿ.ಮಂಜುನಾಥ್, ತಾಲ್ಲೂಕು ಅಧ್ಯಕ್ಷ ವಿ.ಟಿ.ಸ್ವಾಮಿ, ತಹಶೀಲ್ದಾರ್ ಸಾಜಿದ್ ಅಹ್ಮದ್ ಮುಲ್ಲಾ, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ತಾಲ್ಲೂಕು ಅಧ್ಯಕ್ಷ ಎಚ್.ಆರ್.ನಾಗಭೂಷಣ್, ನಿವೃತ್ತ ನೌಕರರ ಸಂಘದ ಅಧ್ಯಕ್ಷ ಬಸವರಾಜ್<br /> ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಶಿವಮೊಗ್ಗ:</strong> ರಾಷ್ಟ್ರಕವಿ ಜಿ.ಎಸ್.ಶಿವರುದ್ರಪ್ಪ ಅವರ ನಿಧನಕ್ಕೆ ಸಾಹಿತಿಗಳು, ಸ್ವಾಮೀಜಿಗಳು, ಸಾಹಿತ್ಯಾಭಿಮಾನಿಗಳು ಸಂತಾಪ ಸೂಚಿಸಿದ್ದಾರೆ.<br /> <br /> ‘ಮೌಲ್ಯಗಳು ಪತನಗೊಳ್ಳುತ್ತಿರುವ ಈ ಕಾಲದಲ್ಲಿ ಒಬ್ಬ ವ್ಯಕ್ತಿಯಾಗಿ ಘನತೆಯಿಂದ ಹೇಗೆ ಬದುಕಬೇಕು ಎಂಬುದಕ್ಕೆ ಆದರ್ಶವಾಗಿದ್ದರು. ಮೇಲ್ನೋಟಕ್ಕೆ ಗಂಭೀರ ವ್ಯಕ್ತಿಯಾಗಿ ಕಂಡರೂ ಮನುಷ್ಯ ಪ್ರೀತಿ ಸ್ಥಾಯಿಯಾಗಿ ಇಟ್ಟುಕೊಂಡಿದ್ದರು. ಕುವೆಂಪು ಅವರ ನೆಚ್ಚಿನ ಶಿಷ್ಯನಾಗಿ ಕುವೆಂಪು ಪರಂಪರೆಯಲ್ಲಿ ಮುಂದುವರಿದಿದ್ದರು’ ಎಂದು ಸ್ಮರಿಸುತ್ತಾರೆ ಸಾಹಿತಿ ಡಾ.ಶ್ರೀಕಂಠ ಕೂಡಿಗೆ.<br /> <br /> ಸಂಸ್ಕೃತಿ ಚಿಂತಕ ಡಿ.ಎಸ್.ನಾಗಭೂಷಣ್, ‘ಜಿಎಸ್ಎಸ್ ಜೀವನ ಪ್ರೀತಿ, ಶ್ರದ್ಧೆ, ಶಿಸ್ತು, ಅಚ್ಚುಕಟ್ಟುತನ, ಹಿತಮಿತವಾದ ವಿನೋದ ಹಾಗೂ ಸಹಜ ಸಂಕೋಚದ ಆದರ್ಶ ವ್ಯಕ್ತಿತ್ವ. ಇದು ನಮ್ಮ ತಲೆಮಾರಿಗೆ ಮಾದರಿ’ ಎಂದು ಸ್ಮರಿಸುತ್ತಾರೆ ಅವರು.<br /> <br /> ಶಿವರುದ್ರಪ್ಪ ನಾಡಿನ ಒಬ್ಬ ಸಾಂಸ್ಕೃತಿಕ ಧೀಮಂತ ನಾಯಕ. ನಾಡಿನ ನಿಜವಾದ ನಾಡೋಜರಾಗಿದ್ದರು. ಸಾಹಿತ್ಯ ಜೀವನದ ನಿಜವಾದ ಗತಿಬಿಂಬ ಎಂದೇ ಅವರು ಪ್ರತಿಪಾದಿಸುತ್ತಿದ್ದರು. ಅವರ ನೆನಪು ನಮಗೆಲ್ಲಾ ಶಕ್ತಿ ಎಂದು ಸ್ಮರಿಸುತ್ತಾರೆ ಕವಿ ಸತ್ಯನಾರಾಯಣ ಅಣತಿ.<br /> <br /> ಜಿಎಸ್ಎಸ್ ಅವರ ನಿಧನಕ್ಕೆ ಬೆಕ್ಕಿನಕಲ್ಮಠದ ಮಲ್ಲಿಕಾರ್ಜುನ ಮುರುಘ ರಾಜೇಂದ್ರ ಸ್ವಾಮೀಜಿ, ಸಾಗರದ ಶಿರವಂತೆ ಚಿತ್ರಸಿರಿಯ ಚಂದ್ರಶೇಖರ್, ಸಂಸತ್ ಸದಸ್ಯ ಬಿ.ವೈ.ರಾಘವೇಂದ್ರ ಸಂತಾಪ ಸೂಚಿಸಿದ್ದಾರೆ.<br /> <br /> ಹಾಗೆಯೇ, ವಿನೋಬನಗರ ಕಲ್ಲಹಳ್ಳಿಯ ಪ್ರಿಯದರ್ಶನಿ ಆಂಗ್ಲ ಶಾಲೆಯಲ್ಲಿ ಸೋಮವಾರ ಸಂತಾಪ ಸಭೆ ನಡೆಸಿ, ಗಾಯಕರಾದ ಕೆ.ಯುವರಾಜ್, ಶಾಂತಾ ಶೆಟ್ಟಿ ಮತ್ತಿತರರು ಜಿಎಸ್ಎಸ್ ಅವರ ಗೀತೆಗಳನ್ನು ಹಾಡಿದರು. ಸಂಸ್ಥೆಯ ಎನ್.ರಮೇಶ್, ಪ್ರಾಂಶುಪಾಲೆ ಸುನೀತಾದೇವಿ ಮತ್ತಿತರರು ಉಪಸ್ಥಿತರಿದ್ದರು.<br /> ಬಸವಕೇಂದ್ರದಲ್ಲಿ ಬಸವ ಮರುಳಸಿದ್ಧ ಸ್ವಾಮೀಜಿ ನಡೆದ ಸಂತಾಪ ಸಭೆಯಲ್ಲಿ ಬೆನಕಪ್ಪ, ರುದ್ರಮುನಿ ಸಜ್ಜನ್, ಕತ್ತಿಗೆ ಚೆನ್ನಪ್ಪ ಮತ್ತಿತರರು ಜಿಎಸ್ಎಸ್ ಅವರಿಗೆ ಸಂತಾಪ ಸೂಚಿಸಿದರು.<br /> <br /> ಪಂಚಾಯತ್ ರಾಜ್ ಎಂಜಿನಿಯರಿಂಗ್ ಉಪವಿಭಾಗದಲ್ಲಿ ಶ್ರದ್ಧಾಂಜಲಿ ಸಭೆ ನಡೆಸಿ, ಜಿಎಸ್ಎಸ್ ಅವರ ಸಾಧನೆಗಳನ್ನು ಸ್ಮರಿಸಲಾಯಿತು.<br /> ಸಭೆಯಲ್ಲಿ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಎಸ್.ಎಂ.ಹರೀಶ್, ಗಣೇಶ್ ಮತ್ತು ಅಧಿಕಾರಿಗಳು ಸಿಬ್ಬಂದಿ ಉಪಸ್ಥಿತರಿದ್ದರು.<br /> <br /> <strong>ಕನ್ನಡವನ್ನು ವೈಚಾರಿಕ ನೆಲೆಯಲ್ಲಿ ಕಟ್ಟಿದ ಕವಿ<br /> ಸಾಗರ: </strong>ಕನ್ನಡವನ್ನು ವೈಚಾರಿಕ ನೆಲೆಯಲ್ಲಿ ಕಟ್ಟಿದ ಅಪರೂಪದ ಕವಿ ಜಿ.ಎಸ್.ಶಿವರುದ್ರಪ್ಪ ಅವರು ಎಂದು ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪುಂಡಲೀಕ ಹಾಲಂಬಿ ಸ್ಮರಿಸಿದರು.<br /> <br /> ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಸೋಮವಾರ ಏರ್ಪಡಿಸಿದ್ದ ರಾಷ್ಟ್ರಕವಿ ಡಾ.ಜಿ.ಎಸ್.ಶಿವರುದ್ರಪ್ಪ ಅವರಿಗೆ ಶ್ರದ್ದಾಂಜಲಿ ಸಲ್ಲಿಸುವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕನ್ನಡಿಗರ ಹೃದಯವನ್ನು ತಮ್ಮ ಕಾವ್ಯದ ಮೂಲಕ ತಟ್ಟಿರುವ ಜಿ.ಎಸ್.ಎಸ್ ಅಗಲಿದ ದಿನ ಕನ್ನಡ ಸಾಹಿತ್ಯಾಸಕ್ತರ ಪಾಲಿಗೆ ಅತ್ಯಂತ ದು:ಖದ ದಿನವಾಗಿದೆ ಎಂದರು.<br /> <br /> ಸಾಹಿತಿ ಡಾ.ಕಾಳೇಗಾಡ ನಾಗವಾರ ಮಾತನಾಡಿ, 1953ರಲ್ಲಿ ಶಿವಮೊಗ್ಗದ ಸಹ್ಯಾದ್ರಿ ಕಾಲೇಜಿನಲ್ಲಿ ಇಂಟರ್ಮೀಡಿಯಟ್ ವಿದ್ಯಾರ್ಥಿಯಾಗಿದ್ದಾಗ ಜಿ.ಎಸ್.ಎಸ್ ಕನ್ನಡ ಅಧ್ಯಾಪಕರಾಗಿ ಮಾಸ್ತಿ ವೆಂಕಟೇಶ್ ಅಯ್ಯಂಗಾರ್ರ ‘ಯಶೋಧರ’ ನಾಟಕವನ್ನು ಪಾಠ ಮಾಡಿದ ದಿನಗಳನ್ನು ನೆನಪಿಸಿಕೊಂಡ ನಾ.ಡಿಸೋಜ ಆ ನಾಟಕದ ಪಾಠದ ಜೊತೆಗೆ ಬುದ್ದನ ಸಮಗ್ರ ವ್ಯಕ್ತಿತ್ವವನ್ನು ಜಿ.ಎಸ್.ಎಸ್ ಪರಿಚಯ ಮಾಡಿಕೊಟ್ಟ ಬಗೆಯನ್ನು ವಿವರಿಸಿದರು.<br /> <br /> ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಿ.ಮಂಜುನಾಥ್, ತಾಲ್ಲೂಕು ಅಧ್ಯಕ್ಷ ವಿ.ಟಿ.ಸ್ವಾಮಿ, ತಹಶೀಲ್ದಾರ್ ಸಾಜಿದ್ ಅಹ್ಮದ್ ಮುಲ್ಲಾ, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ತಾಲ್ಲೂಕು ಅಧ್ಯಕ್ಷ ಎಚ್.ಆರ್.ನಾಗಭೂಷಣ್, ನಿವೃತ್ತ ನೌಕರರ ಸಂಘದ ಅಧ್ಯಕ್ಷ ಬಸವರಾಜ್<br /> ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>