<p><strong>ಬೆಂಗಳೂರು (ಪಿಟಿಐ):</strong> ಯುಪಿಎ ಸರ್ಕಾರವು ರಾಷ್ಟ್ರಪತಿ ಸ್ಥಾನಕ್ಕೆ `ಸೂಕ್ತ ವ್ಯಕ್ತಿ~ಯಾದ ಪ್ರಣವ್ ಅವರನ್ನು ಆಯ್ಕೆ ಮಾಡಿದೆ ಎಂದು ಬುಧವಾರ ಹೇಳಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು, ನಮ್ಮ ವರಿಷ್ಠರು ಕೂಡ ಅಭ್ಯರ್ಥಿಯ ಆಯ್ಕೆಯಲ್ಲಿ ಸರಿಯಾದ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಹೇಳಿದರು.<br /> <br /> `ಬಿಜೆಪಿಯ ಒಬ್ಬ ನಾಯಕರಾಗಿ ಹೇಗೆ ನೀವು ಪ್ರಣವ್ ಅವರನ್ನು ಬೆಂಬಲಿಸುತ್ತಿರಿ?~ ಎಂಬ ವರದಿಗಾರರ ಪ್ರಶ್ನೆಯೊಂದಕ್ಕೆ `ಪ್ರಣವ್ ಅವರು ಗೌರವಾನ್ವಿತ ಹುದ್ದೆಗೆ ಸೂಕ್ತ ವ್ಯಕ್ತಿಯಾಗಿದ್ದಾರೆ. ಆದರೆ ನನಗೂ ನನ್ನದೇ ಆದ ಮಿತಿಗಳಿವೆ~ ಎಂದು ಹೇಳಿದರಲ್ಲದೇ `ಸ್ವತಂತ್ರ್ಯ ವ್ಯಕ್ತಿಯಾಗಿ ಪ್ರಣವ್ ಅವರನ್ನು ನಾನು ಬೆಂಬಲಿಸುತ್ತೇನೆ. ಆದರೆ ಒಂದು ಪಕ್ಷದ ಒಬ್ಬ ಕಾರ್ಯಕರ್ತನಾಗಿ ಹೇಗೆ ನಾನು ಅವರನ್ನು ಬೆಂಬಲಿಸಲಿ~ ಎಂದು ಮರು ಪ್ರಶ್ನಿಸಿದರು.<br /> <br /> ಇದೇ ವೇಳೆ `ಒಂದು ವೇಳೆ ಪ್ರಣವ್ ಅವರು ನಿಮ್ಮನ್ನು ಸಂಪರ್ಕಿಸಿ ಬೆಂಬಲ ಕೋರಿದರೆ ಏನು ಮಾಡುತ್ತಿರಿ ?~ ಎಂಬ ಪ್ರಶ್ನೆಗೆ ಉತ್ತರಿಸಲು ನಿರಾಕರಿಸಿದ ಯಡಿಯೂರಪ್ಪ ಅವರು `ನಾನದನ್ನು ಚರ್ಚಿಸಲು ಇಷ್ಟಪಡುವುದಿಲ್ಲ~ ಎಂದು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು (ಪಿಟಿಐ):</strong> ಯುಪಿಎ ಸರ್ಕಾರವು ರಾಷ್ಟ್ರಪತಿ ಸ್ಥಾನಕ್ಕೆ `ಸೂಕ್ತ ವ್ಯಕ್ತಿ~ಯಾದ ಪ್ರಣವ್ ಅವರನ್ನು ಆಯ್ಕೆ ಮಾಡಿದೆ ಎಂದು ಬುಧವಾರ ಹೇಳಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು, ನಮ್ಮ ವರಿಷ್ಠರು ಕೂಡ ಅಭ್ಯರ್ಥಿಯ ಆಯ್ಕೆಯಲ್ಲಿ ಸರಿಯಾದ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಹೇಳಿದರು.<br /> <br /> `ಬಿಜೆಪಿಯ ಒಬ್ಬ ನಾಯಕರಾಗಿ ಹೇಗೆ ನೀವು ಪ್ರಣವ್ ಅವರನ್ನು ಬೆಂಬಲಿಸುತ್ತಿರಿ?~ ಎಂಬ ವರದಿಗಾರರ ಪ್ರಶ್ನೆಯೊಂದಕ್ಕೆ `ಪ್ರಣವ್ ಅವರು ಗೌರವಾನ್ವಿತ ಹುದ್ದೆಗೆ ಸೂಕ್ತ ವ್ಯಕ್ತಿಯಾಗಿದ್ದಾರೆ. ಆದರೆ ನನಗೂ ನನ್ನದೇ ಆದ ಮಿತಿಗಳಿವೆ~ ಎಂದು ಹೇಳಿದರಲ್ಲದೇ `ಸ್ವತಂತ್ರ್ಯ ವ್ಯಕ್ತಿಯಾಗಿ ಪ್ರಣವ್ ಅವರನ್ನು ನಾನು ಬೆಂಬಲಿಸುತ್ತೇನೆ. ಆದರೆ ಒಂದು ಪಕ್ಷದ ಒಬ್ಬ ಕಾರ್ಯಕರ್ತನಾಗಿ ಹೇಗೆ ನಾನು ಅವರನ್ನು ಬೆಂಬಲಿಸಲಿ~ ಎಂದು ಮರು ಪ್ರಶ್ನಿಸಿದರು.<br /> <br /> ಇದೇ ವೇಳೆ `ಒಂದು ವೇಳೆ ಪ್ರಣವ್ ಅವರು ನಿಮ್ಮನ್ನು ಸಂಪರ್ಕಿಸಿ ಬೆಂಬಲ ಕೋರಿದರೆ ಏನು ಮಾಡುತ್ತಿರಿ ?~ ಎಂಬ ಪ್ರಶ್ನೆಗೆ ಉತ್ತರಿಸಲು ನಿರಾಕರಿಸಿದ ಯಡಿಯೂರಪ್ಪ ಅವರು `ನಾನದನ್ನು ಚರ್ಚಿಸಲು ಇಷ್ಟಪಡುವುದಿಲ್ಲ~ ಎಂದು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>