<p><strong>ಬೆಂಗಳೂರು: </strong>ಬೆಂಗಳೂರು ಕೃಷಿ ವಿಶ್ವವಿದ್ಯಾಲಯ ತನ್ನ ಇತಿಹಾಸದಲ್ಲಿ ಇದೇ ಮೊದಲು ಬಾರಿಗೆ ರಾಷ್ಟ್ರೀಯ ಕೃಷಿ ಮೇಳವನ್ನು ಸಂಘಟಿಸಲು ಪೂರಕ ಸಿದ್ಧತೆ ನಡೆಸಿದೆ.<br /> <br /> ನವೆಂಬರ್ 16ರಿಂದ 20ರವರೆಗೆ ಇಲ್ಲಿನ ಗಾಂಧಿ ಕೃಷಿ ವಿಜ್ಞಾನ ಕೇಂದ್ರದಲ್ಲಿ (ಜಿಕೆವಿಕೆ) ನಡೆಯಲಿರುವ ಈ ಕೃಷಿ ಮೇಳ ನಿಜವಾದ ಅರ್ಥದಲ್ಲಿ `ರಾಷ್ಟ್ರೀಯ ಮಟ್ಟದ ಮೇಳ~ ಮಾಡಲು ನಿರ್ಧರಿಸಿದೆ. ದಕ್ಷಿಣದ ತಮಿಳುನಾಡು, ಕೇರಳ, ಆಂಧ್ರಪ್ರದೇಶ, ಮಹಾರಾಷ್ಟ್ರ ರಾಜ್ಯಗಳ ಕೃಷಿ ವಿಶ್ವವಿದ್ಯಾಲಯದ ವಿಜ್ಞಾನಿಗಳು, ಪ್ರಾಧ್ಯಾಪಕರು ಮತ್ತು ಪ್ರಗತಿಪರ ರೈತರು ಐದು ದಿನಗಳ ಈ ಮೇಳದಲ್ಲಿ ಪಾಲ್ಗೊಳ್ಳುತ್ತಿರುವುದು ವಿಶೇಷ. <br /> <br /> ಜೊತೆಗೆ ಕೇಂದ್ರೀಯ ಕೃಷಿ ಸಂಶೋಧನಾ ಸಂಸ್ಥೆಗಳಾದ ದೆಹಲಿಯ ರಾಷ್ಟ್ರೀಯ ಕೃಷಿ ಸಂಶೋಧನಾ ಮಂಡಳಿ (ಐಸಿಎಆರ್),ಭೋಪಾಲ್ನ ಕೇಂದ್ರೀಯ ಕೃಷಿ ಎಂಜಿನಿಯರಿಂಗ್ ಸಂಸ್ಥೆ (ಸಿಐಎಇ) ಮತ್ತಿತರ ಸಂಶೋಧನಾ ಸಂಸ್ಥೆಗಳ ತಜ್ಞರು ಭಾಗವಹಿಸಲಿದ್ದಾರೆ. ಸಿಐಎಇತಜ್ಞರು ತಾವು ಕೈಗೊಂಡಿರುವ ಕೃಷಿ ಪರಿಕರಗಳನ್ನು ಇಲ್ಲಿ ಪ್ರದರ್ಶಿಸಲಿದ್ದಾರೆ.<br /> <br /> ಎಂದಿನಂತೆ ಕೃಷಿ ವಿ.ವಿ.ಯ ವಿಜ್ಞಾನಿಗಳು ಸಂಶೋಧಿಸಿದ ನೂತನ ತಳಿಗಳ ಪ್ರದರ್ಶನವನ್ನೂ ಏರ್ಪಡಿಸಲಾಗುತ್ತಿದೆ. ಆದರೆ ಈ ಬಾರಿಯ ವಿಶೇಷವೆಂದರೆ ಕಾರ್ಯಕ್ರಮ ಮತ್ತು ಚರ್ಚಾಗೋಷ್ಠಿಗಳು ನಡೆಯುವ ಮುಖ್ಯ ವೇದಿಕೆಯ ಪಕ್ಕದಲ್ಲಿ ಬೆಳೆಗಳ ಪ್ರಾತ್ಯಕ್ಷಿಕೆಯ ತಾಕುಗಳನ್ನು ಬೆಳೆಸುತ್ತಿರುವುದು. ಆಹಾರ ಬೆಳೆಗಳು ಮತ್ತು ಅವುಗಳ ಮೌಲ್ಯವರ್ಧನೆಯ ಬಗ್ಗೆ ತಿಳಿವಳಿಕೆ ನೀಡುವುದೂ ಈ ಮೇಳದ ಉದ್ದೇಶಗಳಲ್ಲೊಂದು. ಆದ್ದರಿಂದ ಹೆಚ್ಚುವರಿಯಾಗಿ 50 ಮಳಿಗೆಗಳನ್ನು ಸ್ಥಾಪಿಸಿ ಆಹಾರ ಮತ್ತು ಮೌಲ್ಯವರ್ಧಿತ ಉತ್ಪನ್ನಗಳ ಬಗ್ಗೆ ಕೃಷಿ ವಿಜ್ಞಾನಿಗಳು ಮಾಹಿತಿ ನೀಡಲಿದ್ದಾರೆ.<br /> <br /> <strong>ಯುವ ಕೃಷಿಕ ಪ್ರಶಸ್ತಿ: </strong>ಯುವಕರು ಕೃಷಿಯನ್ನು ಕೈಗೊಳ್ಳದಿದ್ದರೆ ಭವಿಷ್ಯದಲ್ಲಿ ಆಹಾರ ಉತ್ಪಾದನೆ ಸ್ಥಿತಿ ಗಂಭೀರಗೊಳ್ಳಲಿದೆ ಎಂಬುದನ್ನು ಅರಿತ ವಿ.ವಿ. ಕೆಲ ತಿಂಗಳ ಹಿಂದೆ `ಯುವ ಕೃಷಿಕರ ರಾಷ್ಟ್ರೀಯ ಕಾರ್ಯಾಗಾರ~ವನ್ನೂ ಏರ್ಪಡಿಸಿತ್ತು. ಇದೀಗ ಯುವ ರೈತರನ್ನು ಪ್ರೋತ್ಸಾಹಿಸಲು ತನ್ನ ವ್ಯಾಪ್ತಿಯ 17 ಜಿಲ್ಲೆಗಳ ಎಲ್ಲ ತಾಲ್ಲೂಕುಗಳಿಂದ `ಉತ್ತಮ ಯುವ ಕೃಷಿಕ~ ಮತ್ತು `ಉತ್ತಮ ಯುವ ಕೃಷಿಕ ಮಹಿಳೆ~ ಪ್ರಶಸ್ತಿಯನ್ನು ನೀಡಲು ನಿರ್ಧರಿಸಿದೆ.<br /> <br /> ಪ್ರತಿ ಮೇಳದಲ್ಲಿ ನೀಡುವ ಉತ್ತಮ ರೈತ ಮತ್ತು ರೈತ ಮಹಿಳೆ ಪ್ರಶಸ್ತಿಯ ಜೊತೆಯಲ್ಲೇ ಈ ಪ್ರಶಸ್ತಿ ನೀಡಲಿದ್ದು, ತಲಾ ಎರಡು ಸಾವಿರ ರೂಪಾಯಿ ನಗದು ಬಹುಮಾನ ಹೊಂದಿರುತ್ತದೆ. <br /> <br /> ಪ್ರತಿವರ್ಷವೂ ಮೇಳಕ್ಕೆ ಭೇಟಿ ನೀಡುವ ರೈತರ ಸಂಖ್ಯೆ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಈ ಬಾರಿ ಐದು ದಿನಗಳಿಗೆ (ಇಲ್ಲಿಯವರೆಗೆ ನಾಲ್ಕು ದಿನ ನಡೆಯುತ್ತಿತ್ತು) ಹೆಚ್ಚಿಸಿದೆ. ಕಳೆದ ಬಾರಿ 6 ಲಕ್ಷ ರೈತರು, ಸಾರ್ವಜನಿಕರು ಮೇಳಕ್ಕೆ ಭೇಟಿ ನೀಡಿದ್ದರು. ಈ ಬಾರಿ ಕನಿಷ್ಠ 10 ಲಕ್ಷ ರೈತರು ಭೇಟಿ ನೀಡಬಹುದು ಎಂದು ವಿ.ವಿ. ಅಂದಾಜಿಸಿದೆ.<br /> <br /> ಈ ಮೇಳದ ಉದ್ದೇಶ ಕುರಿತು `ಪ್ರಜಾವಾಣಿ~ಯೊಂದಿಗೆ ಮಾತನಾಡಿದ ಕುಲಪತಿ ಡಾ.ಕೆ.ನಾರಾಯಣಗೌಡ, `ಹೆಚ್ಚುತ್ತಿರುವ ನಗರೀಕರಣದಿಂದ ಸಣ್ಣ ಮತ್ತು ಮಧ್ಯಮ ಪ್ರಮಾಣದ ರೈತರು ನಗರಗಳಿಗೆ ವಲಸೆ ಹೋಗುತ್ತಿರುವ ಪ್ರಕ್ರಿಯೆ 1980-90ರ ದಶಕದಲ್ಲಿ ನಡೆಯಿತು. 1990-2000ರ ದಶಕದಲ್ಲಿ ಕೃಷಿಗೆ ಪೂರಕವಾದ ಉಪಕರಣಗಳನ್ನು ತಯಾರಿಸುತ್ತಿದ್ದ ಕುಶಲಕರ್ಮಿಗಳೂ ವಲಸೆ ಹೊರಟರು. <br /> <br /> ಇನ್ನೈದು ವರ್ಷ ಕಳೆದರೆ ಬೃಹತ್ ಪ್ರಮಾಣದ ಕೃಷಿಯಲ್ಲಿ ತೊಡಗಿರುವ ರೈತರೂ ನಗರಗಳತ್ತ ಮುಖ ಮಾಡಿದರೆ ಅಚ್ಚರಿ ಇಲ್ಲ. ಆಗ ಆಹಾರ ಉತ್ಪಾದನೆ ಕೊರತೆ ಗಂಭೀರ ಸಮಸ್ಯೆಯಾಗಲಿದೆ. ಈ ಬಗ್ಗೆ ಮೇಳದಲ್ಲಿ ತಜ್ಞರೊಂದಿಗೆ ಚರ್ಚೆ ನಡೆಸಲಾಗುವುದು. ಯುವ ರೈತರಿಗೆ ಪ್ರಶಸ್ತಿ ನೀಡುತ್ತಿರುವುದೂ ಸಹ ಅವರನ್ನು ಕೃಷಿಯತ್ತ ಉತ್ತೇಜಿಸುವುದಕ್ಕಾಗಿ~ ಎಂದರು.</p>.<p><strong>ಮಳಿಗೆ ಸ್ಥಾಪನೆಗೆ ಅರ್ಜಿ ಆಹ್ವಾನ</strong></p>.<p>ಬೆಂಗಳೂರು ಕೃಷಿ ವಿಶ್ವವಿದ್ಯಾಲಯವು ಹಮ್ಮಿಕೊಂಡಿರುವ ರಾಷ್ಟ್ರೀಯ ಕೃಷಿ ಮೇಳದಲ್ಲಿ ಕೃಷಿ ಯಂತ್ರೋಪಕರಣಗಳ ಪ್ರದರ್ಶನ ಹಾಗೂ ಆಹಾರ ಮತ್ತು ಮೌಲ್ಯವರ್ಧನೆಯ ಬಗ್ಗೆ ವಸ್ತು ಪ್ರದರ್ಶನ ಏರ್ಪಡಿಸಿದೆ.<br /> <br /> ವಿವಿಧ ಸರ್ಕಾರಿ ಸಂಸ್ಥೆಗಳು, ನಿಗಮ, ಸರ್ಕಾರೇತರ ಸಂಸ್ಥೆಗಳು, ಮಂಡಳಿಗಳು, ಕೃಷಿ ಪರಿಕರಗಳ ಉತ್ಪಾದಕರು ಹಾಗೂ ಮಾರಾಟಗಾರರು ಮತ್ತು ಗ್ರಾಮೀಣ ಅಭಿವೃದ್ಧಿಗೆ ಪೂರಕವಾಗಿರುವ ಸಂಘ ಸಂಸ್ಥೆಗಳು ಈ ಪ್ರದರ್ಶನದಲ್ಲಿ ಭಾಗವಹಿಸಲು ಅವಕಾಶವಿದೆ. ಆಸಕ್ತರು ಕೆಳಕಂಡ ವಿಳಾಸವನ್ನು ಸಂಪರ್ಕಿಸಬೇಕು. ವಿಸ್ತರಣಾ ನಿರ್ದೇಶಕರು, ಕೃಷಿ ವಿಶ್ವವಿದ್ಯಾಲಯ, ಹೆಬ್ಬಾಳ. ಮೊಬೈಲ್: 99866 63132</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು: </strong>ಬೆಂಗಳೂರು ಕೃಷಿ ವಿಶ್ವವಿದ್ಯಾಲಯ ತನ್ನ ಇತಿಹಾಸದಲ್ಲಿ ಇದೇ ಮೊದಲು ಬಾರಿಗೆ ರಾಷ್ಟ್ರೀಯ ಕೃಷಿ ಮೇಳವನ್ನು ಸಂಘಟಿಸಲು ಪೂರಕ ಸಿದ್ಧತೆ ನಡೆಸಿದೆ.<br /> <br /> ನವೆಂಬರ್ 16ರಿಂದ 20ರವರೆಗೆ ಇಲ್ಲಿನ ಗಾಂಧಿ ಕೃಷಿ ವಿಜ್ಞಾನ ಕೇಂದ್ರದಲ್ಲಿ (ಜಿಕೆವಿಕೆ) ನಡೆಯಲಿರುವ ಈ ಕೃಷಿ ಮೇಳ ನಿಜವಾದ ಅರ್ಥದಲ್ಲಿ `ರಾಷ್ಟ್ರೀಯ ಮಟ್ಟದ ಮೇಳ~ ಮಾಡಲು ನಿರ್ಧರಿಸಿದೆ. ದಕ್ಷಿಣದ ತಮಿಳುನಾಡು, ಕೇರಳ, ಆಂಧ್ರಪ್ರದೇಶ, ಮಹಾರಾಷ್ಟ್ರ ರಾಜ್ಯಗಳ ಕೃಷಿ ವಿಶ್ವವಿದ್ಯಾಲಯದ ವಿಜ್ಞಾನಿಗಳು, ಪ್ರಾಧ್ಯಾಪಕರು ಮತ್ತು ಪ್ರಗತಿಪರ ರೈತರು ಐದು ದಿನಗಳ ಈ ಮೇಳದಲ್ಲಿ ಪಾಲ್ಗೊಳ್ಳುತ್ತಿರುವುದು ವಿಶೇಷ. <br /> <br /> ಜೊತೆಗೆ ಕೇಂದ್ರೀಯ ಕೃಷಿ ಸಂಶೋಧನಾ ಸಂಸ್ಥೆಗಳಾದ ದೆಹಲಿಯ ರಾಷ್ಟ್ರೀಯ ಕೃಷಿ ಸಂಶೋಧನಾ ಮಂಡಳಿ (ಐಸಿಎಆರ್),ಭೋಪಾಲ್ನ ಕೇಂದ್ರೀಯ ಕೃಷಿ ಎಂಜಿನಿಯರಿಂಗ್ ಸಂಸ್ಥೆ (ಸಿಐಎಇ) ಮತ್ತಿತರ ಸಂಶೋಧನಾ ಸಂಸ್ಥೆಗಳ ತಜ್ಞರು ಭಾಗವಹಿಸಲಿದ್ದಾರೆ. ಸಿಐಎಇತಜ್ಞರು ತಾವು ಕೈಗೊಂಡಿರುವ ಕೃಷಿ ಪರಿಕರಗಳನ್ನು ಇಲ್ಲಿ ಪ್ರದರ್ಶಿಸಲಿದ್ದಾರೆ.<br /> <br /> ಎಂದಿನಂತೆ ಕೃಷಿ ವಿ.ವಿ.ಯ ವಿಜ್ಞಾನಿಗಳು ಸಂಶೋಧಿಸಿದ ನೂತನ ತಳಿಗಳ ಪ್ರದರ್ಶನವನ್ನೂ ಏರ್ಪಡಿಸಲಾಗುತ್ತಿದೆ. ಆದರೆ ಈ ಬಾರಿಯ ವಿಶೇಷವೆಂದರೆ ಕಾರ್ಯಕ್ರಮ ಮತ್ತು ಚರ್ಚಾಗೋಷ್ಠಿಗಳು ನಡೆಯುವ ಮುಖ್ಯ ವೇದಿಕೆಯ ಪಕ್ಕದಲ್ಲಿ ಬೆಳೆಗಳ ಪ್ರಾತ್ಯಕ್ಷಿಕೆಯ ತಾಕುಗಳನ್ನು ಬೆಳೆಸುತ್ತಿರುವುದು. ಆಹಾರ ಬೆಳೆಗಳು ಮತ್ತು ಅವುಗಳ ಮೌಲ್ಯವರ್ಧನೆಯ ಬಗ್ಗೆ ತಿಳಿವಳಿಕೆ ನೀಡುವುದೂ ಈ ಮೇಳದ ಉದ್ದೇಶಗಳಲ್ಲೊಂದು. ಆದ್ದರಿಂದ ಹೆಚ್ಚುವರಿಯಾಗಿ 50 ಮಳಿಗೆಗಳನ್ನು ಸ್ಥಾಪಿಸಿ ಆಹಾರ ಮತ್ತು ಮೌಲ್ಯವರ್ಧಿತ ಉತ್ಪನ್ನಗಳ ಬಗ್ಗೆ ಕೃಷಿ ವಿಜ್ಞಾನಿಗಳು ಮಾಹಿತಿ ನೀಡಲಿದ್ದಾರೆ.<br /> <br /> <strong>ಯುವ ಕೃಷಿಕ ಪ್ರಶಸ್ತಿ: </strong>ಯುವಕರು ಕೃಷಿಯನ್ನು ಕೈಗೊಳ್ಳದಿದ್ದರೆ ಭವಿಷ್ಯದಲ್ಲಿ ಆಹಾರ ಉತ್ಪಾದನೆ ಸ್ಥಿತಿ ಗಂಭೀರಗೊಳ್ಳಲಿದೆ ಎಂಬುದನ್ನು ಅರಿತ ವಿ.ವಿ. ಕೆಲ ತಿಂಗಳ ಹಿಂದೆ `ಯುವ ಕೃಷಿಕರ ರಾಷ್ಟ್ರೀಯ ಕಾರ್ಯಾಗಾರ~ವನ್ನೂ ಏರ್ಪಡಿಸಿತ್ತು. ಇದೀಗ ಯುವ ರೈತರನ್ನು ಪ್ರೋತ್ಸಾಹಿಸಲು ತನ್ನ ವ್ಯಾಪ್ತಿಯ 17 ಜಿಲ್ಲೆಗಳ ಎಲ್ಲ ತಾಲ್ಲೂಕುಗಳಿಂದ `ಉತ್ತಮ ಯುವ ಕೃಷಿಕ~ ಮತ್ತು `ಉತ್ತಮ ಯುವ ಕೃಷಿಕ ಮಹಿಳೆ~ ಪ್ರಶಸ್ತಿಯನ್ನು ನೀಡಲು ನಿರ್ಧರಿಸಿದೆ.<br /> <br /> ಪ್ರತಿ ಮೇಳದಲ್ಲಿ ನೀಡುವ ಉತ್ತಮ ರೈತ ಮತ್ತು ರೈತ ಮಹಿಳೆ ಪ್ರಶಸ್ತಿಯ ಜೊತೆಯಲ್ಲೇ ಈ ಪ್ರಶಸ್ತಿ ನೀಡಲಿದ್ದು, ತಲಾ ಎರಡು ಸಾವಿರ ರೂಪಾಯಿ ನಗದು ಬಹುಮಾನ ಹೊಂದಿರುತ್ತದೆ. <br /> <br /> ಪ್ರತಿವರ್ಷವೂ ಮೇಳಕ್ಕೆ ಭೇಟಿ ನೀಡುವ ರೈತರ ಸಂಖ್ಯೆ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಈ ಬಾರಿ ಐದು ದಿನಗಳಿಗೆ (ಇಲ್ಲಿಯವರೆಗೆ ನಾಲ್ಕು ದಿನ ನಡೆಯುತ್ತಿತ್ತು) ಹೆಚ್ಚಿಸಿದೆ. ಕಳೆದ ಬಾರಿ 6 ಲಕ್ಷ ರೈತರು, ಸಾರ್ವಜನಿಕರು ಮೇಳಕ್ಕೆ ಭೇಟಿ ನೀಡಿದ್ದರು. ಈ ಬಾರಿ ಕನಿಷ್ಠ 10 ಲಕ್ಷ ರೈತರು ಭೇಟಿ ನೀಡಬಹುದು ಎಂದು ವಿ.ವಿ. ಅಂದಾಜಿಸಿದೆ.<br /> <br /> ಈ ಮೇಳದ ಉದ್ದೇಶ ಕುರಿತು `ಪ್ರಜಾವಾಣಿ~ಯೊಂದಿಗೆ ಮಾತನಾಡಿದ ಕುಲಪತಿ ಡಾ.ಕೆ.ನಾರಾಯಣಗೌಡ, `ಹೆಚ್ಚುತ್ತಿರುವ ನಗರೀಕರಣದಿಂದ ಸಣ್ಣ ಮತ್ತು ಮಧ್ಯಮ ಪ್ರಮಾಣದ ರೈತರು ನಗರಗಳಿಗೆ ವಲಸೆ ಹೋಗುತ್ತಿರುವ ಪ್ರಕ್ರಿಯೆ 1980-90ರ ದಶಕದಲ್ಲಿ ನಡೆಯಿತು. 1990-2000ರ ದಶಕದಲ್ಲಿ ಕೃಷಿಗೆ ಪೂರಕವಾದ ಉಪಕರಣಗಳನ್ನು ತಯಾರಿಸುತ್ತಿದ್ದ ಕುಶಲಕರ್ಮಿಗಳೂ ವಲಸೆ ಹೊರಟರು. <br /> <br /> ಇನ್ನೈದು ವರ್ಷ ಕಳೆದರೆ ಬೃಹತ್ ಪ್ರಮಾಣದ ಕೃಷಿಯಲ್ಲಿ ತೊಡಗಿರುವ ರೈತರೂ ನಗರಗಳತ್ತ ಮುಖ ಮಾಡಿದರೆ ಅಚ್ಚರಿ ಇಲ್ಲ. ಆಗ ಆಹಾರ ಉತ್ಪಾದನೆ ಕೊರತೆ ಗಂಭೀರ ಸಮಸ್ಯೆಯಾಗಲಿದೆ. ಈ ಬಗ್ಗೆ ಮೇಳದಲ್ಲಿ ತಜ್ಞರೊಂದಿಗೆ ಚರ್ಚೆ ನಡೆಸಲಾಗುವುದು. ಯುವ ರೈತರಿಗೆ ಪ್ರಶಸ್ತಿ ನೀಡುತ್ತಿರುವುದೂ ಸಹ ಅವರನ್ನು ಕೃಷಿಯತ್ತ ಉತ್ತೇಜಿಸುವುದಕ್ಕಾಗಿ~ ಎಂದರು.</p>.<p><strong>ಮಳಿಗೆ ಸ್ಥಾಪನೆಗೆ ಅರ್ಜಿ ಆಹ್ವಾನ</strong></p>.<p>ಬೆಂಗಳೂರು ಕೃಷಿ ವಿಶ್ವವಿದ್ಯಾಲಯವು ಹಮ್ಮಿಕೊಂಡಿರುವ ರಾಷ್ಟ್ರೀಯ ಕೃಷಿ ಮೇಳದಲ್ಲಿ ಕೃಷಿ ಯಂತ್ರೋಪಕರಣಗಳ ಪ್ರದರ್ಶನ ಹಾಗೂ ಆಹಾರ ಮತ್ತು ಮೌಲ್ಯವರ್ಧನೆಯ ಬಗ್ಗೆ ವಸ್ತು ಪ್ರದರ್ಶನ ಏರ್ಪಡಿಸಿದೆ.<br /> <br /> ವಿವಿಧ ಸರ್ಕಾರಿ ಸಂಸ್ಥೆಗಳು, ನಿಗಮ, ಸರ್ಕಾರೇತರ ಸಂಸ್ಥೆಗಳು, ಮಂಡಳಿಗಳು, ಕೃಷಿ ಪರಿಕರಗಳ ಉತ್ಪಾದಕರು ಹಾಗೂ ಮಾರಾಟಗಾರರು ಮತ್ತು ಗ್ರಾಮೀಣ ಅಭಿವೃದ್ಧಿಗೆ ಪೂರಕವಾಗಿರುವ ಸಂಘ ಸಂಸ್ಥೆಗಳು ಈ ಪ್ರದರ್ಶನದಲ್ಲಿ ಭಾಗವಹಿಸಲು ಅವಕಾಶವಿದೆ. ಆಸಕ್ತರು ಕೆಳಕಂಡ ವಿಳಾಸವನ್ನು ಸಂಪರ್ಕಿಸಬೇಕು. ವಿಸ್ತರಣಾ ನಿರ್ದೇಶಕರು, ಕೃಷಿ ವಿಶ್ವವಿದ್ಯಾಲಯ, ಹೆಬ್ಬಾಳ. ಮೊಬೈಲ್: 99866 63132</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>