<p><strong>ನವದೆಹಲಿ (ಪಿಟಿಐ/ಐಎಎನ್ಎಸ್): </strong>ರೈಲ್ವೆ ಸಚಿವ ದಿನೇಶ್ ತ್ರಿವೇದಿ ಅವರು ಬುಧವಾರ ಬೆಳಿಗ್ಗೆ ಲೋಕಸಭೆಯಲ್ಲಿ ಪ್ರಸಕ್ತ ಸಾಲಿನ ರೈಲ್ವೆ ಬಜೆಟ್ನ್ನು ಮಂಡಿಸಿದರು.</p>.<p>ಪ್ರಮುಖವಾಗಿ ರೈಲು ಸುರಕ್ಷತೆ ಸೇರಿದಂತೆ 5 ವಿಷಯಗಳಿಗೆ ಪ್ರಸಕ್ತ ಸಾಲಿನಲ್ಲಿ ಪ್ರಾಧಾನ್ಯತೆ ಕೊಡಲಾಗಿದೆ ಎಂದು ಅವರು ಹೇಳಿದರು.ಉಳಿದ ನಾಲ್ಕು ಆದ್ಯತಾ ವಿಷಯಗಳೆಂದರೆ, ಕ್ರೋಢಿಕರಣ, ದಟ್ಟನೆ ನಿವಾರಣೆ, ಸಾಮಾರ್ಥ್ಯದಲ್ಲಿ ಹೆಚ್ಚಳ, ನಿರ್ವಹಣೆಯ ಅನುಪಾತದಲ್ಲಿ ಇಳಿಕೆ ಸಾಧಿಸಿ ಆಧುನೀಕತೆ ತರುವುದು<br /> <br /> ರೈಲ್ವೆ ಆಧುನೀಕರಣಕ್ಕೆ ಒತ್ತು ನೀಡಿರುವ ತ್ರಿವೇದಿ ಅವರು ಅದಕ್ಕಾಗಿ 5.60 ಲಕ್ಷ ಕೋಟಿ ರೂ ಹಣದ ಅಗತ್ಯ ಇದೆ ಎಂದು ಪ್ರತಿಪಾದಿಸಿದ್ದಾರೆ.</p>.<p>ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಿರುವ ಅವರು ಮುಂದಿನ 5 ವರ್ಷಗಳಲ್ಲಿ ಕಾವಲುಗಾರ ರಹಿತ ಕ್ರಾಸಿಂಗ್ನ್ನು ಸಂಪೂರ್ಣವಾಗಿ ತೊಡೆದು ಹಾಕಲಾಗುತ್ತದೆ ಎಂದು ಪ್ರಕಟಿಸಿದರು.</p>.<p><strong>ಟಿಕೆಟ್ ದರ ಹೆಚ್ಚಳ : </strong>ಕಳೆದ ಹಲವು ವರ್ಷಗಳಿಂದ ಏರಿಕೆ ಕಾಣದೆ ಇದ್ದ ಪ್ರಯಾಣಿಕರ ಟಿಕೆಟ್ ದರವನ್ನು ಈ ಬಾರಿ ಪ್ರತಿ ಕಿಲೋಮೀಟರ್ ಗೆ 2 ರಿಂದ 30 ಪೈಸೆಗಳಷ್ಟು ಹೆಚ್ಚಿಸಲಾಗಿದೆ.</p>.<p>ಎಕ್ಸ್ ಪ್ರೆಸ್ ರೈಲು ಪ್ರಯಾಣದರವನ್ನು ಪ್ರತಿ ಕಿ.ಮೀ.ಗೆ 5 ಪೈಸೆಯಷ್ಟು ಹೆಚ್ಚಿಸಲಾಗಿದೆ. ಎ.ಸಿ. ಚೇರ್ ಕಾರ್ ಮತ್ತು ಎ.ಸಿ.3 ಟೈಯರ್ ಟಿಕೆಟ್ ದರವನ್ನು ಪ್ರತಿ ಕಿ.ಮೀ.ಗೆ 10 ಪೈಸೆ, ಎ.ಸಿ. 2 ಟೈಯರ್ ಟಿಕೆಟ್ ದರವನ್ನು ಪ್ರತಿ ಕಿ.ಮೀ.ಗೆ 15 ಪೈಸೆ, ಎ.ಸಿ. ಮೊದಲ ದರ್ಜೆ ಟಿಕೆಟ್ ದರವನ್ನು ಪ್ರತಿ ಕಿ.ಮೀ.ಗೆ 30 ಪೈಸೆಯಷ್ಟು ಹೆಚ್ಚಿಸಲಾಗಿದೆ.</p>.<p>ಫ್ಲಾಟ್ ಫಾರಂ ಟಿಕೆಟ್ ದರವನ್ನು 3 ರೂಗಳಿಂದ 5 ರೂಗಳಿಗೆ ಹೆಚ್ಚಿಸಲಾಗಿದೆ.</p>.<p><strong>ರೈಲ್ವೆ ಸುರಕ್ಷತಾ ಪ್ರಾಧಿಕಾರ :</strong> ಶೂನ್ಯ ಸಾವಿನ ಗುರಿಯನ್ನು ಹೊಂದಿದ್ದೇನೆ ಎಂದು ಹೇಳಿದ ತ್ರಿವೇದಿ ಸ್ವತಂತ್ರ ರೈಲ್ವೆ ಸುರಕ್ಷತಾ ಪ್ರಾಧಿಕಾರ ರಚಿಸಲು ಉದ್ದೇಶಿಸಲಾಗಿದೆ ಎಂದು ತಿಳಿಸಿದರು.</p>.<p><strong>ಮುಖ್ಯಾಂಶಗಳು; </strong></p>.<p>1. ಕಳೆದ 11ನೇ ಪಂಚವಾರ್ಷಿಕ ಯೋಜನೆಯ ಅವಧಿಯಲ್ಲಿ ರೈಲ್ವೆ ಇಲಾಖೆ 1.92 ಲಕ್ಷ ಕೋಟಿ ರೂಗಳನ್ನು ಹೂಡಿಕೆ ಮಾಡಿದ್ದರೆ 12ನೇ ಪಂಚವಾರ್ಷಿಕ ಯೋಜನೆಯ ಅವಧಿಯಲ್ಲಿ ಹೂಡಿಕೆ ಮಾಡುವ ಮೊತ್ತ 7.35 ಲಕ್ಷ ಕೋಟಿ ರೂಗಳು.</p>.<p>2. ಹಣಕಾಸು ಸಚಿವಾಲಯವು ರೈಲ್ವೆ ಆಧುನೀಕರಣ ಕಾಮಗಾರಿಗಳಿಗಾಗಿ ರೈಲ್ವೆ ಇಲಾಖೆಗೆ ಶೇ. 8.55ರ ಬಡ್ಡಿದರದಲ್ಲಿ 3 ಸಾವಿರ ಕೋಟಿ ರೂ ಸಾಲ ನೀಡಲು ಒಪ್ಪಿಗೆ ಸೂಚಿಸಿದೆ.</p>.<p>3. 2012-13ರ ಅವಧಿಯಲ್ಲಿ 85 ಹೊಸ ಮಾರ್ಗಗಳ ಯೋಜನೆಯನ್ನು ಕೈಗೆತ್ತಿಕೊಳ್ಳುವುದು ಇದಕ್ಕಾಗಿ 6870 ಕೋಟಿ ರೂಗಳನ್ನು ಹೂಡಿಕೆ ಮಾಡುವುದು. 114 ಹೊಸ ಮಾರ್ಗಗಳ ಸರ್ವೇಕ್ಷಣೆ ಕಾರ್ಯವನ್ನು ಪ್ರಸಕ್ತ ಸಾಲಿನಲ್ಲಿ ಪೂರ್ಣಗೊಳಿಸಲಾಗುವುದು.</p>.<p>4. 800 ಕಿಲೋಮೀಟರ್ ಉದ್ದದ ಗೇಜ್ ಪರಿವರ್ತನೆಗಾಗಿ 1950 ಕೋಟಿ ರೂಗಳನ್ನು ಮೀಸಲಿಡಲಾಗಿದೆ.</p>.<p>5. 19 ಕಿಲೋಮೀಟರ್ ನಷ್ಟು ಸಿಗ್ನಲ್ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲಾಗುವುದು.</p>.<p>6. ರೈಲಿನ ವೇಗವನ್ನು ಗಂಟೆಗೆ 160 ಕಿಲೋ ಮೀಟರ್ ನಷ್ಟು ಹೆಚ್ಚಿಸುವುದು. ಈ ಮೂಲಕ ದೆಹಲಿ ಹಾಗೂ ಕೋಲ್ಕೋತ್ತಾ ನಡುವಣದ ಪ್ರಯಾಣದ ಅವಧಿಯನ್ನು 17 ಗಂಟೆಯಿಂದ 14 ಗಂಟೆಗೆ ತಗ್ಗಿಸಲಾಗುತ್ತದೆ ಎಂದು ತ್ರಿವೇದಿ ತಿಳಿಸಿದರು.</p>.<p>7. ಆಧುನೀಕರಣಕ್ಕೆ ಹೆಚ್ಚಿನ ಆಧ್ಯತೆ ನೀಡಿರುವುದರಿಂದ 2012-13ರ ಒಂದು ವರ್ಷದ ಅವಧಿಯಲ್ಲಿ ಒಂದು ಲಕ್ಷ ಹೊಸ ಉದ್ಯೋಗವಕಾಶಗಳು ಸೃಷ್ಟಿಯಾಗಲಿವೆ.</p>.<p>8. ಹೊಸದಾಗಿ 75 ಎಕ್ಸ್ ಪ್ರೆಸ್ ಪ್ರಯಾಣಿಕರ ರೈಲುಗಳನ್ನು ಆರಂಭಿಸಲಾಗುವುದು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ (ಪಿಟಿಐ/ಐಎಎನ್ಎಸ್): </strong>ರೈಲ್ವೆ ಸಚಿವ ದಿನೇಶ್ ತ್ರಿವೇದಿ ಅವರು ಬುಧವಾರ ಬೆಳಿಗ್ಗೆ ಲೋಕಸಭೆಯಲ್ಲಿ ಪ್ರಸಕ್ತ ಸಾಲಿನ ರೈಲ್ವೆ ಬಜೆಟ್ನ್ನು ಮಂಡಿಸಿದರು.</p>.<p>ಪ್ರಮುಖವಾಗಿ ರೈಲು ಸುರಕ್ಷತೆ ಸೇರಿದಂತೆ 5 ವಿಷಯಗಳಿಗೆ ಪ್ರಸಕ್ತ ಸಾಲಿನಲ್ಲಿ ಪ್ರಾಧಾನ್ಯತೆ ಕೊಡಲಾಗಿದೆ ಎಂದು ಅವರು ಹೇಳಿದರು.ಉಳಿದ ನಾಲ್ಕು ಆದ್ಯತಾ ವಿಷಯಗಳೆಂದರೆ, ಕ್ರೋಢಿಕರಣ, ದಟ್ಟನೆ ನಿವಾರಣೆ, ಸಾಮಾರ್ಥ್ಯದಲ್ಲಿ ಹೆಚ್ಚಳ, ನಿರ್ವಹಣೆಯ ಅನುಪಾತದಲ್ಲಿ ಇಳಿಕೆ ಸಾಧಿಸಿ ಆಧುನೀಕತೆ ತರುವುದು<br /> <br /> ರೈಲ್ವೆ ಆಧುನೀಕರಣಕ್ಕೆ ಒತ್ತು ನೀಡಿರುವ ತ್ರಿವೇದಿ ಅವರು ಅದಕ್ಕಾಗಿ 5.60 ಲಕ್ಷ ಕೋಟಿ ರೂ ಹಣದ ಅಗತ್ಯ ಇದೆ ಎಂದು ಪ್ರತಿಪಾದಿಸಿದ್ದಾರೆ.</p>.<p>ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಿರುವ ಅವರು ಮುಂದಿನ 5 ವರ್ಷಗಳಲ್ಲಿ ಕಾವಲುಗಾರ ರಹಿತ ಕ್ರಾಸಿಂಗ್ನ್ನು ಸಂಪೂರ್ಣವಾಗಿ ತೊಡೆದು ಹಾಕಲಾಗುತ್ತದೆ ಎಂದು ಪ್ರಕಟಿಸಿದರು.</p>.<p><strong>ಟಿಕೆಟ್ ದರ ಹೆಚ್ಚಳ : </strong>ಕಳೆದ ಹಲವು ವರ್ಷಗಳಿಂದ ಏರಿಕೆ ಕಾಣದೆ ಇದ್ದ ಪ್ರಯಾಣಿಕರ ಟಿಕೆಟ್ ದರವನ್ನು ಈ ಬಾರಿ ಪ್ರತಿ ಕಿಲೋಮೀಟರ್ ಗೆ 2 ರಿಂದ 30 ಪೈಸೆಗಳಷ್ಟು ಹೆಚ್ಚಿಸಲಾಗಿದೆ.</p>.<p>ಎಕ್ಸ್ ಪ್ರೆಸ್ ರೈಲು ಪ್ರಯಾಣದರವನ್ನು ಪ್ರತಿ ಕಿ.ಮೀ.ಗೆ 5 ಪೈಸೆಯಷ್ಟು ಹೆಚ್ಚಿಸಲಾಗಿದೆ. ಎ.ಸಿ. ಚೇರ್ ಕಾರ್ ಮತ್ತು ಎ.ಸಿ.3 ಟೈಯರ್ ಟಿಕೆಟ್ ದರವನ್ನು ಪ್ರತಿ ಕಿ.ಮೀ.ಗೆ 10 ಪೈಸೆ, ಎ.ಸಿ. 2 ಟೈಯರ್ ಟಿಕೆಟ್ ದರವನ್ನು ಪ್ರತಿ ಕಿ.ಮೀ.ಗೆ 15 ಪೈಸೆ, ಎ.ಸಿ. ಮೊದಲ ದರ್ಜೆ ಟಿಕೆಟ್ ದರವನ್ನು ಪ್ರತಿ ಕಿ.ಮೀ.ಗೆ 30 ಪೈಸೆಯಷ್ಟು ಹೆಚ್ಚಿಸಲಾಗಿದೆ.</p>.<p>ಫ್ಲಾಟ್ ಫಾರಂ ಟಿಕೆಟ್ ದರವನ್ನು 3 ರೂಗಳಿಂದ 5 ರೂಗಳಿಗೆ ಹೆಚ್ಚಿಸಲಾಗಿದೆ.</p>.<p><strong>ರೈಲ್ವೆ ಸುರಕ್ಷತಾ ಪ್ರಾಧಿಕಾರ :</strong> ಶೂನ್ಯ ಸಾವಿನ ಗುರಿಯನ್ನು ಹೊಂದಿದ್ದೇನೆ ಎಂದು ಹೇಳಿದ ತ್ರಿವೇದಿ ಸ್ವತಂತ್ರ ರೈಲ್ವೆ ಸುರಕ್ಷತಾ ಪ್ರಾಧಿಕಾರ ರಚಿಸಲು ಉದ್ದೇಶಿಸಲಾಗಿದೆ ಎಂದು ತಿಳಿಸಿದರು.</p>.<p><strong>ಮುಖ್ಯಾಂಶಗಳು; </strong></p>.<p>1. ಕಳೆದ 11ನೇ ಪಂಚವಾರ್ಷಿಕ ಯೋಜನೆಯ ಅವಧಿಯಲ್ಲಿ ರೈಲ್ವೆ ಇಲಾಖೆ 1.92 ಲಕ್ಷ ಕೋಟಿ ರೂಗಳನ್ನು ಹೂಡಿಕೆ ಮಾಡಿದ್ದರೆ 12ನೇ ಪಂಚವಾರ್ಷಿಕ ಯೋಜನೆಯ ಅವಧಿಯಲ್ಲಿ ಹೂಡಿಕೆ ಮಾಡುವ ಮೊತ್ತ 7.35 ಲಕ್ಷ ಕೋಟಿ ರೂಗಳು.</p>.<p>2. ಹಣಕಾಸು ಸಚಿವಾಲಯವು ರೈಲ್ವೆ ಆಧುನೀಕರಣ ಕಾಮಗಾರಿಗಳಿಗಾಗಿ ರೈಲ್ವೆ ಇಲಾಖೆಗೆ ಶೇ. 8.55ರ ಬಡ್ಡಿದರದಲ್ಲಿ 3 ಸಾವಿರ ಕೋಟಿ ರೂ ಸಾಲ ನೀಡಲು ಒಪ್ಪಿಗೆ ಸೂಚಿಸಿದೆ.</p>.<p>3. 2012-13ರ ಅವಧಿಯಲ್ಲಿ 85 ಹೊಸ ಮಾರ್ಗಗಳ ಯೋಜನೆಯನ್ನು ಕೈಗೆತ್ತಿಕೊಳ್ಳುವುದು ಇದಕ್ಕಾಗಿ 6870 ಕೋಟಿ ರೂಗಳನ್ನು ಹೂಡಿಕೆ ಮಾಡುವುದು. 114 ಹೊಸ ಮಾರ್ಗಗಳ ಸರ್ವೇಕ್ಷಣೆ ಕಾರ್ಯವನ್ನು ಪ್ರಸಕ್ತ ಸಾಲಿನಲ್ಲಿ ಪೂರ್ಣಗೊಳಿಸಲಾಗುವುದು.</p>.<p>4. 800 ಕಿಲೋಮೀಟರ್ ಉದ್ದದ ಗೇಜ್ ಪರಿವರ್ತನೆಗಾಗಿ 1950 ಕೋಟಿ ರೂಗಳನ್ನು ಮೀಸಲಿಡಲಾಗಿದೆ.</p>.<p>5. 19 ಕಿಲೋಮೀಟರ್ ನಷ್ಟು ಸಿಗ್ನಲ್ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲಾಗುವುದು.</p>.<p>6. ರೈಲಿನ ವೇಗವನ್ನು ಗಂಟೆಗೆ 160 ಕಿಲೋ ಮೀಟರ್ ನಷ್ಟು ಹೆಚ್ಚಿಸುವುದು. ಈ ಮೂಲಕ ದೆಹಲಿ ಹಾಗೂ ಕೋಲ್ಕೋತ್ತಾ ನಡುವಣದ ಪ್ರಯಾಣದ ಅವಧಿಯನ್ನು 17 ಗಂಟೆಯಿಂದ 14 ಗಂಟೆಗೆ ತಗ್ಗಿಸಲಾಗುತ್ತದೆ ಎಂದು ತ್ರಿವೇದಿ ತಿಳಿಸಿದರು.</p>.<p>7. ಆಧುನೀಕರಣಕ್ಕೆ ಹೆಚ್ಚಿನ ಆಧ್ಯತೆ ನೀಡಿರುವುದರಿಂದ 2012-13ರ ಒಂದು ವರ್ಷದ ಅವಧಿಯಲ್ಲಿ ಒಂದು ಲಕ್ಷ ಹೊಸ ಉದ್ಯೋಗವಕಾಶಗಳು ಸೃಷ್ಟಿಯಾಗಲಿವೆ.</p>.<p>8. ಹೊಸದಾಗಿ 75 ಎಕ್ಸ್ ಪ್ರೆಸ್ ಪ್ರಯಾಣಿಕರ ರೈಲುಗಳನ್ನು ಆರಂಭಿಸಲಾಗುವುದು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>