<p><strong>ನರಸಿಂಹರಾಜಪುರ: </strong>ಸ್ವಾತಂತ್ರ್ಯ ಪೂರ್ವದಲ್ಲೇ ರೈಲ್ವೆ, ಸಾರಿಗೆ ಸೇರಿದಂತೆ ಆಧುನಿಕ ಸಾರಿಗೆ ಸೌಲಭ್ಯ ಹೊಂದಿದ್ದ, ಭತ್ತದ ಕಣಜವೆಂದು ಪ್ರಸಿದ್ಧಿ ಪಡೆದುಕೊಂಡಿದ್ದ ತಾಲ್ಲೂಕು ಕೇಂದ್ರವನ್ನು ಲೋಕೋಪಯೋಗಿ ಇಲಾಖೆ ಸಂಪೂರ್ಣವಾಗಿ ನಿರ್ಲಕ್ಷಿಸಿದೆ ಎಂಬ ಆರೋಪ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.<br /> <br /> ಪ್ರಮುಖವಾಗಿ ಜಿಲ್ಲಾ ಕೇಂದ್ರವಾದ ಚಿಕ್ಕಮಗಳೂರಿನಿಂದ ಹಾಗೂ ಪಕ್ಕದ ಜಿಲ್ಲೆಯಾದ ಶಿವಮೊಗ್ಗ ದಿಂದ ಬರುವಾಗ ರಸ್ತೆ ಬದಿಯಲ್ಲಿ ಅಳವಡಿಸಿರುವ ನಾಮಫಲಕದಲ್ಲಿ ಎನ್.ಆರ್.ಪುರದ ಹೆಸರು ಅಥವಾ ಅಲಲಿಗೆ ಇರುವ ದೂರವನ್ನು ನಮೂದಿಸದೆ ಲೋಕೋಪಯೋಗಿ ಇಲಾಖೆ ಪ್ರಮಾದ ಎಸಗಿದೆ ಎಂಬ ಆರೋಪ ವ್ಯಕ್ತವಾಗಿದೆ.<br /> <br /> ಶಿವಮೊಗ್ಗದಿಂದ ಪ್ರಮುಖ ಧಾರ್ಮಿಕ ಸ್ಥಳಗಳಾದ ಶೃಂಗೇರಿ, ಹೋರನಾಡು, ಕಳಸ, ರಂಭಾಪುರಿ ಪೀಠಗಳಿಗೆ ಹೋಗ ಬೇಕಾದರೆ ತಾಲ್ಲೂಕು ಕೇಂದ್ರದ ಮೂಲಕವೇ ಹಾದು ಹೋಗ ಬೇಕಾಗುತ್ತದೆ. ಈ ಎಲ್ಲ ಧಾರ್ಮಿಕ ಸ್ಥಳಗಳ ಬಗ್ಗೆ ಎಲ್ಲೆಡೆ ನಾಮ ಫಲಕ ಅಳವಡಿಸಿರುವ ಇಲಾಖೆ ತಾಲ್ಲೂಕು ಕೇಂದ್ರದ ಹೆಸರು ಕೈಬಿಟ್ಟಿದೆ. <br /> <br /> ತಾಲ್ಲೂಕು ಕೇಂದ್ರದಲ್ಲೂ ಜೈನರ ಧಾರ್ಮಿಕ ಕ್ಷೇತ್ರವಾದ ಸಿಂಹನಗದ್ದೆ ಬಸ್ತಿಮಠವಿದೆ. ಇಲ್ಲಿಗೆ ರಾಜ್ಯದ ಭಕ್ತರಲ್ಲದೆ ಹೊರ ರಾಜ್ಯದಿಂದಲೂ ಭಕ್ತರು ಆಗಮಿಸುತ್ತಾರೆ.<br /> <br /> ಇಟಾಲಿಯನ್ ಗೋಥಿಕ್ ಶೈಲಿಯಲ್ಲಿ ನಿರ್ಮಿಸಿರುವ, ಕರ್ನಾಟಕದಲ್ಲೇ ಅತಿ ದೊಡ್ಡ ರೋಮನ್ ಕ್ಯಾಥೋಲಿಕ್ ಪಂಗಡಕ್ಕೆ ಸೇರಿರುವ ಚರ್ಚ್ ಬಗ್ಗೆಯೂ ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ತಿಳಿದಿಲ್ಲವೇ ಎಂದು ಸಾರ್ವಜನಿಕರು ಪ್ರಶ್ನಿಸಿದ್ದಾರೆ. <br /> <br /> ಪ್ರಸ್ತುತ ವರ್ಷಗಳಲ್ಲಿ ರಬ್ಬರ್, ಶುಂಠಿ, ಬಾಳೆ ಮುಂತಾದ ವಾಣಿಜ್ಯ ಬೆಳೆಗಳನ್ನು ಅಧಿಕ ಪ್ರಮಾಣದಲ್ಲಿ ತಾಲ್ಲೂಕು ಕೇಂದ್ರದ ವ್ಯಾಪ್ತಿಯಲ್ಲಿ ಬೆಳೆಯಲಾಗುತ್ತಿದೆ. ರಾಜ್ಯದ ತಲಾ ಆದಾಯದಲ್ಲಿ 6ನೇ ಸ್ಥಾನ ಪಡೆದಿರುವ ಪ್ರಮುಖ ಸ್ಥಳವನ್ನು ಲೋಕೋಪಯೋಗಿ ಇಲಾಖೆ ಕಡೆಗಣಿಸಿರುವುದು ಸರಿಯಲ್ಲ ಎಂದು ಸಾರ್ವಜನಿಕರು ದೂರಿದ್ದಾರೆ.<br /> <br /> ಶಿವಮೊಗ್ಗದಿಂದ ಬರುವ ಮಾರ್ಗದ ಪಕ್ಕದಲ್ಲಿ ಇನ್ನು ಮುಂದೆ ಹೊಸದಾಗಿ ಹಾಕುವ ಮಾರ್ಗ ಸೂಚಿ ನಾಮಫಲಕದಲ್ಲಿ ತಾಲ್ಲೂಕು ಕೇಂದ್ರದ ಹೆಸರು ಹಾಗೂ ಪ್ರಮುಖ ಧಾರ್ಮಿಕ ಕೇಂದ್ರದ ಹೆಸರನ್ನು ಸೇರಿಸಿ ಅಳವಡಿಸಲಾಗುವುದು ಎಂದು ಲೋಕೋಪಯೋಗಿ ಇಲಾಖೆ ಸಹಾಯಕ ಎಂಜಿನಿಯರ್ ಸುಬ್ರಹ್ಮಣ್ಯ ಪ್ರಜಾವಾಣಿಗೆ ತಿಳಿಸಿದರು. <br /> <br /> ಲೋಕೋಪಯೋಗಿ ಇಲಾಖೆಯಿಂದ ಆಗಿರುವ ದೋಷವನ್ನು ಸರಿಪಡಿಸುವತ್ತ ಜಿಲ್ಲಾಡಳಿತ, ಜನಪ್ರತಿನಿಧಿಗಳು ಹಾಗೂ ಪ್ರವಾಸೋಧ್ಯಮ ಇಲಾಖೆ ಸರಿಪಡಿಸುವತ್ತ ಶೀಘ್ರ ಪ್ರಯತ್ನಿಸಲಿ ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನರಸಿಂಹರಾಜಪುರ: </strong>ಸ್ವಾತಂತ್ರ್ಯ ಪೂರ್ವದಲ್ಲೇ ರೈಲ್ವೆ, ಸಾರಿಗೆ ಸೇರಿದಂತೆ ಆಧುನಿಕ ಸಾರಿಗೆ ಸೌಲಭ್ಯ ಹೊಂದಿದ್ದ, ಭತ್ತದ ಕಣಜವೆಂದು ಪ್ರಸಿದ್ಧಿ ಪಡೆದುಕೊಂಡಿದ್ದ ತಾಲ್ಲೂಕು ಕೇಂದ್ರವನ್ನು ಲೋಕೋಪಯೋಗಿ ಇಲಾಖೆ ಸಂಪೂರ್ಣವಾಗಿ ನಿರ್ಲಕ್ಷಿಸಿದೆ ಎಂಬ ಆರೋಪ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.<br /> <br /> ಪ್ರಮುಖವಾಗಿ ಜಿಲ್ಲಾ ಕೇಂದ್ರವಾದ ಚಿಕ್ಕಮಗಳೂರಿನಿಂದ ಹಾಗೂ ಪಕ್ಕದ ಜಿಲ್ಲೆಯಾದ ಶಿವಮೊಗ್ಗ ದಿಂದ ಬರುವಾಗ ರಸ್ತೆ ಬದಿಯಲ್ಲಿ ಅಳವಡಿಸಿರುವ ನಾಮಫಲಕದಲ್ಲಿ ಎನ್.ಆರ್.ಪುರದ ಹೆಸರು ಅಥವಾ ಅಲಲಿಗೆ ಇರುವ ದೂರವನ್ನು ನಮೂದಿಸದೆ ಲೋಕೋಪಯೋಗಿ ಇಲಾಖೆ ಪ್ರಮಾದ ಎಸಗಿದೆ ಎಂಬ ಆರೋಪ ವ್ಯಕ್ತವಾಗಿದೆ.<br /> <br /> ಶಿವಮೊಗ್ಗದಿಂದ ಪ್ರಮುಖ ಧಾರ್ಮಿಕ ಸ್ಥಳಗಳಾದ ಶೃಂಗೇರಿ, ಹೋರನಾಡು, ಕಳಸ, ರಂಭಾಪುರಿ ಪೀಠಗಳಿಗೆ ಹೋಗ ಬೇಕಾದರೆ ತಾಲ್ಲೂಕು ಕೇಂದ್ರದ ಮೂಲಕವೇ ಹಾದು ಹೋಗ ಬೇಕಾಗುತ್ತದೆ. ಈ ಎಲ್ಲ ಧಾರ್ಮಿಕ ಸ್ಥಳಗಳ ಬಗ್ಗೆ ಎಲ್ಲೆಡೆ ನಾಮ ಫಲಕ ಅಳವಡಿಸಿರುವ ಇಲಾಖೆ ತಾಲ್ಲೂಕು ಕೇಂದ್ರದ ಹೆಸರು ಕೈಬಿಟ್ಟಿದೆ. <br /> <br /> ತಾಲ್ಲೂಕು ಕೇಂದ್ರದಲ್ಲೂ ಜೈನರ ಧಾರ್ಮಿಕ ಕ್ಷೇತ್ರವಾದ ಸಿಂಹನಗದ್ದೆ ಬಸ್ತಿಮಠವಿದೆ. ಇಲ್ಲಿಗೆ ರಾಜ್ಯದ ಭಕ್ತರಲ್ಲದೆ ಹೊರ ರಾಜ್ಯದಿಂದಲೂ ಭಕ್ತರು ಆಗಮಿಸುತ್ತಾರೆ.<br /> <br /> ಇಟಾಲಿಯನ್ ಗೋಥಿಕ್ ಶೈಲಿಯಲ್ಲಿ ನಿರ್ಮಿಸಿರುವ, ಕರ್ನಾಟಕದಲ್ಲೇ ಅತಿ ದೊಡ್ಡ ರೋಮನ್ ಕ್ಯಾಥೋಲಿಕ್ ಪಂಗಡಕ್ಕೆ ಸೇರಿರುವ ಚರ್ಚ್ ಬಗ್ಗೆಯೂ ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ತಿಳಿದಿಲ್ಲವೇ ಎಂದು ಸಾರ್ವಜನಿಕರು ಪ್ರಶ್ನಿಸಿದ್ದಾರೆ. <br /> <br /> ಪ್ರಸ್ತುತ ವರ್ಷಗಳಲ್ಲಿ ರಬ್ಬರ್, ಶುಂಠಿ, ಬಾಳೆ ಮುಂತಾದ ವಾಣಿಜ್ಯ ಬೆಳೆಗಳನ್ನು ಅಧಿಕ ಪ್ರಮಾಣದಲ್ಲಿ ತಾಲ್ಲೂಕು ಕೇಂದ್ರದ ವ್ಯಾಪ್ತಿಯಲ್ಲಿ ಬೆಳೆಯಲಾಗುತ್ತಿದೆ. ರಾಜ್ಯದ ತಲಾ ಆದಾಯದಲ್ಲಿ 6ನೇ ಸ್ಥಾನ ಪಡೆದಿರುವ ಪ್ರಮುಖ ಸ್ಥಳವನ್ನು ಲೋಕೋಪಯೋಗಿ ಇಲಾಖೆ ಕಡೆಗಣಿಸಿರುವುದು ಸರಿಯಲ್ಲ ಎಂದು ಸಾರ್ವಜನಿಕರು ದೂರಿದ್ದಾರೆ.<br /> <br /> ಶಿವಮೊಗ್ಗದಿಂದ ಬರುವ ಮಾರ್ಗದ ಪಕ್ಕದಲ್ಲಿ ಇನ್ನು ಮುಂದೆ ಹೊಸದಾಗಿ ಹಾಕುವ ಮಾರ್ಗ ಸೂಚಿ ನಾಮಫಲಕದಲ್ಲಿ ತಾಲ್ಲೂಕು ಕೇಂದ್ರದ ಹೆಸರು ಹಾಗೂ ಪ್ರಮುಖ ಧಾರ್ಮಿಕ ಕೇಂದ್ರದ ಹೆಸರನ್ನು ಸೇರಿಸಿ ಅಳವಡಿಸಲಾಗುವುದು ಎಂದು ಲೋಕೋಪಯೋಗಿ ಇಲಾಖೆ ಸಹಾಯಕ ಎಂಜಿನಿಯರ್ ಸುಬ್ರಹ್ಮಣ್ಯ ಪ್ರಜಾವಾಣಿಗೆ ತಿಳಿಸಿದರು. <br /> <br /> ಲೋಕೋಪಯೋಗಿ ಇಲಾಖೆಯಿಂದ ಆಗಿರುವ ದೋಷವನ್ನು ಸರಿಪಡಿಸುವತ್ತ ಜಿಲ್ಲಾಡಳಿತ, ಜನಪ್ರತಿನಿಧಿಗಳು ಹಾಗೂ ಪ್ರವಾಸೋಧ್ಯಮ ಇಲಾಖೆ ಸರಿಪಡಿಸುವತ್ತ ಶೀಘ್ರ ಪ್ರಯತ್ನಿಸಲಿ ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>