<p>ಪುರಾಣ ಕಥೆಗಳ ಸಾರವನ್ನು ಚಿತ್ರಗಳಲ್ಲಿ ಪಡಿಮೂಡಿಸಿ, ಆ ಮೂಲಕ ಅದರ ಮಹತ್ವವನ್ನು ತಿಳಿಸಲು ಹೊರಟವರು ದಿನೇಶ್ ಮಗರ್. ಹಿತ್ತಾಳೆಯ ಹಾಳೆಗಳನ್ನು ಮಾಧ್ಯಮವಾಗಿಟ್ಟುಕೊಂಡು ಅವರು ರಚಿಸಿರುವ ಕಲಾಕೃತಿಗಳು ಭೂತ ಹಾಗೂ ವರ್ತಮಾನ ಕಾಲಗಳ ಅನನ್ಯ ಸಮ್ಮಿಶ್ರಣ ಎಂಬಂತೆ ಭಾಸವಾಗುತ್ತದೆ.<br /> <br /> ಪುರಾಣದ ಶಾಸ್ತ್ರ, ಸಂಕೇತಗಳು ಚಿತ್ರದಲ್ಲಿ ವ್ಯಕ್ತವಾಗುವಂತೆ ಮಾಡಿರುವ ಅವರ ಪ್ರಯೋಗ ನೋಡುಗರ ಗಮನ ಸೆಳೆಯುತ್ತವೆ. ಕಲಾಕೃತಿಗಳ ಪ್ರದರ್ಶನಕ್ಕೆ ‘ಮಿಥಿಸಿಸಮ್’ ಎಂಬ ಅನ್ವರ್ಥ ಹೆಸರನ್ನೇ ಇರಿಸಿದ್ದಾರೆ. ಹಿತ್ತಾಳೆ ಹಾಗೂ ಚಿನ್ನದ ಫಲಕಗಳನ್ನು ಜೋಡಿಸಿ ಹರಳುಗಳೊಂದಿಗೆ ಚಿತ್ರ ಹಾಗೂ ಶಿಲ್ಪಕಲಾಕೃತಿಗಳನ್ನು ರೂಪಿಸಿದ್ದಾರೆ.<br /> <br /> ಕಮಲದ ಹೂಗಳು, ಅಡಿಕೆ– ಎಲೆ, ಶಂಖ, ಮೀನು ಇತ್ಯಾದಿ ವಸ್ತುಗಳು ಇವರ ಚಿತ್ರಗಳಲ್ಲಿ ಎದ್ದು ಕಾಣುತ್ತವೆ. ಸ್ವರೋವ್ಸ್ಕಿ ಅಂಶ ಹಾಗೂ ಚಿನ್ನದ ಫಲಕಗಳನ್ನು ಹೊಂದಿರುವ ಈ ಕಲಾಕೃತಿಗಳು ತಂಜಾವೂರು ಶೈಲಿಯನ್ನು ಹೋಲುತ್ತವೆ.<br /> <br /> ರಕ್ಷಕನಾಗಿರುವ ವಿಷ್ಣುವಿನ ಅವತಾರವನ್ನು ಪ್ರತಿಮಾ ಶಾಸ್ತ್ರಕ್ಕೆ ಅನುಗುಣವಾಗಿ ಚಿತ್ರಿಸಿರುವುದು ಇವರ ವೈಶಿಷ್ಟ್ಯ. ವಿಷ್ಣುವಿನ ಬಹು ಅವತಾರಗಳು ಹಾಗೂ ಸಂಕೇತಗಳನ್ನು ಇವರ ಚಿತ್ರಗಳು ಪ್ರತಿಬಿಂಬಿಸುತ್ತವೆ.<br /> <br /> <strong>ಪ್ರದರ್ಶನದ ವಿವರ</strong><br /> ಸ್ಥಳ: ಚಿತ್ರಕಲಾ ಪರಿಷತ್<br /> ಸಮಯ: ಬೆಳಿಗ್ಗೆ 10 ರಿಂದ ಸಂಜೆ 7<br /> ನಾಳೆ (ಆ.7) ಕೊನೆಯ ದಿನ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಪುರಾಣ ಕಥೆಗಳ ಸಾರವನ್ನು ಚಿತ್ರಗಳಲ್ಲಿ ಪಡಿಮೂಡಿಸಿ, ಆ ಮೂಲಕ ಅದರ ಮಹತ್ವವನ್ನು ತಿಳಿಸಲು ಹೊರಟವರು ದಿನೇಶ್ ಮಗರ್. ಹಿತ್ತಾಳೆಯ ಹಾಳೆಗಳನ್ನು ಮಾಧ್ಯಮವಾಗಿಟ್ಟುಕೊಂಡು ಅವರು ರಚಿಸಿರುವ ಕಲಾಕೃತಿಗಳು ಭೂತ ಹಾಗೂ ವರ್ತಮಾನ ಕಾಲಗಳ ಅನನ್ಯ ಸಮ್ಮಿಶ್ರಣ ಎಂಬಂತೆ ಭಾಸವಾಗುತ್ತದೆ.<br /> <br /> ಪುರಾಣದ ಶಾಸ್ತ್ರ, ಸಂಕೇತಗಳು ಚಿತ್ರದಲ್ಲಿ ವ್ಯಕ್ತವಾಗುವಂತೆ ಮಾಡಿರುವ ಅವರ ಪ್ರಯೋಗ ನೋಡುಗರ ಗಮನ ಸೆಳೆಯುತ್ತವೆ. ಕಲಾಕೃತಿಗಳ ಪ್ರದರ್ಶನಕ್ಕೆ ‘ಮಿಥಿಸಿಸಮ್’ ಎಂಬ ಅನ್ವರ್ಥ ಹೆಸರನ್ನೇ ಇರಿಸಿದ್ದಾರೆ. ಹಿತ್ತಾಳೆ ಹಾಗೂ ಚಿನ್ನದ ಫಲಕಗಳನ್ನು ಜೋಡಿಸಿ ಹರಳುಗಳೊಂದಿಗೆ ಚಿತ್ರ ಹಾಗೂ ಶಿಲ್ಪಕಲಾಕೃತಿಗಳನ್ನು ರೂಪಿಸಿದ್ದಾರೆ.<br /> <br /> ಕಮಲದ ಹೂಗಳು, ಅಡಿಕೆ– ಎಲೆ, ಶಂಖ, ಮೀನು ಇತ್ಯಾದಿ ವಸ್ತುಗಳು ಇವರ ಚಿತ್ರಗಳಲ್ಲಿ ಎದ್ದು ಕಾಣುತ್ತವೆ. ಸ್ವರೋವ್ಸ್ಕಿ ಅಂಶ ಹಾಗೂ ಚಿನ್ನದ ಫಲಕಗಳನ್ನು ಹೊಂದಿರುವ ಈ ಕಲಾಕೃತಿಗಳು ತಂಜಾವೂರು ಶೈಲಿಯನ್ನು ಹೋಲುತ್ತವೆ.<br /> <br /> ರಕ್ಷಕನಾಗಿರುವ ವಿಷ್ಣುವಿನ ಅವತಾರವನ್ನು ಪ್ರತಿಮಾ ಶಾಸ್ತ್ರಕ್ಕೆ ಅನುಗುಣವಾಗಿ ಚಿತ್ರಿಸಿರುವುದು ಇವರ ವೈಶಿಷ್ಟ್ಯ. ವಿಷ್ಣುವಿನ ಬಹು ಅವತಾರಗಳು ಹಾಗೂ ಸಂಕೇತಗಳನ್ನು ಇವರ ಚಿತ್ರಗಳು ಪ್ರತಿಬಿಂಬಿಸುತ್ತವೆ.<br /> <br /> <strong>ಪ್ರದರ್ಶನದ ವಿವರ</strong><br /> ಸ್ಥಳ: ಚಿತ್ರಕಲಾ ಪರಿಷತ್<br /> ಸಮಯ: ಬೆಳಿಗ್ಗೆ 10 ರಿಂದ ಸಂಜೆ 7<br /> ನಾಳೆ (ಆ.7) ಕೊನೆಯ ದಿನ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>