<p>ಶುಭಾ ಧನಂಜಯ ನರ್ತಕಿ (ಭರತನಾಟ್ಯ, ಕಥಕ್), ಬೋಧಕಿಯಾಗಿ ಕಲಾಕ್ಷೇತ್ರದಲ್ಲಿ ಸುಪರಿಚಿತರು. ತಮ್ಮ `ನಾಟ್ಯಾಂತರಂಗ~ ಶಾಲೆಯ ಮೂಲಕ ನೂರಾರು ಆಸಕ್ತರಿಗೆ ನೃತ್ಯ ಶಿಕ್ಷಣ ನೀಡುತ್ತಿದ್ದಾರೆ. ನೃತ್ಯವಲ್ಲದೆ ಗಾಯನ, ವಾದ್ಯ ಸಂಗೀತ, ಯೋಗ ಮುಂತಾದ ತರಗತಿಗಳನ್ನು ನಡೆಸುತ್ತಿದ್ದಾರೆ. ಅವರ ಪತಿ ಕೆ. ಧನಂಜಯ ಅವರೂ ಶ್ರಮ ವಹಿಸಿ ಶಾಲೆಯ ಬೆಳವಣಿಗೆಯಲ್ಲಿ ನೆರವಾಗುತ್ತಿದ್ದಾರೆ. <br /> <br /> ಶಾಲೆ 25 ಸಂವತ್ಸರಗಳನ್ನು ದಾಟುತ್ತಿರುವ ಸಂದರ್ಭದಲ್ಲಿ ಬೆಳ್ಳಿ ಹಬ್ಬದ ಸಡಗರಕ್ಕೆ `ನೃತ್ಯ ಭಾರತ~ ಎಂಬ ನೃತ್ಯೋತ್ಸವವನ್ನು ಏರ್ಪಡಿಸಿದ್ದರು. ಉತ್ಸವದಲ್ಲಿ ಭರತನಾಟ್ಯವಲ್ಲದೆ ಒಡಿಸ್ಸಿ, ಕೂಚುಪುಡಿ, ಕಥಕ್, ಕಲರಿಪಯಟ್ಟು, ಕಥಕ್ಕಳಿ ನೃತ್ಯ ಪ್ರಕಾರಗಳಲ್ಲದೆ ಸಂಗೀತ, ಉಪನ್ಯಾಸ, ಪ್ರಾತ್ಯಕ್ಷಿಕೆಗಳನ್ನೂ ಏರ್ಪಡಿಸಿದ್ದು ಉತ್ಸವದ ಬೆಡಗನ್ನು ವರ್ಧಿಸಿತು.<br /> <br /> ಕಳೆದ ಮಂಗಳವಾರ ಸಂಜೆ ಪ್ರಾರಂಭಕ್ಕೆ ನೃತ್ಯ ಸ್ಪರ್ಧೆಯಲ್ಲಿ ಗೆದ್ದ ಬಹುಮಾನ ವಿಜೇತರಿಂದ ಭರತನಾಟ್ಯ ನಡೆಯಿತು. `ಕರ್ನಾಟಕದಲ್ಲಿ ಮಾರ್ಗಿ-ದೇಸೀ ನೃತ್ಯಗಳು~ ಕುರಿತು ಪ್ರಾತ್ಯಕ್ಷಿಕೆ ನೀಡಿದ ಡಾ. ಕರುಣಾ ವಿಜಯೇಂದ್ರ ಉಪಯುಕ್ತ ಮಾಹಿತಿ ನೀಡಿದರು.<br /> <br /> ಉದಯೋನ್ಮುಖ ಕಲಾವಿದರಲ್ಲಿ ಪ್ರತೀಕ್ಷಾ ಕಾಶಿ ಈಗಾಗಲೇ ಹೆಸರು ಮಾಡುತ್ತಿರುವವರು. ಪ್ರಾರಂಭದ ತರಂಗದಲ್ಲಿ ತಟ್ಟೆಯ ಮೇಲೆ ನಿಂತು ವಿವಿಧ ಜತಿಗಳಿಗೆ ನರ್ತಿಸಿದರು. ಆದರೆ ಅದು ಬಹು ಸಂಕ್ಷಿಪ್ತವಾಗಿತ್ತು. ರಾಗಮಾಲಿಕೆಯಲ್ಲಿ ಭೈರವಿ ಸಹ ನರ್ತಿಸಿದರು. ಸುಲಲಿತವಾಗಿ ಕೂಚುಪುಡಿ ಮಾಡಿದ ಪ್ರತೀಕ್ಷಾ ಕಾಶಿಗೆ ಉತ್ತಮ ಭವಿಷ್ಯವಿದೆ.<br /> <br /> ನಂತರ ಯುಗಳ ನೃತ್ಯದಲ್ಲಿ ಮೈಸೂರಿನ ಬದರೀ ದಿವ್ಯಾಭೂಷಣ ಮತ್ತು ಅಂಜನಾ ಭೂಷಣ ಭರತನಾಟ್ಯ ಮಾಡಿದರು. ಶ್ರಿರಂಜಿನಿ ರಾಗದಲ್ಲಿ `ಗಜವದನಾ ಕರುಣಾ ಸದನ~ದಿಂದ ಪ್ರಾರಂಭಿಸಿ, ಕಮಾಚ್ ರಾಗದ `ಬ್ರೋಚೇವಾರೆವರುರಾ~ ಆಯ್ದರು. <br /> <br /> ಸುಲಲಿತವಾಗಿ ನರ್ತಿಸಿದರೂ ಸುಭಗವಾಗಿಯೇನೂ ಇರಲಿಲ್ಲ! ಇಬ್ಬರೂ ತೂಕ ತಗ್ಗಿಸಿಕೊಳ್ಳುವುದು ಒಳ್ಳೆಯದು. ಅಲ್ಲದೆ ಮುಖಭಾವ ಹೊಮ್ಮಲು ಭೂಷಣರ ಮೀಸೆ ಬೇರೆ ಅಡ್ಡಿಯಾಗುತ್ತಿತ್ತು. ಪ್ರೌಢ ಶಿಕ್ಷಣ, ಸಾಧನೆಗಳಿಂದ ದಂಪತಿ ನೃತ್ಯಕ್ಕೆ ಪ್ರೌಢತೆ ಬಂದು, ಪರಿಣಾಮ ಗಾಢವಾಗಬಹುದು.<br /> <br /> ಮುಂದೆ ಕೂಚುಪುಡಿ ಮಾಡಿದ ಕೊಚಿನ್ನ ಅನುಪಮ ಮೋಹನ್ ತಂಡದವರು ಜನಪ್ರಿಯ `ಶ್ರಿಕೃಷ್ಣ ಪಾರಿಜಾತ~ವನ್ನು ಅಭಿನಯಿಸಿದರು. ರುಕ್ಮಿಣಿ, ಸತ್ಯಭಾಮೆ, ಶ್ರಿಕೃಷ್ಣ ಹಾಗೂ ನಾರದ ಪಾತ್ರಧಾರಿಗಳು ಹಾಡುತ್ತಾ, ನರ್ತಿಸುತ್ತಾ ಅಭಿನಯಿಸುತ್ತಾ ಕ್ಷಿಪ್ರಗತಿಯಲ್ಲಿ ಸಾಗಿದರು. ಗಾಢ ಪ್ರಭಾವದ ಹಿನ್ನೆಲೆ ಸಂಗೀತ, ಮಧ್ಯೆ ಮಧ್ಯೆ ಸ್ವಾರಸ್ಯಕರ ಸಂಭಾಷಣೆಗಳು ಮೇಳೈಸಿದವು. ನೃತ್ಯಭಾಗಕ್ಕಿಂತ ನಾಟಕವೇ ಮುಂದಾಗಿತ್ತು. <br /> <br /> ಸಂಗೀತದ ಅಬ್ಬರ ತಗ್ಗಿಸಿದ್ದರೆ ಪರಿಣಾಮ ಆಹ್ಲಾದಕರವಾಗಿರುತ್ತಿತ್ತು. ನೃತ್ಯ ಭಾರತದ ಕಲ್ಪನೆ ವರ್ಣರಂಜಿತ. ನಾಲ್ಕಾರು ಶೈಲಿಯ ನೃತ್ಯಗಳು ಒಂದೇ ವೇದಿಕೆಯ ಮೇಲೆ ರಂಜಿಸಿದವು. ಆದರೆ ತಂಡಗಳ ಸಂಖ್ಯೆಯನ್ನು ಕಡಿಮೆ ಮಾಡಿ, ಪ್ರತಿ ತಂಡಕ್ಕೂ ಒಂದು ತಾಸಾದರೂ ಕಾಲಾವಧಿ ನೀಡಿದರೆ ಪ್ರದರ್ಶನಗಳು ಅರ್ಥಪೂರ್ಣವಾದೀತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಶುಭಾ ಧನಂಜಯ ನರ್ತಕಿ (ಭರತನಾಟ್ಯ, ಕಥಕ್), ಬೋಧಕಿಯಾಗಿ ಕಲಾಕ್ಷೇತ್ರದಲ್ಲಿ ಸುಪರಿಚಿತರು. ತಮ್ಮ `ನಾಟ್ಯಾಂತರಂಗ~ ಶಾಲೆಯ ಮೂಲಕ ನೂರಾರು ಆಸಕ್ತರಿಗೆ ನೃತ್ಯ ಶಿಕ್ಷಣ ನೀಡುತ್ತಿದ್ದಾರೆ. ನೃತ್ಯವಲ್ಲದೆ ಗಾಯನ, ವಾದ್ಯ ಸಂಗೀತ, ಯೋಗ ಮುಂತಾದ ತರಗತಿಗಳನ್ನು ನಡೆಸುತ್ತಿದ್ದಾರೆ. ಅವರ ಪತಿ ಕೆ. ಧನಂಜಯ ಅವರೂ ಶ್ರಮ ವಹಿಸಿ ಶಾಲೆಯ ಬೆಳವಣಿಗೆಯಲ್ಲಿ ನೆರವಾಗುತ್ತಿದ್ದಾರೆ. <br /> <br /> ಶಾಲೆ 25 ಸಂವತ್ಸರಗಳನ್ನು ದಾಟುತ್ತಿರುವ ಸಂದರ್ಭದಲ್ಲಿ ಬೆಳ್ಳಿ ಹಬ್ಬದ ಸಡಗರಕ್ಕೆ `ನೃತ್ಯ ಭಾರತ~ ಎಂಬ ನೃತ್ಯೋತ್ಸವವನ್ನು ಏರ್ಪಡಿಸಿದ್ದರು. ಉತ್ಸವದಲ್ಲಿ ಭರತನಾಟ್ಯವಲ್ಲದೆ ಒಡಿಸ್ಸಿ, ಕೂಚುಪುಡಿ, ಕಥಕ್, ಕಲರಿಪಯಟ್ಟು, ಕಥಕ್ಕಳಿ ನೃತ್ಯ ಪ್ರಕಾರಗಳಲ್ಲದೆ ಸಂಗೀತ, ಉಪನ್ಯಾಸ, ಪ್ರಾತ್ಯಕ್ಷಿಕೆಗಳನ್ನೂ ಏರ್ಪಡಿಸಿದ್ದು ಉತ್ಸವದ ಬೆಡಗನ್ನು ವರ್ಧಿಸಿತು.<br /> <br /> ಕಳೆದ ಮಂಗಳವಾರ ಸಂಜೆ ಪ್ರಾರಂಭಕ್ಕೆ ನೃತ್ಯ ಸ್ಪರ್ಧೆಯಲ್ಲಿ ಗೆದ್ದ ಬಹುಮಾನ ವಿಜೇತರಿಂದ ಭರತನಾಟ್ಯ ನಡೆಯಿತು. `ಕರ್ನಾಟಕದಲ್ಲಿ ಮಾರ್ಗಿ-ದೇಸೀ ನೃತ್ಯಗಳು~ ಕುರಿತು ಪ್ರಾತ್ಯಕ್ಷಿಕೆ ನೀಡಿದ ಡಾ. ಕರುಣಾ ವಿಜಯೇಂದ್ರ ಉಪಯುಕ್ತ ಮಾಹಿತಿ ನೀಡಿದರು.<br /> <br /> ಉದಯೋನ್ಮುಖ ಕಲಾವಿದರಲ್ಲಿ ಪ್ರತೀಕ್ಷಾ ಕಾಶಿ ಈಗಾಗಲೇ ಹೆಸರು ಮಾಡುತ್ತಿರುವವರು. ಪ್ರಾರಂಭದ ತರಂಗದಲ್ಲಿ ತಟ್ಟೆಯ ಮೇಲೆ ನಿಂತು ವಿವಿಧ ಜತಿಗಳಿಗೆ ನರ್ತಿಸಿದರು. ಆದರೆ ಅದು ಬಹು ಸಂಕ್ಷಿಪ್ತವಾಗಿತ್ತು. ರಾಗಮಾಲಿಕೆಯಲ್ಲಿ ಭೈರವಿ ಸಹ ನರ್ತಿಸಿದರು. ಸುಲಲಿತವಾಗಿ ಕೂಚುಪುಡಿ ಮಾಡಿದ ಪ್ರತೀಕ್ಷಾ ಕಾಶಿಗೆ ಉತ್ತಮ ಭವಿಷ್ಯವಿದೆ.<br /> <br /> ನಂತರ ಯುಗಳ ನೃತ್ಯದಲ್ಲಿ ಮೈಸೂರಿನ ಬದರೀ ದಿವ್ಯಾಭೂಷಣ ಮತ್ತು ಅಂಜನಾ ಭೂಷಣ ಭರತನಾಟ್ಯ ಮಾಡಿದರು. ಶ್ರಿರಂಜಿನಿ ರಾಗದಲ್ಲಿ `ಗಜವದನಾ ಕರುಣಾ ಸದನ~ದಿಂದ ಪ್ರಾರಂಭಿಸಿ, ಕಮಾಚ್ ರಾಗದ `ಬ್ರೋಚೇವಾರೆವರುರಾ~ ಆಯ್ದರು. <br /> <br /> ಸುಲಲಿತವಾಗಿ ನರ್ತಿಸಿದರೂ ಸುಭಗವಾಗಿಯೇನೂ ಇರಲಿಲ್ಲ! ಇಬ್ಬರೂ ತೂಕ ತಗ್ಗಿಸಿಕೊಳ್ಳುವುದು ಒಳ್ಳೆಯದು. ಅಲ್ಲದೆ ಮುಖಭಾವ ಹೊಮ್ಮಲು ಭೂಷಣರ ಮೀಸೆ ಬೇರೆ ಅಡ್ಡಿಯಾಗುತ್ತಿತ್ತು. ಪ್ರೌಢ ಶಿಕ್ಷಣ, ಸಾಧನೆಗಳಿಂದ ದಂಪತಿ ನೃತ್ಯಕ್ಕೆ ಪ್ರೌಢತೆ ಬಂದು, ಪರಿಣಾಮ ಗಾಢವಾಗಬಹುದು.<br /> <br /> ಮುಂದೆ ಕೂಚುಪುಡಿ ಮಾಡಿದ ಕೊಚಿನ್ನ ಅನುಪಮ ಮೋಹನ್ ತಂಡದವರು ಜನಪ್ರಿಯ `ಶ್ರಿಕೃಷ್ಣ ಪಾರಿಜಾತ~ವನ್ನು ಅಭಿನಯಿಸಿದರು. ರುಕ್ಮಿಣಿ, ಸತ್ಯಭಾಮೆ, ಶ್ರಿಕೃಷ್ಣ ಹಾಗೂ ನಾರದ ಪಾತ್ರಧಾರಿಗಳು ಹಾಡುತ್ತಾ, ನರ್ತಿಸುತ್ತಾ ಅಭಿನಯಿಸುತ್ತಾ ಕ್ಷಿಪ್ರಗತಿಯಲ್ಲಿ ಸಾಗಿದರು. ಗಾಢ ಪ್ರಭಾವದ ಹಿನ್ನೆಲೆ ಸಂಗೀತ, ಮಧ್ಯೆ ಮಧ್ಯೆ ಸ್ವಾರಸ್ಯಕರ ಸಂಭಾಷಣೆಗಳು ಮೇಳೈಸಿದವು. ನೃತ್ಯಭಾಗಕ್ಕಿಂತ ನಾಟಕವೇ ಮುಂದಾಗಿತ್ತು. <br /> <br /> ಸಂಗೀತದ ಅಬ್ಬರ ತಗ್ಗಿಸಿದ್ದರೆ ಪರಿಣಾಮ ಆಹ್ಲಾದಕರವಾಗಿರುತ್ತಿತ್ತು. ನೃತ್ಯ ಭಾರತದ ಕಲ್ಪನೆ ವರ್ಣರಂಜಿತ. ನಾಲ್ಕಾರು ಶೈಲಿಯ ನೃತ್ಯಗಳು ಒಂದೇ ವೇದಿಕೆಯ ಮೇಲೆ ರಂಜಿಸಿದವು. ಆದರೆ ತಂಡಗಳ ಸಂಖ್ಯೆಯನ್ನು ಕಡಿಮೆ ಮಾಡಿ, ಪ್ರತಿ ತಂಡಕ್ಕೂ ಒಂದು ತಾಸಾದರೂ ಕಾಲಾವಧಿ ನೀಡಿದರೆ ಪ್ರದರ್ಶನಗಳು ಅರ್ಥಪೂರ್ಣವಾದೀತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>