<p><strong>ರಾಯಚೂರು: </strong>ಮಂತ್ರಾಲಯದಲ್ಲಿ ರಾಘವೇಂದ್ರಸ್ವಾಮಿಗಳ ವರ್ಧಂತಿ ಉತ್ಸವ ಶನಿವಾರ ನಡೆಯಿತು. ದೇಶದ ವಿವಿಧ ಭಾಗಗಳಿಂದ ಸಾವಿರಾರು ಭಕ್ತರು ಪಾಲ್ಗೊಂಡಿದ್ದರು.<br /> <br /> ವರ್ಧಂತಿ ಉತ್ಸವ ಅಂಗವಾಗಿ ಬೆಳಿಗ್ಗೆ ರಾಘವೇಂದ್ರಸ್ವಾಮಿ ಬೃಂದಾವನಕ್ಕೆ ನಡೆದ ಅಭಿಷೇಕ ಕಾರ್ಯಕ್ರಮದಲ್ಲಿ ಭಕ್ತರು ಪಾಲ್ಗೊಂಡಿದ್ದರು. ತಿರುಪತಿ ತಿರುಮಲ ದೇವಸ್ಥಾನದಿಂದ ವೆಂಕಟೇಶ್ವರ ಶೇಷವಸ್ತ್ರವನ್ನು ಟಿಟಿಡಿಯ ಪ್ರತಿನಿಧಿಗಳು ಮಂತ್ರಾಲಯ ಮಠಕ್ಕೆ ತಂದು ಅರ್ಪಣೆ ಮಾಡಿದರು.<br /> <br /> ಚೆನ್ನೈನ ಸಂಗೀತ ಕಲಾವಿದ ಗಣೇಶನ್ ನೇತೃತ್ವದ ಸಂಗೀತ ಕಲಾವಿದರ ತಂಡವು ‘ನಾದಹಾರಂ’ ಭಕ್ತಿ ಸಂಗೀತ ಸೇವೆ ಸಮರ್ಪಿಸಿದರು. ಏಕಕಾಲದಲ್ಲಿ ನೂರಾರು ಕಲಾವಿದರು ಸಂಗೀತ ಪ್ರಸ್ತುತಪಡಿಸಿದರು.<br /> <br /> ನಾದಹಾರಂ ಸಂಗೀತ ಕಲಾವಿದರ ತಂಡವು ಮಂತ್ರಾಲಯ ಮಠಕ್ಕೆ ₨12 ಲಕ್ಷ ಮೊತ್ತದ ಚೆಕ್ಅನ್ನು ಅರ್ಪಿಸಿದರು. ಅಲ್ಲದೇ 101 ತಳಿಯ ಗೋವುಗಳನ್ನು ರಾಘವೇಂದ್ರಸ್ವಾಮಿಮಠದ ಗೋಶಾಲೆಗೆ ಸಮರ್ಪಿಸಿದರು.<br /> <br /> ಪೀಠಾಧಿಪತಿಗಳು ಮಠವು ಭಕ್ತರ ದೇಣಿಗೆಯಲ್ಲಿ ಕೈಗೊಂಡ ಶಿಲಾಮಂಟಪ ನಿರ್ಮಾಣ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿದರು. ಅನಾರೋಗ್ಯದಲ್ಲಿರುವ ಪೀಠಾಧಿಪತಿಗಳು ಗುಣಮುಖರಾಗಲಿ ಎಂದು ಪ್ರಾರ್ಥಿಸಿ ಮಠದ ಉತ್ತರಾಧಿ ಕಾರಿ ಸುಬುಧೇಂದ್ರ ಸ್ವಾಮೀಜಿ ರಾಘವೇಂದ್ರಸ್ವಾಮಿ ಬೃಂದಾವನಕ್ಕೆ ಲಕ್ಷ ಪುಷ್ಪಾರ್ಚನೆ ಮಾಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ರಾಯಚೂರು: </strong>ಮಂತ್ರಾಲಯದಲ್ಲಿ ರಾಘವೇಂದ್ರಸ್ವಾಮಿಗಳ ವರ್ಧಂತಿ ಉತ್ಸವ ಶನಿವಾರ ನಡೆಯಿತು. ದೇಶದ ವಿವಿಧ ಭಾಗಗಳಿಂದ ಸಾವಿರಾರು ಭಕ್ತರು ಪಾಲ್ಗೊಂಡಿದ್ದರು.<br /> <br /> ವರ್ಧಂತಿ ಉತ್ಸವ ಅಂಗವಾಗಿ ಬೆಳಿಗ್ಗೆ ರಾಘವೇಂದ್ರಸ್ವಾಮಿ ಬೃಂದಾವನಕ್ಕೆ ನಡೆದ ಅಭಿಷೇಕ ಕಾರ್ಯಕ್ರಮದಲ್ಲಿ ಭಕ್ತರು ಪಾಲ್ಗೊಂಡಿದ್ದರು. ತಿರುಪತಿ ತಿರುಮಲ ದೇವಸ್ಥಾನದಿಂದ ವೆಂಕಟೇಶ್ವರ ಶೇಷವಸ್ತ್ರವನ್ನು ಟಿಟಿಡಿಯ ಪ್ರತಿನಿಧಿಗಳು ಮಂತ್ರಾಲಯ ಮಠಕ್ಕೆ ತಂದು ಅರ್ಪಣೆ ಮಾಡಿದರು.<br /> <br /> ಚೆನ್ನೈನ ಸಂಗೀತ ಕಲಾವಿದ ಗಣೇಶನ್ ನೇತೃತ್ವದ ಸಂಗೀತ ಕಲಾವಿದರ ತಂಡವು ‘ನಾದಹಾರಂ’ ಭಕ್ತಿ ಸಂಗೀತ ಸೇವೆ ಸಮರ್ಪಿಸಿದರು. ಏಕಕಾಲದಲ್ಲಿ ನೂರಾರು ಕಲಾವಿದರು ಸಂಗೀತ ಪ್ರಸ್ತುತಪಡಿಸಿದರು.<br /> <br /> ನಾದಹಾರಂ ಸಂಗೀತ ಕಲಾವಿದರ ತಂಡವು ಮಂತ್ರಾಲಯ ಮಠಕ್ಕೆ ₨12 ಲಕ್ಷ ಮೊತ್ತದ ಚೆಕ್ಅನ್ನು ಅರ್ಪಿಸಿದರು. ಅಲ್ಲದೇ 101 ತಳಿಯ ಗೋವುಗಳನ್ನು ರಾಘವೇಂದ್ರಸ್ವಾಮಿಮಠದ ಗೋಶಾಲೆಗೆ ಸಮರ್ಪಿಸಿದರು.<br /> <br /> ಪೀಠಾಧಿಪತಿಗಳು ಮಠವು ಭಕ್ತರ ದೇಣಿಗೆಯಲ್ಲಿ ಕೈಗೊಂಡ ಶಿಲಾಮಂಟಪ ನಿರ್ಮಾಣ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿದರು. ಅನಾರೋಗ್ಯದಲ್ಲಿರುವ ಪೀಠಾಧಿಪತಿಗಳು ಗುಣಮುಖರಾಗಲಿ ಎಂದು ಪ್ರಾರ್ಥಿಸಿ ಮಠದ ಉತ್ತರಾಧಿ ಕಾರಿ ಸುಬುಧೇಂದ್ರ ಸ್ವಾಮೀಜಿ ರಾಘವೇಂದ್ರಸ್ವಾಮಿ ಬೃಂದಾವನಕ್ಕೆ ಲಕ್ಷ ಪುಷ್ಪಾರ್ಚನೆ ಮಾಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>