<p><span style="font-size: 26px;"><strong>ಶಿವಮೊಗ್ಗ: </strong>ದುಷ್ಕೃತ್ಯ ನಡೆಸಲು ಭಯೋತ್ಪಾದಕರ ಮೊದಲ ಆಯ್ಕೆ ವಿಮಾನ ಅಪಹರಣ. ವಿಮಾನ ಅಪಹರಣ ಘಟನೆಗಳು ದೇಶದ ಭದ್ರತೆ ಹಾಗೂ ಪ್ರತಿಷ್ಠೆಗೆ ಸವಾಲು.</span><br /> <br /> ಅಮೆರಿಕಾದಂತಹ ದೇಶ ಸಹ ವಿಮಾನ ಅಪಹರಣದಿಂದ ಪಾರಾಗಲು ಸಾಧ್ಯವಾಗಿಲ್ಲ. 2001ರಲ್ಲಿ ವಿಮಾನ ಅಪಹರಿಸಿ, ವಿಶ್ವ ವಾಣಿಜ್ಯ ಕೇಂದ್ರದ ಮೇಲೆ ಭಯೋತ್ಪಾದಕರು ನಡೆಸಿದ ದಾಳಿ ಇಂದಿಗೂ ಜಗತ್ತನ್ನು ಕಾಡುತ್ತಿದೆ. ಅಂತಹ ಘಟನೆ ಮತ್ತೆ ಇನ್ನೆಂದೂ ನಡೆಯದಿರಲಿ ಎಂದು ಜನರು ಪ್ರಾರ್ಥಿಸುತ್ತಾರೆ.<br /> <br /> ವಿಮಾನಗಳನ್ನು ಭಯೋತ್ಪಾದಕರು ಅಪಹರಿಸದಂತೆ ತಡೆಯಲು ಎಂಜಿನಿಯರಿಂಗ್ ವಿದ್ಯಾರ್ಥಿಗಳು ಉಪಕರಣವೊಂದನ್ನು ಅಭಿವೃದ್ಧಿ ಪಡಿಸಿದ್ದಾರೆ. ಉಪಕರಣ ಅಳವಡಿಸಿದ್ದಲಿ ಭಯೋತ್ಪಾದಕರು ವಿಮಾನ ಅಪಹರಿಸುವುದಿರಲಿ, ಜೀವ ಉಳಿಸಿಕೊಂಡು, ತಪ್ಪಿಸಿಕೊಂಡು ಹೋಗಲು ಸಾಧ್ಯವಿಲ್ಲ.<br /> <br /> ನಗರದ ಜವಾಹರಲಾಲ್ ನೆಹರೂ ರಾಷ್ಟ್ರೀಯ ಎಂಜಿನಿಯರಿಂಗ್ ಕಾಲೇಜಿನ ಅಂತಿಮ ವರ್ಷದ ಎಲೆಕ್ಟ್ರಾನಿಕ್ ಮತ್ತು ಕಮ್ಯೂನಿಕೇಷನ್ ವಿಭಾಗದ ವಿದ್ಯಾರ್ಥಿಗಳಾದ ಬಿ.ಸಿ.ಶ್ರೀಧರ್, ಎ.ಎನ್.ನವೀನ್,ಎಸ್.ಡಿ.ಸಚಿನ್, ಎನ್.ಜಿ.ಭರತ್ ‘ Anty airocraft hyjack atomation technolgy’ ಎಂಬ ಉಪಕರಣ ತಯಾರಿಸಿದ್ದಾರೆ.<br /> <br /> ವಿಮಾನ ನಿಲ್ದಾಣ, ಮೆಟ್ರೋ ರೈಲು ನಿಲ್ದಾಣ, ಬಂದರು, ಹಡಗು, ಬ್ಯಾಂಕುಗಳು, ಚಿನ್ನಾಭರಣ ಅಂಗಡಿಗಳು ಹಾಗೂ ಉನ್ನತಮಟ್ಟದ ರಕ್ಷಣೆ ಬಳಸುವ ಪ್ರದೇಶಗಳಲ್ಲಿ ಈ ತಂತ್ರಾಜ್ಞಾನ ಆಧಾರಿತ ಉಪಕರಣ ಅಭಿವೃದ್ಧಿಪಡಿಸಿ, ಬಳಸಬಹುದಾಗಿದೆ. <br /> <br /> ಈ ಮೂಲಕ ಯಾವುದೇ ಪ್ರಾಣ ಹಾಗೂ ಹೆಚ್ಚಿನ ಆಸ್ತಿ ಹಾನಿ ಆಗದಂತೆ ತಡೆಯಬಹುದು. ಅದೂ ಕೂಡ ಹೆಚ್ಚಿನ ವೆಚ್ಚವಿಲ್ಲದೇ ನಿಖರವಾಗಿ ಕಾರ್ಯಾಚರಣೆ ಮಾಡಬಹುದು. ಜತೆಗೆ, ಇದು ಗರಿಷ್ಠ ಸುರಕ್ಷತೆ ಒದಗಿಸಲಿದೆ.<br /> <br /> <strong>ಏನಿದು ಉಪಕರಣ?</strong><br /> ‘Anty airocraft hyjack atomation technolgy’ ಒಂದು ಪ್ರೋಗ್ರಾಂ ಮಾಡಲಾಗಿರುವ ಕಂಪ್ಯೂಟರ್ ಆಧಾರಿತ ಕಾರ್ಯ ನಿರ್ವಹಣೆ ಮಾಡುವ ಉಪಕರಣ.<br /> <br /> ವಿಮಾನ ಸಾಮಾನ್ಯ ಸ್ಥಿತಿಯಲ್ಲಿದ್ದಾಗ ಅದರ ಲಕ್ಷಣಗಳು ಹೇಗೆ ಇರುತ್ತವೆ. ಸಾಮಾನ್ಯ ಸ್ಥಿತಿಯಲ್ಲಿ ವಿಮಾನದಲ್ಲಿ ಇರುವ ಶಬ್ದ, ತಾಪಮಾನ, ಪ್ರಯಾಣಿಕರ ಚಲನವಲನ, ಮಾತಿನ ಧಾಟಿ ಹಾಗೂ ಇತರ ಲಕ್ಷಣಗಳನ್ನು ಆಧರಿಸಿ ಪ್ರೋಗ್ರಾಂ ಸಿದ್ಧಪಡಿಸಲಾಗಿರುತ್ತದೆ.<br /> <br /> ವಿಮಾನ ಅಪಹರಣಕ್ಕೆ ಒಳಗಾದಾಗ ಯಾವ ರೀತಿಯ ಬದಲಾವಣೆಗಳು ಇರುತ್ತವೆ ಎಂಬ ವಿವರಗಳನ್ನೂ ಪ್ರೋಗ್ರಾಂನಲ್ಲಿ ಬರೆ ಯಲಾಗಿರುತ್ತದೆ. ಈ ಪ್ರೋಗಾಂ ಹೊಂದಿರುವ ಕಂಪ್ಯೂಟರ್ಗೆ ಎಚ್ಡಿ ಗುಣಮಟ್ಟದ ಯುಎಸ್ಬಿ ಕ್ಯಾಮೆರಾ ಅಳವಡಿಸಿ, ವಿಮಾನದ ಪ್ರತಿಯೊಂದು ಚಲನವಲನಗಳ ಮೇಲೆ ಹದ್ದಿನಕಣ್ಣಿಡಲಾಗುತ್ತದೆ.<br /> <br /> ವಿಮಾನ ಅಪಹರಿಸಲು ದುಷ್ಕರ್ಮಿಗಳು ಪ್ರಯತ್ನಿಸಿದಲ್ಲಿ ಅಥವಾ ವಿಮಾನದ ವಾತಾವರಣದಲ್ಲಿ ಬದಲಾವಣೆ ಉಂಟಾದಲ್ಲಿ ಕಂಪ್ಯೂಟರ್ ತಕ್ಷಣ ಗ್ರಹಿಸಿ, ಪ್ರೋಗ್ರಾಂನಲ್ಲಿ ಇರುವ ವಿಮಾನದ ಸಾಮಾನ್ಯ ಲಕ್ಷಣಕ್ಕೂ, ಅಪಹರಣಕ್ಕೆ ಒಳಗಾದಾಗ ಇರುವ ಲಕ್ಷಕ್ಕೂ ಕ್ಷಣಾರ್ಧದಲ್ಲಿ ತಾಳೆ ಹಾಕಿ, ವಿಮಾನ ಅಪಹರಣಕ್ಕೆ ಒಳಗಾಗಿದೆಯೇ ಎಂಬುದನ್ನು ನಿರ್ಧರಿಸುತ್ತದೆ.<br /> <br /> ಒಂದು ವೇಳೆ ವಿಮಾನ ಅಪಹರಣಕ್ಕೆ ಒಳಗಾಗಿದ್ದಲ್ಲಿ, ತಕ್ಷಣ ನಿಯಂತ್ರಣ ಕೊಠಡಿಗೆ ಎಚ್ಚರಿಕೆ ರವಾನಿಸುತ್ತದೆ. ಕಿಡಿಗೇಡಿಗಳಿಗೂ ಎಚ್ಚರಿಕೆ ನೀಡುತ್ತದೆ. ಇದನ್ನೂ ಮೀರಿ ದುಷ್ಕರ್ಮಿಗಳು ವಿಮಾನ ಅಪಹರಣಕ್ಕೆ ಪ್ರಯತ್ನಿಸಿದಲ್ಲಿ, ಕಿಡಿಗೇಡಿಗಳಿಗೇ ನೇರ ಗುರಿ ಇಟ್ಟು ಶೂಟ್ ಮಾಡುವಂತೆ ಪ್ರೋಗ್ರಾಂ ಮಾಡಲಾಗಿದೆ.<br /> <br /> ಈ ಉಪಕರಣದಲ್ಲಿ ಗನ್ ಬದಲಿಗೆ ಹೈವೋಲ್ಟೇಜ್ ವಿದ್ಯುತ್ ಶಾಕ್ ಕೊಡುವ, ಪ್ರಜ್ಞೆ ತಪ್ಪಿಸುವ ಇಂಜೆಕ್ಷನ್ ನೀಡಬಹುದಾದ ಆಯುಧಗಳನ್ನು ಬಳಸಬಹುದು. ಇದರ ನೆರವಿನಿಂದ ಕಿಡಿಗೇಡಿಗಳನ್ನು ಜೀವಂತವಾಗಿ ಹಿಡಿದು, ಹೆಚ್ಚಿನ ವಿಚಾರಣೆ ನಡೆಸಬಹುದು. ಮುಂದೆ ಆಗುವ ಅಪಾಯಗಳನ್ನೂ ತಡೆಯಬಹುದು.<br /> <br /> ಯಾವ ಸ್ಥಳದಲ್ಲಿ ಈ ಉಪಕರಣ ಅಳವಡಿಸುವ ಉದ್ದೇಶ ಇದೆಯೋ, ಆ ಸ್ಥಳದ ಲಕ್ಷಣಗಳನ್ನು ಆಧರಿಸಿ, ಪ್ರೋಗ್ರಾಂಗಳನ್ನು ಬರೆದು ಉಪಯೋಗಿಸಬಹುದು ಎಂದು ಮಾಹಿತಿ ನೀಡುತ್ತಾರೆ ಮಾರ್ಗದರ್ಶಕರಾದ ಪ್ರೊ.ಶರತ್ ಹಾಗೂ ಪ್ರೊ.ಅನಿಲ್. <br /> <br /> ಈ ಉಪಕರಣ ಅಭಿವೃದ್ಧಿಪಡಿಸಲು ಸುಮಾರು ರೂ 50 ಸಾವಿರ ಖರ್ಚು ತಗುಲುತ್ತದೆ. ಪ್ರೋಗ್ರಾಂ ಮತ್ತು ಕಂಪ್ಯೂಟರ್ನ ಸಾಮರ್ಥ್ಯ ಹಾಗೂ ಬಳಸಿಕೊಳ್ಳುವ ಆಯುಧದ ಆಧಾರದಲ್ಲಿ ವೆಚ್ಚ ಹೆಚ್ಚು ಕಡಿಮೆ ಆಗಲಿದೆ ಎನ್ನುತ್ತಾರೆ ವಿದ್ಯಾರ್ಥಿಗಳು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><span style="font-size: 26px;"><strong>ಶಿವಮೊಗ್ಗ: </strong>ದುಷ್ಕೃತ್ಯ ನಡೆಸಲು ಭಯೋತ್ಪಾದಕರ ಮೊದಲ ಆಯ್ಕೆ ವಿಮಾನ ಅಪಹರಣ. ವಿಮಾನ ಅಪಹರಣ ಘಟನೆಗಳು ದೇಶದ ಭದ್ರತೆ ಹಾಗೂ ಪ್ರತಿಷ್ಠೆಗೆ ಸವಾಲು.</span><br /> <br /> ಅಮೆರಿಕಾದಂತಹ ದೇಶ ಸಹ ವಿಮಾನ ಅಪಹರಣದಿಂದ ಪಾರಾಗಲು ಸಾಧ್ಯವಾಗಿಲ್ಲ. 2001ರಲ್ಲಿ ವಿಮಾನ ಅಪಹರಿಸಿ, ವಿಶ್ವ ವಾಣಿಜ್ಯ ಕೇಂದ್ರದ ಮೇಲೆ ಭಯೋತ್ಪಾದಕರು ನಡೆಸಿದ ದಾಳಿ ಇಂದಿಗೂ ಜಗತ್ತನ್ನು ಕಾಡುತ್ತಿದೆ. ಅಂತಹ ಘಟನೆ ಮತ್ತೆ ಇನ್ನೆಂದೂ ನಡೆಯದಿರಲಿ ಎಂದು ಜನರು ಪ್ರಾರ್ಥಿಸುತ್ತಾರೆ.<br /> <br /> ವಿಮಾನಗಳನ್ನು ಭಯೋತ್ಪಾದಕರು ಅಪಹರಿಸದಂತೆ ತಡೆಯಲು ಎಂಜಿನಿಯರಿಂಗ್ ವಿದ್ಯಾರ್ಥಿಗಳು ಉಪಕರಣವೊಂದನ್ನು ಅಭಿವೃದ್ಧಿ ಪಡಿಸಿದ್ದಾರೆ. ಉಪಕರಣ ಅಳವಡಿಸಿದ್ದಲಿ ಭಯೋತ್ಪಾದಕರು ವಿಮಾನ ಅಪಹರಿಸುವುದಿರಲಿ, ಜೀವ ಉಳಿಸಿಕೊಂಡು, ತಪ್ಪಿಸಿಕೊಂಡು ಹೋಗಲು ಸಾಧ್ಯವಿಲ್ಲ.<br /> <br /> ನಗರದ ಜವಾಹರಲಾಲ್ ನೆಹರೂ ರಾಷ್ಟ್ರೀಯ ಎಂಜಿನಿಯರಿಂಗ್ ಕಾಲೇಜಿನ ಅಂತಿಮ ವರ್ಷದ ಎಲೆಕ್ಟ್ರಾನಿಕ್ ಮತ್ತು ಕಮ್ಯೂನಿಕೇಷನ್ ವಿಭಾಗದ ವಿದ್ಯಾರ್ಥಿಗಳಾದ ಬಿ.ಸಿ.ಶ್ರೀಧರ್, ಎ.ಎನ್.ನವೀನ್,ಎಸ್.ಡಿ.ಸಚಿನ್, ಎನ್.ಜಿ.ಭರತ್ ‘ Anty airocraft hyjack atomation technolgy’ ಎಂಬ ಉಪಕರಣ ತಯಾರಿಸಿದ್ದಾರೆ.<br /> <br /> ವಿಮಾನ ನಿಲ್ದಾಣ, ಮೆಟ್ರೋ ರೈಲು ನಿಲ್ದಾಣ, ಬಂದರು, ಹಡಗು, ಬ್ಯಾಂಕುಗಳು, ಚಿನ್ನಾಭರಣ ಅಂಗಡಿಗಳು ಹಾಗೂ ಉನ್ನತಮಟ್ಟದ ರಕ್ಷಣೆ ಬಳಸುವ ಪ್ರದೇಶಗಳಲ್ಲಿ ಈ ತಂತ್ರಾಜ್ಞಾನ ಆಧಾರಿತ ಉಪಕರಣ ಅಭಿವೃದ್ಧಿಪಡಿಸಿ, ಬಳಸಬಹುದಾಗಿದೆ. <br /> <br /> ಈ ಮೂಲಕ ಯಾವುದೇ ಪ್ರಾಣ ಹಾಗೂ ಹೆಚ್ಚಿನ ಆಸ್ತಿ ಹಾನಿ ಆಗದಂತೆ ತಡೆಯಬಹುದು. ಅದೂ ಕೂಡ ಹೆಚ್ಚಿನ ವೆಚ್ಚವಿಲ್ಲದೇ ನಿಖರವಾಗಿ ಕಾರ್ಯಾಚರಣೆ ಮಾಡಬಹುದು. ಜತೆಗೆ, ಇದು ಗರಿಷ್ಠ ಸುರಕ್ಷತೆ ಒದಗಿಸಲಿದೆ.<br /> <br /> <strong>ಏನಿದು ಉಪಕರಣ?</strong><br /> ‘Anty airocraft hyjack atomation technolgy’ ಒಂದು ಪ್ರೋಗ್ರಾಂ ಮಾಡಲಾಗಿರುವ ಕಂಪ್ಯೂಟರ್ ಆಧಾರಿತ ಕಾರ್ಯ ನಿರ್ವಹಣೆ ಮಾಡುವ ಉಪಕರಣ.<br /> <br /> ವಿಮಾನ ಸಾಮಾನ್ಯ ಸ್ಥಿತಿಯಲ್ಲಿದ್ದಾಗ ಅದರ ಲಕ್ಷಣಗಳು ಹೇಗೆ ಇರುತ್ತವೆ. ಸಾಮಾನ್ಯ ಸ್ಥಿತಿಯಲ್ಲಿ ವಿಮಾನದಲ್ಲಿ ಇರುವ ಶಬ್ದ, ತಾಪಮಾನ, ಪ್ರಯಾಣಿಕರ ಚಲನವಲನ, ಮಾತಿನ ಧಾಟಿ ಹಾಗೂ ಇತರ ಲಕ್ಷಣಗಳನ್ನು ಆಧರಿಸಿ ಪ್ರೋಗ್ರಾಂ ಸಿದ್ಧಪಡಿಸಲಾಗಿರುತ್ತದೆ.<br /> <br /> ವಿಮಾನ ಅಪಹರಣಕ್ಕೆ ಒಳಗಾದಾಗ ಯಾವ ರೀತಿಯ ಬದಲಾವಣೆಗಳು ಇರುತ್ತವೆ ಎಂಬ ವಿವರಗಳನ್ನೂ ಪ್ರೋಗ್ರಾಂನಲ್ಲಿ ಬರೆ ಯಲಾಗಿರುತ್ತದೆ. ಈ ಪ್ರೋಗಾಂ ಹೊಂದಿರುವ ಕಂಪ್ಯೂಟರ್ಗೆ ಎಚ್ಡಿ ಗುಣಮಟ್ಟದ ಯುಎಸ್ಬಿ ಕ್ಯಾಮೆರಾ ಅಳವಡಿಸಿ, ವಿಮಾನದ ಪ್ರತಿಯೊಂದು ಚಲನವಲನಗಳ ಮೇಲೆ ಹದ್ದಿನಕಣ್ಣಿಡಲಾಗುತ್ತದೆ.<br /> <br /> ವಿಮಾನ ಅಪಹರಿಸಲು ದುಷ್ಕರ್ಮಿಗಳು ಪ್ರಯತ್ನಿಸಿದಲ್ಲಿ ಅಥವಾ ವಿಮಾನದ ವಾತಾವರಣದಲ್ಲಿ ಬದಲಾವಣೆ ಉಂಟಾದಲ್ಲಿ ಕಂಪ್ಯೂಟರ್ ತಕ್ಷಣ ಗ್ರಹಿಸಿ, ಪ್ರೋಗ್ರಾಂನಲ್ಲಿ ಇರುವ ವಿಮಾನದ ಸಾಮಾನ್ಯ ಲಕ್ಷಣಕ್ಕೂ, ಅಪಹರಣಕ್ಕೆ ಒಳಗಾದಾಗ ಇರುವ ಲಕ್ಷಕ್ಕೂ ಕ್ಷಣಾರ್ಧದಲ್ಲಿ ತಾಳೆ ಹಾಕಿ, ವಿಮಾನ ಅಪಹರಣಕ್ಕೆ ಒಳಗಾಗಿದೆಯೇ ಎಂಬುದನ್ನು ನಿರ್ಧರಿಸುತ್ತದೆ.<br /> <br /> ಒಂದು ವೇಳೆ ವಿಮಾನ ಅಪಹರಣಕ್ಕೆ ಒಳಗಾಗಿದ್ದಲ್ಲಿ, ತಕ್ಷಣ ನಿಯಂತ್ರಣ ಕೊಠಡಿಗೆ ಎಚ್ಚರಿಕೆ ರವಾನಿಸುತ್ತದೆ. ಕಿಡಿಗೇಡಿಗಳಿಗೂ ಎಚ್ಚರಿಕೆ ನೀಡುತ್ತದೆ. ಇದನ್ನೂ ಮೀರಿ ದುಷ್ಕರ್ಮಿಗಳು ವಿಮಾನ ಅಪಹರಣಕ್ಕೆ ಪ್ರಯತ್ನಿಸಿದಲ್ಲಿ, ಕಿಡಿಗೇಡಿಗಳಿಗೇ ನೇರ ಗುರಿ ಇಟ್ಟು ಶೂಟ್ ಮಾಡುವಂತೆ ಪ್ರೋಗ್ರಾಂ ಮಾಡಲಾಗಿದೆ.<br /> <br /> ಈ ಉಪಕರಣದಲ್ಲಿ ಗನ್ ಬದಲಿಗೆ ಹೈವೋಲ್ಟೇಜ್ ವಿದ್ಯುತ್ ಶಾಕ್ ಕೊಡುವ, ಪ್ರಜ್ಞೆ ತಪ್ಪಿಸುವ ಇಂಜೆಕ್ಷನ್ ನೀಡಬಹುದಾದ ಆಯುಧಗಳನ್ನು ಬಳಸಬಹುದು. ಇದರ ನೆರವಿನಿಂದ ಕಿಡಿಗೇಡಿಗಳನ್ನು ಜೀವಂತವಾಗಿ ಹಿಡಿದು, ಹೆಚ್ಚಿನ ವಿಚಾರಣೆ ನಡೆಸಬಹುದು. ಮುಂದೆ ಆಗುವ ಅಪಾಯಗಳನ್ನೂ ತಡೆಯಬಹುದು.<br /> <br /> ಯಾವ ಸ್ಥಳದಲ್ಲಿ ಈ ಉಪಕರಣ ಅಳವಡಿಸುವ ಉದ್ದೇಶ ಇದೆಯೋ, ಆ ಸ್ಥಳದ ಲಕ್ಷಣಗಳನ್ನು ಆಧರಿಸಿ, ಪ್ರೋಗ್ರಾಂಗಳನ್ನು ಬರೆದು ಉಪಯೋಗಿಸಬಹುದು ಎಂದು ಮಾಹಿತಿ ನೀಡುತ್ತಾರೆ ಮಾರ್ಗದರ್ಶಕರಾದ ಪ್ರೊ.ಶರತ್ ಹಾಗೂ ಪ್ರೊ.ಅನಿಲ್. <br /> <br /> ಈ ಉಪಕರಣ ಅಭಿವೃದ್ಧಿಪಡಿಸಲು ಸುಮಾರು ರೂ 50 ಸಾವಿರ ಖರ್ಚು ತಗುಲುತ್ತದೆ. ಪ್ರೋಗ್ರಾಂ ಮತ್ತು ಕಂಪ್ಯೂಟರ್ನ ಸಾಮರ್ಥ್ಯ ಹಾಗೂ ಬಳಸಿಕೊಳ್ಳುವ ಆಯುಧದ ಆಧಾರದಲ್ಲಿ ವೆಚ್ಚ ಹೆಚ್ಚು ಕಡಿಮೆ ಆಗಲಿದೆ ಎನ್ನುತ್ತಾರೆ ವಿದ್ಯಾರ್ಥಿಗಳು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>