<p><strong>ನವದೆಹಲಿ(ಪಿಟಿಐ):</strong>ಬೇಸಿಗೆಯ ರಜಾ ಕಾಲ ಈಗಷ್ಟೇ ಆರಂಭವಾಗಿದೆ. ಆದರೆ, ಆಗಲೇ ದೇಶದ ಬಹಳಷ್ಟು ವಿಮಾನಯಾನ ಸಂಸ್ಥೆಗಳು ಪ್ರಯಾಣಿಕರ ದಟ್ಟಣೆ ಇರುವ ಮಾರ್ಗದಲ್ಲಿನ ಪ್ರಯಾಣ ದರವನ್ನು ಶೇ. 10ರಿಂದ ಶೇ. 25ರವರೆಗೂ ಏರಿಸಿವೆ!<br /> <br /> ಆರ್ಥಿಕ ಸಂಕಷ್ಟದಲ್ಲಿರುವ ಕಿಂಗ್ಫಿಶರ್ ಏರ್ಲೈನ್ಸ್ನ ವಿಮಾನಗಳು ಸದ್ಯ ಸಂಚರಿಸದೇ ಇರುವ ಮಾರ್ಗಗಳಲ್ಲಿ ಪ್ರಯಾಣಿಕರ ಪ್ರಮಾಣ ಹೆಚ್ಚಾಗಿರುವುದೂ ದರ ಏರಿಕೆಗೆ ಒಂದು ಕಾರಣವಾಗಿದೆ. ಕಿಂಗ್ಫಿಶರ್ ಅನುಪಸ್ಥಿತಿಯನ್ನು ಇತರೆ ವಿಮಾನ ಯಾನ ಸಂಸ್ಥೆಗಳು ಲಾಭವಾಗಿ ಪರಿವರ್ತಿಸಿಕೊಂಡಿವೆ.<br /> <br /> ಭಾರಿ ಸಂಖ್ಯೆಯ ಪ್ರಯಾಣಿಕರು ಸಂಚರಿಸುವ ನವದೆಹಲಿ-ಮುಂಬೈ ಮಾರ್ಗದಲ್ಲಿನ ಎಕಾನಮಿ ದರ್ಜೆಯ (ಕಡೆ ಕ್ಷಣದ) ಮರುಪ್ರಯಾಣದ ದರ ಫೆಬ್ರುವರಿಯಲ್ಲಿ ರೂ. 9000ದಿಂದ 10,000ದಷ್ಟು ಇದ್ದುದು, ಈಗ ಕನಿಷ್ಠ ರೂ. 11,300ರಿಂದ ಗರಿಷ್ಠ ರೂ. 22,800ರವರೆಗೂ ಏರಿಕೆಯಾಗಿದೆ. ನವದೆಹಲಿ-ಬೆಂಗಳೂರು ಮಾರ್ಗದಲ್ಲಿ ರೂ. <br /> <br /> 12,000ದಿಂದ ರೂ. 15,500ರಷ್ಟು ಇದ್ದುದು ರೂ. 17,000ದಿಂದ ರೂ. 23,000ವರೆಗೂ ಏರಿಕೆಯಾಗಿದೆ. ಕಡೆ ಕ್ಷಣದಲ್ಲಿ ದಾವಂತದಿಂದ ಧಾವಿಸುವ ಪ್ರಯಾಣಿಕರಿಗೆ ಬಹುತೇಕ ಸಂಸ್ಥೆಗಳು `ಕೆಲವೇ ಟಿಕೆಟ್~ ಇರುವುದು ಎಂದು ಹೇಳಿ ಹೆಚ್ಚಿನ ದರ ಪಾವತಿಸುವಂತೆ ಮಾಡುತ್ತಿವೆ. ಈ ಅಂಶವನ್ನು ವಿವಿಧ ಟ್ರಾವೆಲ್ ಏಜೆಂಟರೂ ಖಚಿತಪಡಿಸಿದ್ದಾರೆ.<br /> <br /> ವಿಮಾನ ಪ್ರಯಾಣ ದರ ಪ್ರಮಾಣವನ್ನು ನಿಯಂತ್ರಿಸುವ `ನಾಗರಿಕ ವಿಮಾನಯಾನ ಮಹಾ ನಿರ್ದೇಶಕರ ಕಚೇರಿ~(ಡಿಜಿಸಿಎ) ಅಧಿಕಾರಿಗಳು ಮಾತ್ರ, `ಈಗಿನ ದರ ಏರಿಕೆ ಪ್ರಮಾಣವೇನೂ ವಿಮಾನಯಾನ ಸಂಸ್ಥೆಗಳು ಈ ಮೊದಲೇ ಸಲ್ಲಿಸಿದ ದರಪಟ್ಟಿ ಪ್ರಮಾಣಕ್ಕಿಂತ ಅಧಿಕವಾಗಿಯೇನೂ ಇಲ್ಲ~ ಎಂದು ಬುಧವಾರ ಸುದ್ದಿಸಂಸ್ಥೆಗೆ ಪ್ರತಿಕ್ರಿಯಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ(ಪಿಟಿಐ):</strong>ಬೇಸಿಗೆಯ ರಜಾ ಕಾಲ ಈಗಷ್ಟೇ ಆರಂಭವಾಗಿದೆ. ಆದರೆ, ಆಗಲೇ ದೇಶದ ಬಹಳಷ್ಟು ವಿಮಾನಯಾನ ಸಂಸ್ಥೆಗಳು ಪ್ರಯಾಣಿಕರ ದಟ್ಟಣೆ ಇರುವ ಮಾರ್ಗದಲ್ಲಿನ ಪ್ರಯಾಣ ದರವನ್ನು ಶೇ. 10ರಿಂದ ಶೇ. 25ರವರೆಗೂ ಏರಿಸಿವೆ!<br /> <br /> ಆರ್ಥಿಕ ಸಂಕಷ್ಟದಲ್ಲಿರುವ ಕಿಂಗ್ಫಿಶರ್ ಏರ್ಲೈನ್ಸ್ನ ವಿಮಾನಗಳು ಸದ್ಯ ಸಂಚರಿಸದೇ ಇರುವ ಮಾರ್ಗಗಳಲ್ಲಿ ಪ್ರಯಾಣಿಕರ ಪ್ರಮಾಣ ಹೆಚ್ಚಾಗಿರುವುದೂ ದರ ಏರಿಕೆಗೆ ಒಂದು ಕಾರಣವಾಗಿದೆ. ಕಿಂಗ್ಫಿಶರ್ ಅನುಪಸ್ಥಿತಿಯನ್ನು ಇತರೆ ವಿಮಾನ ಯಾನ ಸಂಸ್ಥೆಗಳು ಲಾಭವಾಗಿ ಪರಿವರ್ತಿಸಿಕೊಂಡಿವೆ.<br /> <br /> ಭಾರಿ ಸಂಖ್ಯೆಯ ಪ್ರಯಾಣಿಕರು ಸಂಚರಿಸುವ ನವದೆಹಲಿ-ಮುಂಬೈ ಮಾರ್ಗದಲ್ಲಿನ ಎಕಾನಮಿ ದರ್ಜೆಯ (ಕಡೆ ಕ್ಷಣದ) ಮರುಪ್ರಯಾಣದ ದರ ಫೆಬ್ರುವರಿಯಲ್ಲಿ ರೂ. 9000ದಿಂದ 10,000ದಷ್ಟು ಇದ್ದುದು, ಈಗ ಕನಿಷ್ಠ ರೂ. 11,300ರಿಂದ ಗರಿಷ್ಠ ರೂ. 22,800ರವರೆಗೂ ಏರಿಕೆಯಾಗಿದೆ. ನವದೆಹಲಿ-ಬೆಂಗಳೂರು ಮಾರ್ಗದಲ್ಲಿ ರೂ. <br /> <br /> 12,000ದಿಂದ ರೂ. 15,500ರಷ್ಟು ಇದ್ದುದು ರೂ. 17,000ದಿಂದ ರೂ. 23,000ವರೆಗೂ ಏರಿಕೆಯಾಗಿದೆ. ಕಡೆ ಕ್ಷಣದಲ್ಲಿ ದಾವಂತದಿಂದ ಧಾವಿಸುವ ಪ್ರಯಾಣಿಕರಿಗೆ ಬಹುತೇಕ ಸಂಸ್ಥೆಗಳು `ಕೆಲವೇ ಟಿಕೆಟ್~ ಇರುವುದು ಎಂದು ಹೇಳಿ ಹೆಚ್ಚಿನ ದರ ಪಾವತಿಸುವಂತೆ ಮಾಡುತ್ತಿವೆ. ಈ ಅಂಶವನ್ನು ವಿವಿಧ ಟ್ರಾವೆಲ್ ಏಜೆಂಟರೂ ಖಚಿತಪಡಿಸಿದ್ದಾರೆ.<br /> <br /> ವಿಮಾನ ಪ್ರಯಾಣ ದರ ಪ್ರಮಾಣವನ್ನು ನಿಯಂತ್ರಿಸುವ `ನಾಗರಿಕ ವಿಮಾನಯಾನ ಮಹಾ ನಿರ್ದೇಶಕರ ಕಚೇರಿ~(ಡಿಜಿಸಿಎ) ಅಧಿಕಾರಿಗಳು ಮಾತ್ರ, `ಈಗಿನ ದರ ಏರಿಕೆ ಪ್ರಮಾಣವೇನೂ ವಿಮಾನಯಾನ ಸಂಸ್ಥೆಗಳು ಈ ಮೊದಲೇ ಸಲ್ಲಿಸಿದ ದರಪಟ್ಟಿ ಪ್ರಮಾಣಕ್ಕಿಂತ ಅಧಿಕವಾಗಿಯೇನೂ ಇಲ್ಲ~ ಎಂದು ಬುಧವಾರ ಸುದ್ದಿಸಂಸ್ಥೆಗೆ ಪ್ರತಿಕ್ರಿಯಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>