<p><strong>ಗುಡಿಬಂಡೆ: </strong>ಜಿಲ್ಲೆಯ ಅತ್ಯಂತ ಕಿರಿದಾದ ತಾಲ್ಲೂಕು ಗುಡಿಬಂಡೆ. ಇಲ್ಲಿನ ರೈತರ ಸ್ಥಿತಿಗತಿ ಮತ್ತು ಸಂಕಷ್ಟಗಳು ಕಿರಿದಾದುದ್ದಲ್ಲ. ತಾಲ್ಲೂಕಿನಲ್ಲಿ ಮಳೆಯಾಗದೇ ಕಂಗಾಲಾಗಿರುವ ರೈತರು ಕೃಷಿ ಚಟುವಟಿಕೆ ಕೈಗೊಳ್ಳಲಾಗದೇ ಹೊತ್ತಿನ ಊಟಕ್ಕೂ ಪರಿತಪಿಸುತ್ತಿದ್ದಾರೆ. <br /> <br /> ಈಗ ರೈತರಲ್ಲಿ ಮಳೆಯಾಗುವುದೇ ಅಥವಾ ಇಲ್ಲವೇ ಎಂಬ ಅನಿಶ್ಚಿತತೆ ಕಾಡುತ್ತಿದೆ.<br /> ಜೂನ್-ಜುಲೈ ವೇಳೆಗೆ ಬಿತ್ತನೆ ಕಾರ್ಯ ಪೂರ್ಣಗೊಂಡು ಇತರ ಚಟುವಟಿಕೆಗೆ ರೈತರು ಮುಂದಾಗಬೇಕಿತ್ತು. <br /> ಕೃಷಿ ಬಿಟ್ಟು ಬೇರೇನೂ ಗೊತ್ತಿಲ್ಲದ ಇವರು ಬೇರೆಡೆ ವಲಸೆ ಹೋಗಲಾಗದೇ ಗ್ರಾಮದಲ್ಲಿಯೇ ಇರಲಾಗದೇ ಸಂಕಷ್ಟಕ್ಕೆ ಸಿಲುಕಿದ್ದಾರೆ. ಮಳೆಯಾದರೆ, ಒಂದಿಷ್ಟು ಸಮಸ್ಯೆಗಳಾದರೂ ನಿವಾರಣೆಯಾಗುತ್ತವೆ ಎಂಬ ಆಶಾಭಾವನೆಯಲ್ಲಿ ಬದುಕುತ್ತಿದ್ದಾರೆ.<br /> <br /> ಕಣ್ಣಾಮುಚ್ಚಾಲೆ ಆಡುತ್ತ ಮುನಿಸಿಕೊಂಡಿರುವ ಮಳೆರಾಯನ ಕರುಣೆ ಕೋರಲು ಇಲ್ಲಿನ ರೈತರು ಮಾಡಿರು ಪೂಜೆ ಒಂದೆರಡಲ್ಲ.ಪ್ರಮುಖ ದೇಗುಲಗಳಲ್ಲಿ ವಿಶೇಷ ಪೂಜೆ ಮಾಡಿದರಲ್ಲದೇ ಪುರಾತನ ಕಾಲದ ಗ್ರಾಮದೇವರುಗಳಲ್ಲಿಯೂ ತೆರಳಿ ವಿಶೇಷ ಪ್ರಾರ್ಥನೆ ಮೂಲಕ ಮಳೆಗಾಗಿ ಬೇಡಿಕೊಂಡಿದ್ದಾರೆ. <br /> ಕೆಲ ದಿನಗಳ ಹಿಂದೆ ಸುರಿದ ಧಾರಾಕಾರ ಮಳೆಯನ್ನು ನಂಬಿ ಕೆಲ ರೈತರು ಜಮೀನಿನ ಉಳುಮೆ ಮಾಡಿದರು. <br /> <br /> ಬಿತ್ತನೆ ಕಾರ್ಯಕ್ಕೂ ಮುಂದಾದರು. ಆದರೆ ಸರಿಯಾದ ಸಮಯಕ್ಕೆ ಮಳೆರಾಯ ಕೈಕೊಟ್ಟ ಕಾರಣ ಕೃಷಿ ಚಟುವಟಿಕೆಯನ್ನು ಮುಂದು ವರಿಸಲಾಗದೇ ಮತ್ತು ಪರಿಹಾರ ಕಂಡುಕೊಳ್ಳಲಾಗದೇ ನಾವು ಆತಂಕದಲ್ಲಿದ್ದೇವೆ~ ಎಂದು ಯಲ್ಲೋಡು ಗ್ರಾಮದ ವೆಂಕಟರೋಣಪ್ಪ ತಿಳಿಸಿದರು.<br /> <br /> ಕೃಷಿ ಇಲಾಖೆಯ ಪ್ರಕಾರ, ಜೂನ್ ಅಂತ್ಯದ ವೇಳೆಗೆ 197.3 ಮಿ.ಮೀ.ಗಳಷ್ಟು ಮಳೆಯಾಗಬೇಕಿತ್ತು.<br /> ಆದರೆ ಕೇವಲ 96.7 ಮಿ.ಮೀ.ಗಳಷ್ಟು ಮಾತ್ರವೇ ಮಳೆಯಾಗಿದೆ. ಜುಲೈಯಲ್ಲಿ 103 ಮಿ.ಮೀ.ಗಳಷ್ಟು ಆಗಬೇಕಿದ್ದ ಮಳೆ 21.07 ಮಿ.ಮೀ.ಗೆ ಸೀಮಿತವಾಗಿದೆ. 13,500 ಹೆಕ್ಟರ್ನಷ್ಟು ಬಿತ್ತನೆ ಪ್ರದೇಶವಿದ್ದು, 2,300ಗಳಷ್ಟು ಜಮೀನಿನಲ್ಲಿ ಮಾತ್ರವೇ ಬಿತ್ತನೆಯಾಗಿದೆ. ಶೇ 15ರಷ್ಟು ಮಾತ್ರವೇ ಬಿತ್ತನೆಯಾಗಿದೆ.<br /> <br /> `ತಾಲ್ಲೂಕಿನ ಬುಳ್ಳಸಂದ್ರ, ಚೌಟಕುಂಟಹಳ್ಳಿ, ವರ್ಲಕೊಂಡ, ಸೋಮೇಶ್ವರ ಮತ್ತು ಪೋಲಂಪಲ್ಲಿ ಗ್ರಾಮಗಳಲ್ಲಿ ಬಿತ್ತೆನೆ ಕಾರ್ಯ ಆರಂಭಗೊಂಡಿದೆ. ಉಳಿದ ಹಳ್ಳಿಗಳಲ್ಲಿ ಬಿತ್ತನೆ ಕಾರ್ಯಕ್ಕೆ ತೊಂದರೆಯಾಗಿದೆ. ಜುಲೈ ನಾಲ್ಕನೇ ವಾರದಲ್ಲಿ ಉತ್ತಮ ಮಳೆಯಾಗುವ ನಿರೀಕ್ಷೆಯಿದೆ~ ಎಂದು ಸಹಾಯಕ ಕೃಷಿ ನಿರ್ದೇಶಕ ನರಸರಾಜ್ ತಿಳಿಸಿದರು.</p>.<p><strong>ತಾಲ್ಲೂಕುಗಳಲ್ಲಿ ಬಿತ್ತನೆ ಕಾರ್ಯ (ಹೆಕ್ಟೆರ್)<br /> ತಾಲ್ಲೂಕು ಗುರಿ ಸಾಧನೆ<br /> </strong><br /> <strong>ಚಿಕ್ಕಬಳ್ಳಾಪುರ 18795 200<br /> <br /> ಚಿಂತಾಮಣಿ 33120 2661-<br /> <br /> ಗೌರಿಬಿದನೂರು 38275 1710<br /> <br /> ಶಿಡ್ಲಘಟ್ಟ 16435 123<br /> <br /> ಬಾಗೇಪಲ್ಲಿ 32865 755<br /> <br /> ಗುಡಿಬಂಡೆ 13510 707</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಗುಡಿಬಂಡೆ: </strong>ಜಿಲ್ಲೆಯ ಅತ್ಯಂತ ಕಿರಿದಾದ ತಾಲ್ಲೂಕು ಗುಡಿಬಂಡೆ. ಇಲ್ಲಿನ ರೈತರ ಸ್ಥಿತಿಗತಿ ಮತ್ತು ಸಂಕಷ್ಟಗಳು ಕಿರಿದಾದುದ್ದಲ್ಲ. ತಾಲ್ಲೂಕಿನಲ್ಲಿ ಮಳೆಯಾಗದೇ ಕಂಗಾಲಾಗಿರುವ ರೈತರು ಕೃಷಿ ಚಟುವಟಿಕೆ ಕೈಗೊಳ್ಳಲಾಗದೇ ಹೊತ್ತಿನ ಊಟಕ್ಕೂ ಪರಿತಪಿಸುತ್ತಿದ್ದಾರೆ. <br /> <br /> ಈಗ ರೈತರಲ್ಲಿ ಮಳೆಯಾಗುವುದೇ ಅಥವಾ ಇಲ್ಲವೇ ಎಂಬ ಅನಿಶ್ಚಿತತೆ ಕಾಡುತ್ತಿದೆ.<br /> ಜೂನ್-ಜುಲೈ ವೇಳೆಗೆ ಬಿತ್ತನೆ ಕಾರ್ಯ ಪೂರ್ಣಗೊಂಡು ಇತರ ಚಟುವಟಿಕೆಗೆ ರೈತರು ಮುಂದಾಗಬೇಕಿತ್ತು. <br /> ಕೃಷಿ ಬಿಟ್ಟು ಬೇರೇನೂ ಗೊತ್ತಿಲ್ಲದ ಇವರು ಬೇರೆಡೆ ವಲಸೆ ಹೋಗಲಾಗದೇ ಗ್ರಾಮದಲ್ಲಿಯೇ ಇರಲಾಗದೇ ಸಂಕಷ್ಟಕ್ಕೆ ಸಿಲುಕಿದ್ದಾರೆ. ಮಳೆಯಾದರೆ, ಒಂದಿಷ್ಟು ಸಮಸ್ಯೆಗಳಾದರೂ ನಿವಾರಣೆಯಾಗುತ್ತವೆ ಎಂಬ ಆಶಾಭಾವನೆಯಲ್ಲಿ ಬದುಕುತ್ತಿದ್ದಾರೆ.<br /> <br /> ಕಣ್ಣಾಮುಚ್ಚಾಲೆ ಆಡುತ್ತ ಮುನಿಸಿಕೊಂಡಿರುವ ಮಳೆರಾಯನ ಕರುಣೆ ಕೋರಲು ಇಲ್ಲಿನ ರೈತರು ಮಾಡಿರು ಪೂಜೆ ಒಂದೆರಡಲ್ಲ.ಪ್ರಮುಖ ದೇಗುಲಗಳಲ್ಲಿ ವಿಶೇಷ ಪೂಜೆ ಮಾಡಿದರಲ್ಲದೇ ಪುರಾತನ ಕಾಲದ ಗ್ರಾಮದೇವರುಗಳಲ್ಲಿಯೂ ತೆರಳಿ ವಿಶೇಷ ಪ್ರಾರ್ಥನೆ ಮೂಲಕ ಮಳೆಗಾಗಿ ಬೇಡಿಕೊಂಡಿದ್ದಾರೆ. <br /> ಕೆಲ ದಿನಗಳ ಹಿಂದೆ ಸುರಿದ ಧಾರಾಕಾರ ಮಳೆಯನ್ನು ನಂಬಿ ಕೆಲ ರೈತರು ಜಮೀನಿನ ಉಳುಮೆ ಮಾಡಿದರು. <br /> <br /> ಬಿತ್ತನೆ ಕಾರ್ಯಕ್ಕೂ ಮುಂದಾದರು. ಆದರೆ ಸರಿಯಾದ ಸಮಯಕ್ಕೆ ಮಳೆರಾಯ ಕೈಕೊಟ್ಟ ಕಾರಣ ಕೃಷಿ ಚಟುವಟಿಕೆಯನ್ನು ಮುಂದು ವರಿಸಲಾಗದೇ ಮತ್ತು ಪರಿಹಾರ ಕಂಡುಕೊಳ್ಳಲಾಗದೇ ನಾವು ಆತಂಕದಲ್ಲಿದ್ದೇವೆ~ ಎಂದು ಯಲ್ಲೋಡು ಗ್ರಾಮದ ವೆಂಕಟರೋಣಪ್ಪ ತಿಳಿಸಿದರು.<br /> <br /> ಕೃಷಿ ಇಲಾಖೆಯ ಪ್ರಕಾರ, ಜೂನ್ ಅಂತ್ಯದ ವೇಳೆಗೆ 197.3 ಮಿ.ಮೀ.ಗಳಷ್ಟು ಮಳೆಯಾಗಬೇಕಿತ್ತು.<br /> ಆದರೆ ಕೇವಲ 96.7 ಮಿ.ಮೀ.ಗಳಷ್ಟು ಮಾತ್ರವೇ ಮಳೆಯಾಗಿದೆ. ಜುಲೈಯಲ್ಲಿ 103 ಮಿ.ಮೀ.ಗಳಷ್ಟು ಆಗಬೇಕಿದ್ದ ಮಳೆ 21.07 ಮಿ.ಮೀ.ಗೆ ಸೀಮಿತವಾಗಿದೆ. 13,500 ಹೆಕ್ಟರ್ನಷ್ಟು ಬಿತ್ತನೆ ಪ್ರದೇಶವಿದ್ದು, 2,300ಗಳಷ್ಟು ಜಮೀನಿನಲ್ಲಿ ಮಾತ್ರವೇ ಬಿತ್ತನೆಯಾಗಿದೆ. ಶೇ 15ರಷ್ಟು ಮಾತ್ರವೇ ಬಿತ್ತನೆಯಾಗಿದೆ.<br /> <br /> `ತಾಲ್ಲೂಕಿನ ಬುಳ್ಳಸಂದ್ರ, ಚೌಟಕುಂಟಹಳ್ಳಿ, ವರ್ಲಕೊಂಡ, ಸೋಮೇಶ್ವರ ಮತ್ತು ಪೋಲಂಪಲ್ಲಿ ಗ್ರಾಮಗಳಲ್ಲಿ ಬಿತ್ತೆನೆ ಕಾರ್ಯ ಆರಂಭಗೊಂಡಿದೆ. ಉಳಿದ ಹಳ್ಳಿಗಳಲ್ಲಿ ಬಿತ್ತನೆ ಕಾರ್ಯಕ್ಕೆ ತೊಂದರೆಯಾಗಿದೆ. ಜುಲೈ ನಾಲ್ಕನೇ ವಾರದಲ್ಲಿ ಉತ್ತಮ ಮಳೆಯಾಗುವ ನಿರೀಕ್ಷೆಯಿದೆ~ ಎಂದು ಸಹಾಯಕ ಕೃಷಿ ನಿರ್ದೇಶಕ ನರಸರಾಜ್ ತಿಳಿಸಿದರು.</p>.<p><strong>ತಾಲ್ಲೂಕುಗಳಲ್ಲಿ ಬಿತ್ತನೆ ಕಾರ್ಯ (ಹೆಕ್ಟೆರ್)<br /> ತಾಲ್ಲೂಕು ಗುರಿ ಸಾಧನೆ<br /> </strong><br /> <strong>ಚಿಕ್ಕಬಳ್ಳಾಪುರ 18795 200<br /> <br /> ಚಿಂತಾಮಣಿ 33120 2661-<br /> <br /> ಗೌರಿಬಿದನೂರು 38275 1710<br /> <br /> ಶಿಡ್ಲಘಟ್ಟ 16435 123<br /> <br /> ಬಾಗೇಪಲ್ಲಿ 32865 755<br /> <br /> ಗುಡಿಬಂಡೆ 13510 707</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>