<p><span style="font-size: medium"><strong>ಅಹಮದಾಬಾದ್ (ಐಎಎನ್ಎಸ್):</strong> ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರು ಶನಿವಾರ ಆರಂಭಿಸಿದ್ದ 74 ಗಂಟೆಗಳ ~ಸದ್ಭಾವನಾ ಉಪವಾಸ~ಕ್ಕೆ ಪ್ರತಿಯಾಗಿ, ಅದರ ಬೆನ್ನ ಹಿಂದೆಯೇ ಕಾಂಗ್ರೆಸ್ ನಾಯಕರು ಮಾಜಿ ಕೇಂದ್ರ ಸಚಿವ ಶಂಕರಸಿಂಗ್ ವಘೇಲಾ ಅವರ ನೇತೃತ್ವದಲ್ಲಿ ಆರಂಭಿಸಿದ್ದ ತಮ್ಮ 74 ಗಂಟೆಗಳ ಉಪವಾಸವನ್ನು ಮಂಗಳವಾರ ಅಂತ್ಯಗೊಳಿಸಿದರು.</span></p>.<p><span style="font-size: medium">ಇಲ್ಲಿನ ಸಾಬರಮತಿ ಆಶ್ರಮದ ಎದುರಿಗಿನ ಕಟ್ಟೆಯಲ್ಲಿ ಇಬ್ಬರು ದಲಿತ ಬಾಲಕಿಯರು ಕೊಟ್ಟ ಲಿಂಬೆ ಹಣ್ಣಿನ ರಸ ಕುಡಿದ ವಘೇಲಾ ಅವರು, ಮಂಗಳವಾರ ಬೆಳಿಗ್ಗೆ ತಮ್ಮ ಉಪವಾಸಕ್ಕೆ ಮಂಗಳ ಹಾಡಿದರು.</span></p>.<p><span style="font-size: medium">ಈ ಸಂದರ್ಭದಲ್ಲಿ ಮಾತನಾಡಿದ ವಘೇಲಾ ಅವರು, ತಮ್ಮ ಉಪವಾಸದಿಂದ ಗುಜರಾತಿನ ಜನಕ್ಕೆ ಮೋದಿ ಸರ್ಕಾರ ಬಗೆದಿರುವ ವಿಶ್ವಾಸದ್ರೋಹವನ್ನು ಎತ್ತಿ ತೋರಿಸಿದ್ದೇವೆ ಎಂದು ಹೇಳಿಕೊಂಡಿದ್ದಾರೆ.</span></p>.<p><span style="font-size: medium">ಸ್ವಚ್ಛವಾದ ಆಡಳಿತಕ್ಕಾಗಿ ಅವರ ನೆಲದಲ್ಲಿ ಅವರಿಂದ ಆಯ್ಕೆಯಾದವರು ಅವರಿಗಾಗಿ ಮಾಡಿದ್ದೇನು? ಎಂಬುದನ್ನು ತಮ್ಮ ಉಪವಾಸದ ಸಂದರ್ಭದಲ್ಲಿ ಗುಜರಾತಿನ ಜನರ ಗಮನ ಸೆಳೆಯಲಾಯಿತು ಎಂದೂ ಅವರು ಹೇಳಿಕೊಂಡಿದ್ದಾರೆ. </span></p>.<p><span style="font-size: medium">ಈ ಸಂದರ್ಭದಲ್ಲಿ ಹಾಜರಿದ್ದ ಕಾಂಗ್ರೆಸ್ ಪಕ್ಷದ ರಾಜ್ಯದ ನಾಯಕರು ಸರ್ಕಾರದ ಈ ವಿಶ್ವಾಸ ದ್ರೋಹವನ್ನು ಜನತೆಗೆ ತಿಳಿಸುವುದರಿಂದ ವಿಮುಖರಾಗುವುದಿಲ್ಲ. ರಾಜ್ಯದಾದ್ಯಂತ ಈ ಸಂದೇಶ ಸಾರಲು ಸೆ. 29 ರಿಂದ ಕಚ್ಛ್ ನಿಂದ ಅಭಿಯಾನ ಆರಂಭಿಸುವುದಾಗಿ ಘೋಷಿಸಿದ್ದಾರೆ. </span></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><span style="font-size: medium"><strong>ಅಹಮದಾಬಾದ್ (ಐಎಎನ್ಎಸ್):</strong> ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರು ಶನಿವಾರ ಆರಂಭಿಸಿದ್ದ 74 ಗಂಟೆಗಳ ~ಸದ್ಭಾವನಾ ಉಪವಾಸ~ಕ್ಕೆ ಪ್ರತಿಯಾಗಿ, ಅದರ ಬೆನ್ನ ಹಿಂದೆಯೇ ಕಾಂಗ್ರೆಸ್ ನಾಯಕರು ಮಾಜಿ ಕೇಂದ್ರ ಸಚಿವ ಶಂಕರಸಿಂಗ್ ವಘೇಲಾ ಅವರ ನೇತೃತ್ವದಲ್ಲಿ ಆರಂಭಿಸಿದ್ದ ತಮ್ಮ 74 ಗಂಟೆಗಳ ಉಪವಾಸವನ್ನು ಮಂಗಳವಾರ ಅಂತ್ಯಗೊಳಿಸಿದರು.</span></p>.<p><span style="font-size: medium">ಇಲ್ಲಿನ ಸಾಬರಮತಿ ಆಶ್ರಮದ ಎದುರಿಗಿನ ಕಟ್ಟೆಯಲ್ಲಿ ಇಬ್ಬರು ದಲಿತ ಬಾಲಕಿಯರು ಕೊಟ್ಟ ಲಿಂಬೆ ಹಣ್ಣಿನ ರಸ ಕುಡಿದ ವಘೇಲಾ ಅವರು, ಮಂಗಳವಾರ ಬೆಳಿಗ್ಗೆ ತಮ್ಮ ಉಪವಾಸಕ್ಕೆ ಮಂಗಳ ಹಾಡಿದರು.</span></p>.<p><span style="font-size: medium">ಈ ಸಂದರ್ಭದಲ್ಲಿ ಮಾತನಾಡಿದ ವಘೇಲಾ ಅವರು, ತಮ್ಮ ಉಪವಾಸದಿಂದ ಗುಜರಾತಿನ ಜನಕ್ಕೆ ಮೋದಿ ಸರ್ಕಾರ ಬಗೆದಿರುವ ವಿಶ್ವಾಸದ್ರೋಹವನ್ನು ಎತ್ತಿ ತೋರಿಸಿದ್ದೇವೆ ಎಂದು ಹೇಳಿಕೊಂಡಿದ್ದಾರೆ.</span></p>.<p><span style="font-size: medium">ಸ್ವಚ್ಛವಾದ ಆಡಳಿತಕ್ಕಾಗಿ ಅವರ ನೆಲದಲ್ಲಿ ಅವರಿಂದ ಆಯ್ಕೆಯಾದವರು ಅವರಿಗಾಗಿ ಮಾಡಿದ್ದೇನು? ಎಂಬುದನ್ನು ತಮ್ಮ ಉಪವಾಸದ ಸಂದರ್ಭದಲ್ಲಿ ಗುಜರಾತಿನ ಜನರ ಗಮನ ಸೆಳೆಯಲಾಯಿತು ಎಂದೂ ಅವರು ಹೇಳಿಕೊಂಡಿದ್ದಾರೆ. </span></p>.<p><span style="font-size: medium">ಈ ಸಂದರ್ಭದಲ್ಲಿ ಹಾಜರಿದ್ದ ಕಾಂಗ್ರೆಸ್ ಪಕ್ಷದ ರಾಜ್ಯದ ನಾಯಕರು ಸರ್ಕಾರದ ಈ ವಿಶ್ವಾಸ ದ್ರೋಹವನ್ನು ಜನತೆಗೆ ತಿಳಿಸುವುದರಿಂದ ವಿಮುಖರಾಗುವುದಿಲ್ಲ. ರಾಜ್ಯದಾದ್ಯಂತ ಈ ಸಂದೇಶ ಸಾರಲು ಸೆ. 29 ರಿಂದ ಕಚ್ಛ್ ನಿಂದ ಅಭಿಯಾನ ಆರಂಭಿಸುವುದಾಗಿ ಘೋಷಿಸಿದ್ದಾರೆ. </span></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>