<p><strong>ತುಮರಿ</strong>: ಕರೂರು ಹೋಬಳಿಯ ತುಮರಿ ಮತ್ತು ಬ್ಯಾಕೋಡು ಸರ್ಕಾರಿ ಆಸ್ಪತ್ರೆಗಳು ವೈದ್ಯರಿಲ್ಲದ ಹಿನ್ನೆಲೆಯಲ್ಲಿ `ಪ್ರಮುಖ ಆರೋಗ್ಯ ಸೇವೆ'ಯನ್ನು ಸ್ಥಗಿತಗೊಳಿಸಿವೆ. ಪರಿಣಾಮ ಇಪ್ಪತ್ತು ಸಾವಿರ ಜನಸಂಖ್ಯೆಯನ್ನು ಹೊಂದಿರುವ ದ್ವೀಪದಲ್ಲಿ ಆತಂಕದ ಸ್ಥಿತಿ ನಿರ್ಮಾಣವಾಗಿದೆ.<br /> <br /> ಹತ್ತು ವರ್ಷಗಳಿಂದ ತುಮರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯರಾಗಿ ಡಾ.ನಾಗಭೂಷಣ್ ಕಾರ್ಯ ನಿರ್ವಹಿಸಿದ್ದರು. ಆದರೆ, ಸಮೀಪದ ಬ್ಯಾಕೋಡು ಆರೋಗ್ಯ ಕೇಂದ್ರದಲ್ಲಿ ಹೆಚ್ಚಿನ ಕಾಲ ವೈದ್ಯರೆ ಇರಲಿಲ್ಲ. ಕಳೆದ ವಾರದವರೆಗೂ ಇಡೀ ದ್ವೀಪಕ್ಕೆ ಒಬ್ಬ ವೈದ್ಯರ ಸೇವೆ ಮಾತ್ರ ಲಭ್ಯವಾಗಿತ್ತು.<br /> <br /> ಆದರೆ ಶನಿವಾರದಿಂದ ಡಾ.ನಾಗಭೂಷಣ್ ಅವರು ಹೆಚ್ಚಿನ ವಿದ್ಯಾಭ್ಯಾಸಕ್ಕೆ ರಜೆಯ ಮೇಲೆ ತೆರಳಿರುವುದರಿಂದ ದ್ವೀಪದಲ್ಲಿ ವೈದ್ಯರ ಸೇವೆಯೇ ಇಲ್ಲವಾಗಿದೆ. ಪರಿಣಾಮ ಬ್ಯಾಕೋಡು ಮತ್ತು ತುಮರಿಯ ಆಸ್ಪತ್ರೆಗಳಿಗೆ ದೂರದ ಹಳ್ಳಿಗಳಿಂದ ಆಗಮಿಸುವ ರೋಗಿಗಳಲ್ಲಿ ದಿಕ್ಕೇ ತೋಚದ ಅಸಹಾಯಕ ಸ್ಥಿತಿ ನಿರ್ಮಾಣವಾಗಿದೆ.<br /> <br /> ಮಳೆಗಾಲದ ಸಹಜ ಕಾಯಿಲೆಗಳಾದ ಜ್ವರ, ತಲೆನೋವುಗಳಿಗೆ ಆಸ್ಪತ್ರೆಯಿಂದ ಜನರು ಮಾತ್ರೆಗಳನ್ನು ಕೇಳಿ ಪಡೆದು ಹಿಂತಿರುಗುತ್ತಿದ್ದ ದೃಶ್ಯ ಎರಡು ಆಸ್ಪತ್ರೆಯಲ್ಲಿ ಸಾಮಾನ್ಯವಾಗಿದೆ. ಸಣ್ಣ ಕಾಯಿಲೆಗೂ ಕೂಡಾ 80 ಕಿಲೋ ಮೀಟರ್ ದೂರದ ಸಾಗರದ ವಿಭಾಗೀಯ ಆಸ್ಪತ್ರೆಗೆ ಕ್ರಮಿಸಲು ಸಾಧ್ಯವೇ ಎಂಬ ಪ್ರಶ್ನೆ ಅವರದ್ದು.<br /> <br /> ಇನ್ನು ಗರ್ಭಿಣಿಯರ ಸ್ಥಿತಿಯಂತೂ ಹೇಳತೀರದು. ಹಿಂದೆ ನುರಿತ ದಾದಿಯರು ದ್ವೀಪದಲ್ಲಿ ಹೆರಿಗೆಯ ಸಾಹಸಕ್ಕೆ ಮುಂದಾಗುತ್ತಿದ್ದರು. ಆದರೆ, ವೈದ್ಯರ ಅನುಪಸ್ಥಿತಿಯಿಂದ ಈಗ ಹೆರಿಗೆಯ ನಿರೀಕ್ಷಿತ ದಿನಕ್ಕಿಂದ ವಾರದ ಮುಂಚೆಯೇ ಸಾಗರಕ್ಕೆ ತೆರಳಬೇಕಿದೆ.<br /> <br /> ದ್ವೀಪಕ್ಕೆ 108 ತುರ್ತು ಸೇವೆ ಕೂಡಾ ವಿಸ್ತರಿಸಿಲ್ಲದ ಕಾರಣ ಖಾಸಗಿ ವಾಹನದ ವೆಚ್ಚವು ಕೂಡಾ ಹೊರೆಯಾಗಿ ಪರಿಣಮಿಸಿದೆ. ಇನ್ನು ದ್ವೀಪದ ಎರಡು ಆಸ್ಪತ್ರೆಗಳ ಸ್ಥಿತಿ ಶೋಚನೀಯವಾಗಿದೆ. ತುಮರಿಯ ಪ್ರಾಥಮಿಕ ಆರೋಗ್ಯ ಕೇಂದ್ರದ ಬೆಡ್ ಹಾಗೂ ಬೆಡ್ಶೀಟ್ಗಳು ಹರಿದುಹೋಗಿವೆ.<br /> <br /> ಆಸ್ಪತ್ರೆಯ ಸೋಲಾರ್ ವ್ಯವಸ್ಥೆ ಕೆಟ್ಟು ಹೋಗಿದ್ದು ರಾತ್ರಿ ಪಾಳಯದಲ್ಲಿ ಕೆಲಸ ನಿರ್ವಹಿಸುವ ನರ್ಸ್ಗಳು ಮತ್ತು ಎನ್ಆರ್ಎಚ್ಎಂ ಸಹಾಯಕಿಯರು ಮೇಣದಬತ್ತಿ ಹಚ್ಚಿಕೊಂಡು ಭಯದಲ್ಲಿ ಕಾರ್ಯ ನಿರ್ವಹಿಸಬೇಕಾಗಿದೆ.<br /> <br /> ಆಸ್ಪತ್ರೆಯ ಹೆರಿಗೆ ವಾರ್ಡ್ ಒಳಗೊಂಡಂತೆ ಪ್ರಮುಖ ಕೊಠಡಿಗಳಿಗೆ ತೆರಳುವ ಪ್ಯಾಸೇಜ್ಗಳಲ್ಲಿ ವಿದ್ಯುತ್ಬಲ್ಪ್ಗಳಿಲ್ಲ.<br /> <br /> ದ್ವೀಪದ ಭೌಗೋಳಿಕ ಸ್ಥಿತಿಯಲ್ಲಿ ವ್ಯವಸ್ಥಿತ ಆಸ್ಪತ್ರೆಯ ಜತೆ ಉತ್ತಮ ವೈದ್ಯರ ಸೇವೆ ಅಗತ್ಯವಾಗಿದ್ದು, ಸರ್ಕಾರ ತುರ್ತಾಗಿ ಸಮಸ್ಯೆಗೆ ಸ್ಪಂದಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ತುಮರಿ</strong>: ಕರೂರು ಹೋಬಳಿಯ ತುಮರಿ ಮತ್ತು ಬ್ಯಾಕೋಡು ಸರ್ಕಾರಿ ಆಸ್ಪತ್ರೆಗಳು ವೈದ್ಯರಿಲ್ಲದ ಹಿನ್ನೆಲೆಯಲ್ಲಿ `ಪ್ರಮುಖ ಆರೋಗ್ಯ ಸೇವೆ'ಯನ್ನು ಸ್ಥಗಿತಗೊಳಿಸಿವೆ. ಪರಿಣಾಮ ಇಪ್ಪತ್ತು ಸಾವಿರ ಜನಸಂಖ್ಯೆಯನ್ನು ಹೊಂದಿರುವ ದ್ವೀಪದಲ್ಲಿ ಆತಂಕದ ಸ್ಥಿತಿ ನಿರ್ಮಾಣವಾಗಿದೆ.<br /> <br /> ಹತ್ತು ವರ್ಷಗಳಿಂದ ತುಮರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯರಾಗಿ ಡಾ.ನಾಗಭೂಷಣ್ ಕಾರ್ಯ ನಿರ್ವಹಿಸಿದ್ದರು. ಆದರೆ, ಸಮೀಪದ ಬ್ಯಾಕೋಡು ಆರೋಗ್ಯ ಕೇಂದ್ರದಲ್ಲಿ ಹೆಚ್ಚಿನ ಕಾಲ ವೈದ್ಯರೆ ಇರಲಿಲ್ಲ. ಕಳೆದ ವಾರದವರೆಗೂ ಇಡೀ ದ್ವೀಪಕ್ಕೆ ಒಬ್ಬ ವೈದ್ಯರ ಸೇವೆ ಮಾತ್ರ ಲಭ್ಯವಾಗಿತ್ತು.<br /> <br /> ಆದರೆ ಶನಿವಾರದಿಂದ ಡಾ.ನಾಗಭೂಷಣ್ ಅವರು ಹೆಚ್ಚಿನ ವಿದ್ಯಾಭ್ಯಾಸಕ್ಕೆ ರಜೆಯ ಮೇಲೆ ತೆರಳಿರುವುದರಿಂದ ದ್ವೀಪದಲ್ಲಿ ವೈದ್ಯರ ಸೇವೆಯೇ ಇಲ್ಲವಾಗಿದೆ. ಪರಿಣಾಮ ಬ್ಯಾಕೋಡು ಮತ್ತು ತುಮರಿಯ ಆಸ್ಪತ್ರೆಗಳಿಗೆ ದೂರದ ಹಳ್ಳಿಗಳಿಂದ ಆಗಮಿಸುವ ರೋಗಿಗಳಲ್ಲಿ ದಿಕ್ಕೇ ತೋಚದ ಅಸಹಾಯಕ ಸ್ಥಿತಿ ನಿರ್ಮಾಣವಾಗಿದೆ.<br /> <br /> ಮಳೆಗಾಲದ ಸಹಜ ಕಾಯಿಲೆಗಳಾದ ಜ್ವರ, ತಲೆನೋವುಗಳಿಗೆ ಆಸ್ಪತ್ರೆಯಿಂದ ಜನರು ಮಾತ್ರೆಗಳನ್ನು ಕೇಳಿ ಪಡೆದು ಹಿಂತಿರುಗುತ್ತಿದ್ದ ದೃಶ್ಯ ಎರಡು ಆಸ್ಪತ್ರೆಯಲ್ಲಿ ಸಾಮಾನ್ಯವಾಗಿದೆ. ಸಣ್ಣ ಕಾಯಿಲೆಗೂ ಕೂಡಾ 80 ಕಿಲೋ ಮೀಟರ್ ದೂರದ ಸಾಗರದ ವಿಭಾಗೀಯ ಆಸ್ಪತ್ರೆಗೆ ಕ್ರಮಿಸಲು ಸಾಧ್ಯವೇ ಎಂಬ ಪ್ರಶ್ನೆ ಅವರದ್ದು.<br /> <br /> ಇನ್ನು ಗರ್ಭಿಣಿಯರ ಸ್ಥಿತಿಯಂತೂ ಹೇಳತೀರದು. ಹಿಂದೆ ನುರಿತ ದಾದಿಯರು ದ್ವೀಪದಲ್ಲಿ ಹೆರಿಗೆಯ ಸಾಹಸಕ್ಕೆ ಮುಂದಾಗುತ್ತಿದ್ದರು. ಆದರೆ, ವೈದ್ಯರ ಅನುಪಸ್ಥಿತಿಯಿಂದ ಈಗ ಹೆರಿಗೆಯ ನಿರೀಕ್ಷಿತ ದಿನಕ್ಕಿಂದ ವಾರದ ಮುಂಚೆಯೇ ಸಾಗರಕ್ಕೆ ತೆರಳಬೇಕಿದೆ.<br /> <br /> ದ್ವೀಪಕ್ಕೆ 108 ತುರ್ತು ಸೇವೆ ಕೂಡಾ ವಿಸ್ತರಿಸಿಲ್ಲದ ಕಾರಣ ಖಾಸಗಿ ವಾಹನದ ವೆಚ್ಚವು ಕೂಡಾ ಹೊರೆಯಾಗಿ ಪರಿಣಮಿಸಿದೆ. ಇನ್ನು ದ್ವೀಪದ ಎರಡು ಆಸ್ಪತ್ರೆಗಳ ಸ್ಥಿತಿ ಶೋಚನೀಯವಾಗಿದೆ. ತುಮರಿಯ ಪ್ರಾಥಮಿಕ ಆರೋಗ್ಯ ಕೇಂದ್ರದ ಬೆಡ್ ಹಾಗೂ ಬೆಡ್ಶೀಟ್ಗಳು ಹರಿದುಹೋಗಿವೆ.<br /> <br /> ಆಸ್ಪತ್ರೆಯ ಸೋಲಾರ್ ವ್ಯವಸ್ಥೆ ಕೆಟ್ಟು ಹೋಗಿದ್ದು ರಾತ್ರಿ ಪಾಳಯದಲ್ಲಿ ಕೆಲಸ ನಿರ್ವಹಿಸುವ ನರ್ಸ್ಗಳು ಮತ್ತು ಎನ್ಆರ್ಎಚ್ಎಂ ಸಹಾಯಕಿಯರು ಮೇಣದಬತ್ತಿ ಹಚ್ಚಿಕೊಂಡು ಭಯದಲ್ಲಿ ಕಾರ್ಯ ನಿರ್ವಹಿಸಬೇಕಾಗಿದೆ.<br /> <br /> ಆಸ್ಪತ್ರೆಯ ಹೆರಿಗೆ ವಾರ್ಡ್ ಒಳಗೊಂಡಂತೆ ಪ್ರಮುಖ ಕೊಠಡಿಗಳಿಗೆ ತೆರಳುವ ಪ್ಯಾಸೇಜ್ಗಳಲ್ಲಿ ವಿದ್ಯುತ್ಬಲ್ಪ್ಗಳಿಲ್ಲ.<br /> <br /> ದ್ವೀಪದ ಭೌಗೋಳಿಕ ಸ್ಥಿತಿಯಲ್ಲಿ ವ್ಯವಸ್ಥಿತ ಆಸ್ಪತ್ರೆಯ ಜತೆ ಉತ್ತಮ ವೈದ್ಯರ ಸೇವೆ ಅಗತ್ಯವಾಗಿದ್ದು, ಸರ್ಕಾರ ತುರ್ತಾಗಿ ಸಮಸ್ಯೆಗೆ ಸ್ಪಂದಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>