<p>ಸುಶ್ರಾವ್ಯ ಕಂಠದ ವ್ಯಾಸರಾಜ್ಗೆ ರೇಡಿಯೊ ಸಿಟಿ 91.1 ಎಫ್ಎಂ ಆಯೋಜಿಸಿದ್ದ `ರೇಡಿಯೊ ಸಿಟಿ ಸೂಪರ್ ಸಿಂಗರ್ ಆಫ್ ಬೆಂಗಳೂರು~ ಕಿರೀಟ.ರಾಯಲ್ ಮೀನಾಕ್ಷಿ ಮಾಲ್ ನಡೆಸಿದ ಗ್ರಾಂಡ್ ಫಿನಾಲೆಯಲ್ಲಿ ಅವರು `ಸೂಪರ್ ಸಿಂಗರ್~ ಆಗಿ ಹೊರಹೊಮ್ಮಿದರು. ಸಂಗೀತ ನಿರ್ದೇಶಕ ಮಣಿಕಂಠ ಕದ್ರಿ ಹಾಗೂ ಹಿನ್ನೆಲೆ ಗಾಯಕಿ ಎಂ.ಡಿ.ಪಲ್ಲವಿ ಅವರು ತೀರ್ಪುಗಾರರಾಗಿದ್ದರು. <br /> <br /> ಬೆಂಗಳೂರಿನ ಕೇಳುಗರಿಂದ ಅತಿ ಹೆಚ್ಚು ವೋಟ್ ಹಾಗೂ ನಿರ್ಣಾಯಕರ ತೀರ್ಮಾನದ ಮೂಲಕ ವಿಜೇತ ಸ್ಥಾನಕ್ಕೆ ಏರಿದ ವ್ಯಾಸರಾಜ್ ಅವರಿಗೆ 1 ಲಕ್ಷ ರೂಪಾಯಿ ನಗದು ಹಾಗೂ ಒಂದು ವರ್ಷ ರೇಡಿಯೊ ಸಿಟಿಯ ಧ್ವನಿಯಾಗುವ ಅವಕಾಶ ದೊರೆಯಿತು.<br /> <br /> ಫೈನಲ್ಸ್ಗೆ ಬಂದಿದ್ದ ಅಶ್ವಿನಿ, ಪೂಜಾ ರಾವ್, ಸಂಗೀತಾ, ವೈಭವ್, ವ್ಯಾಸರಾಜ್ ಹಾಗೂ ಶ್ರೀನಿಧಿ ಅವರುಗಳು ಹಾಡಿನ ಮೋಡಿಗೆ ಪ್ರೇಕ್ಷಕರು ಶರಣಾಗಿದ್ದರು. ಸಂಗೀತ, ಮಾಧುರ್ಯ ಹಾಗೂ ಖುಷಿ ತುಂಬಿದ್ದ ಕಾರ್ಯಕ್ರಮ ಇದಾಗಿತ್ತು.</p>.<p><br /> ಈ ಸಂದರ್ಭದಲ್ಲಿ ಮಾತನಾಡಿದ ರೇಡಿಯೊ ಸಿಟಿ ಸಿಇಓ ಅಪೂರ್ವ ಪುರೋಹಿತ್, ನಾವು ಸದಾ ನಮ್ಮ ಕೇಳುಗರ ಆಕಾಂಕ್ಷೆಯನ್ನು ಗಮನದಲ್ಲಿಟ್ಟುಕೊಂಡು ಕಾರ್ಯಕ್ರಮ ನಿರೂಪಿಸುತ್ತ ಬರುತ್ತಿದ್ದೇವೆ. ಬೆಂಗಳೂರಿನಲ್ಲಿ ಅನೇಕ ಸಂಗೀತ ಪ್ರತಿಭೆಗಳಿದ್ದಾರೆ. <br /> <br /> ಅವರನ್ನು ಬೆಳಕಿಗೆ ತರುವ ಸಲುವಾಗಿ ಈ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ಸಂಗೀತ ಕ್ಷೇತ್ರದಲ್ಲಿ ಬೆಳೆಯಬೇಕು ಎಂಬ ಆಶಯವನ್ನು ಇರಿಸಿಕೊಂಡಿರುವ ಪ್ರತಿಭೆಗಳಿಗೆ ಇದೊಂದು ಅತ್ಯುತ್ತಮ ವೇದಿಕೆಯಾಗಿದೆ. ಇದಕ್ಕೆ ಅಭೂತಪೂರ್ವ ಪ್ರತಿಕ್ರಿಯೆ ದೊರಕಿದೆ~ ಎಂದು ತಮ್ಮ ಖುಷಿ ವ್ಯಕ್ತಪಡಿಸಿದರು.<br /> <br /> ಆರ್ಜೆಗಳಾದ ಪ್ರದೀಪ್ ಮತ್ತು ವಿನಾಯಕ್ ಕಾರ್ಯಕ್ರಮ ನಿರೂಪಣೆ ಮಾಡಿದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಸುಶ್ರಾವ್ಯ ಕಂಠದ ವ್ಯಾಸರಾಜ್ಗೆ ರೇಡಿಯೊ ಸಿಟಿ 91.1 ಎಫ್ಎಂ ಆಯೋಜಿಸಿದ್ದ `ರೇಡಿಯೊ ಸಿಟಿ ಸೂಪರ್ ಸಿಂಗರ್ ಆಫ್ ಬೆಂಗಳೂರು~ ಕಿರೀಟ.ರಾಯಲ್ ಮೀನಾಕ್ಷಿ ಮಾಲ್ ನಡೆಸಿದ ಗ್ರಾಂಡ್ ಫಿನಾಲೆಯಲ್ಲಿ ಅವರು `ಸೂಪರ್ ಸಿಂಗರ್~ ಆಗಿ ಹೊರಹೊಮ್ಮಿದರು. ಸಂಗೀತ ನಿರ್ದೇಶಕ ಮಣಿಕಂಠ ಕದ್ರಿ ಹಾಗೂ ಹಿನ್ನೆಲೆ ಗಾಯಕಿ ಎಂ.ಡಿ.ಪಲ್ಲವಿ ಅವರು ತೀರ್ಪುಗಾರರಾಗಿದ್ದರು. <br /> <br /> ಬೆಂಗಳೂರಿನ ಕೇಳುಗರಿಂದ ಅತಿ ಹೆಚ್ಚು ವೋಟ್ ಹಾಗೂ ನಿರ್ಣಾಯಕರ ತೀರ್ಮಾನದ ಮೂಲಕ ವಿಜೇತ ಸ್ಥಾನಕ್ಕೆ ಏರಿದ ವ್ಯಾಸರಾಜ್ ಅವರಿಗೆ 1 ಲಕ್ಷ ರೂಪಾಯಿ ನಗದು ಹಾಗೂ ಒಂದು ವರ್ಷ ರೇಡಿಯೊ ಸಿಟಿಯ ಧ್ವನಿಯಾಗುವ ಅವಕಾಶ ದೊರೆಯಿತು.<br /> <br /> ಫೈನಲ್ಸ್ಗೆ ಬಂದಿದ್ದ ಅಶ್ವಿನಿ, ಪೂಜಾ ರಾವ್, ಸಂಗೀತಾ, ವೈಭವ್, ವ್ಯಾಸರಾಜ್ ಹಾಗೂ ಶ್ರೀನಿಧಿ ಅವರುಗಳು ಹಾಡಿನ ಮೋಡಿಗೆ ಪ್ರೇಕ್ಷಕರು ಶರಣಾಗಿದ್ದರು. ಸಂಗೀತ, ಮಾಧುರ್ಯ ಹಾಗೂ ಖುಷಿ ತುಂಬಿದ್ದ ಕಾರ್ಯಕ್ರಮ ಇದಾಗಿತ್ತು.</p>.<p><br /> ಈ ಸಂದರ್ಭದಲ್ಲಿ ಮಾತನಾಡಿದ ರೇಡಿಯೊ ಸಿಟಿ ಸಿಇಓ ಅಪೂರ್ವ ಪುರೋಹಿತ್, ನಾವು ಸದಾ ನಮ್ಮ ಕೇಳುಗರ ಆಕಾಂಕ್ಷೆಯನ್ನು ಗಮನದಲ್ಲಿಟ್ಟುಕೊಂಡು ಕಾರ್ಯಕ್ರಮ ನಿರೂಪಿಸುತ್ತ ಬರುತ್ತಿದ್ದೇವೆ. ಬೆಂಗಳೂರಿನಲ್ಲಿ ಅನೇಕ ಸಂಗೀತ ಪ್ರತಿಭೆಗಳಿದ್ದಾರೆ. <br /> <br /> ಅವರನ್ನು ಬೆಳಕಿಗೆ ತರುವ ಸಲುವಾಗಿ ಈ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ಸಂಗೀತ ಕ್ಷೇತ್ರದಲ್ಲಿ ಬೆಳೆಯಬೇಕು ಎಂಬ ಆಶಯವನ್ನು ಇರಿಸಿಕೊಂಡಿರುವ ಪ್ರತಿಭೆಗಳಿಗೆ ಇದೊಂದು ಅತ್ಯುತ್ತಮ ವೇದಿಕೆಯಾಗಿದೆ. ಇದಕ್ಕೆ ಅಭೂತಪೂರ್ವ ಪ್ರತಿಕ್ರಿಯೆ ದೊರಕಿದೆ~ ಎಂದು ತಮ್ಮ ಖುಷಿ ವ್ಯಕ್ತಪಡಿಸಿದರು.<br /> <br /> ಆರ್ಜೆಗಳಾದ ಪ್ರದೀಪ್ ಮತ್ತು ವಿನಾಯಕ್ ಕಾರ್ಯಕ್ರಮ ನಿರೂಪಣೆ ಮಾಡಿದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>