<p><strong>ಶಿವಮೊಗ್ಗ: </strong>ನಗರದ ಕೋಟೆ ಆಂಜನೇಯ ರಸ್ತೆಯ ಸಿಟಿ ಕೋ-ಆಪರೇಟಿವ್ ಬ್ಯಾಂಕ್ ಆರಂಭವಾಗಿ ಮಾರ್ಚ್ 5ಕ್ಕೆ ನೂರು ವರ್ಷ ತುಂಬಲಿದ್ದು, ಶತಮಾನೋತ್ಸವ ಆಚರಿಸುತ್ತಿರುವ ನಗರದ ಪ್ರಥಮ ಸಹಕಾರಿ ಬ್ಯಾಂಕ್ಯಾಗಿದೆ ಎಂದು ಸಿಟಿ ಕೋ-ಆಪರೇಟಿವ್ ಬ್ಯಾಂಕ್ ಶತಮಾನೋತ್ಸವ ಸಮಿತಿ ಅಧ್ಯಕ್ಷ ಎಸ್.ವಿ. ತಿಮ್ಮಯ್ಯ ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.<br /> <br /> 1912 ಮಾರ್ಚ್ 5ರಂದು ನಗರದ ವಕೀಲ ಎಸ್.ಆರ್. ಬಾಲಕೃಷ್ಣರಾಯರ ನೇತೃತ್ವದಲ್ಲಿ ಬಿ.ಸಿ. ಕೇಶವಯ್ಯ, ಸಿ. ಸುಬ್ಬರಾವ್, ಎನ್. ಶೇಷಶಾಸ್ತ್ರಿ, ಅನಂತಯ್ಯ, ಎಚ್. ನರಸಿಂಹಯ್ಯ ಹಾಗೂ ಶಂಕರನಾರಾಯಣ ಮತ್ತಿತರರು ಸೇರಿ ಹುಟ್ಟು ಹಾಕಿದ ಸಿಟಿ ಕೋ-ಆಪರೇಟಿವ್ ಬ್ಯಾಂಕ್, ಇಂದು 9,750 ಸದಸ್ಯರನ್ನು ಒಳಗೊಂಡು ರೂ.1 ಕೋಟಿ 70 ಲಕ್ಷ ಷೇರು ಬಂಡವಾಳ ಹಾಗೂ 46 ಜನ ನೌಕರರನ್ನು ಒಳಗೊಂಡಿದೆ ಎಂದರು.<br /> <br /> ಈ ಬ್ಯಾಂಕ್ 1966ರಿಂದ ರಿಸರ್ವ್ ಬ್ಯಾಂಕ್ ಮೇಲ್ವಿಚಾರಣೆಗೆ ಒಳಪಟ್ಟಿದ್ದು, ಬ್ಯಾಂಕಿಂಗ್ ನಿಯಮಗಳನ್ನು ಪಾಲಿಸಿಕೊಂಡು ಬರಲಾಗಿದೆ. ಅಲ್ಲದೇ ಇಲ್ಲಿನ ಠೇವಣಿದಾರರಿಗೆ ರೂ. 1 ಲಕ್ಷದವರೆಗೆ ವಿಮಾ ರಕ್ಷಣೆ ನೀಡಲಾಗುತ್ತದೆ. ಸೇಫ್ ಡಿಪಾಜಿಟ್ ಲಾಕರ್ ಅಳವಡಿಕೆ, `ಎ~ ವರ್ಗದ ಸದಸ್ಯರಿಗೆ 25 ಸಾವಿರವರೆಗೆ ಅಪಘಾತ ವಿಮೆ ನೀಡುವುದಲ್ಲದೇ, ಬ್ಯಾಂಕಿನ ಕ್ಷೇತ್ರವನ್ನು ಶಿವಮೊಗ್ಗ- ಭದ್ರಾವತಿ ತಾಲ್ಲೂಕಿಗೆ ವಿಸ್ತರಿಸಲಾಗಿದೆ ಎಂದು ವಿವರಿಸಿದರು.<br /> <br /> ಬ್ಯಾಂಕಿನ ಶತಮಾನೋತ್ಸವದ ಅಂಗವಾಗಿ ಮುಂದಿನ ಎರಡು ತಿಂಗಳ ಒಳಗೆ ಅದ್ದೂರಿ ಶತಮಾನೋತ್ಸವ ಸಮಾರಂಭ ಹಮ್ಮಿಕೊಳ್ಳಲು ತಿರ್ಮಾನಿಸಿದ್ದು, ಅದಕ್ಕಾಗಿ ರೂ.22.5 ಲಕ್ಷ ಮೀಸಲಿಡಲಾಗಿದೆ ಎಂದು ವಿವರಿಸಿದರು.<br /> <br /> ಸುದ್ದಿಗೋಷ್ಠಿಯಲ್ಲಿ ಬ್ಯಾಂಕ್ ಅಧ್ಯಕ್ಷ ಸುರೇಶ್ ಕುಮಾರ್, ಎಸ್.ಆರ್. ಕೃಷ್ಣಸಿಂಗ್, ಡಾ.ಎ.ಎನ್. ವ್ಯಾಸರಾವ್, ರುಕ್ಮಿಣಿ ವೇದವ್ಯಾಸ, ಎಸ್.ಪಿ. ಶೇಷಾದ್ರಿ, ಎಸ್.ಬಿ. ಸತ್ಯನಾರಾಯಣ, ರಿಚರ್ಡ್ ಕ್ವಾಡ್ರಸ್ ಮತ್ತಿತರರು ಉಪಸ್ಥಿತರಿದ್ದರು.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಶಿವಮೊಗ್ಗ: </strong>ನಗರದ ಕೋಟೆ ಆಂಜನೇಯ ರಸ್ತೆಯ ಸಿಟಿ ಕೋ-ಆಪರೇಟಿವ್ ಬ್ಯಾಂಕ್ ಆರಂಭವಾಗಿ ಮಾರ್ಚ್ 5ಕ್ಕೆ ನೂರು ವರ್ಷ ತುಂಬಲಿದ್ದು, ಶತಮಾನೋತ್ಸವ ಆಚರಿಸುತ್ತಿರುವ ನಗರದ ಪ್ರಥಮ ಸಹಕಾರಿ ಬ್ಯಾಂಕ್ಯಾಗಿದೆ ಎಂದು ಸಿಟಿ ಕೋ-ಆಪರೇಟಿವ್ ಬ್ಯಾಂಕ್ ಶತಮಾನೋತ್ಸವ ಸಮಿತಿ ಅಧ್ಯಕ್ಷ ಎಸ್.ವಿ. ತಿಮ್ಮಯ್ಯ ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.<br /> <br /> 1912 ಮಾರ್ಚ್ 5ರಂದು ನಗರದ ವಕೀಲ ಎಸ್.ಆರ್. ಬಾಲಕೃಷ್ಣರಾಯರ ನೇತೃತ್ವದಲ್ಲಿ ಬಿ.ಸಿ. ಕೇಶವಯ್ಯ, ಸಿ. ಸುಬ್ಬರಾವ್, ಎನ್. ಶೇಷಶಾಸ್ತ್ರಿ, ಅನಂತಯ್ಯ, ಎಚ್. ನರಸಿಂಹಯ್ಯ ಹಾಗೂ ಶಂಕರನಾರಾಯಣ ಮತ್ತಿತರರು ಸೇರಿ ಹುಟ್ಟು ಹಾಕಿದ ಸಿಟಿ ಕೋ-ಆಪರೇಟಿವ್ ಬ್ಯಾಂಕ್, ಇಂದು 9,750 ಸದಸ್ಯರನ್ನು ಒಳಗೊಂಡು ರೂ.1 ಕೋಟಿ 70 ಲಕ್ಷ ಷೇರು ಬಂಡವಾಳ ಹಾಗೂ 46 ಜನ ನೌಕರರನ್ನು ಒಳಗೊಂಡಿದೆ ಎಂದರು.<br /> <br /> ಈ ಬ್ಯಾಂಕ್ 1966ರಿಂದ ರಿಸರ್ವ್ ಬ್ಯಾಂಕ್ ಮೇಲ್ವಿಚಾರಣೆಗೆ ಒಳಪಟ್ಟಿದ್ದು, ಬ್ಯಾಂಕಿಂಗ್ ನಿಯಮಗಳನ್ನು ಪಾಲಿಸಿಕೊಂಡು ಬರಲಾಗಿದೆ. ಅಲ್ಲದೇ ಇಲ್ಲಿನ ಠೇವಣಿದಾರರಿಗೆ ರೂ. 1 ಲಕ್ಷದವರೆಗೆ ವಿಮಾ ರಕ್ಷಣೆ ನೀಡಲಾಗುತ್ತದೆ. ಸೇಫ್ ಡಿಪಾಜಿಟ್ ಲಾಕರ್ ಅಳವಡಿಕೆ, `ಎ~ ವರ್ಗದ ಸದಸ್ಯರಿಗೆ 25 ಸಾವಿರವರೆಗೆ ಅಪಘಾತ ವಿಮೆ ನೀಡುವುದಲ್ಲದೇ, ಬ್ಯಾಂಕಿನ ಕ್ಷೇತ್ರವನ್ನು ಶಿವಮೊಗ್ಗ- ಭದ್ರಾವತಿ ತಾಲ್ಲೂಕಿಗೆ ವಿಸ್ತರಿಸಲಾಗಿದೆ ಎಂದು ವಿವರಿಸಿದರು.<br /> <br /> ಬ್ಯಾಂಕಿನ ಶತಮಾನೋತ್ಸವದ ಅಂಗವಾಗಿ ಮುಂದಿನ ಎರಡು ತಿಂಗಳ ಒಳಗೆ ಅದ್ದೂರಿ ಶತಮಾನೋತ್ಸವ ಸಮಾರಂಭ ಹಮ್ಮಿಕೊಳ್ಳಲು ತಿರ್ಮಾನಿಸಿದ್ದು, ಅದಕ್ಕಾಗಿ ರೂ.22.5 ಲಕ್ಷ ಮೀಸಲಿಡಲಾಗಿದೆ ಎಂದು ವಿವರಿಸಿದರು.<br /> <br /> ಸುದ್ದಿಗೋಷ್ಠಿಯಲ್ಲಿ ಬ್ಯಾಂಕ್ ಅಧ್ಯಕ್ಷ ಸುರೇಶ್ ಕುಮಾರ್, ಎಸ್.ಆರ್. ಕೃಷ್ಣಸಿಂಗ್, ಡಾ.ಎ.ಎನ್. ವ್ಯಾಸರಾವ್, ರುಕ್ಮಿಣಿ ವೇದವ್ಯಾಸ, ಎಸ್.ಪಿ. ಶೇಷಾದ್ರಿ, ಎಸ್.ಬಿ. ಸತ್ಯನಾರಾಯಣ, ರಿಚರ್ಡ್ ಕ್ವಾಡ್ರಸ್ ಮತ್ತಿತರರು ಉಪಸ್ಥಿತರಿದ್ದರು.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>