<p>ಉಕ್ರೇನ್ನಲ್ಲಿ ಉಂಟಾಗಿರುವ ಅಶಾಂತಿ 21ನೇ ಶತಮಾನದ ದೊಡ್ಡ ಬಿಕ್ಕಟ್ಟಾಗಿ ಬೆಳೆಯುತ್ತಿದೆ. ನೂರಾರು ಯೋಧರನ್ನು ಒಳಗೊಂಡ ರಷ್ಯಾ ಸೇನೆಯ ತುಕಡಿಗಳು ಉಕ್ರೇನ್ನ ಕ್ರಿಮಿಯಾ ಪ್ರಾಂತ್ಯದಲ್ಲಿ ಬೀಡು ಬಿಟ್ಟಿವೆ. ಉಕ್ರೇನ್ ಸಂಸತ್ ಈ ಬಗ್ಗೆ ಚರ್ಚೆ ನಡೆಸಿದೆ. ಆದರೆ ರಷ್ಯಾ ಆಕ್ರಮಣಕ್ಕೆ ಪ್ರತಿರೋಧ ಒಡ್ಡುವ ಸಾಮರ್ಥ್ಯ ಉಕ್ರೇನ್ಗೆ ಇಲ್ಲ. ಸೇನೆಯನ್ನು ಹಿಂದಕ್ಕೆ ಕರೆಸಿಕೊಳ್ಳಬೇಕೆಂದು ಅಮೆರಿಕ ಸೇರಿದಂತೆ ಪಶ್ಚಿಮ ದೇಶಗಳು ಒತ್ತಡ ಹಾಕುತ್ತಿದ್ದರೂ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಗಣನೆಗೆ ತೆಗೆದುಕೊಂಡಿಲ್ಲ.<br /> <br /> ಹೀಗಾಗಿ ಈ ಪೂರ್ವ ಯೂರೋಪಿಯನ್ ರಾಷ್ಟ್ರದಲ್ಲಿ ಉದ್ವಿಗ್ನತೆ ಹೆಚ್ಚಾಗಿದೆ. ಯುದ್ಧದಂಚಿಗೆ ರಾಷ್ಟ್ರ ಬಂದು ನಿಂತಂತಾಗಿದೆ. ರಷ್ಯಾದ ಈ ಸೇನಾ ಕಾರ್ಯಾಚರಣೆ, ಶೀತಲ ಸಮರದ ನಂತರದ ಈ ದಿನಗಳಲ್ಲಿ ರಷ್ಯಾ ಹಾಗೂ ಪಶ್ಚಿಮ ರಾಷ್ಟ್ರಗಳ ನಡುವಿನ ಅತಿದೊಡ್ಡ ಬಿಕ್ಕಟ್ಟಾಗಿ ಮಾರ್ಪಡುವ ಭೀತಿ ಎದುರಾಗಿದೆ. ಇದು ವಿಶ್ವ ಶಾಂತಿಯ ದೃಷ್ಟಿಯಿಂದ ಅಪೇಕ್ಷಣೀಯವಲ್ಲ. ಈ ಬಿಕ್ಕಟ್ಟು ಎದುರಿಸಲು ತನ್ನದೇ ಮಿಲಿಟರಿಯನ್ನು ಉಕ್ರೇನ್ ಸನ್ನದ್ಧ ಸ್ಥಿತಿಯಲ್ಲಿರಿಸಿದೆ.<br /> <br /> ಜೊತೆಗೆ ನೆರವಿಗಾಗಿ ‘ನ್ಯಾಟೊ’ಗೆ ಮೊರೆ ಹೋಗಿದೆ. ಮೊದಲೇ ರಾಜಕೀಯ ಹಾಗೂ ಆರ್ಥಿಕ ಬಿಕ್ಕಟ್ಟುಗಳಿಂದ ಉಕ್ರೇನ್ ತತ್ತರಿಸಿಹೋಗಿದೆ. ಜನ ಬಂಡೆದ್ದ ನಂತರ, ರಷ್ಯಾ ಪರ ನಿಲುವುಗಳನ್ನು ಹೊಂದಿದ್ದ ಉಕ್ರೇನ್ ಅಧ್ಯಕ್ಷ ವಿಕ್ಟರ್ ಯಾನುಕೊವಿಚ್ ರಷ್ಯಾಗೆ ಪಲಾಯನ ಮಾಡಿದ್ದಾರೆ. ರಾಷ್ಟ್ರದ ಪಶ್ಚಿಮ ಭಾಗದಲ್ಲಿರುವ ರಾಷ್ಟ್ರೀಯವಾದಿ ಉಕ್ರೇನ್ ಜನರು ಹಾಗೂ ಪೂರ್ವ ಭಾಗದಲ್ಲಿರುವ ರಷ್ಯಾ ಪರ ಬೆಂಬಲಿಗರ ಮಧ್ಯೆ ಉಕ್ರೇನ್ ವಿಭಜನೆಗೊಂಡಿದ್ದು ಜಾಗತಿಕ ಶಕ್ತಿಗಳ ನಡುವಿನ ಸಂಘರ್ಷಕ್ಕೆ ನೆಲೆಯಾಗುತ್ತಿರುವುದು ದುರಂತ.<br /> <br /> ಹಣಕಾಸು ಕಷ್ಟಗಳೊಂದಿಗೆ ಉಕ್ರೇನ್ನಲ್ಲಿ ಈಗಿನ ಬಿಕ್ಕಟ್ಟು ಸೃಷ್ಟಿಯಾ ಯಿತು. ಇದರಿಂದಾಗಿ ಯೂರೋಪಿಯನ್ ಒಕ್ಕೂಟದೊಂದಿಗೆ ಉಕ್ರೇನ್ ಒಪ್ಪಂದ ಮಾಡಿಕೊಳ್ಳಲು ಹೊರಟಿದ್ದು ರಷ್ಯಾ ಅಸಮಾಧಾನವನ್ನು ಹೆಚ್ಚಿಸಿದೆ. ಉಕ್ರೇನ್ ಹಾಗೂ ಅದರ ಭವಿಷ್ಯದ ಬಗ್ಗೆ ರಷ್ಯಾಗಿರುವಂತೆಯೇ ಪಶ್ಚಿಮ ರಾಷ್ಟ್ರಗಳಿಗೂ ಅವುಗಳದ್ದೇ ಹಿತಾಸಕ್ತಿಗಳಿವೆ. ಉಕ್ರೇನ್ ನಲ್ಲಿ ಇರುವ ರಷ್ಯನ್ ಜನಾಂಗೀಯ ಸಮೂಹದ ಬಗ್ಗೆ ಮಾಸ್ಕೊಗೆ ಇರುವ ಕಾಳಜಿ ನ್ಯಾಯಬದ್ಧವಾದುದೇ ಇರಬಹುದು.<br /> <br /> ಆದರೆ ರಷ್ಯನ್ ಪರ ಇರುವ ಮಿಲಿಟರಿಗೆ ನೆರವು ನೀಡುವುದಾಗಲೀ, ಕ್ರಿಮಿಯಾ ಪ್ರಾಂತ್ಯದತ್ತ ರಷ್ಯನ್ ಪಡೆಗಳನ್ನು ರವಾನಿಸುವುದಾಗಲೀ ಉಕ್ರೇನ್ನ ಸಾರ್ವಭೌಮಾಧಿಕಾರವನ್ನು ಉಲ್ಲಂಘಿಸಿದಂತೆ ಎಂಬುದನ್ನು ರಷ್ಯಾ ನೆನಪಿಡಬೇಕು. ಅಲ್ಲದೆ ಇಂತಹ ಕಾರ್ಯಾಚರಣೆ, ಅಂತರರಾಷ್ಟ್ರೀಯ ಒಪ್ಪಂದಗಳ ಉಲ್ಲಂಘನೆಯೂ ಹೌದು.<br /> <br /> ಈಗಾಗಲೇ ಹೊತ್ತಿ ಉರಿಯುತ್ತಿರುವ ಅಶಾಂತಿ ಎಂಬ ಅಗ್ನಿಗೆ ಮತ್ತಷ್ಟು ತುಪ್ಪ ಸುರಿಯುವುದು ಯಾರಿಗೂ ಒಳಿತು ತರದು. ಕ್ರಿಮಿಯಾ ಪ್ರಾಂತ್ಯ ಹಾಗೂ ಉಕ್ರೇನ್ನ ಉಳಿದ ಭಾಗಗಳ ನಡುವೆ ಶಾಶ್ವತ ಒಡಕು ತಂದಿಡುವುದೂ ಸರಿಯಲ್ಲ. ಉಕ್ರೇನ್ನಲ್ಲಿ ರಾಜಕೀಯ ಸ್ಥಿರತೆ ಹಾಗೂ ಆರ್ಥಿಕ ಸುಭದ್ರತೆ ನೆಲೆಸುವಂತೆ ಮಾಡಲು ರಷ್ಯಾ ಹಾಗೂ ಪಶ್ಚಿಮ ರಾಷ್ಟ್ರಗಳು ಒಟ್ಟಾಗಿ ಕೆಲಸ ಮಾಡಬೇಕು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಉಕ್ರೇನ್ನಲ್ಲಿ ಉಂಟಾಗಿರುವ ಅಶಾಂತಿ 21ನೇ ಶತಮಾನದ ದೊಡ್ಡ ಬಿಕ್ಕಟ್ಟಾಗಿ ಬೆಳೆಯುತ್ತಿದೆ. ನೂರಾರು ಯೋಧರನ್ನು ಒಳಗೊಂಡ ರಷ್ಯಾ ಸೇನೆಯ ತುಕಡಿಗಳು ಉಕ್ರೇನ್ನ ಕ್ರಿಮಿಯಾ ಪ್ರಾಂತ್ಯದಲ್ಲಿ ಬೀಡು ಬಿಟ್ಟಿವೆ. ಉಕ್ರೇನ್ ಸಂಸತ್ ಈ ಬಗ್ಗೆ ಚರ್ಚೆ ನಡೆಸಿದೆ. ಆದರೆ ರಷ್ಯಾ ಆಕ್ರಮಣಕ್ಕೆ ಪ್ರತಿರೋಧ ಒಡ್ಡುವ ಸಾಮರ್ಥ್ಯ ಉಕ್ರೇನ್ಗೆ ಇಲ್ಲ. ಸೇನೆಯನ್ನು ಹಿಂದಕ್ಕೆ ಕರೆಸಿಕೊಳ್ಳಬೇಕೆಂದು ಅಮೆರಿಕ ಸೇರಿದಂತೆ ಪಶ್ಚಿಮ ದೇಶಗಳು ಒತ್ತಡ ಹಾಕುತ್ತಿದ್ದರೂ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಗಣನೆಗೆ ತೆಗೆದುಕೊಂಡಿಲ್ಲ.<br /> <br /> ಹೀಗಾಗಿ ಈ ಪೂರ್ವ ಯೂರೋಪಿಯನ್ ರಾಷ್ಟ್ರದಲ್ಲಿ ಉದ್ವಿಗ್ನತೆ ಹೆಚ್ಚಾಗಿದೆ. ಯುದ್ಧದಂಚಿಗೆ ರಾಷ್ಟ್ರ ಬಂದು ನಿಂತಂತಾಗಿದೆ. ರಷ್ಯಾದ ಈ ಸೇನಾ ಕಾರ್ಯಾಚರಣೆ, ಶೀತಲ ಸಮರದ ನಂತರದ ಈ ದಿನಗಳಲ್ಲಿ ರಷ್ಯಾ ಹಾಗೂ ಪಶ್ಚಿಮ ರಾಷ್ಟ್ರಗಳ ನಡುವಿನ ಅತಿದೊಡ್ಡ ಬಿಕ್ಕಟ್ಟಾಗಿ ಮಾರ್ಪಡುವ ಭೀತಿ ಎದುರಾಗಿದೆ. ಇದು ವಿಶ್ವ ಶಾಂತಿಯ ದೃಷ್ಟಿಯಿಂದ ಅಪೇಕ್ಷಣೀಯವಲ್ಲ. ಈ ಬಿಕ್ಕಟ್ಟು ಎದುರಿಸಲು ತನ್ನದೇ ಮಿಲಿಟರಿಯನ್ನು ಉಕ್ರೇನ್ ಸನ್ನದ್ಧ ಸ್ಥಿತಿಯಲ್ಲಿರಿಸಿದೆ.<br /> <br /> ಜೊತೆಗೆ ನೆರವಿಗಾಗಿ ‘ನ್ಯಾಟೊ’ಗೆ ಮೊರೆ ಹೋಗಿದೆ. ಮೊದಲೇ ರಾಜಕೀಯ ಹಾಗೂ ಆರ್ಥಿಕ ಬಿಕ್ಕಟ್ಟುಗಳಿಂದ ಉಕ್ರೇನ್ ತತ್ತರಿಸಿಹೋಗಿದೆ. ಜನ ಬಂಡೆದ್ದ ನಂತರ, ರಷ್ಯಾ ಪರ ನಿಲುವುಗಳನ್ನು ಹೊಂದಿದ್ದ ಉಕ್ರೇನ್ ಅಧ್ಯಕ್ಷ ವಿಕ್ಟರ್ ಯಾನುಕೊವಿಚ್ ರಷ್ಯಾಗೆ ಪಲಾಯನ ಮಾಡಿದ್ದಾರೆ. ರಾಷ್ಟ್ರದ ಪಶ್ಚಿಮ ಭಾಗದಲ್ಲಿರುವ ರಾಷ್ಟ್ರೀಯವಾದಿ ಉಕ್ರೇನ್ ಜನರು ಹಾಗೂ ಪೂರ್ವ ಭಾಗದಲ್ಲಿರುವ ರಷ್ಯಾ ಪರ ಬೆಂಬಲಿಗರ ಮಧ್ಯೆ ಉಕ್ರೇನ್ ವಿಭಜನೆಗೊಂಡಿದ್ದು ಜಾಗತಿಕ ಶಕ್ತಿಗಳ ನಡುವಿನ ಸಂಘರ್ಷಕ್ಕೆ ನೆಲೆಯಾಗುತ್ತಿರುವುದು ದುರಂತ.<br /> <br /> ಹಣಕಾಸು ಕಷ್ಟಗಳೊಂದಿಗೆ ಉಕ್ರೇನ್ನಲ್ಲಿ ಈಗಿನ ಬಿಕ್ಕಟ್ಟು ಸೃಷ್ಟಿಯಾ ಯಿತು. ಇದರಿಂದಾಗಿ ಯೂರೋಪಿಯನ್ ಒಕ್ಕೂಟದೊಂದಿಗೆ ಉಕ್ರೇನ್ ಒಪ್ಪಂದ ಮಾಡಿಕೊಳ್ಳಲು ಹೊರಟಿದ್ದು ರಷ್ಯಾ ಅಸಮಾಧಾನವನ್ನು ಹೆಚ್ಚಿಸಿದೆ. ಉಕ್ರೇನ್ ಹಾಗೂ ಅದರ ಭವಿಷ್ಯದ ಬಗ್ಗೆ ರಷ್ಯಾಗಿರುವಂತೆಯೇ ಪಶ್ಚಿಮ ರಾಷ್ಟ್ರಗಳಿಗೂ ಅವುಗಳದ್ದೇ ಹಿತಾಸಕ್ತಿಗಳಿವೆ. ಉಕ್ರೇನ್ ನಲ್ಲಿ ಇರುವ ರಷ್ಯನ್ ಜನಾಂಗೀಯ ಸಮೂಹದ ಬಗ್ಗೆ ಮಾಸ್ಕೊಗೆ ಇರುವ ಕಾಳಜಿ ನ್ಯಾಯಬದ್ಧವಾದುದೇ ಇರಬಹುದು.<br /> <br /> ಆದರೆ ರಷ್ಯನ್ ಪರ ಇರುವ ಮಿಲಿಟರಿಗೆ ನೆರವು ನೀಡುವುದಾಗಲೀ, ಕ್ರಿಮಿಯಾ ಪ್ರಾಂತ್ಯದತ್ತ ರಷ್ಯನ್ ಪಡೆಗಳನ್ನು ರವಾನಿಸುವುದಾಗಲೀ ಉಕ್ರೇನ್ನ ಸಾರ್ವಭೌಮಾಧಿಕಾರವನ್ನು ಉಲ್ಲಂಘಿಸಿದಂತೆ ಎಂಬುದನ್ನು ರಷ್ಯಾ ನೆನಪಿಡಬೇಕು. ಅಲ್ಲದೆ ಇಂತಹ ಕಾರ್ಯಾಚರಣೆ, ಅಂತರರಾಷ್ಟ್ರೀಯ ಒಪ್ಪಂದಗಳ ಉಲ್ಲಂಘನೆಯೂ ಹೌದು.<br /> <br /> ಈಗಾಗಲೇ ಹೊತ್ತಿ ಉರಿಯುತ್ತಿರುವ ಅಶಾಂತಿ ಎಂಬ ಅಗ್ನಿಗೆ ಮತ್ತಷ್ಟು ತುಪ್ಪ ಸುರಿಯುವುದು ಯಾರಿಗೂ ಒಳಿತು ತರದು. ಕ್ರಿಮಿಯಾ ಪ್ರಾಂತ್ಯ ಹಾಗೂ ಉಕ್ರೇನ್ನ ಉಳಿದ ಭಾಗಗಳ ನಡುವೆ ಶಾಶ್ವತ ಒಡಕು ತಂದಿಡುವುದೂ ಸರಿಯಲ್ಲ. ಉಕ್ರೇನ್ನಲ್ಲಿ ರಾಜಕೀಯ ಸ್ಥಿರತೆ ಹಾಗೂ ಆರ್ಥಿಕ ಸುಭದ್ರತೆ ನೆಲೆಸುವಂತೆ ಮಾಡಲು ರಷ್ಯಾ ಹಾಗೂ ಪಶ್ಚಿಮ ರಾಷ್ಟ್ರಗಳು ಒಟ್ಟಾಗಿ ಕೆಲಸ ಮಾಡಬೇಕು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>