<p><strong>ಶಿಕಾರಿಪುರ:</strong> ಪಟ್ಟಣದಲ್ಲಿ ಮಳೆಯ ಆಗಮನಕ್ಕಾಗಿ ಪ್ರಾರ್ಥಿಸಿ ಸೋಮವಾರ ದೊಡ್ಡಕೇರಿ ಗಿಡ್ಡೇಶ್ವರ ದೇವಸ್ಥಾನ ಸಮಿತಿ ಹಾಗೂ ಕುರುಬ ಸಮುದಾಯದಿಂದ ಗಿಡ್ಡೇಶ್ವರ ಹಾಗೂ ಶಿರಸಿ ಮಾರಿಕಾಂಬಾ ದೇವರ ಪಲ್ಲಕ್ಕಿ ಮೆರವಣಿಗೆ ಹಾಗೂ ಪರವು ನಡೆಯಿತು.<br /> <br /> ಮಳೆಗಾಗಿ ಪ್ರಾರ್ಥಿಸಿ ನೂರಾರು ಭಕ್ತರಿಂದ ಬೆಳಿಗ್ಗೆಯಿಂದಲೇ ಗಿಡ್ಡೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ನೇರವೇರಿತು. ನಂತರ ಗಿಡ್ಡೇಶ್ವರ ಹಾಗೂ ಶಿರಸಿ ಮಾರಿಕಾಂಬಾ ದೇವರನ್ನು ಪಲ್ಲಕ್ಕಿಯಲ್ಲಿ ಹೊತ್ತ ಭಕ್ತರು ಭಜನೆ, ಡೊಳ್ಳು ಕುಣಿತ ಕಲಾ ಮೇಳಗಳೊಂದಿಗೆ ಮೆರವಣಿಗೆ ನಡೆಸಿ, ಶಿವಗಿರಿ ಕಲ್ಯಾಣಮಂಟಪದ ಹತ್ತಿರ ಹೊಳೆ ಪೂಜೆ ನೇರವೇರಿಸಿದರು. <br /> <br /> ನಂತರ ಮೆರವಣಿಗೆ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ಈ ವೇಳೆ ದೇವರ ಹರಕೆ ಹೊತ್ತ ಮಹಿಳೆಯರು ಪೂರ್ಣಕುಂಭ ಹೊತ್ತು ದೇವರನ್ನು ಸ್ಮರಿಸುತ್ತಾ ಸಾಗಿದರು.<br /> ಬೀದಿಗಳಲ್ಲಿ ಸಂಚರಿದ ವೇಳೆ ಮೈಲಾರಲಿಂಗ ದೇವರನ್ನು ಪ್ರಾರ್ಥಿಸಿ ಗೊರವಯ್ಯ ಅವರು ಬಾಳೆಹಣ್ಣು, ತುಪ್ಪ ಹಾಗೂ ಸಕ್ಕರೆ ಮಿಶ್ರಣದ ಹಣ್ಣು ತುಪ್ಪವನ್ನು ತಯಾರಿಸಿ ದೇವರ ನೈವೇದ್ಯ ಮಾಡಿ ಹಂಚಿದರು. <br /> ಮೆರವಣಿಗೆ ದೇವಸ್ಥಾನಕ್ಕೆ ಮರಳಿದ ನಂತರ, ದೇವಸ್ಥಾನ ಸಮಿತಿಯಿಂದ ಭಕ್ತರಿಗೆ ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಶಿಕಾರಿಪುರ:</strong> ಪಟ್ಟಣದಲ್ಲಿ ಮಳೆಯ ಆಗಮನಕ್ಕಾಗಿ ಪ್ರಾರ್ಥಿಸಿ ಸೋಮವಾರ ದೊಡ್ಡಕೇರಿ ಗಿಡ್ಡೇಶ್ವರ ದೇವಸ್ಥಾನ ಸಮಿತಿ ಹಾಗೂ ಕುರುಬ ಸಮುದಾಯದಿಂದ ಗಿಡ್ಡೇಶ್ವರ ಹಾಗೂ ಶಿರಸಿ ಮಾರಿಕಾಂಬಾ ದೇವರ ಪಲ್ಲಕ್ಕಿ ಮೆರವಣಿಗೆ ಹಾಗೂ ಪರವು ನಡೆಯಿತು.<br /> <br /> ಮಳೆಗಾಗಿ ಪ್ರಾರ್ಥಿಸಿ ನೂರಾರು ಭಕ್ತರಿಂದ ಬೆಳಿಗ್ಗೆಯಿಂದಲೇ ಗಿಡ್ಡೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ನೇರವೇರಿತು. ನಂತರ ಗಿಡ್ಡೇಶ್ವರ ಹಾಗೂ ಶಿರಸಿ ಮಾರಿಕಾಂಬಾ ದೇವರನ್ನು ಪಲ್ಲಕ್ಕಿಯಲ್ಲಿ ಹೊತ್ತ ಭಕ್ತರು ಭಜನೆ, ಡೊಳ್ಳು ಕುಣಿತ ಕಲಾ ಮೇಳಗಳೊಂದಿಗೆ ಮೆರವಣಿಗೆ ನಡೆಸಿ, ಶಿವಗಿರಿ ಕಲ್ಯಾಣಮಂಟಪದ ಹತ್ತಿರ ಹೊಳೆ ಪೂಜೆ ನೇರವೇರಿಸಿದರು. <br /> <br /> ನಂತರ ಮೆರವಣಿಗೆ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ಈ ವೇಳೆ ದೇವರ ಹರಕೆ ಹೊತ್ತ ಮಹಿಳೆಯರು ಪೂರ್ಣಕುಂಭ ಹೊತ್ತು ದೇವರನ್ನು ಸ್ಮರಿಸುತ್ತಾ ಸಾಗಿದರು.<br /> ಬೀದಿಗಳಲ್ಲಿ ಸಂಚರಿದ ವೇಳೆ ಮೈಲಾರಲಿಂಗ ದೇವರನ್ನು ಪ್ರಾರ್ಥಿಸಿ ಗೊರವಯ್ಯ ಅವರು ಬಾಳೆಹಣ್ಣು, ತುಪ್ಪ ಹಾಗೂ ಸಕ್ಕರೆ ಮಿಶ್ರಣದ ಹಣ್ಣು ತುಪ್ಪವನ್ನು ತಯಾರಿಸಿ ದೇವರ ನೈವೇದ್ಯ ಮಾಡಿ ಹಂಚಿದರು. <br /> ಮೆರವಣಿಗೆ ದೇವಸ್ಥಾನಕ್ಕೆ ಮರಳಿದ ನಂತರ, ದೇವಸ್ಥಾನ ಸಮಿತಿಯಿಂದ ಭಕ್ತರಿಗೆ ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>