<p><strong>ಮಡಿಕೇರಿ (ಆನೆಕಾಡು):</strong> ಆನೆಕಾಡು ಹಾಡಿಯ ಗಿರಿಜನರ ಮೊರೆ ಆ ದೇವರಿಗೆ ಕೇಳಿಸಲೇ ಇಲ್ಲ. ಗಿರಿಜನರ ಹರಕೆಯೂ ಸಹಾಯಕ್ಕೆ ಬಾರದೇ ಹೋಯಿತು. ಹಾಡಿಯ ಸದಸ್ಯನಂತೆ ಓಡಾಡಿಕೊಂಡು, ಎಲ್ಲರ ಪ್ರೀತಿಗೆ ಪಾತ್ರವಾಗಿದ್ದ ಮರಿಯಾನೆ `ಶಿವ~ನನ್ನು ಸೋಮವಾರ ರಾತ್ರಿ ತನ್ನ ಬಳಿ ಕರೆಸಿಕೊಂಡುಬಿಟ್ಟ. <br /> <br /> ಮೂರು ದಿನಗಳಿಂದ ಉಸಿರಾಟದ ತೊಂದರೆಯಿಂದ (ನ್ಯೂಮೊನಿಯಾ) ಬಳಲುತ್ತಿದ್ದ ಮರಿಯಾನೆಯನ್ನು ರಕ್ಷಿಸಲು ವೈದ್ಯರ ತಂಡ ಸಾಕಷ್ಟು ಪ್ರಯತ್ನಿಸಿತ್ತು. ವೈದ್ಯರ ಪ್ರಯತ್ನ, ಹಾಡಿ ಜನರ ಹರಕೆ ಯಾವುದಕ್ಕೂ ಫಲ ದೊರೆಯಲಿಲ್ಲ. ಮರಿಯಾನೆ `ಶಿವ~ ಇಹಲೋಕ ತ್ಯಜಿಸಿತು. <br /> <br /> ಹಸುಗೂಸು ಇದ್ದಾಗಲೇ ತಾಯಿಯಿಂದ ಬೇರ್ಪಟ್ಟಿದ್ದ `ಶಿವ~ನಿಗೆ ಕುಶಾಲನಗರ ಬಳಿಯ ಆನೆಕಾಡು ಹಾಡಿಯ ಗಿರಿಜನರು ಆಶ್ರಯ ನೀಡಿದ್ದರು. ನಿಲ್ಲುವುದಕ್ಕೂ ನಿತ್ರಾಣವಾಗಿದ್ದ `ಶಿವ~ನನ್ನು ತಂದು ಸಾಕಿದ ಗಿರಿಜನರು ಅಚ್ಚರಿ ಮೂಡಿಸುವಂತೆ ಮರಿಯಾನೆಗೆ ಬದುಕು ನೀಡಿದ್ದರು. <br /> <br /> ತಾಯಿ ಹಾಲು ಇಲ್ಲದೇ ಅನಾಥವಾಗಿದ್ದ ಮರಿಯಾನೆ ಬದುಕುಳಿಯುವುದೇ ಅನುಮಾನ ಎಂದು ಎಲ್ಲರೂ ಅಂದುಕೊಳ್ಳುತ್ತಿದ್ದ ಸಮಯದಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ಗಿರಿಜನರ ಮುತುವರ್ಜಿಯಿಂದ ಮರಿಯಾನೆಯು ಒಂದು ವರ್ಷದವರೆಗೆ ಬದುಕಿ ಬಾಳಿದ್ದು ಈಗ ನೆನಪು ಮಾತ್ರ.<br /> <br /> <strong>ಮಗನನ್ನು ಕಳೆದುಕೊಂಡೆ:</strong> `ಶಿವ~ ನಮ್ಮ ಕುಟುಂಬದ ಒಬ್ಬ ಸದಸ್ಯನಂತಿದ್ದ. ನನ್ನ ಮಕ್ಕಳು ಈತನೊಂದಿಗೆ ಆಟ ಆಡುತ್ತಿದ್ದರು. ಹಟ್ಟಿಯಲ್ಲಿ ಅವನ ಜೊತೆ ನಾನು ಮಲಗಿಕೊಳ್ಳುತ್ತಿದ್ದೆ. ಈಗ ನಮ್ಮ ಮಗನನ್ನು ಕಳೆದುಕೊಂಡಂತಾಗಿದೆ~ ಎಂದು ಶಿವನ ಸಲಹುತ್ತಿದ್ದ ಚಂದ್ರು ಹಾಗೂ ಆತನ ಪತ್ನಿ ಹೇಮಾವತಿ ಕಣ್ಣೀರಿಟ್ಟರು. <br /> <br /> `ಶಿವ~ ನೆಲಹಿಡಿದ ದಿನದಿಂದ ನಮ್ಮ ಗಂಟಲಲ್ಲಿ ಒಂದು ತುತ್ತು ಇಳಿದಿಲ್ಲ. ಹಗಲು-ರಾತ್ರಿ ಎನ್ನದೇ ಇವನ ಸೇವೆಯಲ್ಲಿ ನಿರತರಾಗಿದ್ದೆವು. ಬೇಗ ಹುಷಾರಾಗಲಿ ಎಂದು ಹಾಡಿಯ ಹಿಂದೆ ಇರುವ ಬಸವಣ್ಣ ಹಾಗೂ ದುಬಾರೆಯಲ್ಲಿರುವ ಅಮ್ಮಳೆ ದೇವಿಗೆ ಹರಕೆ ಹೊತ್ತಿದ್ದೆವು. ಇದ್ಯಾವುದೂ ಪ್ರಯೋಜನಕ್ಕೆ ಬರಲಿಲ್ಲ. ಕಳೆದ ತಿಂಗಳಷ್ಟೇ ನಮ್ಮ ಮೂರನೇ ಮಗ ತೀರಿಹೋಗಿದ್ದಾನೆ. ಈಗ `ಶಿವ~ ಕೂಡ ನಮ್ಮಿಂದ ದೂರವಾಗಿದ್ದಾನೆ. ಇದಕ್ಕೆ ಏನು ಕಾರಣ ಎಂದು ಕಣಿ ಕೇಳಬೇಕು ಎಂದು ಅಳಲು ತೋಡಿಕೊಂಡರು. <br /> <br /> ಮರಿಯಾನೆಯನ್ನು ದತ್ತು ಪಡೆದುಕೊಂಡಿದ್ದ ಸುಂಟಿಕೊಪ್ಪದ ಕಾಫಿ ಬೆಳೆಗಾರ ವಿನೋದ್ ಶಿವಪ್ಪ ಮಾತನಾಡಿ, ಇದೊಂದು ದುರದೃಷ್ಟಕರ ಸಂಗತಿಯಾಗಿದೆ. `ಶಿವನನ್ನು ಕಳೆದುಕೊಂಡಿದ್ದಕ್ಕೆ ನನಗೆ ಮರೆಯಲಾಗದ ನೋವು ಉಂಟಾಗಿದೆ~ ಎಂದರು. ಅರಣ್ಯ ಇಲಾಖೆಯವರು ಹಾಗೂ ಹಾಡಿಯ ಜನರು ಎಷ್ಟೆಲ್ಲ ಕಷ್ಟಪಟ್ಟರೂ ಮರಿಯಾನೆಯನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.<br /> <br /> 15-20 ದಿನದಲ್ಲಿ ಮರಣೋತ್ತರ ಪರೀಕ್ಷೆ ವರದಿ: ನ್ಯೂಮೊನಿಯಾದಿಂದ ಮರಿಯಾನೆ ಮೃತಪಟ್ಟಿದೆ. ಇತರ ಕಾರಣಗಳೇನಾದರೂ ಇದ್ದರೆ ಅವುಗಳ ಪತ್ತೆಗಾಗಿ ಮರಣೋತ್ತರ ಪರೀಕ್ಷೆಯನ್ನು ಮಾಡಲಾಗಿದೆ. ವರದಿಯು 15-20 ದಿನಗಳೊಳಗೆ ಸಿಗಬಹುದು ಎಂದು ರಾಜೀವ್ ಗಾಂಧಿ ರಾಷ್ಟ್ರೀಯ ಉದ್ಯಾನವನದ ಪಶುವೈದ್ಯಾಧಿಕಾರಿ ಉಮಾಶಂಕರ್ ಹೇಳಿದರು. <br /> <br /> ಹುಟ್ಟಿದ ತಕ್ಷಣವೇ ತಾಯಿಯಿಂದ ಬೇರ್ಪಟ್ಟ `ಶಿವ~ನಿಗೆ ತಾಯಿ ಹಾಲು ದೊರೆತಿಲ್ಲ. ರೋಗ ನಿರೋಧಕ ಶಕ್ತಿ ಹೊಂದಿದ ತಾಯಿ ಹಾಲು ದೊರೆಯದೆ `ಶಿವ~ ನಿಶಕ್ತನಾಗಿಯೇ ಬೆಳೆದ. ಇದರಿಂದಾಗಿ ಸಣ್ಣ ಸಣ್ಣ ಕಾಯಿಲೆ, ಸೋಂಕು ಎದುರಿಸುವ ಶಕ್ತಿ `ಶಿವ~ನ ದೇಹಕ್ಕೆ ಇರುವುದಿಲ್ಲ ಎಂದು ಆತನನ್ನು ಪರೀಕ್ಷಿಸುತ್ತಿರುವ ವೈದ್ಯಾಧಿಕಾರಿಗಳು ತಿಳಿಸಿದರು.<br /> <br /> ಹಾರಂಗಿ ಜಲಾಶಯದ ಹಿನ್ನೀರಿನ ಪ್ರದೇಶವಾದ ಯಡವಾರೆಯಲ್ಲಿ ಕಳೆದ ವರ್ಷ ಮಾರ್ಚ್ ತಿಂಗಳಲ್ಲಿ `ಶಿವ~ ಪತ್ತೆಯಾಗಿದ್ದ. ತಾಯಿಯಾನೆಯು ಹೆರಿಗೆ ನಂತರ ಗರ್ಭಕೋಶದ ತೊಂದರೆಯಿಂದ ಮೃತಪಟ್ಟಿತ್ತು. ನಂತರ `ಶಿವ~ನನ್ನು ಕುಶಾಲನಗರದ ಬಳಿಯಿರುವ ಆನೆಕಾಡು ಶಿಬಿರಕ್ಕೆ ತಂದು ಗಿರಿಜನರಿಗೆ ಸಾಕಲು ನೀಡಲಾಗಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಡಿಕೇರಿ (ಆನೆಕಾಡು):</strong> ಆನೆಕಾಡು ಹಾಡಿಯ ಗಿರಿಜನರ ಮೊರೆ ಆ ದೇವರಿಗೆ ಕೇಳಿಸಲೇ ಇಲ್ಲ. ಗಿರಿಜನರ ಹರಕೆಯೂ ಸಹಾಯಕ್ಕೆ ಬಾರದೇ ಹೋಯಿತು. ಹಾಡಿಯ ಸದಸ್ಯನಂತೆ ಓಡಾಡಿಕೊಂಡು, ಎಲ್ಲರ ಪ್ರೀತಿಗೆ ಪಾತ್ರವಾಗಿದ್ದ ಮರಿಯಾನೆ `ಶಿವ~ನನ್ನು ಸೋಮವಾರ ರಾತ್ರಿ ತನ್ನ ಬಳಿ ಕರೆಸಿಕೊಂಡುಬಿಟ್ಟ. <br /> <br /> ಮೂರು ದಿನಗಳಿಂದ ಉಸಿರಾಟದ ತೊಂದರೆಯಿಂದ (ನ್ಯೂಮೊನಿಯಾ) ಬಳಲುತ್ತಿದ್ದ ಮರಿಯಾನೆಯನ್ನು ರಕ್ಷಿಸಲು ವೈದ್ಯರ ತಂಡ ಸಾಕಷ್ಟು ಪ್ರಯತ್ನಿಸಿತ್ತು. ವೈದ್ಯರ ಪ್ರಯತ್ನ, ಹಾಡಿ ಜನರ ಹರಕೆ ಯಾವುದಕ್ಕೂ ಫಲ ದೊರೆಯಲಿಲ್ಲ. ಮರಿಯಾನೆ `ಶಿವ~ ಇಹಲೋಕ ತ್ಯಜಿಸಿತು. <br /> <br /> ಹಸುಗೂಸು ಇದ್ದಾಗಲೇ ತಾಯಿಯಿಂದ ಬೇರ್ಪಟ್ಟಿದ್ದ `ಶಿವ~ನಿಗೆ ಕುಶಾಲನಗರ ಬಳಿಯ ಆನೆಕಾಡು ಹಾಡಿಯ ಗಿರಿಜನರು ಆಶ್ರಯ ನೀಡಿದ್ದರು. ನಿಲ್ಲುವುದಕ್ಕೂ ನಿತ್ರಾಣವಾಗಿದ್ದ `ಶಿವ~ನನ್ನು ತಂದು ಸಾಕಿದ ಗಿರಿಜನರು ಅಚ್ಚರಿ ಮೂಡಿಸುವಂತೆ ಮರಿಯಾನೆಗೆ ಬದುಕು ನೀಡಿದ್ದರು. <br /> <br /> ತಾಯಿ ಹಾಲು ಇಲ್ಲದೇ ಅನಾಥವಾಗಿದ್ದ ಮರಿಯಾನೆ ಬದುಕುಳಿಯುವುದೇ ಅನುಮಾನ ಎಂದು ಎಲ್ಲರೂ ಅಂದುಕೊಳ್ಳುತ್ತಿದ್ದ ಸಮಯದಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ಗಿರಿಜನರ ಮುತುವರ್ಜಿಯಿಂದ ಮರಿಯಾನೆಯು ಒಂದು ವರ್ಷದವರೆಗೆ ಬದುಕಿ ಬಾಳಿದ್ದು ಈಗ ನೆನಪು ಮಾತ್ರ.<br /> <br /> <strong>ಮಗನನ್ನು ಕಳೆದುಕೊಂಡೆ:</strong> `ಶಿವ~ ನಮ್ಮ ಕುಟುಂಬದ ಒಬ್ಬ ಸದಸ್ಯನಂತಿದ್ದ. ನನ್ನ ಮಕ್ಕಳು ಈತನೊಂದಿಗೆ ಆಟ ಆಡುತ್ತಿದ್ದರು. ಹಟ್ಟಿಯಲ್ಲಿ ಅವನ ಜೊತೆ ನಾನು ಮಲಗಿಕೊಳ್ಳುತ್ತಿದ್ದೆ. ಈಗ ನಮ್ಮ ಮಗನನ್ನು ಕಳೆದುಕೊಂಡಂತಾಗಿದೆ~ ಎಂದು ಶಿವನ ಸಲಹುತ್ತಿದ್ದ ಚಂದ್ರು ಹಾಗೂ ಆತನ ಪತ್ನಿ ಹೇಮಾವತಿ ಕಣ್ಣೀರಿಟ್ಟರು. <br /> <br /> `ಶಿವ~ ನೆಲಹಿಡಿದ ದಿನದಿಂದ ನಮ್ಮ ಗಂಟಲಲ್ಲಿ ಒಂದು ತುತ್ತು ಇಳಿದಿಲ್ಲ. ಹಗಲು-ರಾತ್ರಿ ಎನ್ನದೇ ಇವನ ಸೇವೆಯಲ್ಲಿ ನಿರತರಾಗಿದ್ದೆವು. ಬೇಗ ಹುಷಾರಾಗಲಿ ಎಂದು ಹಾಡಿಯ ಹಿಂದೆ ಇರುವ ಬಸವಣ್ಣ ಹಾಗೂ ದುಬಾರೆಯಲ್ಲಿರುವ ಅಮ್ಮಳೆ ದೇವಿಗೆ ಹರಕೆ ಹೊತ್ತಿದ್ದೆವು. ಇದ್ಯಾವುದೂ ಪ್ರಯೋಜನಕ್ಕೆ ಬರಲಿಲ್ಲ. ಕಳೆದ ತಿಂಗಳಷ್ಟೇ ನಮ್ಮ ಮೂರನೇ ಮಗ ತೀರಿಹೋಗಿದ್ದಾನೆ. ಈಗ `ಶಿವ~ ಕೂಡ ನಮ್ಮಿಂದ ದೂರವಾಗಿದ್ದಾನೆ. ಇದಕ್ಕೆ ಏನು ಕಾರಣ ಎಂದು ಕಣಿ ಕೇಳಬೇಕು ಎಂದು ಅಳಲು ತೋಡಿಕೊಂಡರು. <br /> <br /> ಮರಿಯಾನೆಯನ್ನು ದತ್ತು ಪಡೆದುಕೊಂಡಿದ್ದ ಸುಂಟಿಕೊಪ್ಪದ ಕಾಫಿ ಬೆಳೆಗಾರ ವಿನೋದ್ ಶಿವಪ್ಪ ಮಾತನಾಡಿ, ಇದೊಂದು ದುರದೃಷ್ಟಕರ ಸಂಗತಿಯಾಗಿದೆ. `ಶಿವನನ್ನು ಕಳೆದುಕೊಂಡಿದ್ದಕ್ಕೆ ನನಗೆ ಮರೆಯಲಾಗದ ನೋವು ಉಂಟಾಗಿದೆ~ ಎಂದರು. ಅರಣ್ಯ ಇಲಾಖೆಯವರು ಹಾಗೂ ಹಾಡಿಯ ಜನರು ಎಷ್ಟೆಲ್ಲ ಕಷ್ಟಪಟ್ಟರೂ ಮರಿಯಾನೆಯನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.<br /> <br /> 15-20 ದಿನದಲ್ಲಿ ಮರಣೋತ್ತರ ಪರೀಕ್ಷೆ ವರದಿ: ನ್ಯೂಮೊನಿಯಾದಿಂದ ಮರಿಯಾನೆ ಮೃತಪಟ್ಟಿದೆ. ಇತರ ಕಾರಣಗಳೇನಾದರೂ ಇದ್ದರೆ ಅವುಗಳ ಪತ್ತೆಗಾಗಿ ಮರಣೋತ್ತರ ಪರೀಕ್ಷೆಯನ್ನು ಮಾಡಲಾಗಿದೆ. ವರದಿಯು 15-20 ದಿನಗಳೊಳಗೆ ಸಿಗಬಹುದು ಎಂದು ರಾಜೀವ್ ಗಾಂಧಿ ರಾಷ್ಟ್ರೀಯ ಉದ್ಯಾನವನದ ಪಶುವೈದ್ಯಾಧಿಕಾರಿ ಉಮಾಶಂಕರ್ ಹೇಳಿದರು. <br /> <br /> ಹುಟ್ಟಿದ ತಕ್ಷಣವೇ ತಾಯಿಯಿಂದ ಬೇರ್ಪಟ್ಟ `ಶಿವ~ನಿಗೆ ತಾಯಿ ಹಾಲು ದೊರೆತಿಲ್ಲ. ರೋಗ ನಿರೋಧಕ ಶಕ್ತಿ ಹೊಂದಿದ ತಾಯಿ ಹಾಲು ದೊರೆಯದೆ `ಶಿವ~ ನಿಶಕ್ತನಾಗಿಯೇ ಬೆಳೆದ. ಇದರಿಂದಾಗಿ ಸಣ್ಣ ಸಣ್ಣ ಕಾಯಿಲೆ, ಸೋಂಕು ಎದುರಿಸುವ ಶಕ್ತಿ `ಶಿವ~ನ ದೇಹಕ್ಕೆ ಇರುವುದಿಲ್ಲ ಎಂದು ಆತನನ್ನು ಪರೀಕ್ಷಿಸುತ್ತಿರುವ ವೈದ್ಯಾಧಿಕಾರಿಗಳು ತಿಳಿಸಿದರು.<br /> <br /> ಹಾರಂಗಿ ಜಲಾಶಯದ ಹಿನ್ನೀರಿನ ಪ್ರದೇಶವಾದ ಯಡವಾರೆಯಲ್ಲಿ ಕಳೆದ ವರ್ಷ ಮಾರ್ಚ್ ತಿಂಗಳಲ್ಲಿ `ಶಿವ~ ಪತ್ತೆಯಾಗಿದ್ದ. ತಾಯಿಯಾನೆಯು ಹೆರಿಗೆ ನಂತರ ಗರ್ಭಕೋಶದ ತೊಂದರೆಯಿಂದ ಮೃತಪಟ್ಟಿತ್ತು. ನಂತರ `ಶಿವ~ನನ್ನು ಕುಶಾಲನಗರದ ಬಳಿಯಿರುವ ಆನೆಕಾಡು ಶಿಬಿರಕ್ಕೆ ತಂದು ಗಿರಿಜನರಿಗೆ ಸಾಕಲು ನೀಡಲಾಗಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>