<p>ಚಿಕ್ಕಮಗಳೂರು: ಬೆಲೆ ಕುಸಿತ ಮತ್ತು ಕೊಳೆ ರೋಗದಿಂದ ನೆಲಕಚ್ಚಿದ್ದ ಶುಂಠಿ ಬೆಳೆಗಾರರು ನಿರೀಕ್ಷೆಗಳು ಗರಿಗೆದರುವಂತೆ ಮಾರುಕಟ್ಟೆಯಲ್ಲಿ ಶುಂಠಿಗೆ ಬಂಪರ್ ಬೆಲೆ ಬಂದಿದೆ. ಬೆಳೆಗಾರರಿಗೆ ಶುಕ್ರದೆಸೆ ತಿರುಗುವ ಲಕ್ಷಣಗಳು ಮೂಡಲಾರಂಭಿಸಿವೆ. <br /> <br /> ಹಾಸನ ಮಾರುಕಟ್ಟೆಯಲ್ಲಿ ಉತ್ತಮ ಶುಂಠಿ 60 ಕೆ.ಜಿ. ಪ್ರತಿ ಚೀಲಕ್ಕೆ 1200 ರೂಪಾಯಿ ದರ ನಿಗದಿಯಾಗಿದ್ದರೆ, ಶಿವಮೊಗ್ಗ ಮಾರುಕಟ್ಟೆಯಲ್ಲಿ 1800 ದರ ನಿಗದಿಯಾಗಿದೆ. ಚಿಕ್ಕಮಗಳೂರು ಮಾರುಕಟ್ಟೆಯಲ್ಲೂ ಉತ್ತಮ ಧಾರಣೆಯಲ್ಲಿ ಶುಂಠಿ ಖರೀದಿಸ ಲಾಗುತ್ತಿದೆ.<br /> <br /> ಚಿಕ್ಕಮಗಳೂರು ಮಾರುಕಟ್ಟೆಯಲ್ಲಿ ಅತ್ಯುತ್ತಮ ಶುಂಠಿ ಪ್ರತಿ ಕೆ.ಜಿ.ಗೆ 10 ರೂಪಾಯಿಗಳಿಂದ 12 ರೂಪಾಯಿ, ಉತ್ತಮ ಶುಂಠಿ 6 ರೂಪಾಯಿಗಳಿಂದ 8 ರೂಪಾಯಿ ಹಾಗೂ ಸಾಮಾನ್ಯ ಶುಂಠಿ 3 ರೂಪಾಯಿಗಳಿಂದ 4 ರೂಪಾಯಿವರೆಗೆ ಖರೀದಿಸಲಾಗುತ್ತಿದೆ.<br /> <br /> ಶುಂಠಿ ಕೀಳುವ ಸಮಯದಲ್ಲಿ ಪ್ರತಿ ಚೀಲಕ್ಕೆ 300 ರೂಪಾಯಿ ದರ ನಿಗದಿಯಾಗಿತ್ತು. ನಂತರ ಸ್ವಲ್ಪ ಏರಿಕೆಯಾಗಿ 600 ರೂಪಾಯಿಂದ 800 ರೂಪಾಯಿಗೆ ಹೆಚ್ಚಳಗೊಂಡಿತು. ಈಗ ಏಕಾಏಕಿ 1200 ರೂಪಾಯಿ ವರೆಗೆ ಶುಂಠಿ ಬೆಲೆ ಏರಿಕೆಯಾಗಿ ಬೆಳೆಗಾರರನ್ನು ಅಚ್ಚರಿಗೊಳಿಸಿದೆ.<br /> <br /> ಕಳೆದ ವರ್ಷ ಶುಂಠಿ 60 ಕೆ.ಜಿ. ಪ್ರತಿ ಚೀಲಕ್ಕೆ ಕನಿಷ್ಠ 500 ರೂಪಾಯಿ ಗಳಿಂದ 900 ರೂಪಾಯಿವರೆಗೆ ಮರಾಟವಾಗಿ ರೈತರು ಅಲ್ಪಸ್ವಲ್ಪ ಆದಾಯ ಗಳಿಸಿದ್ದರು. ಈ ವರ್ಷ ಅದೇ ದರ ಇರಬಹುದೆಂದು ತಿಳಿದು ರೈತರು ಗದ್ದೆ ಹೊಲಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಶುಂಠಿ ಬೆಳೆದಿದ್ದರು. ಆದರೆ ಆರಂಭದಲ್ಲಿ 300 ರೂಪಾಯಿ ಗಳಲ್ಲಿ ಶುಂಠಿ ಮಾರಾಟ ಮಾಡಬೇಕಾಯಿತು.<br /> <br /> ಸ್ವಲ್ಪ ದರ ಹೆಚ್ಚಳಗೊಳ್ಳ ಬಹುದೆಂದು ನಿರೀಕ್ಷೆಯ ಲ್ಲಿದ್ದವರಿಗೆ ದರ 500ರೂಪಾಯಿಗೆ ಬಂದು ನಿಂತಿತು. ಕೊನೆ ಗಳಿಗೆಯಲ್ಲಿ ಏನು ಮಾಡಲಾಗದೆ, ಇದ್ದಬದ್ದ ಶುಂಠಿ ಮಾರಾಟ ಮಾಡಿದರು. ಕಳೆದೆರಡು ದಿನಗಳಿಂದ ಶುಂಠಿಗೆ 1200 ರೂಪಾಯಿ ದರಕ್ಕೆ ಮಾರಾಟವಾಗುತ್ತಿದೆ.<br /> <br /> ಗದ್ದೆಯಲ್ಲಿದ್ದ ಶುಂಠಿ ಕಿತ್ತು ಮನೆಯಲ್ಲಿಯೇ ಶೇಖರಣೆ ಮಾಡಿದವರು ಉತ್ತಮ ಧಾರಣೆಗೆ ಮಾರಾಟ ಮಾಡುತ್ತಿದ್ದರೆ, ಮತ್ತೆ ಕೆಲವರು ಗದ್ದೆಯಲ್ಲಿ ಉಳಿದಿದ್ದ ಶುಂಠಿ ಹುಡುಕಿ ತಂದು ಮಾರಾಟ ಮಾಡುತ್ತಿದ್ದಾರೆ. <br /> ಸಂತೆ ದಿನವಾದ ಬುಧವಾರ ನಗರಕ್ಕೆ ಬಂದವರು ಶುಂಠಿ ದರ ಕೇಳಿಕೊಂಡು ಅಚ್ಚರಿ ವ್ಯಕ್ತಪಡಿಸುತ್ತಿದ್ದುದು ಕಂಡುಬಂತು.<br /> <br /> ಮಾರುಕಟ್ಟೆಯಲ್ಲಿ ದರ ಕೇಳಲು ಬಂದ ಮಾಗಡಿ ಕೈಮರ ರೈತರನ್ನು ವಿಚಾರಿಸಿದಾಗ, ಈ ವರ್ಷ ಐದಾರು ಚೀಲ ಶುಂಠಿ ಬೆಳೆಯಲಾಗಿತ್ತು. ಬೆಲೆಯಿಲ್ಲದೆ ಕೇವಲ 300 ರೂಪಾಯಿಗೆ ಮಾರಾಟ ಮಾಡಿದ್ದೆ. <br /> <br /> ಬೀಜಕ್ಕೆಂದು ಒಂದು ಗದ್ದೆಯಲ್ಲಿ ಶುಂಠಿ ಹಾಗೆ ಇದ್ದು, ರೇಟು ಹೆಚ್ಚಾಗಿದ್ದರಿಂದ ಮಾರಾಟ ಮಾಡಲು ಮುಂದಾಗಿದ್ದೇನೆ ಎಂದರು.<br /> <br /> ಜಿಲ್ಲೆಯ ಬಹುತೇಕ ಬೆಳೆಗಾರರರು ಗದ್ದೆ-ಹೊಲಗಳಿಂದ ಶುಂಠಿ ಕಿತ್ತು ಖಾಲಿ ಮಾಡಿರುವಾಗ ಬೆಲೆ ಏರಿಕೆಯಾಗಿ ನಿರಾಸೆಯ ಮಡುವಿಗೆ ದೂಡಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಚಿಕ್ಕಮಗಳೂರು: ಬೆಲೆ ಕುಸಿತ ಮತ್ತು ಕೊಳೆ ರೋಗದಿಂದ ನೆಲಕಚ್ಚಿದ್ದ ಶುಂಠಿ ಬೆಳೆಗಾರರು ನಿರೀಕ್ಷೆಗಳು ಗರಿಗೆದರುವಂತೆ ಮಾರುಕಟ್ಟೆಯಲ್ಲಿ ಶುಂಠಿಗೆ ಬಂಪರ್ ಬೆಲೆ ಬಂದಿದೆ. ಬೆಳೆಗಾರರಿಗೆ ಶುಕ್ರದೆಸೆ ತಿರುಗುವ ಲಕ್ಷಣಗಳು ಮೂಡಲಾರಂಭಿಸಿವೆ. <br /> <br /> ಹಾಸನ ಮಾರುಕಟ್ಟೆಯಲ್ಲಿ ಉತ್ತಮ ಶುಂಠಿ 60 ಕೆ.ಜಿ. ಪ್ರತಿ ಚೀಲಕ್ಕೆ 1200 ರೂಪಾಯಿ ದರ ನಿಗದಿಯಾಗಿದ್ದರೆ, ಶಿವಮೊಗ್ಗ ಮಾರುಕಟ್ಟೆಯಲ್ಲಿ 1800 ದರ ನಿಗದಿಯಾಗಿದೆ. ಚಿಕ್ಕಮಗಳೂರು ಮಾರುಕಟ್ಟೆಯಲ್ಲೂ ಉತ್ತಮ ಧಾರಣೆಯಲ್ಲಿ ಶುಂಠಿ ಖರೀದಿಸ ಲಾಗುತ್ತಿದೆ.<br /> <br /> ಚಿಕ್ಕಮಗಳೂರು ಮಾರುಕಟ್ಟೆಯಲ್ಲಿ ಅತ್ಯುತ್ತಮ ಶುಂಠಿ ಪ್ರತಿ ಕೆ.ಜಿ.ಗೆ 10 ರೂಪಾಯಿಗಳಿಂದ 12 ರೂಪಾಯಿ, ಉತ್ತಮ ಶುಂಠಿ 6 ರೂಪಾಯಿಗಳಿಂದ 8 ರೂಪಾಯಿ ಹಾಗೂ ಸಾಮಾನ್ಯ ಶುಂಠಿ 3 ರೂಪಾಯಿಗಳಿಂದ 4 ರೂಪಾಯಿವರೆಗೆ ಖರೀದಿಸಲಾಗುತ್ತಿದೆ.<br /> <br /> ಶುಂಠಿ ಕೀಳುವ ಸಮಯದಲ್ಲಿ ಪ್ರತಿ ಚೀಲಕ್ಕೆ 300 ರೂಪಾಯಿ ದರ ನಿಗದಿಯಾಗಿತ್ತು. ನಂತರ ಸ್ವಲ್ಪ ಏರಿಕೆಯಾಗಿ 600 ರೂಪಾಯಿಂದ 800 ರೂಪಾಯಿಗೆ ಹೆಚ್ಚಳಗೊಂಡಿತು. ಈಗ ಏಕಾಏಕಿ 1200 ರೂಪಾಯಿ ವರೆಗೆ ಶುಂಠಿ ಬೆಲೆ ಏರಿಕೆಯಾಗಿ ಬೆಳೆಗಾರರನ್ನು ಅಚ್ಚರಿಗೊಳಿಸಿದೆ.<br /> <br /> ಕಳೆದ ವರ್ಷ ಶುಂಠಿ 60 ಕೆ.ಜಿ. ಪ್ರತಿ ಚೀಲಕ್ಕೆ ಕನಿಷ್ಠ 500 ರೂಪಾಯಿ ಗಳಿಂದ 900 ರೂಪಾಯಿವರೆಗೆ ಮರಾಟವಾಗಿ ರೈತರು ಅಲ್ಪಸ್ವಲ್ಪ ಆದಾಯ ಗಳಿಸಿದ್ದರು. ಈ ವರ್ಷ ಅದೇ ದರ ಇರಬಹುದೆಂದು ತಿಳಿದು ರೈತರು ಗದ್ದೆ ಹೊಲಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಶುಂಠಿ ಬೆಳೆದಿದ್ದರು. ಆದರೆ ಆರಂಭದಲ್ಲಿ 300 ರೂಪಾಯಿ ಗಳಲ್ಲಿ ಶುಂಠಿ ಮಾರಾಟ ಮಾಡಬೇಕಾಯಿತು.<br /> <br /> ಸ್ವಲ್ಪ ದರ ಹೆಚ್ಚಳಗೊಳ್ಳ ಬಹುದೆಂದು ನಿರೀಕ್ಷೆಯ ಲ್ಲಿದ್ದವರಿಗೆ ದರ 500ರೂಪಾಯಿಗೆ ಬಂದು ನಿಂತಿತು. ಕೊನೆ ಗಳಿಗೆಯಲ್ಲಿ ಏನು ಮಾಡಲಾಗದೆ, ಇದ್ದಬದ್ದ ಶುಂಠಿ ಮಾರಾಟ ಮಾಡಿದರು. ಕಳೆದೆರಡು ದಿನಗಳಿಂದ ಶುಂಠಿಗೆ 1200 ರೂಪಾಯಿ ದರಕ್ಕೆ ಮಾರಾಟವಾಗುತ್ತಿದೆ.<br /> <br /> ಗದ್ದೆಯಲ್ಲಿದ್ದ ಶುಂಠಿ ಕಿತ್ತು ಮನೆಯಲ್ಲಿಯೇ ಶೇಖರಣೆ ಮಾಡಿದವರು ಉತ್ತಮ ಧಾರಣೆಗೆ ಮಾರಾಟ ಮಾಡುತ್ತಿದ್ದರೆ, ಮತ್ತೆ ಕೆಲವರು ಗದ್ದೆಯಲ್ಲಿ ಉಳಿದಿದ್ದ ಶುಂಠಿ ಹುಡುಕಿ ತಂದು ಮಾರಾಟ ಮಾಡುತ್ತಿದ್ದಾರೆ. <br /> ಸಂತೆ ದಿನವಾದ ಬುಧವಾರ ನಗರಕ್ಕೆ ಬಂದವರು ಶುಂಠಿ ದರ ಕೇಳಿಕೊಂಡು ಅಚ್ಚರಿ ವ್ಯಕ್ತಪಡಿಸುತ್ತಿದ್ದುದು ಕಂಡುಬಂತು.<br /> <br /> ಮಾರುಕಟ್ಟೆಯಲ್ಲಿ ದರ ಕೇಳಲು ಬಂದ ಮಾಗಡಿ ಕೈಮರ ರೈತರನ್ನು ವಿಚಾರಿಸಿದಾಗ, ಈ ವರ್ಷ ಐದಾರು ಚೀಲ ಶುಂಠಿ ಬೆಳೆಯಲಾಗಿತ್ತು. ಬೆಲೆಯಿಲ್ಲದೆ ಕೇವಲ 300 ರೂಪಾಯಿಗೆ ಮಾರಾಟ ಮಾಡಿದ್ದೆ. <br /> <br /> ಬೀಜಕ್ಕೆಂದು ಒಂದು ಗದ್ದೆಯಲ್ಲಿ ಶುಂಠಿ ಹಾಗೆ ಇದ್ದು, ರೇಟು ಹೆಚ್ಚಾಗಿದ್ದರಿಂದ ಮಾರಾಟ ಮಾಡಲು ಮುಂದಾಗಿದ್ದೇನೆ ಎಂದರು.<br /> <br /> ಜಿಲ್ಲೆಯ ಬಹುತೇಕ ಬೆಳೆಗಾರರರು ಗದ್ದೆ-ಹೊಲಗಳಿಂದ ಶುಂಠಿ ಕಿತ್ತು ಖಾಲಿ ಮಾಡಿರುವಾಗ ಬೆಲೆ ಏರಿಕೆಯಾಗಿ ನಿರಾಸೆಯ ಮಡುವಿಗೆ ದೂಡಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>