<p><strong>ಹುಬ್ಬಳ್ಳಿ: </strong>ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಜೆಡಿಎಸ್ ಪಕ್ಷದಿಂದ ಯುವಕರಿಗೆ ಶೇ 50ರಷ್ಟು ಟಿಕೆಟ್ ಮೀಸಲಿಡಲಾಗುವುದು ಎಂದು ಕೇಂದ್ರದ ಮಾಜಿ ಸಚಿವ ಹಾಗೂ ಜೆಡಿಎಸ್ ಮುಖಂಡ ಬಸವನಗೌಡ ಪಾಟೀಲ ಯತ್ನಾಳ ಘೋಷಿಸಿದರು.<br /> <br /> ನಗರದಲ್ಲಿ ಬುಧವಾರ ಪಕ್ಷದ ವತಿಯಿಂದ ಆಯೋಜಿಸಿದ್ದ ಯುವಚೇತನ ರ್ಯಾಲಿ ಹಾಗೂ ಚಿಂತನೆ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.<br /> <br /> ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬಜೆಟ್ ಮಂಡನೆಗೆ ಮುನ್ನವೇ ಸರ್ಕಾರವನ್ನು ಕೆಡವಲಿದ್ದಾರೆ. ಬಜೆಟ್ನಲ್ಲಿ ಸದಾನಂದಗೌಡ ಉತ್ತಮ ಕಾರ್ಯಕ್ರಮ ಪ್ರಕಟಿಸಿ ತಮಗಿಂತ ಜನಪ್ರಿಯತೆ ಗಳಿಸಬಹುದು ಎಂಬ ಕಾರಣಕ್ಕೆ ಈ ಪ್ರಯತ್ನಕ್ಕೆ ಕೈ ಹಾಕಲಿದ್ದಾರೆ.<br /> <br /> ಅವರೊಂದಿಗೆ ತಾವು 25 ವರ್ಷ ಕಾಲ ರಾಜಕೀಯ ಮಾಡಿದ ಅನುಭವದ ಹಿನ್ನೆಲೆಯಲ್ಲಿ ಹೇಳುತ್ತಿದ್ದು, ಬೇರೆಯವರ ಜನಪ್ರಿಯತೆ ಅಥವಾ ಒಳ್ಳೆಯ ಕೆಲಸವನ್ನು ಯಡಿಯೂರಪ್ಪ ಎಂದಿಗೂ ಸಹಿಸುವುದಿಲ್ಲ ಎಂದು ಲೇವಡಿ ಮಾಡಿದರು.<br /> ವಾಜಪೇಯಿ ನಂತರ ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪ ಮಾತ್ರ ತಾವು ಕಂಡ ಜನಸಾಮಾನ್ಯರ ನಾಯಕ ಎಂದು ಯತ್ನಾಳ್ ಬಣ್ಣಿಸಿದರು.<br /> <br /> ಮಾಜಿ ಸಚಿವ ಬಸವರಾಜ ಹೊರಟ್ಟಿ ಮಾತನಾಡಿ, ಕಳೆದೊಂದು ದಶಕದಿಂದ 48,000 ಕೋಟಿ ಇದ್ದ ರಾಜ್ಯದ ಸಾಲ ಈಗ 1.12 ಲಕ್ಷ ಕೋಟಿಗೆ ಏರಿದೆ. ಬಿಜೆಪಿ ಅಧಿಕಾರಕ್ಕೆ ಬಂದ ಕೇವಲ ಮೂರು ವರ್ಷಗಳಲ್ಲಿ ಸಾಲದ ಮೊತ್ತ 64,000 ಕೋಟಿ ಹೆಚ್ಚಳವಾಗಿದೆ ಎಂದರು.<br /> <br /> ಜೆಡಿಎಸ್ ಅಧಿಕಾರಕ್ಕೆ ಬಂದರೆ ಮಧು ಬಂಗಾರಪ್ಪ ಅವರಿಗೆ ಮಹತ್ವದ ಖಾತೆಯ ಮಂತ್ರಿ ಸ್ಥಾನ ದೊರೆಯಲಿದ್ದು, ಮಧು ಅವರ ಅಧ್ಯಕ್ಷತೆಯಲ್ಲಿ ಯುವ ಜನತಾದಳದಿಂದ ಕನಿಷ್ಠ 30ರಿಂದ 35 ಶಾಸಕರು ಆಯ್ಕೆಯಾಗುವಂತೆ ಯುವಕರು ಅವರ ಕೈಬಲಪಡಿಸಿ ಎಂದು ಸಲಹೆ ಮಾಡಿದರು.<br /> <br /> ನಟಿ ಪೂಜಾ ಗಾಂಧಿ, ಮಾಜಿ ಸಚಿವ ಹನುಮಂತಪ್ಪ ಆಲ್ಕೋಡ್, ಮಹಾನಗರ ಜಿಲ್ಲಾ ಜೆಡಿಎಸ್ ಘಟಕದ ಅಧ್ಯಕ್ಷ ರಾಜಣ್ಣಾ ಕೊರವಿ, ಪಕ್ಷದ ಮುಖಂಡರಾದ ಶಿವಾನಂದ ಕರಿಗಾರ, ಚಂದ್ರಶೇಖರ, ಶ್ರೀನಿವಾಸ ಮಾತನಾಡಿದರು. ಇದೇ ಸಂದರ್ಭದಲ್ಲಿ ವಿವಿಧ ಪಕ್ಷಗಳ ಕಾರ್ಯಕರ್ತರು ಜೆಡಿಎಸ್ ಸೇರ್ಪಡೆಗೊಂಡರು.<br /> <br /> <strong>`ಮಳೆ ಹುಡುಗಿ~ ಮೋಡಿ...</strong><br /> ಜೆಡಿಎಸ್ನ ಯುವಚೇತನ ಚಿಂತನಾ ಸಭೆಯಲ್ಲಿ `ಮಳೆ ಹುಡುಗಿ~ ಪೂಜಾಗಾಂಧಿ ಪ್ರಮುಖ ಆಕರ್ಷಣೆಯಾಗಿದ್ದರು. ಸಭೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದ ಯುವ ಕಾರ್ಯಕರ್ತರು ಪಕ್ಷದ ಮುಖಂಡರು ಮಾತನಾಡುವಾಗಲೂ ಮಧ್ಯೆ ಮಧ್ಯೆ ಪೂಜಾ ಗಾಂಧಿ ಪರ ಘೋಷಣೆ ಕೂಗುತ್ತಾ ತಮ್ಮ ಅಭಿಮಾನ ವ್ಯಕ್ತಪಡಿಸಿದರು.<br /> <br /> ಬೇರೆ ಪಕ್ಷದಿಂದ ಜೆಡಿಎಸ್ಗೆ ಸೇರಿದವರಿಗೆ ಗುಲಾಬಿ ಹೂ ಕೊಟ್ಟು ಸ್ವಾಗತಿಸಿದ ಪೂಜಾ ಗಾಂಧಿ ಅವರೊಂದಿಗೆ ಫೋಟೊಗೆ ಫೋಸ್ ಕೊಡುತ್ತಿದ್ದಂತೆಯೇ ಪಕ್ಷಕ್ಕೆ ಸೇರುವ ಆಕಾಂಕ್ಷಿಗಳ ಸಾಲು ದೊಡ್ಡದಾಗಿದ್ದು, ಕಾಕತಾಳೀಯ ಎಂಬಂತೆ ಕಾಣಿಸಿತು.<br /> <br /> ರಾಜಕೀಯ ಸೇರಿದರೂ ಚಿತ್ರರಂಗದ ನಂಟು ಬಿಡುವುದಿಲ್ಲ ಎಂದು ಘೋಷಿಸಿದ ಪಂಜಾಬಿ ಹುಡುಗಿ `ನನ್ನ ಕನ್ನಡದಲ್ಲಿ ತಪ್ಪಿದ್ದರೆ ಕ್ಷಮಿಸಿ~ ಎನ್ನುತ್ತಲೇ ತಮ್ಮ ಮಾತು ಮುಗಿಸಿದರು. ಬೈಕ್ ರ್ಯಾಲಿ ಹಾಗೂ ಮೆರವಣಿಗೆಯ ಮೂಲಕ ಬಿರು ಬಿಸಿಲಿನಲ್ಲಿ ಸಭೆಗೆ ಬಂದಿದ್ದ ಪಕ್ಷದ ಯುವ ಕಾರ್ಯಕರ್ತರಿಗೆ ಮಳೆ ಹುಡುಗಿಯ ಮೋಡಿ ತಂಪನೆಯ ಭಾವ ಮೂಡಿಸಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹುಬ್ಬಳ್ಳಿ: </strong>ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಜೆಡಿಎಸ್ ಪಕ್ಷದಿಂದ ಯುವಕರಿಗೆ ಶೇ 50ರಷ್ಟು ಟಿಕೆಟ್ ಮೀಸಲಿಡಲಾಗುವುದು ಎಂದು ಕೇಂದ್ರದ ಮಾಜಿ ಸಚಿವ ಹಾಗೂ ಜೆಡಿಎಸ್ ಮುಖಂಡ ಬಸವನಗೌಡ ಪಾಟೀಲ ಯತ್ನಾಳ ಘೋಷಿಸಿದರು.<br /> <br /> ನಗರದಲ್ಲಿ ಬುಧವಾರ ಪಕ್ಷದ ವತಿಯಿಂದ ಆಯೋಜಿಸಿದ್ದ ಯುವಚೇತನ ರ್ಯಾಲಿ ಹಾಗೂ ಚಿಂತನೆ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.<br /> <br /> ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬಜೆಟ್ ಮಂಡನೆಗೆ ಮುನ್ನವೇ ಸರ್ಕಾರವನ್ನು ಕೆಡವಲಿದ್ದಾರೆ. ಬಜೆಟ್ನಲ್ಲಿ ಸದಾನಂದಗೌಡ ಉತ್ತಮ ಕಾರ್ಯಕ್ರಮ ಪ್ರಕಟಿಸಿ ತಮಗಿಂತ ಜನಪ್ರಿಯತೆ ಗಳಿಸಬಹುದು ಎಂಬ ಕಾರಣಕ್ಕೆ ಈ ಪ್ರಯತ್ನಕ್ಕೆ ಕೈ ಹಾಕಲಿದ್ದಾರೆ.<br /> <br /> ಅವರೊಂದಿಗೆ ತಾವು 25 ವರ್ಷ ಕಾಲ ರಾಜಕೀಯ ಮಾಡಿದ ಅನುಭವದ ಹಿನ್ನೆಲೆಯಲ್ಲಿ ಹೇಳುತ್ತಿದ್ದು, ಬೇರೆಯವರ ಜನಪ್ರಿಯತೆ ಅಥವಾ ಒಳ್ಳೆಯ ಕೆಲಸವನ್ನು ಯಡಿಯೂರಪ್ಪ ಎಂದಿಗೂ ಸಹಿಸುವುದಿಲ್ಲ ಎಂದು ಲೇವಡಿ ಮಾಡಿದರು.<br /> ವಾಜಪೇಯಿ ನಂತರ ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪ ಮಾತ್ರ ತಾವು ಕಂಡ ಜನಸಾಮಾನ್ಯರ ನಾಯಕ ಎಂದು ಯತ್ನಾಳ್ ಬಣ್ಣಿಸಿದರು.<br /> <br /> ಮಾಜಿ ಸಚಿವ ಬಸವರಾಜ ಹೊರಟ್ಟಿ ಮಾತನಾಡಿ, ಕಳೆದೊಂದು ದಶಕದಿಂದ 48,000 ಕೋಟಿ ಇದ್ದ ರಾಜ್ಯದ ಸಾಲ ಈಗ 1.12 ಲಕ್ಷ ಕೋಟಿಗೆ ಏರಿದೆ. ಬಿಜೆಪಿ ಅಧಿಕಾರಕ್ಕೆ ಬಂದ ಕೇವಲ ಮೂರು ವರ್ಷಗಳಲ್ಲಿ ಸಾಲದ ಮೊತ್ತ 64,000 ಕೋಟಿ ಹೆಚ್ಚಳವಾಗಿದೆ ಎಂದರು.<br /> <br /> ಜೆಡಿಎಸ್ ಅಧಿಕಾರಕ್ಕೆ ಬಂದರೆ ಮಧು ಬಂಗಾರಪ್ಪ ಅವರಿಗೆ ಮಹತ್ವದ ಖಾತೆಯ ಮಂತ್ರಿ ಸ್ಥಾನ ದೊರೆಯಲಿದ್ದು, ಮಧು ಅವರ ಅಧ್ಯಕ್ಷತೆಯಲ್ಲಿ ಯುವ ಜನತಾದಳದಿಂದ ಕನಿಷ್ಠ 30ರಿಂದ 35 ಶಾಸಕರು ಆಯ್ಕೆಯಾಗುವಂತೆ ಯುವಕರು ಅವರ ಕೈಬಲಪಡಿಸಿ ಎಂದು ಸಲಹೆ ಮಾಡಿದರು.<br /> <br /> ನಟಿ ಪೂಜಾ ಗಾಂಧಿ, ಮಾಜಿ ಸಚಿವ ಹನುಮಂತಪ್ಪ ಆಲ್ಕೋಡ್, ಮಹಾನಗರ ಜಿಲ್ಲಾ ಜೆಡಿಎಸ್ ಘಟಕದ ಅಧ್ಯಕ್ಷ ರಾಜಣ್ಣಾ ಕೊರವಿ, ಪಕ್ಷದ ಮುಖಂಡರಾದ ಶಿವಾನಂದ ಕರಿಗಾರ, ಚಂದ್ರಶೇಖರ, ಶ್ರೀನಿವಾಸ ಮಾತನಾಡಿದರು. ಇದೇ ಸಂದರ್ಭದಲ್ಲಿ ವಿವಿಧ ಪಕ್ಷಗಳ ಕಾರ್ಯಕರ್ತರು ಜೆಡಿಎಸ್ ಸೇರ್ಪಡೆಗೊಂಡರು.<br /> <br /> <strong>`ಮಳೆ ಹುಡುಗಿ~ ಮೋಡಿ...</strong><br /> ಜೆಡಿಎಸ್ನ ಯುವಚೇತನ ಚಿಂತನಾ ಸಭೆಯಲ್ಲಿ `ಮಳೆ ಹುಡುಗಿ~ ಪೂಜಾಗಾಂಧಿ ಪ್ರಮುಖ ಆಕರ್ಷಣೆಯಾಗಿದ್ದರು. ಸಭೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದ ಯುವ ಕಾರ್ಯಕರ್ತರು ಪಕ್ಷದ ಮುಖಂಡರು ಮಾತನಾಡುವಾಗಲೂ ಮಧ್ಯೆ ಮಧ್ಯೆ ಪೂಜಾ ಗಾಂಧಿ ಪರ ಘೋಷಣೆ ಕೂಗುತ್ತಾ ತಮ್ಮ ಅಭಿಮಾನ ವ್ಯಕ್ತಪಡಿಸಿದರು.<br /> <br /> ಬೇರೆ ಪಕ್ಷದಿಂದ ಜೆಡಿಎಸ್ಗೆ ಸೇರಿದವರಿಗೆ ಗುಲಾಬಿ ಹೂ ಕೊಟ್ಟು ಸ್ವಾಗತಿಸಿದ ಪೂಜಾ ಗಾಂಧಿ ಅವರೊಂದಿಗೆ ಫೋಟೊಗೆ ಫೋಸ್ ಕೊಡುತ್ತಿದ್ದಂತೆಯೇ ಪಕ್ಷಕ್ಕೆ ಸೇರುವ ಆಕಾಂಕ್ಷಿಗಳ ಸಾಲು ದೊಡ್ಡದಾಗಿದ್ದು, ಕಾಕತಾಳೀಯ ಎಂಬಂತೆ ಕಾಣಿಸಿತು.<br /> <br /> ರಾಜಕೀಯ ಸೇರಿದರೂ ಚಿತ್ರರಂಗದ ನಂಟು ಬಿಡುವುದಿಲ್ಲ ಎಂದು ಘೋಷಿಸಿದ ಪಂಜಾಬಿ ಹುಡುಗಿ `ನನ್ನ ಕನ್ನಡದಲ್ಲಿ ತಪ್ಪಿದ್ದರೆ ಕ್ಷಮಿಸಿ~ ಎನ್ನುತ್ತಲೇ ತಮ್ಮ ಮಾತು ಮುಗಿಸಿದರು. ಬೈಕ್ ರ್ಯಾಲಿ ಹಾಗೂ ಮೆರವಣಿಗೆಯ ಮೂಲಕ ಬಿರು ಬಿಸಿಲಿನಲ್ಲಿ ಸಭೆಗೆ ಬಂದಿದ್ದ ಪಕ್ಷದ ಯುವ ಕಾರ್ಯಕರ್ತರಿಗೆ ಮಳೆ ಹುಡುಗಿಯ ಮೋಡಿ ತಂಪನೆಯ ಭಾವ ಮೂಡಿಸಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>