<p><strong>ಮಂಡ್ಯ:</strong> ಇಲ್ಲಿನ ಸರ್ ಎಂ. ವಿಶ್ವೇಶ್ವರಯ್ಯ ಕ್ರೀಡಾಂಗಣ ಆವರಣದಲ್ಲಿ ಕ್ರೀಡಾಪಟುಗಳು ಮತ್ತು ಸಾರ್ವಜನಿಕರ ಅನುಕೂಲಕ್ಕಾಗಿ ನಿರ್ಮಿಸಿರುವ ಶೌಚಾಲಯಕ್ಕೆ ಬೀಗ ಜಡಿಯಲಾಗಿದೆ. ಹೀಗಾಗಿ, `ಪ್ರಕೃತಿ ಕರೆ'ಗೆ ಬಯಲನ್ನೇ ಆಶ್ರಯಿಸಬೇಕಿದೆ.<br /> <br /> ಈ ಶೌಚಾಲಯದ ನಿರ್ವಹಣೆ ಹೊಣೆ ಹೊತ್ತ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಏಕೋ, ಏನೋ ಇತ್ತ ಗಮನ ಹರಿಸಿದಂತೆ ಕಾಣಿಸುತ್ತಿಲ್ಲ. ಉತ್ತಮವಾದ ಕಟ್ಟಡವಿದ್ದರೂ, ಬಳಕೆಗೆ ಮಾತ್ರ ದೊರಕುತ್ತಿಲ್ಲ.<br /> <br /> ಬಳಕೆಗೆ ದೊರೆಯದೇ ಇರುವುದರಿಂದ ಶೌಚಾಲಯದ ಕಟ್ಟಡದ ಸುತ್ತಲಿನ ಗೋಡೆಗಳೇ `ನೈಸರ್ಗಿಕ ಕ್ರಿಯೆ'ಗೆ ಆಧಾರವಾಗಿದೆ. ಸುತ್ತಲಿನ ಆವರಣ ಅನೈರ್ಮಲ್ಯದಿಂದ ಕೂಡಿದೆ.<br /> <br /> ನಗರದ ಹೃದಯ ಭಾಗದಲ್ಲಿ ಕ್ರೀಡಾಂಗಣ ಇರುವುದರಿಂದ ಬಹುತೇಕ ಕ್ರೀಡಾಪಟುಗಳು ಅಭ್ಯಾಸಕ್ಕಾಗಿ ಇಲ್ಲಿಗೆ ಬರುತ್ತಾರೆ. ಬ್ಯಾಸ್ಕೆಟ್ಬಾಲ್, ಬ್ಯಾಡ್ಮಿಂಟನ್, , ಕ್ರಿಕೆಟ್, ಓಟ ಸೇರಿದಂತೆ ಅನೇಕ ಕ್ರೀಡೆಗಳ ಅಭ್ಯಾಸವು ಇಲ್ಲಿ ನಡೆಯುತ್ತದೆ. ನೂರಾರು ಯುವಜನರು, ಹಿರಿಯರೂ ಬರುತ್ತಾರೆ.<br /> <br /> ಆದರೆ, ಇವರಿಗೆ ಶೌಚಾಲಯದೇ ಚಿಂತೆ. ಯುವತಿಯರು ಸನಿಹದಲ್ಲೆ ಇರುವ ಕ್ರೀಡಾ ಹಾಸ್ಟೆಲ್ ಆಶ್ರಯಿಸಿದರೇ, ಪುರುಷರಿಗೆ ಬಯಲೇ ಆಧಾರ.<br /> <br /> ಕೆಲವರು ಮಾತ್ರ ಇಲಾಖೆ ಕಟ್ಟಡದಲ್ಲಿನ ಶೌಚಾಲಯ ಬಳಸಿದರೇ, ಮತ್ತೆ ಕೆಲವರು ಸಾರ್ವಜನಿಕ ಗ್ರಂಥಾಲಯ ಆವರಣದಲ್ಲಿನ ಸುಲಭ್ ಶೌಚಾಲಯದ ಮೊರೆ ಹೋಗುತ್ತಾರೆ.<br /> <br /> `ಪ್ರಮುಖವಾದ ಪಂದ್ಯಾವಳಿ ನಡೆದಾಗ ಮಾತ್ರವೇ ಈ ಶೌಚಾಲಯದ ಬಾಗಿಲುಗಳು ತೆರೆಯುತ್ತದೆ. ಉಳಿದಂತೆ ಬಾಗಿಲ ಹಾಕಿರುತ್ತದೆ. ಹೀಗಾಗಿ `ಪ್ರಕೃತಿ ಕರೆ'ಗೆ ಬಯಲನ್ನೇ ಆಶ್ರಯಿಸಬೇಕಿದೆ' ಎನ್ನುತ್ತಾರೆ ಬಿ. ಸುರೇಶ್.<br /> <br /> `ಇನ್ನು ಸ್ವಲ್ಪ ದಿನದಲ್ಲೇ ತಾಲ್ಲೂಕು ಮಟ್ಟದ ಪೈಕಾ ಗ್ರಾಮೀಣ ಮತ್ತು ದಸರಾ ಕ್ರೀಡಾಕೂಟಗಳು ನಡೆಯಲಿದೆ. ವಿವಿಧೆಡೆಯಿಂದ ಸಾಕಷ್ಟು ಕ್ರೀಡಾಪಟುಗಳೂ ಬರುತ್ತಾರೆ. ಶೌಚಾಲಯ ದುಸ್ಥಿತಿಯಲ್ಲಿದ್ದರೆ, ಆದಷ್ಟು ಬೇಗನೆ ಸರಿಪಡಿಸಲಿ. ಕ್ರೀಡಾಪಟುಗಳ ಬಳಕೆಗೆ ಸಿಗುವಂತೆ ಮಾಡಲಿ' ಎನ್ನುತ್ತಾರೆ ಅವರು.<br /> <br /> ಇಲಾಖೆಯ ಸಹಾಯಕ ನಿರ್ದೇಶಕಿ ಡಾ. ಎಚ್.ಪಿ. ಮಂಜುಳಾ ಮಾತನಾಡಿ, `ಶೌಚಾಲಯದ ಒಳಚರಂಡಿ ವ್ಯವಸ್ಥೆ ಸಮಪರ್ಕವಾಗಿ ಇಲ್ಲದೇ ಇರುವುದರಿಂದ ಗಲೀಜು ಕಟ್ಟಿಕೊಳ್ಳುತ್ತದೆ. ಹೀಗಾಗಿ, ತಾತ್ಕಾಲಿಕವಾಗಿ ಬೀಗ ಹಾಕಲಾಗಿದೆ' ಎನ್ನುತ್ತಾರೆ.<br /> <br /> ಒಳಚರಂಡಿ ದುರಸ್ತಿಗೆ ಕ್ರಮಕೈಗೊಳ್ಳಲಾಗಿದೆ. ನಿರ್ವಹಣೆಗೆ ಸಿಬ್ಬಂದಿ ನೀಡುವಂತೆಯೂ ನಗರಸಭೆಗೆ ಮನವಿ ಮಾಡಲಾಗಿದೆ ಎಂದು ಪ್ರತಿಕ್ರಿಯಿಸಿದರು.<br /> <br /> ವಿವಿಧ ಕ್ರೀಡೆಗಳಿಗೆ ಉತ್ತಮವಾದ ಅಂಕಣಗಳ ವ್ಯವಸ್ಥೆ, ಕುಡಿಯುವ ನೀರಿನ ಸೌಲಭ್ಯ ಇರುವ ಕ್ರೀಡಾಂಗಣದಲ್ಲಿ ಶೌಚಾಲಯದೇ ಕೊರತೆ. ಅದನ್ನು ನೀಗಿಸಿದರೇ, ಮತ್ತಷ್ಟು ಕ್ರೀಡಾಪಟುಗಳು ಇತ್ತ ಬರಬಹುದು. ಕ್ರೀಡಾಂಗಣ ಪರಿಸರ ಇನ್ನಷ್ಟು ಉತ್ತಮವಾಗಲಿದೆ. ಅಧಿಕಾರಿಗಳು ಮನಸ್ಸು ಮಾಡಬೇಕು ಎನ್ನುತ್ತಾರೆ ಕ್ರೀಡಾಪಟುಗಳು.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಂಡ್ಯ:</strong> ಇಲ್ಲಿನ ಸರ್ ಎಂ. ವಿಶ್ವೇಶ್ವರಯ್ಯ ಕ್ರೀಡಾಂಗಣ ಆವರಣದಲ್ಲಿ ಕ್ರೀಡಾಪಟುಗಳು ಮತ್ತು ಸಾರ್ವಜನಿಕರ ಅನುಕೂಲಕ್ಕಾಗಿ ನಿರ್ಮಿಸಿರುವ ಶೌಚಾಲಯಕ್ಕೆ ಬೀಗ ಜಡಿಯಲಾಗಿದೆ. ಹೀಗಾಗಿ, `ಪ್ರಕೃತಿ ಕರೆ'ಗೆ ಬಯಲನ್ನೇ ಆಶ್ರಯಿಸಬೇಕಿದೆ.<br /> <br /> ಈ ಶೌಚಾಲಯದ ನಿರ್ವಹಣೆ ಹೊಣೆ ಹೊತ್ತ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಏಕೋ, ಏನೋ ಇತ್ತ ಗಮನ ಹರಿಸಿದಂತೆ ಕಾಣಿಸುತ್ತಿಲ್ಲ. ಉತ್ತಮವಾದ ಕಟ್ಟಡವಿದ್ದರೂ, ಬಳಕೆಗೆ ಮಾತ್ರ ದೊರಕುತ್ತಿಲ್ಲ.<br /> <br /> ಬಳಕೆಗೆ ದೊರೆಯದೇ ಇರುವುದರಿಂದ ಶೌಚಾಲಯದ ಕಟ್ಟಡದ ಸುತ್ತಲಿನ ಗೋಡೆಗಳೇ `ನೈಸರ್ಗಿಕ ಕ್ರಿಯೆ'ಗೆ ಆಧಾರವಾಗಿದೆ. ಸುತ್ತಲಿನ ಆವರಣ ಅನೈರ್ಮಲ್ಯದಿಂದ ಕೂಡಿದೆ.<br /> <br /> ನಗರದ ಹೃದಯ ಭಾಗದಲ್ಲಿ ಕ್ರೀಡಾಂಗಣ ಇರುವುದರಿಂದ ಬಹುತೇಕ ಕ್ರೀಡಾಪಟುಗಳು ಅಭ್ಯಾಸಕ್ಕಾಗಿ ಇಲ್ಲಿಗೆ ಬರುತ್ತಾರೆ. ಬ್ಯಾಸ್ಕೆಟ್ಬಾಲ್, ಬ್ಯಾಡ್ಮಿಂಟನ್, , ಕ್ರಿಕೆಟ್, ಓಟ ಸೇರಿದಂತೆ ಅನೇಕ ಕ್ರೀಡೆಗಳ ಅಭ್ಯಾಸವು ಇಲ್ಲಿ ನಡೆಯುತ್ತದೆ. ನೂರಾರು ಯುವಜನರು, ಹಿರಿಯರೂ ಬರುತ್ತಾರೆ.<br /> <br /> ಆದರೆ, ಇವರಿಗೆ ಶೌಚಾಲಯದೇ ಚಿಂತೆ. ಯುವತಿಯರು ಸನಿಹದಲ್ಲೆ ಇರುವ ಕ್ರೀಡಾ ಹಾಸ್ಟೆಲ್ ಆಶ್ರಯಿಸಿದರೇ, ಪುರುಷರಿಗೆ ಬಯಲೇ ಆಧಾರ.<br /> <br /> ಕೆಲವರು ಮಾತ್ರ ಇಲಾಖೆ ಕಟ್ಟಡದಲ್ಲಿನ ಶೌಚಾಲಯ ಬಳಸಿದರೇ, ಮತ್ತೆ ಕೆಲವರು ಸಾರ್ವಜನಿಕ ಗ್ರಂಥಾಲಯ ಆವರಣದಲ್ಲಿನ ಸುಲಭ್ ಶೌಚಾಲಯದ ಮೊರೆ ಹೋಗುತ್ತಾರೆ.<br /> <br /> `ಪ್ರಮುಖವಾದ ಪಂದ್ಯಾವಳಿ ನಡೆದಾಗ ಮಾತ್ರವೇ ಈ ಶೌಚಾಲಯದ ಬಾಗಿಲುಗಳು ತೆರೆಯುತ್ತದೆ. ಉಳಿದಂತೆ ಬಾಗಿಲ ಹಾಕಿರುತ್ತದೆ. ಹೀಗಾಗಿ `ಪ್ರಕೃತಿ ಕರೆ'ಗೆ ಬಯಲನ್ನೇ ಆಶ್ರಯಿಸಬೇಕಿದೆ' ಎನ್ನುತ್ತಾರೆ ಬಿ. ಸುರೇಶ್.<br /> <br /> `ಇನ್ನು ಸ್ವಲ್ಪ ದಿನದಲ್ಲೇ ತಾಲ್ಲೂಕು ಮಟ್ಟದ ಪೈಕಾ ಗ್ರಾಮೀಣ ಮತ್ತು ದಸರಾ ಕ್ರೀಡಾಕೂಟಗಳು ನಡೆಯಲಿದೆ. ವಿವಿಧೆಡೆಯಿಂದ ಸಾಕಷ್ಟು ಕ್ರೀಡಾಪಟುಗಳೂ ಬರುತ್ತಾರೆ. ಶೌಚಾಲಯ ದುಸ್ಥಿತಿಯಲ್ಲಿದ್ದರೆ, ಆದಷ್ಟು ಬೇಗನೆ ಸರಿಪಡಿಸಲಿ. ಕ್ರೀಡಾಪಟುಗಳ ಬಳಕೆಗೆ ಸಿಗುವಂತೆ ಮಾಡಲಿ' ಎನ್ನುತ್ತಾರೆ ಅವರು.<br /> <br /> ಇಲಾಖೆಯ ಸಹಾಯಕ ನಿರ್ದೇಶಕಿ ಡಾ. ಎಚ್.ಪಿ. ಮಂಜುಳಾ ಮಾತನಾಡಿ, `ಶೌಚಾಲಯದ ಒಳಚರಂಡಿ ವ್ಯವಸ್ಥೆ ಸಮಪರ್ಕವಾಗಿ ಇಲ್ಲದೇ ಇರುವುದರಿಂದ ಗಲೀಜು ಕಟ್ಟಿಕೊಳ್ಳುತ್ತದೆ. ಹೀಗಾಗಿ, ತಾತ್ಕಾಲಿಕವಾಗಿ ಬೀಗ ಹಾಕಲಾಗಿದೆ' ಎನ್ನುತ್ತಾರೆ.<br /> <br /> ಒಳಚರಂಡಿ ದುರಸ್ತಿಗೆ ಕ್ರಮಕೈಗೊಳ್ಳಲಾಗಿದೆ. ನಿರ್ವಹಣೆಗೆ ಸಿಬ್ಬಂದಿ ನೀಡುವಂತೆಯೂ ನಗರಸಭೆಗೆ ಮನವಿ ಮಾಡಲಾಗಿದೆ ಎಂದು ಪ್ರತಿಕ್ರಿಯಿಸಿದರು.<br /> <br /> ವಿವಿಧ ಕ್ರೀಡೆಗಳಿಗೆ ಉತ್ತಮವಾದ ಅಂಕಣಗಳ ವ್ಯವಸ್ಥೆ, ಕುಡಿಯುವ ನೀರಿನ ಸೌಲಭ್ಯ ಇರುವ ಕ್ರೀಡಾಂಗಣದಲ್ಲಿ ಶೌಚಾಲಯದೇ ಕೊರತೆ. ಅದನ್ನು ನೀಗಿಸಿದರೇ, ಮತ್ತಷ್ಟು ಕ್ರೀಡಾಪಟುಗಳು ಇತ್ತ ಬರಬಹುದು. ಕ್ರೀಡಾಂಗಣ ಪರಿಸರ ಇನ್ನಷ್ಟು ಉತ್ತಮವಾಗಲಿದೆ. ಅಧಿಕಾರಿಗಳು ಮನಸ್ಸು ಮಾಡಬೇಕು ಎನ್ನುತ್ತಾರೆ ಕ್ರೀಡಾಪಟುಗಳು.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>