<p><strong>ಬೆಂಗಳೂರು:</strong> ‘ಮಾವಿನ ಗುಣಮಟ್ಟ ವೃದ್ಧಿಸಿ ರಫ್ತು ಪ್ರಮಾಣವನ್ನು ಗಣನೀ-ಯವಾಗಿ ಹೆಚ್ಚಿಸಲು ಕೋಲಾರ ಜಿಲ್ಲೆಯ ಶ್ರೀನಿವಾಸಪುರ ರೈತರಿಗೆ ವಿವಿಧ ಸಂಸ್ಥೆಗಳ ಸಹಯೋಗದಲ್ಲಿ ತಜ್ಞರಿಂದ ತರಬೇತಿ ಆರಂಭಿಸಲಾಗಿದೆ’ ಎಂದು ಕೃಷಿ ಇಲಾಖೆಯ ವಿಶೇಷ ಕಾರ್ಯದರ್ಶಿ ಜಿ.ಕೆ.ವಸಂತಕುಮಾರ್ ತಿಳಿಸಿದರು.<br /> <br /> ಭಾರತೀಯ ವಾಣಿಜ್ಯೋದ್ಯಮ ಮಹಾಸಂಘ (ಅಸೋಚಾಂ) ಆಶ್ರಯದಲ್ಲಿ ನಗರದಲ್ಲಿ ಶುಕ್ರವಾರ ನಡೆದ ಸಮ್ಮೇಳನದ ಸಂದರ್ಭದಲ್ಲಿ ಅವರು ‘ಪ್ರಜಾವಾಣಿ’ಯೊಂದಿಗೆ ಮಾತನಾಡಿದರು. ‘ಶ್ರೀನಿವಾಸಪುರ ತಾಲ್ಲೂಕು ಮಾವಿನ ಮಡಿಲೆಂದೇ ಪ್ರಖ್ಯಾತವಾದುದು. ಇಲ್ಲಿ 40,000 ಹೆಕ್ಟೇರ್ ಪ್ರದೇಶದಲ್ಲಿ ಮಾವು ಬೆಳೆಯಲಾಗುತ್ತಿದೆ.<br /> <br /> ರಾಜ್ಯದ ಮಾವಿನ ಬೆಳೆಯಲ್ಲಿ ಶೇ 40ರಷ್ಟು ಪಾಲು ಕೋಲಾರ ಜಿಲ್ಲೆಯದೇ. ಆದರೆ, ಮಾರುಕಟ್ಟೆಯ ಮಾಹಿತಿ ಕೊರತೆಯಿಂದ ಇಲ್ಲಿನ ರೈತರು ಗುಣಮಟ್ಟ ಕಾಪಾಡಲು ಹೆಚ್ಚಿನ ಆದ್ಯತೆ ನೀಡಿರಲಿಲ್ಲ. ಈ ಹಿನ್ನೆಲೆಯಲ್ಲಿ ನಿರಂತರ ತರಬೇತಿ ನೀಡಲಾಗುತ್ತಿದೆ’ ಎಂದು ಅವರು ವಿವರಿಸಿದರು.<br /> <br /> ‘ಜಿಲ್ಲೆಯ ಆಯ್ದ 100 ರೈತರಿಗೆ ಈ ತರಬೇತಿ ನೀಡಲಾಗುತ್ತಿದೆ. ಡಿಸೆಂಬರ್ನಲ್ಲಿ ತಜ್ಞರಿಂದ ತರಬೇತಿ ಆರಂಭವಾಗಿದೆ. ಈಗಾಗಲೇ ಮೂರು ಹಂತದ ತರಬೇತಿ ನೀಡಲಾಗಿದೆ. ಮೇ ತಿಂಗಳ ವರೆಗೆ ಮುಂದುವರಿಯಲಿದೆ. ಮೂರು ವರ್ಷಗಳ ಕಾಲ ತರಬೇತಿ ನೀಡಿದ ಬಳಿಕ ರೈತರೇ ತಜ್ಞರು ಆಗುತ್ತಾರೆ. ಆಗ ಅವರು ಉಳಿದ ರೈತರಿಗೆ ಮಾರ್ಗದರ್ಶನ ನೀಡುತ್ತಾರೆ ಎಂದರು.<br /> <br /> ‘ಮಾವಿನ ಕಾಯಿಯನ್ನು ಕೀಳುವುದು ಹೇಗೆ? ಕಟಾವು ಮಾಡಿದ ಯಾವ ತಾಪಮಾನದಲ್ಲಿ ಸಂರಕ್ಷಣೆ ಮಾಡಬೇಕು? ಹಣ್ಣಿನ ನೈಸರ್ಗಿಕ ಬಣ್ಣ ಬರಲು ಯಾವ ರೀತಿ ಇಡಬೇಕು? ವಿದೇಶಕ್ಕೆ ರಫ್ತು ಮಾಡಲು ಅನುಸರಿಸಬೇಕಾದ ಮಾನದಂಡಗಳೇನು ಎಂಬಿತ್ಯಾದಿ ವಿಷಯಗಳ ಬಗ್ಗೆ ತಜ್ಞರು ಮಾಹಿತಿ ನೀಡುತ್ತಿದ್ದಾರೆ’ ಎಂದರು.<br /> <br /> ‘ರಾಜ್ಯದ ಹೆಚ್ಚಿನ ರೈತರು ಕಟಾವಿಗೂ ಮುಂಚೆಯೇ ಇಡೀ ತೋಟವನ್ನು ವರ್ತಕರಿಗೆ ಗುತ್ತಿಗೆ ಕೊಟ್ಟುಬಿಡುತ್ತಾರೆ. ಅವರು ಸರಿಯಾಗಿ ಬೆಳೆಯದ ಮಾವನ್ನು ಮಾರುಕಟ್ಟೆಗೆ ತರುತ್ತಾರೆ. ಮಾವು ನೋಡಲು ಸುಂದರವಾಗಿರುತ್ತದೆ. ಆದರೆ, ಹುಳಿ ಹುಳಿಯಾಗಿರುತ್ತದೆ. ಮತ್ತೆ ಗ್ರಾಹಕ ಈ ಹಣ್ಣನ್ನು ಖರೀದಿ ಮಾಡುವುದಿಲ್ಲ. ಇಂತಹ ಹಣ್ಣಿಗೆ ಉತ್ತಮ ಬೆಲೆಯೂ ಸಿಗುವುದಿಲ್ಲ. ಗ್ರಾಹಕರು ಈ ಊರಿನ ಹಣ್ಣನ್ನು ಅನುಮಾನದಿಂದ ನೋಡುತ್ತಾರೆ. ರೈತರಿಗೆ ತರಬೇತಿ ನೀಡುವುದರಿಂದ ಭವಿಷ್ಯದಲ್ಲಿ ಇಂತಹ ಪ್ರಮೇಯ ಎದುರಾಗದಂತೆ ಎಚ್ಚರ ವಹಿಸಬಹುದಾಗಿದೆ’ ಎಂದರು.<br /> <br /> ‘5 ವರ್ಷಗಳ ಹಿಂದೆ ಕೊಪ್ಪಳ ಜಿಲ್ಲೆಯ ದಾಳಿಂಬೆ ಬೆಳೆಗಾರರಿಗೆ ತರಬೇತಿ ನೀಡಲಾಯಿತು. ತಜ್ಞರ ಸಲಹೆ ಮೇರೆಗೆ ದಾಳಿಂಬೆ ಬೆಳೆ ಚಕ್ರದ ಅವಧಿಯನ್ನೇ ಮಾರ್ಪಾಡು ಮಾಡಲಾಯಿತು. ದಾಳಿಂಬೆ ರಫ್ತು ಆಯಿತು. ರೈತರಿಗೆ ಒಂದು ಕೆ.ಜಿ.ದಾಳಿಂಬೆಗೆ ₨140 ಬೆಲೆ ಸಿಕ್ಕಿತ್ತು. ಅದೇ ಈ ರೀತಿ ಈ ವರ್ಷ ಹಾವೇರಿ ಜಿಲ್ಲೆಯಲ್ಲಿ ಬಾದಾಮಿ ಮಾವಿನಕಾಯಿ ಬೆಳೆಗಾರರಿಗೆ, ತರಬೇತಿ ನೀಡಲಾಗಿತ್ತು ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ‘ಮಾವಿನ ಗುಣಮಟ್ಟ ವೃದ್ಧಿಸಿ ರಫ್ತು ಪ್ರಮಾಣವನ್ನು ಗಣನೀ-ಯವಾಗಿ ಹೆಚ್ಚಿಸಲು ಕೋಲಾರ ಜಿಲ್ಲೆಯ ಶ್ರೀನಿವಾಸಪುರ ರೈತರಿಗೆ ವಿವಿಧ ಸಂಸ್ಥೆಗಳ ಸಹಯೋಗದಲ್ಲಿ ತಜ್ಞರಿಂದ ತರಬೇತಿ ಆರಂಭಿಸಲಾಗಿದೆ’ ಎಂದು ಕೃಷಿ ಇಲಾಖೆಯ ವಿಶೇಷ ಕಾರ್ಯದರ್ಶಿ ಜಿ.ಕೆ.ವಸಂತಕುಮಾರ್ ತಿಳಿಸಿದರು.<br /> <br /> ಭಾರತೀಯ ವಾಣಿಜ್ಯೋದ್ಯಮ ಮಹಾಸಂಘ (ಅಸೋಚಾಂ) ಆಶ್ರಯದಲ್ಲಿ ನಗರದಲ್ಲಿ ಶುಕ್ರವಾರ ನಡೆದ ಸಮ್ಮೇಳನದ ಸಂದರ್ಭದಲ್ಲಿ ಅವರು ‘ಪ್ರಜಾವಾಣಿ’ಯೊಂದಿಗೆ ಮಾತನಾಡಿದರು. ‘ಶ್ರೀನಿವಾಸಪುರ ತಾಲ್ಲೂಕು ಮಾವಿನ ಮಡಿಲೆಂದೇ ಪ್ರಖ್ಯಾತವಾದುದು. ಇಲ್ಲಿ 40,000 ಹೆಕ್ಟೇರ್ ಪ್ರದೇಶದಲ್ಲಿ ಮಾವು ಬೆಳೆಯಲಾಗುತ್ತಿದೆ.<br /> <br /> ರಾಜ್ಯದ ಮಾವಿನ ಬೆಳೆಯಲ್ಲಿ ಶೇ 40ರಷ್ಟು ಪಾಲು ಕೋಲಾರ ಜಿಲ್ಲೆಯದೇ. ಆದರೆ, ಮಾರುಕಟ್ಟೆಯ ಮಾಹಿತಿ ಕೊರತೆಯಿಂದ ಇಲ್ಲಿನ ರೈತರು ಗುಣಮಟ್ಟ ಕಾಪಾಡಲು ಹೆಚ್ಚಿನ ಆದ್ಯತೆ ನೀಡಿರಲಿಲ್ಲ. ಈ ಹಿನ್ನೆಲೆಯಲ್ಲಿ ನಿರಂತರ ತರಬೇತಿ ನೀಡಲಾಗುತ್ತಿದೆ’ ಎಂದು ಅವರು ವಿವರಿಸಿದರು.<br /> <br /> ‘ಜಿಲ್ಲೆಯ ಆಯ್ದ 100 ರೈತರಿಗೆ ಈ ತರಬೇತಿ ನೀಡಲಾಗುತ್ತಿದೆ. ಡಿಸೆಂಬರ್ನಲ್ಲಿ ತಜ್ಞರಿಂದ ತರಬೇತಿ ಆರಂಭವಾಗಿದೆ. ಈಗಾಗಲೇ ಮೂರು ಹಂತದ ತರಬೇತಿ ನೀಡಲಾಗಿದೆ. ಮೇ ತಿಂಗಳ ವರೆಗೆ ಮುಂದುವರಿಯಲಿದೆ. ಮೂರು ವರ್ಷಗಳ ಕಾಲ ತರಬೇತಿ ನೀಡಿದ ಬಳಿಕ ರೈತರೇ ತಜ್ಞರು ಆಗುತ್ತಾರೆ. ಆಗ ಅವರು ಉಳಿದ ರೈತರಿಗೆ ಮಾರ್ಗದರ್ಶನ ನೀಡುತ್ತಾರೆ ಎಂದರು.<br /> <br /> ‘ಮಾವಿನ ಕಾಯಿಯನ್ನು ಕೀಳುವುದು ಹೇಗೆ? ಕಟಾವು ಮಾಡಿದ ಯಾವ ತಾಪಮಾನದಲ್ಲಿ ಸಂರಕ್ಷಣೆ ಮಾಡಬೇಕು? ಹಣ್ಣಿನ ನೈಸರ್ಗಿಕ ಬಣ್ಣ ಬರಲು ಯಾವ ರೀತಿ ಇಡಬೇಕು? ವಿದೇಶಕ್ಕೆ ರಫ್ತು ಮಾಡಲು ಅನುಸರಿಸಬೇಕಾದ ಮಾನದಂಡಗಳೇನು ಎಂಬಿತ್ಯಾದಿ ವಿಷಯಗಳ ಬಗ್ಗೆ ತಜ್ಞರು ಮಾಹಿತಿ ನೀಡುತ್ತಿದ್ದಾರೆ’ ಎಂದರು.<br /> <br /> ‘ರಾಜ್ಯದ ಹೆಚ್ಚಿನ ರೈತರು ಕಟಾವಿಗೂ ಮುಂಚೆಯೇ ಇಡೀ ತೋಟವನ್ನು ವರ್ತಕರಿಗೆ ಗುತ್ತಿಗೆ ಕೊಟ್ಟುಬಿಡುತ್ತಾರೆ. ಅವರು ಸರಿಯಾಗಿ ಬೆಳೆಯದ ಮಾವನ್ನು ಮಾರುಕಟ್ಟೆಗೆ ತರುತ್ತಾರೆ. ಮಾವು ನೋಡಲು ಸುಂದರವಾಗಿರುತ್ತದೆ. ಆದರೆ, ಹುಳಿ ಹುಳಿಯಾಗಿರುತ್ತದೆ. ಮತ್ತೆ ಗ್ರಾಹಕ ಈ ಹಣ್ಣನ್ನು ಖರೀದಿ ಮಾಡುವುದಿಲ್ಲ. ಇಂತಹ ಹಣ್ಣಿಗೆ ಉತ್ತಮ ಬೆಲೆಯೂ ಸಿಗುವುದಿಲ್ಲ. ಗ್ರಾಹಕರು ಈ ಊರಿನ ಹಣ್ಣನ್ನು ಅನುಮಾನದಿಂದ ನೋಡುತ್ತಾರೆ. ರೈತರಿಗೆ ತರಬೇತಿ ನೀಡುವುದರಿಂದ ಭವಿಷ್ಯದಲ್ಲಿ ಇಂತಹ ಪ್ರಮೇಯ ಎದುರಾಗದಂತೆ ಎಚ್ಚರ ವಹಿಸಬಹುದಾಗಿದೆ’ ಎಂದರು.<br /> <br /> ‘5 ವರ್ಷಗಳ ಹಿಂದೆ ಕೊಪ್ಪಳ ಜಿಲ್ಲೆಯ ದಾಳಿಂಬೆ ಬೆಳೆಗಾರರಿಗೆ ತರಬೇತಿ ನೀಡಲಾಯಿತು. ತಜ್ಞರ ಸಲಹೆ ಮೇರೆಗೆ ದಾಳಿಂಬೆ ಬೆಳೆ ಚಕ್ರದ ಅವಧಿಯನ್ನೇ ಮಾರ್ಪಾಡು ಮಾಡಲಾಯಿತು. ದಾಳಿಂಬೆ ರಫ್ತು ಆಯಿತು. ರೈತರಿಗೆ ಒಂದು ಕೆ.ಜಿ.ದಾಳಿಂಬೆಗೆ ₨140 ಬೆಲೆ ಸಿಕ್ಕಿತ್ತು. ಅದೇ ಈ ರೀತಿ ಈ ವರ್ಷ ಹಾವೇರಿ ಜಿಲ್ಲೆಯಲ್ಲಿ ಬಾದಾಮಿ ಮಾವಿನಕಾಯಿ ಬೆಳೆಗಾರರಿಗೆ, ತರಬೇತಿ ನೀಡಲಾಗಿತ್ತು ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>