<p><strong>ನವದೆಹಲಿ (ಪಿಟಿಐ): </strong>ದೊಡ್ಡ ಸಾಧನೆ ಬಳಿಕವೂ ತಮಿಳುನಾಡಿನ ಅಥ್ಲೀಟ್ ಶಾಂತಿ ಸೌಂದರಾಜನ್ ಅವರ ಬಾಳಲ್ಲಿ ಕತ್ತಲು ಆವರಿಸಿತ್ತು. `ಮಹಿಳೆ ಅಲ್ಲ; ಪುರುಷ' ಎಂಬುದು ಲಿಂಗ ಪತ್ತೆ ಪರೀಕ್ಷೆಯಲ್ಲಿ ಸಾಬೀತಾದ ಕಾರಣ ಅವರು ಏಷ್ಯನ್ ಕ್ರೀಡಾಕೂಟದಲ್ಲಿ ಗೆದ್ದಿದ್ದ ಪದಕ ಹಿಂಪಡೆಯಲಾಗಿತ್ತು. ಕೆಲ ದಿನಗಳ ಬಳಿಕ ಅವರು ಇಟ್ಟಿಗೆ ತಯಾರಿಕಾ ಘಟಕದಲ್ಲಿ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದದ್ದು ಬೆಳಕಿಗೆ ಬಂದಿತ್ತು.<br /> <br /> ಆದರೆ ಅವರ ಸಂಕಷ್ಟದ ಬದುಕಿಗೆ ಈಗ ಮುಕ್ತಿ ದೊರೆಯುವ ಸಮಯ ಬಂದಿದೆ. ಏಕೆಂದರೆ ಬೆಂಗಳೂರಿನ ಭಾರತ ಕ್ರೀಡಾ ಪ್ರಾಧಿಕಾರದಲ್ಲಿರುವ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಸ್ಪೋರ್ಟ್ಸ್ನಲ್ಲಿ (ಎನ್ಐಎಸ್) ಅಥ್ಲೆಟಿಕ್ಸ್ ವಿಭಾಗದಲ್ಲಿ ಡಿಪ್ಲೊಮಾ ಕೋರ್ಸ್ ಮಾಡಲು ಅವರಿಗೆ ಅವಕಾಶ ಮಾಡಿಕೊಡಲಾಗಿದೆ. ಈ ಕೋರ್ಸ್ ಮುಗಿದ ಮೇಲೆ ಅವರು ಕೋಚ್ ಆಗಿ ಕಾರ್ಯನಿರ್ವಹಿಸಲು ಅರ್ಹತೆ ಪಡೆಯುತ್ತಾರೆ.<br /> <br /> ಈ ಕ್ರಮಕ್ಕೆ ಮುಂದಾಗಿರುವುದು ಭಾರತ ಕ್ರೀಡಾ ಪ್ರಾಧಿಕಾರ (ಎಸ್ಎಐ). ಈ ಸಂಬಂಧ ತಮಿಳುನಾಡು ಸರ್ಕಾರಕ್ಕೆ ಪತ್ರ ಬರೆದಿರುವ ಎಸ್ಎಐ, ಶಾಂತಿ ಅವರ ಖರ್ಚು ವೆಚ್ಚ ನೋಡಿಕೊಳ್ಳುವಂತೆ ಕೋರಿದೆ.<br /> <br /> `ಅರ್ಹತೆ ಪಡೆದ ಕೋಚ್ ಆಗಿ ಕಾರ್ಯನಿರ್ವಹಿಸಲು ಶಾಂತಿ ಬೆಂಗಳೂರಿನ ಎನ್ಐಎಸ್ನಲ್ಲಿ ಡಿಪ್ಲೊಮಾ ಕೋರ್ಸ್ ಮಾಡಲಿದ್ದಾರೆ. ಪಟಿಯಾಲದಲ್ಲಿರುವ ಎನ್ಐಎಸ್ನಲ್ಲಿ ಅವರಿಗೆ ಪ್ರತ್ಯೇಕ ಕೊಠಡಿ ವ್ಯವಸ್ಥೆ ಮಾಡಲಾಗಿತ್ತು. ಆದರೆ ಬೆಂಗಳೂರಿನಲ್ಲಿ ಈ ವ್ಯವಸ್ಥೆ ಮಾಡುವಂತೆ ಅವರು ನಮಗೆ ಮನವಿ ಮಾಡಿದ್ದರು. ಅವರ ನಿವಾಸವಿರುವ ತಮಿಳುನಾಡಿನ ವಿಲ್ಲುಪುರಂ ಜಿಲ್ಲೆಗೆ ಬೆಂಗಳೂರು ಸನಿಹವಿದೆ' ಎಂದು ಎಸ್ಎಐ ಪ್ರಧಾನ ಮಹಾನಿರ್ದೇಶಕ ಜಿಜಿ ಥಾಮ್ಸನ್ ಹೇಳಿದ್ದಾರೆ.<br /> <br /> 2013-14ನೇ ಸಾಲಿನ ಕೋರ್ಸ್ ಜುಲೈ ಮೂರರಂದು ಆರಂಭವಾಗಲಿದೆ. ಹತ್ತು ತಿಂಗಳು ಅವರು ಬೆಂಗಳೂರಿನಲ್ಲಿರಬೇಕು. ಈ ಅವಧಿಯಲ್ಲಿ ಅವರಿಗೆ ಹಾಸ್ಟೆಲ್ನಿಂದ ಹೊರಗೆ ಪ್ರತ್ಯೇಕ ಕೊಠಡಿ ವ್ಯವಸ್ಥೆ ಮಾಡಿಕೊಡಲಾಗುವುದು ಎಂದೂ ಥಾಮ್ಸನ್ ತಿಳಿಸಿದ್ದಾರೆ.<br /> <br /> ಶಾಂತಿ 2006ರ ದೋಹಾ ಏಷ್ಯನ್ ಕ್ರೀಡಾಕೂಟದಲ್ಲಿ ಮಹಿಳೆಯರ 800 ಮೀಟರ್ ಓಟದಲ್ಲಿ ಬೆಳ್ಳಿ ಪದಕ ಜಯಿಸಿದ್ದರು. ಅನುಮಾನದ ಕಾರಣ ಅವರನ್ನು ಲಿಂಗ ಪತ್ತೆ ಪರೀಕ್ಷೆಗೆ ಒಳಪಡಿಸಲಾಗಿತ್ತು. ಆ ಸಮಯದಲ್ಲಿ ಅವರು ಮಹಿಳೆ ಅಲ್ಲ; ಪುರುಷ ಎಂಬುದು ಗೊತ್ತಾಗಿತ್ತು. ಪದಕ ಹಿಂಪಡೆಯಲಾಗಿತ್ತು.</p>.<p>ಆ ನಂತರದ ದಿನಗಳಲ್ಲಿ ಶಾಂತಿ ಇಟ್ಟಿಗೆ ತಯಾರಿಕಾ ಘಟಕದಲ್ಲಿ 200 ರೂಪಾಯಿ ಸಂಬಳದ ದಿನಗೂಲಿ ಕೆಲಸದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಅದು ಬೆಳಕಿಗೆ ಬಂದಾಗ ಎನ್ಐಎಸ್ನಲ್ಲಿ ಅವಕಾಶ ಮಾಡಿಕೊಡುವುದಾಗಿ ಕೇಂದ್ರ ಕ್ರೀಡಾ ಸರ್ಕಾರ ಶಾಂತಿಗೆ ಭರವಸೆ ನೀಡಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ (ಪಿಟಿಐ): </strong>ದೊಡ್ಡ ಸಾಧನೆ ಬಳಿಕವೂ ತಮಿಳುನಾಡಿನ ಅಥ್ಲೀಟ್ ಶಾಂತಿ ಸೌಂದರಾಜನ್ ಅವರ ಬಾಳಲ್ಲಿ ಕತ್ತಲು ಆವರಿಸಿತ್ತು. `ಮಹಿಳೆ ಅಲ್ಲ; ಪುರುಷ' ಎಂಬುದು ಲಿಂಗ ಪತ್ತೆ ಪರೀಕ್ಷೆಯಲ್ಲಿ ಸಾಬೀತಾದ ಕಾರಣ ಅವರು ಏಷ್ಯನ್ ಕ್ರೀಡಾಕೂಟದಲ್ಲಿ ಗೆದ್ದಿದ್ದ ಪದಕ ಹಿಂಪಡೆಯಲಾಗಿತ್ತು. ಕೆಲ ದಿನಗಳ ಬಳಿಕ ಅವರು ಇಟ್ಟಿಗೆ ತಯಾರಿಕಾ ಘಟಕದಲ್ಲಿ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದದ್ದು ಬೆಳಕಿಗೆ ಬಂದಿತ್ತು.<br /> <br /> ಆದರೆ ಅವರ ಸಂಕಷ್ಟದ ಬದುಕಿಗೆ ಈಗ ಮುಕ್ತಿ ದೊರೆಯುವ ಸಮಯ ಬಂದಿದೆ. ಏಕೆಂದರೆ ಬೆಂಗಳೂರಿನ ಭಾರತ ಕ್ರೀಡಾ ಪ್ರಾಧಿಕಾರದಲ್ಲಿರುವ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಸ್ಪೋರ್ಟ್ಸ್ನಲ್ಲಿ (ಎನ್ಐಎಸ್) ಅಥ್ಲೆಟಿಕ್ಸ್ ವಿಭಾಗದಲ್ಲಿ ಡಿಪ್ಲೊಮಾ ಕೋರ್ಸ್ ಮಾಡಲು ಅವರಿಗೆ ಅವಕಾಶ ಮಾಡಿಕೊಡಲಾಗಿದೆ. ಈ ಕೋರ್ಸ್ ಮುಗಿದ ಮೇಲೆ ಅವರು ಕೋಚ್ ಆಗಿ ಕಾರ್ಯನಿರ್ವಹಿಸಲು ಅರ್ಹತೆ ಪಡೆಯುತ್ತಾರೆ.<br /> <br /> ಈ ಕ್ರಮಕ್ಕೆ ಮುಂದಾಗಿರುವುದು ಭಾರತ ಕ್ರೀಡಾ ಪ್ರಾಧಿಕಾರ (ಎಸ್ಎಐ). ಈ ಸಂಬಂಧ ತಮಿಳುನಾಡು ಸರ್ಕಾರಕ್ಕೆ ಪತ್ರ ಬರೆದಿರುವ ಎಸ್ಎಐ, ಶಾಂತಿ ಅವರ ಖರ್ಚು ವೆಚ್ಚ ನೋಡಿಕೊಳ್ಳುವಂತೆ ಕೋರಿದೆ.<br /> <br /> `ಅರ್ಹತೆ ಪಡೆದ ಕೋಚ್ ಆಗಿ ಕಾರ್ಯನಿರ್ವಹಿಸಲು ಶಾಂತಿ ಬೆಂಗಳೂರಿನ ಎನ್ಐಎಸ್ನಲ್ಲಿ ಡಿಪ್ಲೊಮಾ ಕೋರ್ಸ್ ಮಾಡಲಿದ್ದಾರೆ. ಪಟಿಯಾಲದಲ್ಲಿರುವ ಎನ್ಐಎಸ್ನಲ್ಲಿ ಅವರಿಗೆ ಪ್ರತ್ಯೇಕ ಕೊಠಡಿ ವ್ಯವಸ್ಥೆ ಮಾಡಲಾಗಿತ್ತು. ಆದರೆ ಬೆಂಗಳೂರಿನಲ್ಲಿ ಈ ವ್ಯವಸ್ಥೆ ಮಾಡುವಂತೆ ಅವರು ನಮಗೆ ಮನವಿ ಮಾಡಿದ್ದರು. ಅವರ ನಿವಾಸವಿರುವ ತಮಿಳುನಾಡಿನ ವಿಲ್ಲುಪುರಂ ಜಿಲ್ಲೆಗೆ ಬೆಂಗಳೂರು ಸನಿಹವಿದೆ' ಎಂದು ಎಸ್ಎಐ ಪ್ರಧಾನ ಮಹಾನಿರ್ದೇಶಕ ಜಿಜಿ ಥಾಮ್ಸನ್ ಹೇಳಿದ್ದಾರೆ.<br /> <br /> 2013-14ನೇ ಸಾಲಿನ ಕೋರ್ಸ್ ಜುಲೈ ಮೂರರಂದು ಆರಂಭವಾಗಲಿದೆ. ಹತ್ತು ತಿಂಗಳು ಅವರು ಬೆಂಗಳೂರಿನಲ್ಲಿರಬೇಕು. ಈ ಅವಧಿಯಲ್ಲಿ ಅವರಿಗೆ ಹಾಸ್ಟೆಲ್ನಿಂದ ಹೊರಗೆ ಪ್ರತ್ಯೇಕ ಕೊಠಡಿ ವ್ಯವಸ್ಥೆ ಮಾಡಿಕೊಡಲಾಗುವುದು ಎಂದೂ ಥಾಮ್ಸನ್ ತಿಳಿಸಿದ್ದಾರೆ.<br /> <br /> ಶಾಂತಿ 2006ರ ದೋಹಾ ಏಷ್ಯನ್ ಕ್ರೀಡಾಕೂಟದಲ್ಲಿ ಮಹಿಳೆಯರ 800 ಮೀಟರ್ ಓಟದಲ್ಲಿ ಬೆಳ್ಳಿ ಪದಕ ಜಯಿಸಿದ್ದರು. ಅನುಮಾನದ ಕಾರಣ ಅವರನ್ನು ಲಿಂಗ ಪತ್ತೆ ಪರೀಕ್ಷೆಗೆ ಒಳಪಡಿಸಲಾಗಿತ್ತು. ಆ ಸಮಯದಲ್ಲಿ ಅವರು ಮಹಿಳೆ ಅಲ್ಲ; ಪುರುಷ ಎಂಬುದು ಗೊತ್ತಾಗಿತ್ತು. ಪದಕ ಹಿಂಪಡೆಯಲಾಗಿತ್ತು.</p>.<p>ಆ ನಂತರದ ದಿನಗಳಲ್ಲಿ ಶಾಂತಿ ಇಟ್ಟಿಗೆ ತಯಾರಿಕಾ ಘಟಕದಲ್ಲಿ 200 ರೂಪಾಯಿ ಸಂಬಳದ ದಿನಗೂಲಿ ಕೆಲಸದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಅದು ಬೆಳಕಿಗೆ ಬಂದಾಗ ಎನ್ಐಎಸ್ನಲ್ಲಿ ಅವಕಾಶ ಮಾಡಿಕೊಡುವುದಾಗಿ ಕೇಂದ್ರ ಕ್ರೀಡಾ ಸರ್ಕಾರ ಶಾಂತಿಗೆ ಭರವಸೆ ನೀಡಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>