<p><strong>ಮುಖ್ಯ ಹುದ್ದೆಗೆ ನೇಮಕ<br /> ವಾಷಿಂಗ್ಟನ್ (ಪಿಟಿಐ):</strong> ಅಧ್ಯಕ್ಷ ಬರಾಕ್ ಒಬಾಮ ಅವರು ಭಾರತೀಯ ಮೂಲದ ಶ್ರೀಕಾಂತ್ ಶ್ರೀನಿವಾಸನ್ ಅವರನ್ನು ನ್ಯಾಯಾಂಗದ ಮುಖ್ಯ ಹುದ್ದೆಗೆ ನೇಮಕ ಮಾಡಿದ್ದಾರೆ.<br /> <br /> ಶ್ರೀನಿವಾಸನ್ ಅವರು ಡಿಸ್ಟ್ರಿಕ್ಟ್ ಆಫ್ ಕೊಲಂಬಿಯಾ ಸರ್ಕ್ಯೂಟ್ನ ಕೋರ್ಟ್ನಲ್ಲಿ ಕೈತ್ಲಿನ್ ಹಲ್ಲಿಗನ್ ಅವರ ಜೊತೆ ಕಾರ್ಯನಿರ್ವಹಿಸಲಿದ್ದಾರೆ ಎಂದು ಶ್ವೇತಭವನದ ಹೇಳಿಕೆ ತಿಳಿಸಿದೆ. ಚಂಡೀಗಢದಲ್ಲಿ ಜನಿಸಿ ಕನ್ಸಾಸ್ನಲ್ಲಿ ಬೆಳದ ಶ್ರೀನಿವಾಸನ್, ಅಮೆರಿಕದ ಪ್ರಿನ್ಸಿಪಲ್ ಡೆಪ್ಯುಟಿ ಸಾಲಿಸಿಟರ್ ಜನರಲ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. <br /> <br /> <strong>ಭಾರತದಲ್ಲಿ ಹೂಡಿಕೆಗೆ ಸಿಬಲ್ ಒತ್ತು <br /> ವಾಷಿಂಗ್ಟನ್ (ಪಿಟಿಐ): `</strong>ಭಾರತದಲ್ಲಿ ಆರೋಗ್ಯ, ಮಾಹಿತಿ ತಂತ್ರಜ್ಞಾನ ಹಾಗೂ ಸೈಬರ್ ಸುರಕ್ಷತೆಯನ್ನು ಹೂಡಿಕೆಯ ಪ್ರಮುಖ ವಲಯಗಳಾಗಿ ಗುರುತಿಸಲಾಗಿದೆ. ಪರಸ್ಪರ ಲಾಭಕ್ಕಾಗಿ ಈ ಮೂರು ಕ್ಷೇತ್ರಗಳಲ್ಲಿ ಭಾರತ ಮತ್ತು ಅಮೆರಿಕ ಒಗ್ಗೂಡಿ ಕಾರ್ಯನಿರ್ವಹಿಸಬಹುದು~ ಎಂದು ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ಕಪಿಲ್ ಸಿಬಲ್ ಹೇಳಿದರು.<br /> <br /> ಅಮೆರಿಕ -ಭಾರತ ಉದ್ಯಮ ಮಂಡಳಿ (ಯುಎಸ್ಐಬಿಸಿ) ಮತ್ತು ಭಾರತೀಯ ಕೈಗಾರಿಕಾ ಒಕ್ಕೂಟ (ಸಿಐಐ) ಮಂಗಳವಾರ ಆಯೋಜಿಸಿದ್ದ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಸಿಬಲ್, `ಅಮೆರಿಕದಂತೆ ಭಾರತ ಕೂಡ ಸ್ವತಂತ್ರ್ಯ ರಾಷ್ಟ್ರವಾಗಿದ್ದು, ಹೂಡಿಕೆಗೆ ಇಲ್ಲಿ ಒಳ್ಳೆಯ ವಾತಾವರಣವಿದೆ~ ಎಂದರು.<br /> <strong><br /> ಭೂಕಂಪನ: ಅವಶೇಷಗಳಡಿ 70 ಮಂದಿ<br /> ಮಝರ್- ಎ- ಶರೀಫ್ (ಎಎಫ್ಪಿ): </strong>ಉತ್ತರ ಆಫ್ಘಾನಿಸ್ತಾನದಲ್ಲಿ ಸಂಭವಿಸಿದ ಎರಡು ಭೂಕಂಪನಗಳಿಗೆ ನೆಲಸಮಗೊಂಡಿರುವ ಮನೆಗಳ ಅವಶೇಷಗಳ ಅಡಿಯಲ್ಲಿ ಸುಮಾರು 70 ಗ್ರಾಮಸ್ಥರು ಸಿಕ್ಕಿಕೊಂಡಿದ್ದಾರೆ ಎಂದು ಹೇಳಲಾಗಿದೆ.<br /> <br /> ಬುರಕಾ ಜಿಲ್ಲೆಯಲ್ಲಿ ಮೂರು ದೇಹಗಳು ಪತ್ತೆಯಾಗಿವೆ. ಹಿಂದೂಕುಶ್ ಪರ್ವತಗಳಲ್ಲಿರುವ ಬಗ್ಲನ್ ಪ್ರಾಂತ್ಯದಲ್ಲಿ ಹೆಚ್ಚಿನ ತೀವ್ರತೆಯ ಭೂಕಂಪನ ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮುಖ್ಯ ಹುದ್ದೆಗೆ ನೇಮಕ<br /> ವಾಷಿಂಗ್ಟನ್ (ಪಿಟಿಐ):</strong> ಅಧ್ಯಕ್ಷ ಬರಾಕ್ ಒಬಾಮ ಅವರು ಭಾರತೀಯ ಮೂಲದ ಶ್ರೀಕಾಂತ್ ಶ್ರೀನಿವಾಸನ್ ಅವರನ್ನು ನ್ಯಾಯಾಂಗದ ಮುಖ್ಯ ಹುದ್ದೆಗೆ ನೇಮಕ ಮಾಡಿದ್ದಾರೆ.<br /> <br /> ಶ್ರೀನಿವಾಸನ್ ಅವರು ಡಿಸ್ಟ್ರಿಕ್ಟ್ ಆಫ್ ಕೊಲಂಬಿಯಾ ಸರ್ಕ್ಯೂಟ್ನ ಕೋರ್ಟ್ನಲ್ಲಿ ಕೈತ್ಲಿನ್ ಹಲ್ಲಿಗನ್ ಅವರ ಜೊತೆ ಕಾರ್ಯನಿರ್ವಹಿಸಲಿದ್ದಾರೆ ಎಂದು ಶ್ವೇತಭವನದ ಹೇಳಿಕೆ ತಿಳಿಸಿದೆ. ಚಂಡೀಗಢದಲ್ಲಿ ಜನಿಸಿ ಕನ್ಸಾಸ್ನಲ್ಲಿ ಬೆಳದ ಶ್ರೀನಿವಾಸನ್, ಅಮೆರಿಕದ ಪ್ರಿನ್ಸಿಪಲ್ ಡೆಪ್ಯುಟಿ ಸಾಲಿಸಿಟರ್ ಜನರಲ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. <br /> <br /> <strong>ಭಾರತದಲ್ಲಿ ಹೂಡಿಕೆಗೆ ಸಿಬಲ್ ಒತ್ತು <br /> ವಾಷಿಂಗ್ಟನ್ (ಪಿಟಿಐ): `</strong>ಭಾರತದಲ್ಲಿ ಆರೋಗ್ಯ, ಮಾಹಿತಿ ತಂತ್ರಜ್ಞಾನ ಹಾಗೂ ಸೈಬರ್ ಸುರಕ್ಷತೆಯನ್ನು ಹೂಡಿಕೆಯ ಪ್ರಮುಖ ವಲಯಗಳಾಗಿ ಗುರುತಿಸಲಾಗಿದೆ. ಪರಸ್ಪರ ಲಾಭಕ್ಕಾಗಿ ಈ ಮೂರು ಕ್ಷೇತ್ರಗಳಲ್ಲಿ ಭಾರತ ಮತ್ತು ಅಮೆರಿಕ ಒಗ್ಗೂಡಿ ಕಾರ್ಯನಿರ್ವಹಿಸಬಹುದು~ ಎಂದು ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ಕಪಿಲ್ ಸಿಬಲ್ ಹೇಳಿದರು.<br /> <br /> ಅಮೆರಿಕ -ಭಾರತ ಉದ್ಯಮ ಮಂಡಳಿ (ಯುಎಸ್ಐಬಿಸಿ) ಮತ್ತು ಭಾರತೀಯ ಕೈಗಾರಿಕಾ ಒಕ್ಕೂಟ (ಸಿಐಐ) ಮಂಗಳವಾರ ಆಯೋಜಿಸಿದ್ದ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಸಿಬಲ್, `ಅಮೆರಿಕದಂತೆ ಭಾರತ ಕೂಡ ಸ್ವತಂತ್ರ್ಯ ರಾಷ್ಟ್ರವಾಗಿದ್ದು, ಹೂಡಿಕೆಗೆ ಇಲ್ಲಿ ಒಳ್ಳೆಯ ವಾತಾವರಣವಿದೆ~ ಎಂದರು.<br /> <strong><br /> ಭೂಕಂಪನ: ಅವಶೇಷಗಳಡಿ 70 ಮಂದಿ<br /> ಮಝರ್- ಎ- ಶರೀಫ್ (ಎಎಫ್ಪಿ): </strong>ಉತ್ತರ ಆಫ್ಘಾನಿಸ್ತಾನದಲ್ಲಿ ಸಂಭವಿಸಿದ ಎರಡು ಭೂಕಂಪನಗಳಿಗೆ ನೆಲಸಮಗೊಂಡಿರುವ ಮನೆಗಳ ಅವಶೇಷಗಳ ಅಡಿಯಲ್ಲಿ ಸುಮಾರು 70 ಗ್ರಾಮಸ್ಥರು ಸಿಕ್ಕಿಕೊಂಡಿದ್ದಾರೆ ಎಂದು ಹೇಳಲಾಗಿದೆ.<br /> <br /> ಬುರಕಾ ಜಿಲ್ಲೆಯಲ್ಲಿ ಮೂರು ದೇಹಗಳು ಪತ್ತೆಯಾಗಿವೆ. ಹಿಂದೂಕುಶ್ ಪರ್ವತಗಳಲ್ಲಿರುವ ಬಗ್ಲನ್ ಪ್ರಾಂತ್ಯದಲ್ಲಿ ಹೆಚ್ಚಿನ ತೀವ್ರತೆಯ ಭೂಕಂಪನ ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>