<p>ಇತ್ತೀಚೆಗೆ ಒಂದು ಅಪರೂಪದ ಉಪನ್ಯಾಸವನ್ನು ಕೇಳುವ ಅವಕಾಶ ದೆಹಲಿಯಲ್ಲಿ ದೊರೆಯಿತು. ಅದು, ಭಾರತೀಯ ಪತ್ರಿಕೋದ್ಯಮದ ಬಗ್ಗೆ ಅಪಾರ ಆಸಕ್ತಿಯುಳ್ಳ ಅಂತರರಾಷ್ಟ್ರೀಯ ಖ್ಯಾತಿಯ ಮಾಧ್ಯಮ ತಜ್ಞ ಪ್ರೊ.ರಾಬಿನ್ ಜೆಫ್ರಿ ಅವರದ್ದು.<br /> <br /> ತಮ್ಮ ಉಪನ್ಯಾಸದಲ್ಲಿ ಜೆಫ್ರಿ ಅವರು ಕೆಲವು ವಿಶೇಷ ಹೊಳಹುಗಳನ್ನು ಪ್ರಸ್ತಾಪಿಸಿದರು. ಭಾರತೀಯ ಮಾಧ್ಯಮ ಕಚೇರಿಗಳಲ್ಲಿ ದಲಿತರ ಪ್ರಾತಿನಿಧ್ಯ ಕಡಿಮೆ ಇರುವುದು ಹಾಗೂ ಪತ್ರಿಕೆಗಳ ಪುಟಗಳಲ್ಲಿ ಮತ್ತು ವಾಹಿನಿಗಳ ಕಾರ್ಯಕ್ರಮಗಳಲ್ಲಿ ದಲಿತರರಿಗೆ ಸಮರ್ಪಕ ಪ್ರಾತಿನಿಧ್ಯ ದೊರೆಯುತ್ತಿಲ್ಲ ಎನ್ನುವುದು ಅವರ ಉಪನ್ಯಾಸದ ಮುಖ್ಯ ಆಶಯವಾಗಿತ್ತು. ಆ ಉಪನ್ಯಾಸ ಕೇಳಿದ ಕ್ಷಣದಿಂದ, ಮಾಧ್ಯಮಗಳಲ್ಲಿ `ದಲಿತ ದನಿ~ಗೆ ಸೂಕ್ತ ಪ್ರಾತಿನಿಧ್ಯ ದೊರೆಯುತ್ತಿಲ್ಲ ಎನ್ನುವ ಜೆಫ್ರಿ ಅವರ ಆತಂಕ ನನ್ನನ್ನೂ ಕಾಡತೊಡಗಿತು.<br /> <br /> ದಲಿತರ ಒಟ್ಟಾರೆ ಬದುಕು ಹಾಗೂ ದಲಿತ ಚಿಂತನೆಯ ಅಭಿವ್ಯಕ್ತಿಯ ಸಾಧ್ಯತೆಗಳ ಬಗ್ಗೆ ಗೆಳೆಯರೊಂದಿಗೆ, ಸಹೋದ್ಯೋಗಿಗಳೊಂದಿಗೆ ಚರ್ಚಿಸುತ್ತಿದ್ದಾಗ, ಪತ್ರಿಕೆಯ ಒಂದು ಸಂಚಿಕೆಯನ್ನೇ `ದಲಿತ ವಿಶೇಷ ಸಂಚಿಕೆಯನ್ನಾಗಿ ರೂಪಿಸುವ ಚಿಂತನೆ ಹೊಳೆಯಿತು.<br /> <br /> `ಅಂಬೇಡ್ಕರ್ ಜಯಂತಿ ಸನಿಹದಲ್ಲೇ ಇದ್ದುದು ನಮ್ಮ ಚಿಂತನೆಗೆ ಹುರುಪು ನೀಡಿತು. `ದಲಿತ ವಿಶೇಷ ಸಂಚಿಕೆಯ ಮೂಲಕ ಏಪ್ರಿಲ್ 14ರ ಅಂಬೇಡ್ಕರ್ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಲು ನಿರ್ಧರಿಸಿದೆವು. ಅತಿಥಿ ಸಂಪಾದಕರೊಬ್ಬರ ಉಸ್ತುವಾರಿಯಲ್ಲಿ ವಿಶೇಷ ಸಂಚಿಕೆಯನ್ನು ರೂಪಿಸುವ ಯೋಚನೆ ನಮ್ಮದಾಗಿತ್ತು. ಆ ಕ್ಷಣಕ್ಕೆ ತಕ್ಷಣ ಹೊಳೆದ ಏಕೈಕ ಹೆಸರು, ದೇವನೂರ ಮಹಾದೇವ ಅವರದು.<br /> <br /> ಎಂದಿನಂತೆ ದೇವನೂರರು ಆರಂಭದಲ್ಲಿ ಆತಂಕ ವ್ಯಕ್ತಪಡಿಸಿದರೂ ಪತ್ರಿಕೆಯ ಉದ್ದೇಶವನ್ನು ಮನಗಂಡು ಅತಿಥಿ ಸಂಪಾದಕರಾಗಲು ಮುಜುಗರದಿಂದಲೇ ಒಪ್ಪಿಕೊಂಡರು. ಕಡಿಮೆ ಕಾಲಾವಕಾಶದಲ್ಲೇ, ಜ್ವರವೇರಿಸಿಕೊಂಡ ಉತ್ಸಾಹದಲ್ಲಿ ಅವರು ಕಾರ್ಯ ತತ್ಪರವಾದುದರ ಫಲ, ಈಗ ನಿಮ್ಮ ಕೈಯಲ್ಲಿರುವ ಈ ಸಂಚಿಕೆ.<br /> <br /> ದಲಿತರ ಬದುಕಿಗೆ ಸಂಬಂಧಿಸಿದ ಅನೇಕ ಮುಖಗಳನ್ನು ಒಳಗೊಳ್ಳುವಂತೆ ಈ ಸಂಚಿಕೆಯನ್ನು ರೂಪಿಸಲು ಪ್ರಯತ್ನಿಸಿದ್ದೇವೆ. ಈ ನಿಟ್ಟಿನಲ್ಲಿ ನಾಡಿನ ಪ್ರಮುಖ ದಲಿತ ಚಿಂತಕರು, ಬರಹಗಾರರು, ಕಲಾವಿದರು ನಮ್ಮ ಪ್ರಯತ್ನದಲ್ಲಿ ಜೊತೆಯಾಗಿದ್ದಾರೆ. ಇದು ದಲಿತ ದನಿಯ ವಿಶೇಷ ಸಂಚಿಕೆಯಾದರೂ, ಆಂತರ್ಯದಲ್ಲಿ ಇದು ಸೂಸುವುದು ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಪಾದಿಸಿದ ಸಮಾನತೆ, ಸ್ವಾತಂತ್ರ್ಯ ಮತ್ತು ಸೋದರತೆ~ಯ ದನಿಯನ್ನೇ ಎನ್ನುವುದು ನಮ್ಮ ಗಮನದಲ್ಲಿದೆ.<br /> <br /> ಈ ವಿಶೇಷ ಸಂಚಿಕೆಯ ಸಂದರ್ಭದಲ್ಲಿ `ಪ್ರಜಾವಾಣಿ’ ನಡೆದುಬಂದ ಹಾದಿಯ ನೆನಪು ಅನಪೇಕ್ಷಣೀಯವೇನೂ ಅಲ್ಲ. ಭಾರತ ಪಡೆದುಕೊಂಡ ಸ್ವಾತಂತ್ರ್ಯದ ಅರ್ಥ ಮತ್ತು ವ್ಯಾಪ್ತಿಯನ್ನು ನಿರ್ವಚಿಸಿದ ಸಂವಿಧಾನವನ್ನು ನಾವು ಒಪ್ಪಿಕೊಳ್ಳುವುದಕ್ಕೆ ಎರಡು ವರ್ಷಗಳ ಹಿಂದೆ `ಪ್ರಜಾವಾಣಿ’ ತನ್ನ ಪ್ರಕಟಣೆಯನ್ನು ಆರಂಭಿಸಿತು.<br /> <br /> ಅಲ್ಲಿಂದ ಈ ತನಕ ಸಂಭವಿಸಿರುವ ಬದಲಾವಣೆಗಳು ಮತ್ತು ಪಲ್ಲಟಗಳು ಅನೇಕ. ಅವುಗಳನ್ನು ಕೇವಲ ಕಾಲದ ಕನ್ನಡಿಯಲ್ಲಿ ಕಂಡು ಪತ್ರಿಕೆಯಲ್ಲಿ ಪ್ರತಿಬಿಂಬಿಸುವಷ್ಟಕ್ಕೆ ಮಾತ್ರ `ಪ್ರಜಾವಾಣಿ’ ಸೀಮಿತಗೊಂಡಿಲ್ಲ.<br /> <br /> ಹೊರಗಿನ ಬದಲಾವಣೆಗಳನ್ನು ನಿರ್ವಚಿಸುವ, ವಿಶ್ಲೇಷಿಸುವ ಮತ್ತು ಪ್ರಭಾವಿಸುವ ಕ್ರಿಯೆಯನ್ನು ಪ್ರಜಾವಾಣಿ ನಿರಂತರವಾಗಿ ನಡೆಸುತ್ತಿದೆ. ಈ ಕ್ರಿಯೆಯಲ್ಲಿ ಅದು ತನ್ನನ್ನೂ ಬದಲಾವಣೆಗೆ ಒಡ್ಡಿಕೊಂಡಿದೆ. ಅಂತೆಯೇ, ನಿರಂತರ ಬದಲಾವಣೆಯ ಈ ಹಾದಿಯಲ್ಲಿ ಪತ್ರಿಕೆಯ ಮೂಲ ಉದ್ದೇಶವಾದ ಜನಪರ ಕಾಳಜಿಗಳಿಗೆ ಧಕ್ಕೆ ಬಾರದಂತೆ ಎಚ್ಚರವಹಿಸಿದ್ದೇವೆ. ಆ ಕಾಳಜಿ ಮತ್ತು ವಿವೇಕದ ತಾಜಾ ಉದಾಹರಣೆ ಇಂದಿನ ವಿಶೇಷ ಸಂಚಿಕೆ.</p>.<p><strong>–ಕೆ.ಎನ್. ಶಾಂತಕುಮಾರ್, ಸಂಪಾದಕರು </strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಇತ್ತೀಚೆಗೆ ಒಂದು ಅಪರೂಪದ ಉಪನ್ಯಾಸವನ್ನು ಕೇಳುವ ಅವಕಾಶ ದೆಹಲಿಯಲ್ಲಿ ದೊರೆಯಿತು. ಅದು, ಭಾರತೀಯ ಪತ್ರಿಕೋದ್ಯಮದ ಬಗ್ಗೆ ಅಪಾರ ಆಸಕ್ತಿಯುಳ್ಳ ಅಂತರರಾಷ್ಟ್ರೀಯ ಖ್ಯಾತಿಯ ಮಾಧ್ಯಮ ತಜ್ಞ ಪ್ರೊ.ರಾಬಿನ್ ಜೆಫ್ರಿ ಅವರದ್ದು.<br /> <br /> ತಮ್ಮ ಉಪನ್ಯಾಸದಲ್ಲಿ ಜೆಫ್ರಿ ಅವರು ಕೆಲವು ವಿಶೇಷ ಹೊಳಹುಗಳನ್ನು ಪ್ರಸ್ತಾಪಿಸಿದರು. ಭಾರತೀಯ ಮಾಧ್ಯಮ ಕಚೇರಿಗಳಲ್ಲಿ ದಲಿತರ ಪ್ರಾತಿನಿಧ್ಯ ಕಡಿಮೆ ಇರುವುದು ಹಾಗೂ ಪತ್ರಿಕೆಗಳ ಪುಟಗಳಲ್ಲಿ ಮತ್ತು ವಾಹಿನಿಗಳ ಕಾರ್ಯಕ್ರಮಗಳಲ್ಲಿ ದಲಿತರರಿಗೆ ಸಮರ್ಪಕ ಪ್ರಾತಿನಿಧ್ಯ ದೊರೆಯುತ್ತಿಲ್ಲ ಎನ್ನುವುದು ಅವರ ಉಪನ್ಯಾಸದ ಮುಖ್ಯ ಆಶಯವಾಗಿತ್ತು. ಆ ಉಪನ್ಯಾಸ ಕೇಳಿದ ಕ್ಷಣದಿಂದ, ಮಾಧ್ಯಮಗಳಲ್ಲಿ `ದಲಿತ ದನಿ~ಗೆ ಸೂಕ್ತ ಪ್ರಾತಿನಿಧ್ಯ ದೊರೆಯುತ್ತಿಲ್ಲ ಎನ್ನುವ ಜೆಫ್ರಿ ಅವರ ಆತಂಕ ನನ್ನನ್ನೂ ಕಾಡತೊಡಗಿತು.<br /> <br /> ದಲಿತರ ಒಟ್ಟಾರೆ ಬದುಕು ಹಾಗೂ ದಲಿತ ಚಿಂತನೆಯ ಅಭಿವ್ಯಕ್ತಿಯ ಸಾಧ್ಯತೆಗಳ ಬಗ್ಗೆ ಗೆಳೆಯರೊಂದಿಗೆ, ಸಹೋದ್ಯೋಗಿಗಳೊಂದಿಗೆ ಚರ್ಚಿಸುತ್ತಿದ್ದಾಗ, ಪತ್ರಿಕೆಯ ಒಂದು ಸಂಚಿಕೆಯನ್ನೇ `ದಲಿತ ವಿಶೇಷ ಸಂಚಿಕೆಯನ್ನಾಗಿ ರೂಪಿಸುವ ಚಿಂತನೆ ಹೊಳೆಯಿತು.<br /> <br /> `ಅಂಬೇಡ್ಕರ್ ಜಯಂತಿ ಸನಿಹದಲ್ಲೇ ಇದ್ದುದು ನಮ್ಮ ಚಿಂತನೆಗೆ ಹುರುಪು ನೀಡಿತು. `ದಲಿತ ವಿಶೇಷ ಸಂಚಿಕೆಯ ಮೂಲಕ ಏಪ್ರಿಲ್ 14ರ ಅಂಬೇಡ್ಕರ್ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಲು ನಿರ್ಧರಿಸಿದೆವು. ಅತಿಥಿ ಸಂಪಾದಕರೊಬ್ಬರ ಉಸ್ತುವಾರಿಯಲ್ಲಿ ವಿಶೇಷ ಸಂಚಿಕೆಯನ್ನು ರೂಪಿಸುವ ಯೋಚನೆ ನಮ್ಮದಾಗಿತ್ತು. ಆ ಕ್ಷಣಕ್ಕೆ ತಕ್ಷಣ ಹೊಳೆದ ಏಕೈಕ ಹೆಸರು, ದೇವನೂರ ಮಹಾದೇವ ಅವರದು.<br /> <br /> ಎಂದಿನಂತೆ ದೇವನೂರರು ಆರಂಭದಲ್ಲಿ ಆತಂಕ ವ್ಯಕ್ತಪಡಿಸಿದರೂ ಪತ್ರಿಕೆಯ ಉದ್ದೇಶವನ್ನು ಮನಗಂಡು ಅತಿಥಿ ಸಂಪಾದಕರಾಗಲು ಮುಜುಗರದಿಂದಲೇ ಒಪ್ಪಿಕೊಂಡರು. ಕಡಿಮೆ ಕಾಲಾವಕಾಶದಲ್ಲೇ, ಜ್ವರವೇರಿಸಿಕೊಂಡ ಉತ್ಸಾಹದಲ್ಲಿ ಅವರು ಕಾರ್ಯ ತತ್ಪರವಾದುದರ ಫಲ, ಈಗ ನಿಮ್ಮ ಕೈಯಲ್ಲಿರುವ ಈ ಸಂಚಿಕೆ.<br /> <br /> ದಲಿತರ ಬದುಕಿಗೆ ಸಂಬಂಧಿಸಿದ ಅನೇಕ ಮುಖಗಳನ್ನು ಒಳಗೊಳ್ಳುವಂತೆ ಈ ಸಂಚಿಕೆಯನ್ನು ರೂಪಿಸಲು ಪ್ರಯತ್ನಿಸಿದ್ದೇವೆ. ಈ ನಿಟ್ಟಿನಲ್ಲಿ ನಾಡಿನ ಪ್ರಮುಖ ದಲಿತ ಚಿಂತಕರು, ಬರಹಗಾರರು, ಕಲಾವಿದರು ನಮ್ಮ ಪ್ರಯತ್ನದಲ್ಲಿ ಜೊತೆಯಾಗಿದ್ದಾರೆ. ಇದು ದಲಿತ ದನಿಯ ವಿಶೇಷ ಸಂಚಿಕೆಯಾದರೂ, ಆಂತರ್ಯದಲ್ಲಿ ಇದು ಸೂಸುವುದು ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಪಾದಿಸಿದ ಸಮಾನತೆ, ಸ್ವಾತಂತ್ರ್ಯ ಮತ್ತು ಸೋದರತೆ~ಯ ದನಿಯನ್ನೇ ಎನ್ನುವುದು ನಮ್ಮ ಗಮನದಲ್ಲಿದೆ.<br /> <br /> ಈ ವಿಶೇಷ ಸಂಚಿಕೆಯ ಸಂದರ್ಭದಲ್ಲಿ `ಪ್ರಜಾವಾಣಿ’ ನಡೆದುಬಂದ ಹಾದಿಯ ನೆನಪು ಅನಪೇಕ್ಷಣೀಯವೇನೂ ಅಲ್ಲ. ಭಾರತ ಪಡೆದುಕೊಂಡ ಸ್ವಾತಂತ್ರ್ಯದ ಅರ್ಥ ಮತ್ತು ವ್ಯಾಪ್ತಿಯನ್ನು ನಿರ್ವಚಿಸಿದ ಸಂವಿಧಾನವನ್ನು ನಾವು ಒಪ್ಪಿಕೊಳ್ಳುವುದಕ್ಕೆ ಎರಡು ವರ್ಷಗಳ ಹಿಂದೆ `ಪ್ರಜಾವಾಣಿ’ ತನ್ನ ಪ್ರಕಟಣೆಯನ್ನು ಆರಂಭಿಸಿತು.<br /> <br /> ಅಲ್ಲಿಂದ ಈ ತನಕ ಸಂಭವಿಸಿರುವ ಬದಲಾವಣೆಗಳು ಮತ್ತು ಪಲ್ಲಟಗಳು ಅನೇಕ. ಅವುಗಳನ್ನು ಕೇವಲ ಕಾಲದ ಕನ್ನಡಿಯಲ್ಲಿ ಕಂಡು ಪತ್ರಿಕೆಯಲ್ಲಿ ಪ್ರತಿಬಿಂಬಿಸುವಷ್ಟಕ್ಕೆ ಮಾತ್ರ `ಪ್ರಜಾವಾಣಿ’ ಸೀಮಿತಗೊಂಡಿಲ್ಲ.<br /> <br /> ಹೊರಗಿನ ಬದಲಾವಣೆಗಳನ್ನು ನಿರ್ವಚಿಸುವ, ವಿಶ್ಲೇಷಿಸುವ ಮತ್ತು ಪ್ರಭಾವಿಸುವ ಕ್ರಿಯೆಯನ್ನು ಪ್ರಜಾವಾಣಿ ನಿರಂತರವಾಗಿ ನಡೆಸುತ್ತಿದೆ. ಈ ಕ್ರಿಯೆಯಲ್ಲಿ ಅದು ತನ್ನನ್ನೂ ಬದಲಾವಣೆಗೆ ಒಡ್ಡಿಕೊಂಡಿದೆ. ಅಂತೆಯೇ, ನಿರಂತರ ಬದಲಾವಣೆಯ ಈ ಹಾದಿಯಲ್ಲಿ ಪತ್ರಿಕೆಯ ಮೂಲ ಉದ್ದೇಶವಾದ ಜನಪರ ಕಾಳಜಿಗಳಿಗೆ ಧಕ್ಕೆ ಬಾರದಂತೆ ಎಚ್ಚರವಹಿಸಿದ್ದೇವೆ. ಆ ಕಾಳಜಿ ಮತ್ತು ವಿವೇಕದ ತಾಜಾ ಉದಾಹರಣೆ ಇಂದಿನ ವಿಶೇಷ ಸಂಚಿಕೆ.</p>.<p><strong>–ಕೆ.ಎನ್. ಶಾಂತಕುಮಾರ್, ಸಂಪಾದಕರು </strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>