<p>ಲಕ್ಕುಂಡಿ (ಗದಗ ತಾ.): ಇಲ್ಲಿನ ಐತಿಹಾಸಿಕ ಹಾಲಗೊಂಡ ಬಸವೇಶ್ವರ ರಥೋತ್ಸವ ಸೋಮವಾರ ಸಂಜೆ ಸಡಗರ-ಸಂಭ್ರಮದಿಂದ ನೆರವೇರಿತು.<br /> <br /> ಶ್ರಾವಣ ಕೊನೆಯ ಸೋಮವಾರ ಪ್ರತಿ ವರ್ಷ ಜರುಗುವ ರಥೋತ್ಸವವೂ ಈ ಬಾರಿಯೂ ಸುತ್ತಮುತ್ತಲ ಗ್ರಾಮಗಳಿಂದ ಅಪಾರ ಭಕ್ತರು ಆಗಮಿಸಿದ್ದರು. ಗ್ರಾಮದಲ್ಲಿನ 14 ಭಜನಾ ತಂಡಗಳು ಹಾಗೂ ವಿವಿಧ ಹೂವುಗಳಿಂದ ನಿರ್ಮಿಸಲಾದ ಶಿವ ಶರಣರ ಭಾವ ಚಿತ್ರಗಳ ಮೆರವಣಿಗೆ ನೆರೆದ ಜನರನ್ನು ಆಕರ್ಷಿಸಿತು. <br /> <br /> ಪ್ರತಿಯೊಂದು ತಂಡದ ಸದಸ್ಯರು ಒಂದೇ ಬಣ್ಣದ ಬಟ್ಟೆ ಧರಿಸಿ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು.<br /> ಭಾವಗೀತೆ, ತತ್ವಪದ, ಜಾನಪದ, ಹಾಗೂ ಭಕ್ತಿ ಪದಗಳನ್ನು ದಾರಿಯುದ್ದಕ್ಕೂ ತಂಡದವರು ಹಾಡುತ್ತಿದ್ದದ್ದು ನೆರೆದ ಜನರಲ್ಲಿ ಭಕ್ತಿ ಉಕ್ಕುವಂತೆ ಮಾಡಿತು. ಬೆಳಿಗ್ಗೆ 9 ಗಂಟೆಯಿಂದ ಸಂಜೆ 4 ಗಂಟೆಯವರೆಗೆ, ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಸಂಚರಿಸಿತು.<br /> <br /> ಇದಕ್ಕೂ ಮುನ್ನ ಬಸವೇಶ್ವರ ಮೂರ್ತಿಗೆ ವಿಶೆಷ ಪೂಜೆ ಸಲ್ಲಿಸಲಾಯಿತು. ಭಕ್ತರು ತಂಡಪೊತಂಡವಾಗಿ ಆಗಮಿಸಿ ಪೂಜೆ ಸಲ್ಲಿಸಿ ಕಾಣಿಕೆ ಹಾಗೂ ನೈವೇದ್ಯ ಸಲ್ಲಿಸಿದರು. ಅನ್ನ ಸಂತರ್ಪಣೆಯೂ ಜರುಗಿತು. <br /> <br /> ಸಂಜೆ 4 ಗಂಟೆಗೆ ಬಸವೇಶ್ವರ ರಥೋತ್ಸಕ್ಕೆ ಗ್ರಾಮದ ಅಲ್ಲಮಪ್ರಭು ಮಠದ ಸ್ವಾಮೀಜಿ ವೀರೇಶ್ವ ದೇವರು ಚಾಲನೆ ನೀಡಿದರು. ಡೊಳ್ಳು, ಜಾಂಜ ಮೇಳ, ನಂದಿಕೋಲ ಮೇಳ ಹಾಗೂ ಬಜಂತ್ರಿ ಮೇಳಗಳು ಪಾಲ್ಗೊಂಡು ರಥೋತ್ಸವಕ್ಕೆ ಕಳೆ ತಂದವು. <br /> <br /> ಗ್ರಾಮದ ಬಜಾರ ರಸ್ತೆಯಲ್ಲಿ ಜರುಗುವ ರಥೋತ್ಸವದ ತೇರಿಗೆ ಭಕ್ತಾದಿಗಳು ಉತ್ತತ್ತಿ, ಹಣ್ಣು, ಕಾಯಿ ಸಮರ್ಪಿಸಿ ಭಕ್ತಿಯನ್ನು ಮೆರೆದರು. <br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಲಕ್ಕುಂಡಿ (ಗದಗ ತಾ.): ಇಲ್ಲಿನ ಐತಿಹಾಸಿಕ ಹಾಲಗೊಂಡ ಬಸವೇಶ್ವರ ರಥೋತ್ಸವ ಸೋಮವಾರ ಸಂಜೆ ಸಡಗರ-ಸಂಭ್ರಮದಿಂದ ನೆರವೇರಿತು.<br /> <br /> ಶ್ರಾವಣ ಕೊನೆಯ ಸೋಮವಾರ ಪ್ರತಿ ವರ್ಷ ಜರುಗುವ ರಥೋತ್ಸವವೂ ಈ ಬಾರಿಯೂ ಸುತ್ತಮುತ್ತಲ ಗ್ರಾಮಗಳಿಂದ ಅಪಾರ ಭಕ್ತರು ಆಗಮಿಸಿದ್ದರು. ಗ್ರಾಮದಲ್ಲಿನ 14 ಭಜನಾ ತಂಡಗಳು ಹಾಗೂ ವಿವಿಧ ಹೂವುಗಳಿಂದ ನಿರ್ಮಿಸಲಾದ ಶಿವ ಶರಣರ ಭಾವ ಚಿತ್ರಗಳ ಮೆರವಣಿಗೆ ನೆರೆದ ಜನರನ್ನು ಆಕರ್ಷಿಸಿತು. <br /> <br /> ಪ್ರತಿಯೊಂದು ತಂಡದ ಸದಸ್ಯರು ಒಂದೇ ಬಣ್ಣದ ಬಟ್ಟೆ ಧರಿಸಿ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು.<br /> ಭಾವಗೀತೆ, ತತ್ವಪದ, ಜಾನಪದ, ಹಾಗೂ ಭಕ್ತಿ ಪದಗಳನ್ನು ದಾರಿಯುದ್ದಕ್ಕೂ ತಂಡದವರು ಹಾಡುತ್ತಿದ್ದದ್ದು ನೆರೆದ ಜನರಲ್ಲಿ ಭಕ್ತಿ ಉಕ್ಕುವಂತೆ ಮಾಡಿತು. ಬೆಳಿಗ್ಗೆ 9 ಗಂಟೆಯಿಂದ ಸಂಜೆ 4 ಗಂಟೆಯವರೆಗೆ, ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಸಂಚರಿಸಿತು.<br /> <br /> ಇದಕ್ಕೂ ಮುನ್ನ ಬಸವೇಶ್ವರ ಮೂರ್ತಿಗೆ ವಿಶೆಷ ಪೂಜೆ ಸಲ್ಲಿಸಲಾಯಿತು. ಭಕ್ತರು ತಂಡಪೊತಂಡವಾಗಿ ಆಗಮಿಸಿ ಪೂಜೆ ಸಲ್ಲಿಸಿ ಕಾಣಿಕೆ ಹಾಗೂ ನೈವೇದ್ಯ ಸಲ್ಲಿಸಿದರು. ಅನ್ನ ಸಂತರ್ಪಣೆಯೂ ಜರುಗಿತು. <br /> <br /> ಸಂಜೆ 4 ಗಂಟೆಗೆ ಬಸವೇಶ್ವರ ರಥೋತ್ಸಕ್ಕೆ ಗ್ರಾಮದ ಅಲ್ಲಮಪ್ರಭು ಮಠದ ಸ್ವಾಮೀಜಿ ವೀರೇಶ್ವ ದೇವರು ಚಾಲನೆ ನೀಡಿದರು. ಡೊಳ್ಳು, ಜಾಂಜ ಮೇಳ, ನಂದಿಕೋಲ ಮೇಳ ಹಾಗೂ ಬಜಂತ್ರಿ ಮೇಳಗಳು ಪಾಲ್ಗೊಂಡು ರಥೋತ್ಸವಕ್ಕೆ ಕಳೆ ತಂದವು. <br /> <br /> ಗ್ರಾಮದ ಬಜಾರ ರಸ್ತೆಯಲ್ಲಿ ಜರುಗುವ ರಥೋತ್ಸವದ ತೇರಿಗೆ ಭಕ್ತಾದಿಗಳು ಉತ್ತತ್ತಿ, ಹಣ್ಣು, ಕಾಯಿ ಸಮರ್ಪಿಸಿ ಭಕ್ತಿಯನ್ನು ಮೆರೆದರು. <br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>