<p><strong>ಬುದ್ಧಿಜೀವಿಗಳು ಭ್ರಮಾಲೋಕದಲ್ಲಿ- ಶಿಕ್ಷಣ ಸಚಿವ ಕಾಗೇರಿ ಟೀಕೆ</strong></p>.<p><strong>ಬೆಂಗಳೂರು: `</strong>ನಮ್ಮ ಸನಾತನ ಸಂಸ್ಕೃತಿಯನ್ನು ಮಕ್ಕಳಿಗೆ ತಿಳಿಸುವುದನ್ನೇ ಬುದ್ಧಿಜೀವಿಗಳು ಕೇಸರೀಕರಣ ಎಂದು ಟೀಕಿಸುವುದಾದರೆ ಟೀಕಿಸಲಿ. ಅದರ ಬಗ್ಗೆ ಸರ್ಕಾರ ತಲೆಕೆಡಿಸಿಕೊಳ್ಳುವುದಿಲ್ಲ. ಬುದ್ಧಿಜೀವಿಗಳು ಭ್ರಮಾಲೋಕದಲ್ಲಿದ್ದಾರೆ. ತಮ್ಮದೇ ಆದ ಭ್ರಮಾಲೋಕವನ್ನು ಸೃಷ್ಟಿಸಲು ಪ್ರಯತ್ನಿಸುವ ಬುದ್ಧಿಜೀವಿಗಳು ಅದರಿಂದ ಹೊರಬರಬೇಕು~ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ ಇತ್ತೀಚೆಗೆ ಇಲ್ಲಿ ಹೇಳಿದರು.<br /> <br /> ಸಂಸ್ಕೃತ ಭಾರತೀ ಪ್ರಕಾಶನ ಹೊರ ತಂದಿರುವ `ಹೆಮ್ಮೆಯ ಭಾರತ~ ಗ್ರಂಥ ಲೋಕಾರ್ಪಣಾ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, `ಈ ಹಿಂದೆ ಹೊಸ ಪಠ್ಯಕ್ರಮ ರಚನೆಯಾದಾಗಲೂ ಬುದ್ಧಿಜೀವಿಗಳು ಕೇಸರೀಕರಣದ ವಿವಾದವೆನ್ನಿಬ್ಬಿಸಿದರು. <br /> <br /> ಅದಕ್ಕೆಲ್ಲಾ ಸರ್ಕಾರ ಕಿವಿಗೊಡುವುದಿಲ್ಲ. ನಾವು ಸನಾತನ ಸಂಸ್ಕೃತಿಯ ವಾರಸುದಾರರು ಎಂಬುದಕ್ಕೆ ಅಭಿಮಾನ ಪಡಬೇಕು. ನಮ್ಮ ಸಂಸ್ಕೃತಿ, ಪರಂಪರೆಯ ವಿಷಯವನ್ನು ಮಕ್ಕಳಿಗೆ ಹೇಳಿಕೊಡುವುದು ಹೆಮ್ಮೆಯ ವಿಷಯ. ಅದನ್ನೂ ಬುದ್ದಿಜೀವಿಗಳು ಕೇಸರೀಕರಣ ಎಂದು ಕರೆದುಕೊಂಡರೆ ಕರೆದುಕೊಳ್ಳಲಿ~ ಎಂದು ಸವಾಲೆಸೆದರು.<br /> <br /> `ಕೇವಲ ಮೂಲಭೂತ ಸೌಲಭ್ಯಗಳನ್ನು ಒದಗಿಸುವುದಷ್ಟೇ ಸರ್ಕಾರದ ಕೆಲಸವಲ್ಲ. ನಮ್ಮ ನಾಡಿನ ಸಂಸ್ಕೃತಿ ಬಗ್ಗೆ ಹೆಮ್ಮೆ ಮೂಡಿಸುವಂಥದ್ದು ಕೂಡ ಸರ್ಕಾರದ ಕರ್ತವ್ಯ. ಸರ್ಕಾರ ಎಲ್ಲ ವಿಷಯಗಳ ಬಗ್ಗೆಯೂ ಚರ್ಚೆಗೆ ಬದ್ಧವಾಗಿದೆ. ಗುಲಾಮತನದಿಂದ ಹೊರಬಂದು ರಾಷ್ಟ್ರದ ಬಗ್ಗೆ ಅಭಿಮಾನಪಡುವಂಥ ಮಾನಸಿಕತನ ಜನರಲ್ಲಿ ಬಲವಾಗಿ ಬೇರೂರಬೇಕು~ ಎಂದು ಪ್ರತಿಪಾದಿಸಿದರು.<br /> <br /> ಶಾಲಾ- ಕಾಲೇಜುಗಳಿಗೆ ಒದಗಿಸುವ ಭರವಸೆ: `ಹೆಮ್ಮೆಯ ಭಾರತ~ ಗ್ರಂಥವನ್ನು ಬಿಡುಗಡೆ ಮಾಡಿದ ಮುಖ್ಯಮಂತ್ರಿ ಜಗದೀಶ ಶೆಟ್ಟರ್, `ಶಾಲಾ- ಕಾಲೇಜು ಹಾಗೂ ಗ್ರಂಥಾಲಯಗಳಿಗೆ ಗ್ರಂಥವನ್ನು ತಲುಪಿಸಲು ಎಲ್ಲ ರೀತಿಯ ಕ್ರಮ ಕೈಗೊಳ್ಳಲಾಗುವುದು~ ಎಂದು ಭರವಸೆ ನೀಡಿದರು.<br /> <br /> `ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರ ಜತೆ ಚರ್ಚಿಸಿ ಸಂಸ್ಕೃತ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲು ಕೂಡ ಪ್ರಯತ್ನಿಸಲಾಗುವುದು~ ಎಂದು ಅವರು ಆಶ್ವಾಸನೆ ನೀಡಿದರು.<br /> <br /> `ನಮ್ಮ ಭವ್ಯ ಪರಂಪರೆ ಹಾಗೂ ಸಂಸ್ಕೃತಿಯ ಒಳನೋಟವನ್ನು ಪರಿಚಯಿಸುವ ಇಂತಹ ಗ್ರಂಥಗಳು ಯುವ ಜನರನ್ನು ತಲುಪುವುದು ಅನಿವಾರ್ಯವಾಗಿದೆ. ಸಂಸ್ಕೃತ ಪ್ರಚಾರ, ಸಂರಕ್ಷಣೆ ಹಾಗೂ ವಿಕಾಸಕ್ಕೆ ಸರ್ಕಾರ ಬದ್ಧವಾಗಿದೆ~ ಎಂದರು.<br /> <br /> ವಿಧಾನ ಪರಿಷತ್ ಸಭಾಪತಿ ಡಿ.ಎಚ್. ಶಂಕರಮೂರ್ತಿ, ಸಂಸ್ಕೃತ ಭಾರತೀ ಪ್ರಕಾಶನದ ಪ್ರಮುಖ ಚ.ಮೂ. ಕೃಷ್ಣಶಾಸ್ತ್ರಿ ಮಾತನಾಡಿದರು. ಸ್ಪ್ಯಾನ್ ಪ್ರಿಂಟ್ನ ಮಾಲೀಕ ಕೆ. ನಾರಾಯಣ ಇದ್ದರು.</p>.<p><br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬುದ್ಧಿಜೀವಿಗಳು ಭ್ರಮಾಲೋಕದಲ್ಲಿ- ಶಿಕ್ಷಣ ಸಚಿವ ಕಾಗೇರಿ ಟೀಕೆ</strong></p>.<p><strong>ಬೆಂಗಳೂರು: `</strong>ನಮ್ಮ ಸನಾತನ ಸಂಸ್ಕೃತಿಯನ್ನು ಮಕ್ಕಳಿಗೆ ತಿಳಿಸುವುದನ್ನೇ ಬುದ್ಧಿಜೀವಿಗಳು ಕೇಸರೀಕರಣ ಎಂದು ಟೀಕಿಸುವುದಾದರೆ ಟೀಕಿಸಲಿ. ಅದರ ಬಗ್ಗೆ ಸರ್ಕಾರ ತಲೆಕೆಡಿಸಿಕೊಳ್ಳುವುದಿಲ್ಲ. ಬುದ್ಧಿಜೀವಿಗಳು ಭ್ರಮಾಲೋಕದಲ್ಲಿದ್ದಾರೆ. ತಮ್ಮದೇ ಆದ ಭ್ರಮಾಲೋಕವನ್ನು ಸೃಷ್ಟಿಸಲು ಪ್ರಯತ್ನಿಸುವ ಬುದ್ಧಿಜೀವಿಗಳು ಅದರಿಂದ ಹೊರಬರಬೇಕು~ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ ಇತ್ತೀಚೆಗೆ ಇಲ್ಲಿ ಹೇಳಿದರು.<br /> <br /> ಸಂಸ್ಕೃತ ಭಾರತೀ ಪ್ರಕಾಶನ ಹೊರ ತಂದಿರುವ `ಹೆಮ್ಮೆಯ ಭಾರತ~ ಗ್ರಂಥ ಲೋಕಾರ್ಪಣಾ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, `ಈ ಹಿಂದೆ ಹೊಸ ಪಠ್ಯಕ್ರಮ ರಚನೆಯಾದಾಗಲೂ ಬುದ್ಧಿಜೀವಿಗಳು ಕೇಸರೀಕರಣದ ವಿವಾದವೆನ್ನಿಬ್ಬಿಸಿದರು. <br /> <br /> ಅದಕ್ಕೆಲ್ಲಾ ಸರ್ಕಾರ ಕಿವಿಗೊಡುವುದಿಲ್ಲ. ನಾವು ಸನಾತನ ಸಂಸ್ಕೃತಿಯ ವಾರಸುದಾರರು ಎಂಬುದಕ್ಕೆ ಅಭಿಮಾನ ಪಡಬೇಕು. ನಮ್ಮ ಸಂಸ್ಕೃತಿ, ಪರಂಪರೆಯ ವಿಷಯವನ್ನು ಮಕ್ಕಳಿಗೆ ಹೇಳಿಕೊಡುವುದು ಹೆಮ್ಮೆಯ ವಿಷಯ. ಅದನ್ನೂ ಬುದ್ದಿಜೀವಿಗಳು ಕೇಸರೀಕರಣ ಎಂದು ಕರೆದುಕೊಂಡರೆ ಕರೆದುಕೊಳ್ಳಲಿ~ ಎಂದು ಸವಾಲೆಸೆದರು.<br /> <br /> `ಕೇವಲ ಮೂಲಭೂತ ಸೌಲಭ್ಯಗಳನ್ನು ಒದಗಿಸುವುದಷ್ಟೇ ಸರ್ಕಾರದ ಕೆಲಸವಲ್ಲ. ನಮ್ಮ ನಾಡಿನ ಸಂಸ್ಕೃತಿ ಬಗ್ಗೆ ಹೆಮ್ಮೆ ಮೂಡಿಸುವಂಥದ್ದು ಕೂಡ ಸರ್ಕಾರದ ಕರ್ತವ್ಯ. ಸರ್ಕಾರ ಎಲ್ಲ ವಿಷಯಗಳ ಬಗ್ಗೆಯೂ ಚರ್ಚೆಗೆ ಬದ್ಧವಾಗಿದೆ. ಗುಲಾಮತನದಿಂದ ಹೊರಬಂದು ರಾಷ್ಟ್ರದ ಬಗ್ಗೆ ಅಭಿಮಾನಪಡುವಂಥ ಮಾನಸಿಕತನ ಜನರಲ್ಲಿ ಬಲವಾಗಿ ಬೇರೂರಬೇಕು~ ಎಂದು ಪ್ರತಿಪಾದಿಸಿದರು.<br /> <br /> ಶಾಲಾ- ಕಾಲೇಜುಗಳಿಗೆ ಒದಗಿಸುವ ಭರವಸೆ: `ಹೆಮ್ಮೆಯ ಭಾರತ~ ಗ್ರಂಥವನ್ನು ಬಿಡುಗಡೆ ಮಾಡಿದ ಮುಖ್ಯಮಂತ್ರಿ ಜಗದೀಶ ಶೆಟ್ಟರ್, `ಶಾಲಾ- ಕಾಲೇಜು ಹಾಗೂ ಗ್ರಂಥಾಲಯಗಳಿಗೆ ಗ್ರಂಥವನ್ನು ತಲುಪಿಸಲು ಎಲ್ಲ ರೀತಿಯ ಕ್ರಮ ಕೈಗೊಳ್ಳಲಾಗುವುದು~ ಎಂದು ಭರವಸೆ ನೀಡಿದರು.<br /> <br /> `ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರ ಜತೆ ಚರ್ಚಿಸಿ ಸಂಸ್ಕೃತ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲು ಕೂಡ ಪ್ರಯತ್ನಿಸಲಾಗುವುದು~ ಎಂದು ಅವರು ಆಶ್ವಾಸನೆ ನೀಡಿದರು.<br /> <br /> `ನಮ್ಮ ಭವ್ಯ ಪರಂಪರೆ ಹಾಗೂ ಸಂಸ್ಕೃತಿಯ ಒಳನೋಟವನ್ನು ಪರಿಚಯಿಸುವ ಇಂತಹ ಗ್ರಂಥಗಳು ಯುವ ಜನರನ್ನು ತಲುಪುವುದು ಅನಿವಾರ್ಯವಾಗಿದೆ. ಸಂಸ್ಕೃತ ಪ್ರಚಾರ, ಸಂರಕ್ಷಣೆ ಹಾಗೂ ವಿಕಾಸಕ್ಕೆ ಸರ್ಕಾರ ಬದ್ಧವಾಗಿದೆ~ ಎಂದರು.<br /> <br /> ವಿಧಾನ ಪರಿಷತ್ ಸಭಾಪತಿ ಡಿ.ಎಚ್. ಶಂಕರಮೂರ್ತಿ, ಸಂಸ್ಕೃತ ಭಾರತೀ ಪ್ರಕಾಶನದ ಪ್ರಮುಖ ಚ.ಮೂ. ಕೃಷ್ಣಶಾಸ್ತ್ರಿ ಮಾತನಾಡಿದರು. ಸ್ಪ್ಯಾನ್ ಪ್ರಿಂಟ್ನ ಮಾಲೀಕ ಕೆ. ನಾರಾಯಣ ಇದ್ದರು.</p>.<p><br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>