<p>ವಿಜಯಪುರ: `ಮನೆ, ಮಂದಿ, ಮಕ್ಕಳು ಎಂಬ ಮನೋಭಾವನೆ ರೂಢಿಸಿಕೊಂಡು ಯಾಂತ್ರಿಕ ಜೀವನದಲ್ಲಿಯೇ ಮಹಿಳೆಯು ತನ್ನ ಜೀವನವನ್ನು ದೂಡುವ ಬದಲಿಗೆ, ಬಿಡುವಿನ ವೇಳೆಯನ್ನು ಸಮಾಜ ಸೇವೆಯಲ್ಲಿ ತೊಡಗಬೇಕು~ ಎಂದು ಬೆಂಗಳೂರಿನ ಕೇಂದ್ರ ನಗರ್ತ ಮಹಿಳಾ ಸಂಘದ ಅಧ್ಯಕ್ಷೆ ಸುನಂದಬಸಪ್ಪ ಕರೆ ನೀಡಿದರು.<br /> <br /> ಅವರು ಇಲ್ಲಿನ ನಗರೇಶ್ವರಸ್ವಾಮಿ ದೇವಾಲಯದ ಪ್ರಾರ್ಥನಾಮಂದಿರದಲ್ಲಿ ಹಮ್ಮಿಕೊಂಡಿದ್ದ ಅಯೋಧ್ಯಾನಗರ ಶಿವಾಚಾರ ವೈಶ್ಯ ನಗರ್ತ ಮಹಿಳಾ ಸಂಘ, ವಿಜಯಪುರ ಘಟಕದ ಸರ್ವಸದಸ್ಯರ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು.<br /> <br /> `ಮಹಿಳೆಯರಲ್ಲಿ ಮಾನವೀಯ ಸಂಬಂಧಗಳ ಉಳಿಸಿಕೊಳ್ಳಬೇಕೆನ್ನುವ ಒತ್ತಡವಿದ್ದರೂ ಸಮಾಜದ ಏಳಿಗೆಗೆ ದುಡಿಯಬಲ್ಲ ಸ್ಫೂರ್ತಿ ಇರಬೇಕು. ಯುವಪೀಳಿಗೆಯಲ್ಲಿ ಸೇವಾ ಮನೋಭಾವನೆಯನ್ನು ವೃದ್ಧಿಸಬೇಕಾದ ಅನಿವಾರ್ಯತೆ ಮಹಿಳೆಯ ಮೇಲಿದೆ~ ಎಂದು ಅವರು ತಿಳಿಸಿದರು.<br /> <br /> `ನಾನು, ನನ್ನದೆಂಬ ಭಾವನೆಗಿಂತಲೂ ನಮ್ಮದೆಂಬ ಭಾವನೆಯು ವಿಶಾಲವಾದುದು. ಅದರಿಂದಲೇ ಆತ್ಮಸಂತೃಪ್ತಿ ದೊರೆಯುವುದು. ಮಹಿಳಾ ಸಂಘಟನೆಯು ಮಾದರಿಯಾಗಬೇಕು~ ಎಂದರು.<br /> <br /> ನಿರ್ಗಮಿತ ಅಧ್ಯಕ್ಷೆ ರೂಪಾಭಾಸ್ಕರ್ ಮಾತನಾಡಿ, `ಕಳೆದ ಮೂರು ವರ್ಷಗಳ ಅವಧಿಯಲ್ಲಿ ಸಂಘದ ಚಟುವಟಿಕೆಗಳಲ್ಲಿ ಸಹಕರಿಸಿದ ಎಲ್ಲರನ್ನೂ ಅಭಿನಂದಿಸಿದರು.<br /> <br /> ಬೆಂಗಳೂರಿನ ಕೇಂದ್ರ ನಗರ್ತ ಮಹಿಳಾ ಸಂಘದ ಕಾರ್ಯದರ್ಶಿ ಶೈಲಜಾ ಉದಯಶಂಕರ್, ಮಾರ್ಗದರ್ಶಕ ಸಿ.ಬಸಪ್ಪ, ಪಿ.ಚಂದ್ರಪ್ಪ ಮಾತನಾಡಿದರು, ಖಜಾಂಚಿ ಸುಧಾಹರ್ಷ ಅವರು ಜಮಾ-ಖರ್ಚು ವಿವರಗಳನ್ನು ಮಂಡಿಸಿ ಅನುಮೋದನೆ ಪಡೆದರು. ಸಂಘದ ಕಾರ್ಯದರ್ಶಿ ಸವಿತಾಮುರಳೀಧರ್ ನಿರೂಪಿಸಿ, ವರದಿ ಮಂಡಿಸಿದರು.<br /> <br /> ಸಂಘದ ಉಪಾಧ್ಯಕ್ಷೆ ಶೀಲಾಸುರೇಶ್, ನಗರ್ತ ಯುವಕಸಂಘದ ಮಾಜಿ ಅಧ್ಯಕ್ಷ ಸಿ.ಭಾಸ್ಕರ್, ಎಂ.ಶಿವಪ್ರಸಾದ್, ಸುರೇಶ್, ವಿನಯ್, ಇನ್ನರ್ವೀಲ್ ಸಂಘದ ಪದಾಧಿಕಾರಿಗಳು ಇದ್ದರು. ಭಾರತಿ ಪ್ರಭುದೇವ್ ಸ್ವಾಗತಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ವಿಜಯಪುರ: `ಮನೆ, ಮಂದಿ, ಮಕ್ಕಳು ಎಂಬ ಮನೋಭಾವನೆ ರೂಢಿಸಿಕೊಂಡು ಯಾಂತ್ರಿಕ ಜೀವನದಲ್ಲಿಯೇ ಮಹಿಳೆಯು ತನ್ನ ಜೀವನವನ್ನು ದೂಡುವ ಬದಲಿಗೆ, ಬಿಡುವಿನ ವೇಳೆಯನ್ನು ಸಮಾಜ ಸೇವೆಯಲ್ಲಿ ತೊಡಗಬೇಕು~ ಎಂದು ಬೆಂಗಳೂರಿನ ಕೇಂದ್ರ ನಗರ್ತ ಮಹಿಳಾ ಸಂಘದ ಅಧ್ಯಕ್ಷೆ ಸುನಂದಬಸಪ್ಪ ಕರೆ ನೀಡಿದರು.<br /> <br /> ಅವರು ಇಲ್ಲಿನ ನಗರೇಶ್ವರಸ್ವಾಮಿ ದೇವಾಲಯದ ಪ್ರಾರ್ಥನಾಮಂದಿರದಲ್ಲಿ ಹಮ್ಮಿಕೊಂಡಿದ್ದ ಅಯೋಧ್ಯಾನಗರ ಶಿವಾಚಾರ ವೈಶ್ಯ ನಗರ್ತ ಮಹಿಳಾ ಸಂಘ, ವಿಜಯಪುರ ಘಟಕದ ಸರ್ವಸದಸ್ಯರ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು.<br /> <br /> `ಮಹಿಳೆಯರಲ್ಲಿ ಮಾನವೀಯ ಸಂಬಂಧಗಳ ಉಳಿಸಿಕೊಳ್ಳಬೇಕೆನ್ನುವ ಒತ್ತಡವಿದ್ದರೂ ಸಮಾಜದ ಏಳಿಗೆಗೆ ದುಡಿಯಬಲ್ಲ ಸ್ಫೂರ್ತಿ ಇರಬೇಕು. ಯುವಪೀಳಿಗೆಯಲ್ಲಿ ಸೇವಾ ಮನೋಭಾವನೆಯನ್ನು ವೃದ್ಧಿಸಬೇಕಾದ ಅನಿವಾರ್ಯತೆ ಮಹಿಳೆಯ ಮೇಲಿದೆ~ ಎಂದು ಅವರು ತಿಳಿಸಿದರು.<br /> <br /> `ನಾನು, ನನ್ನದೆಂಬ ಭಾವನೆಗಿಂತಲೂ ನಮ್ಮದೆಂಬ ಭಾವನೆಯು ವಿಶಾಲವಾದುದು. ಅದರಿಂದಲೇ ಆತ್ಮಸಂತೃಪ್ತಿ ದೊರೆಯುವುದು. ಮಹಿಳಾ ಸಂಘಟನೆಯು ಮಾದರಿಯಾಗಬೇಕು~ ಎಂದರು.<br /> <br /> ನಿರ್ಗಮಿತ ಅಧ್ಯಕ್ಷೆ ರೂಪಾಭಾಸ್ಕರ್ ಮಾತನಾಡಿ, `ಕಳೆದ ಮೂರು ವರ್ಷಗಳ ಅವಧಿಯಲ್ಲಿ ಸಂಘದ ಚಟುವಟಿಕೆಗಳಲ್ಲಿ ಸಹಕರಿಸಿದ ಎಲ್ಲರನ್ನೂ ಅಭಿನಂದಿಸಿದರು.<br /> <br /> ಬೆಂಗಳೂರಿನ ಕೇಂದ್ರ ನಗರ್ತ ಮಹಿಳಾ ಸಂಘದ ಕಾರ್ಯದರ್ಶಿ ಶೈಲಜಾ ಉದಯಶಂಕರ್, ಮಾರ್ಗದರ್ಶಕ ಸಿ.ಬಸಪ್ಪ, ಪಿ.ಚಂದ್ರಪ್ಪ ಮಾತನಾಡಿದರು, ಖಜಾಂಚಿ ಸುಧಾಹರ್ಷ ಅವರು ಜಮಾ-ಖರ್ಚು ವಿವರಗಳನ್ನು ಮಂಡಿಸಿ ಅನುಮೋದನೆ ಪಡೆದರು. ಸಂಘದ ಕಾರ್ಯದರ್ಶಿ ಸವಿತಾಮುರಳೀಧರ್ ನಿರೂಪಿಸಿ, ವರದಿ ಮಂಡಿಸಿದರು.<br /> <br /> ಸಂಘದ ಉಪಾಧ್ಯಕ್ಷೆ ಶೀಲಾಸುರೇಶ್, ನಗರ್ತ ಯುವಕಸಂಘದ ಮಾಜಿ ಅಧ್ಯಕ್ಷ ಸಿ.ಭಾಸ್ಕರ್, ಎಂ.ಶಿವಪ್ರಸಾದ್, ಸುರೇಶ್, ವಿನಯ್, ಇನ್ನರ್ವೀಲ್ ಸಂಘದ ಪದಾಧಿಕಾರಿಗಳು ಇದ್ದರು. ಭಾರತಿ ಪ್ರಭುದೇವ್ ಸ್ವಾಗತಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>