<p><strong>ನವದೆಹಲಿ (ಪಿಟಿಐ): </strong>ಸಲಿಂಗರತಿ ಅಪರಾಧ ಎಂಬ ಸುಪ್ರೀಂ ಕೋರ್ಟ್ ತೀರ್ಪಿನ ಬಗ್ಗೆ ದೇಶದಾದ್ಯಂತ ವ್ಯಾಪಕ ಅತೃಪ್ತಿ – ಅಸಮಾಧಾನ ಕಂಡು ಬಂದಿರುವ ಹಿನ್ನೆಲೆಯಲ್ಲಿ ಸಲಿಂಗಕಾಮವನ್ನು ಅಪರಾಧಮುಕ್ತಗೊಳಿಸುವ ಎಲ್ಲ ಆಯ್ಕೆಗಳನ್ನು ಗಂಭೀರವಾಗಿ ಪರಿಶೀಲಿಸಲಾಗುವುದು ಎಂದು ಕೇಂದ್ರ ಸರ್ಕಾರ ಹೇಳಿದೆ.<br /> <br /> ಸುಪ್ರೀಂ ಕೋರ್ಟ್ನಲ್ಲಿ, ತೀರ್ಪು ಸರಿಪಡಿಸುವ ಅರ್ಜಿ (ಕ್ಯೂರೆಟಿವ್ ಪಿಟಿಷನ್) ಸಲ್ಲಿಕೆಯೂ ಈ ಆಯ್ಕೆಗಳಲ್ಲಿ ಸೇರಿದೆ ಎಂದು ಸರ್ಕಾರ ತಿಳಿಸಿದೆ.<br /> ‘ಭಾರತೀಯ ದಂಡ ಸಂಹಿತೆಯ 377ನೇ ಸೆಕ್ಷನ್ ಬಗ್ಗೆ ದೆಹಲಿ ಹೈಕೋರ್ಟ್ ನೀಡಿರುವ ತೀರ್ಪನ್ನು ಪುನಃ ಸ್ಥಾಪಿಸಲು ಇರುವ ಎಲ್ಲ ಅವಕಾಶಗಳನ್ನು</p>.<table align="right" border="1" cellpadding="1" cellspacing="1" style="width: 500px;"> <tbody> <tr> <td> <strong>ಸೋನಿಯಾ, ರಾಹುಲ್ ಅತೃಪ್ತಿ<br /> ನವದೆಹಲಿ (ಪಿಟಿಐ):</strong> ಸಲಿಂಗರತಿ ಅಪರಾಧ ಎಂಬ ಸುಪ್ರೀಂ ಕೋರ್ಟ್ ತೀರ್ಪಿನ ಬಗ್ಗೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಉಪಾಧ್ಯಕ್ಷ ರಾಹುಲ್ ಗಾಂಧಿ ನಿರಾಶೆ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಸಂಸತ್ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಇಬ್ಬರೂ ಆಗ್ರಹಿಸಿದ್ದಾರೆ.<br /> ಸಲಿಂಗರತಿ ವೈಯಕ್ತಿಕ ಸ್ವಾತಂತ್ರ್ಯಕ್ಕೆ ಸಂಬಂಧಿಸಿದ ವಿಷಯ. ವೈಯಕ್ತಿಕ ಸ್ವಾತಂತ್ರ್ಯವನ್ನು ನಾವು ಎತ್ತಿ ಹಿಡಿಯಬೇಕಿದೆ ಎಂದು ರಾಹುಲ್ ಹೇಳಿದ್ದಾರೆ.<br /> <br /> <strong>ಕ್ಯುರೇಟಿವ್ ಪಿಟಿಷನ್ ಅಂದರೇನು?</strong><br /> ಕ್ಯುರೇಟಿವ್ ಪಿಟಿಷನ್ (ಪರಿಹಾರಕ ಅರ್ಜಿ) ಪರಿಕಲ್ಪನೆ ಬಂದಿದ್ದು 2002ರಲ್ಲಿ ಸುಪ್ರೀಂ ಕೋರ್ಟ್ನ ಐವರು ನ್ಯಾಯಮೂರ್ತಿಗಳು ನೀಡಿದ ತೀರ್ಪೊಂದರ ಮೂಲಕ. ರೂಪಾ ಅಶೋಕ್ ಹುರ್ರಾ ಮತ್ತು ಅಶೋಕ್ ಹುರ್ರಾ ನಡುವಣ ಪ್ರಕರಣದ ತೀರ್ಪಿನಲ್ಲಿ ಪರಿಹಾರಕ ಅರ್ಜಿಯ ಕುರಿತು ನ್ಯಾಯಪೀಠ ವಿಸ್ತೃತವಾಗಿ ಚರ್ಚೆ ನಡೆಸಿದೆ.<br /> ಸುಪ್ರೀಂ ಕೋರ್ಟ್ ನೀಡಿದ ಅಂತಿಮ ತೀರ್ಪು ಕೂಡ ಅರ್ಜಿದಾರ ಅಥವಾ ಪ್ರತಿವಾದಿಗೆ ಸಮಾಧಾನ ತಾರದಿದ್ದರೆ, ಪರಿಹಾರಕ ಅರ್ಜಿ ಸಲ್ಲಿಸಬಹುದು. ಆದರೆ, ಅತ್ಯಂತ ಅಪರೂಪದ ಸಂದರ್ಭಗಳಲ್ಲಿ ಮಾತ್ರ ಇಂಥ ಅರ್ಜಿ ಪರಿಗಣಿಸಲಾಗುವುದು ಎಂದು ಸುಪ್ರೀಂ ಪೀಠ ಹೇಳಿದೆ.<br /> <br /> <strong>ಸ್ಪಷ್ಟ ನಿಲುವಿಗೆ ಬಿಜೆಪಿ ನಕಾರ<br /> ನವದೆಹಲಿ:</strong> ಸಲಿಂಗರತಿ ಅಪರಾಧ ಎಂಬ ಸುಪ್ರೀಂ ಕೋರ್ಟ್ ತೀರ್ಪಿನ ಬಗ್ಗೆ ಕೇಂದ್ರ ಸರ್ಕಾರ ಸರ್ವ ಪಕ್ಷ ಸಭೆ ಕರೆಯಬೇಕು. ಸೆಕ್ಷನ್ 377 ತಿದ್ದುಪಡಿಗೆ ಪ್ರಸ್ತಾವನೆ ಮುಂದಿರಿಸಬೇಕು. ಆಗ ತನ್ನ ನಿಲುವು ಪ್ರಕಟಿಸುವುದಾಗಿ ಬಿಜೆಪಿ ಹೇಳಿದೆ.<br /> ವಿಷಯದ ಬಗ್ಗೆ ಯಾವುದೇ ಸ್ಪಷ್ಟ ನಿಲುವು ಕೈಗೊಳ್ಳಲು ಬಿಜೆಪಿ ನಿರಾಕರಿಸಿದೆ.</td> </tr> </tbody> </table>.<p>ಸರ್ಕಾರ ಗಣನೆಗೆ ತೆಗೆದುಕೊಳ್ಳಲಿದೆ. ವಯಸ್ಕರ ನಡುವಣ ಸಮ್ಮತಿಯ ಸಂಬಂಧವನ್ನು ನಾವು ಅಪರಾಧ ಮುಕ್ತಗೊಳಿಸಲೇಬೇಕಿದೆ’ ಎಂದು ಕಾನೂನು ಸಚಿವ ಕಪಿಲ್ ಸಿಬಲ್ ಹೇಳಿದ್ದಾರೆ.<br /> <br /> <strong>ಸಂವಿಧಾನ ಪೀಠ ನಿರ್ಧರಿಸಲಿ:</strong> ಸುಪ್ರೀಂ ಕೋರ್ಟ್ನ ತೀರ್ಪು ‘ತಪ್ಪು’ ಮತ್ತು ನಿರಾಶಾದಾಯಕ ಎಂದಿರುವ ಹಣಕಾಸು ಸಚಿವ ಪಿ.ಚಿದಂಬರಂ, ಸದ್ಯದ ಸಾಮಾಜಿಕ ಮತ್ತು ನೈತಿಕ ಮೌಲ್ಯಗಳನ್ನು ಸುಪ್ರೀಂ ಕೋರ್ಟ್ ಪರಿಗಣಿಸಬೇಕಿತ್ತು ಎಂದು ಅಭಿಪ್ರಾಯಪಟ್ಟಿದ್ದಾರೆ.<br /> <br /> ಸರ್ಕಾರ ಮರುಪರಿಶೀಲನೆ ಅಥವಾ ಪರಿಹಾರ ದೂರನ್ನು ಸಲ್ಲಿಸಬೇಕು ಮತ್ತು ವಿಷಯವನ್ನು ಐವರು ನ್ಯಾಯಾಧೀಶರಿರುವ ಸಂವಿಧಾನ ಪೀಠ ವಿಚಾರಣೆ ನಡೆಸಬೇಕು ಎಂದೂ ಅವರು ಹೇಳಿದ್ದಾರೆ.<br /> <br /> ಅತ್ಯುತ್ತಮ ಸಂಶೋಧನೆ ಹಿನ್ನೆಲೆಯಲ್ಲಿ ದೆಹಲಿ ಹೈಕೋರ್ಟ್ ತೀರ್ಪು ನೀಡಿತ್ತು. ಹೀಗಾಗಿಯೇ ಅದನ್ನು ಸ್ವೀಕರಿಸಿದ ಕೇಂದ್ರ ಸರ್ಕಾರ ಅದರ ಮೇಲೆ ಮೇಲ್ಮನವಿ ಸಲ್ಲಿಸಿರಲಿಲ್ಲ. ಹೈಕೋರ್ಟ್ ತೀರ್ಪನ್ನು ಸುಪ್ರೀಂ ಕೋರ್ಟ್ನಲ್ಲಿ ಪ್ರಶ್ನಿಸದಿರುವುದೇ ತಮ್ಮ ಪಕ್ಷದ ನಿಲುವೂ ಆಗಿದೆ ಎಂದು ಚಿದಂಬರಂ ವಿವರಿಸಿದ್ದಾರೆ.<br /> <br /> ಈ ಆದೇಶವನ್ನು ನೀಡಿದ ಸುಪ್ರೀಂ ಕೋರ್ಟ್ ಪೀಠ ವಿಷಯವನ್ನು ಐವರು ನ್ಯಾಯಾಧೀಶರ ಪೀಠಕ್ಕೆ ವರ್ಗಾಯಿಸಬೇಕಿತ್ತು ಎಂದಿರುವ ಚಿದಂಬರಂ, ಕಾನೂನು ಯಾವತ್ತೂ ಜಡವಾಗಬಾರದು ಎಂದು ಅಭಿಪ್ರಾಯಪಟ್ಟಿದ್ದಾರೆ.<br /> <br /> 377ನೇ ಸೆಕ್ಷನ್ 1860ರಲ್ಲಿ ರಚನೆಯಾಯಿತು. ಈ ತೀರ್ಪು ನಾವು ಆ ಕಾಲಕ್ಕೆ ಮರಳುವಂತೆ ಮಾಡಿದೆ. ಈ ಸೆಕ್ಷನ್ ಆ ಕಾಲದ ಸಾಮಾಜಿಕ ಮತ್ತು ನೈತಿಕ ಮೌಲ್ಯಗಳನ್ನು ಪ್ರತಿಬಿಂಬಿಸುತ್ತದೆ. ಆ ಕಾಲದಲ್ಲಿ ಮನುಷ್ಯನ ದೈಹಿಕ, ಮಾನಸಿಕ ಮತ್ತು ವಂಶವಾಹಿ ವಿಷಯಗಳ ಬಗ್ಗೆ ಇದ್ದ ಜ್ಞಾನ ಅತ್ಯಲ್ಪ. ಆದರೆ 2013ರಲ್ಲಿ ಹಾಗಲ್ಲ. ಸಮ್ಮತಿಯ ಸಲಿಂಗರತಿಯನ್ನು ಈಗ ನಿಸರ್ಗ ವಿರುದ್ಧ ಎಂದು ಹೇಳುವ ಹಾಗಿಲ್ಲ ಎಂದು ಚಿದಂಬರಂ ವಿವರಿಸಿದ್ದಾರೆ.<br /> <br /> ಒಂದು ಅಂದಾಜಿನ ಪ್ರಕಾರ, ದೇಶದಲ್ಲಿ ಸಲಿಂಗಿ, ಮತ್ತು ಲೈಂಗಿಕ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ಕನಿಷ್ಠ 10 ಕೋಟಿ ಜನರಿದ್ದಾರೆ. ಹೀಗಾಗಿ ನ್ಯಾಯಾಲಯ ಅಭಿಪ್ರಾಯಪಟ್ಟಂತೆ ಈ ಸಮುದಾಯವನ್ನು ಅತಿ ಅಲ್ಪಸಂಖ್ಯಾತರು ಎಂದು ಹೇಳುವುದರಲ್ಲಿ ಅರ್ಥ ಇಲ್ಲ. ಒಬ್ಬನೇ ಒಬ್ಬ ವ್ಯಕ್ತಿಯ ಹಕ್ಕನ್ನೂ ರಕ್ಷಿಸಬೇಕು ಎಂದು ಚಿದಂಬರಂ ತೀರ್ಪಿನ ಬಗ್ಗೆ ತಮ್ಮ ಅತೃಪ್ತಿ ಹೊರಹಾಕಿದ್ದಾರೆ.<br /> <br /> ಸರಿಯಾದ ತೀರ್ಪು–ಕಮಲ್ನಾಥ್: ಈ ವಿಷಯದ ಬಗ್ಗೆ ಸಂಸತ್ ಸೂಕ್ತ ನಿರ್ಧಾರ ಕೈಗೊಳ್ಳಲಿದೆ. ಬಹಳ ಮುಖ್ಯ ವಿಷಯವೆಂದರೆ, ಸಂಸತ್ ಈ ವಿಷಯದ ಬಗ್ಗೆ ಕಾನೂನು ರಚಿಸಬೇಕು ಎಂದು ದೀರ್ಘ ಸಮಯದ ನಂತರ ಸುಪ್ರೀಂ ಕೋರ್ಟ್ ಹೇಳಿದೆ ಎಂದು ಸಂಸದೀಯ ವ್ಯವಹಾರಗಳ ಸಚಿವ ಕಮಲ್ನಾಥ್ ಹೇಳಿದ್ದಾರೆ.<br /> <br /> ಸಂಸತ್ ಮತ್ತು ನ್ಯಾಯಾಂಗ ಅತ್ಯಂತ ಭಿನ್ನವಾದ ಪಾತ್ರಗಳನ್ನು ಹೊಂದಿವೆ. ಈ ವಿಷಯವನ್ನು ಸಂಸತ್ಗೆ ಬಿಟ್ಟುಕೊಡುವ ಮೂಲಕ ಸುಪ್ರೀಂ ಕೋರ್ಟ್ ಸರಿಯಾದ ನಿರ್ಧಾರ ಕೈಗೊಂಡಿದೆ ಎಂದು ಕಮಲ್ನಾಥ್ ಅಭಿಪ್ರಾಯ ಪಟ್ಟಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ (ಪಿಟಿಐ): </strong>ಸಲಿಂಗರತಿ ಅಪರಾಧ ಎಂಬ ಸುಪ್ರೀಂ ಕೋರ್ಟ್ ತೀರ್ಪಿನ ಬಗ್ಗೆ ದೇಶದಾದ್ಯಂತ ವ್ಯಾಪಕ ಅತೃಪ್ತಿ – ಅಸಮಾಧಾನ ಕಂಡು ಬಂದಿರುವ ಹಿನ್ನೆಲೆಯಲ್ಲಿ ಸಲಿಂಗಕಾಮವನ್ನು ಅಪರಾಧಮುಕ್ತಗೊಳಿಸುವ ಎಲ್ಲ ಆಯ್ಕೆಗಳನ್ನು ಗಂಭೀರವಾಗಿ ಪರಿಶೀಲಿಸಲಾಗುವುದು ಎಂದು ಕೇಂದ್ರ ಸರ್ಕಾರ ಹೇಳಿದೆ.<br /> <br /> ಸುಪ್ರೀಂ ಕೋರ್ಟ್ನಲ್ಲಿ, ತೀರ್ಪು ಸರಿಪಡಿಸುವ ಅರ್ಜಿ (ಕ್ಯೂರೆಟಿವ್ ಪಿಟಿಷನ್) ಸಲ್ಲಿಕೆಯೂ ಈ ಆಯ್ಕೆಗಳಲ್ಲಿ ಸೇರಿದೆ ಎಂದು ಸರ್ಕಾರ ತಿಳಿಸಿದೆ.<br /> ‘ಭಾರತೀಯ ದಂಡ ಸಂಹಿತೆಯ 377ನೇ ಸೆಕ್ಷನ್ ಬಗ್ಗೆ ದೆಹಲಿ ಹೈಕೋರ್ಟ್ ನೀಡಿರುವ ತೀರ್ಪನ್ನು ಪುನಃ ಸ್ಥಾಪಿಸಲು ಇರುವ ಎಲ್ಲ ಅವಕಾಶಗಳನ್ನು</p>.<table align="right" border="1" cellpadding="1" cellspacing="1" style="width: 500px;"> <tbody> <tr> <td> <strong>ಸೋನಿಯಾ, ರಾಹುಲ್ ಅತೃಪ್ತಿ<br /> ನವದೆಹಲಿ (ಪಿಟಿಐ):</strong> ಸಲಿಂಗರತಿ ಅಪರಾಧ ಎಂಬ ಸುಪ್ರೀಂ ಕೋರ್ಟ್ ತೀರ್ಪಿನ ಬಗ್ಗೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಉಪಾಧ್ಯಕ್ಷ ರಾಹುಲ್ ಗಾಂಧಿ ನಿರಾಶೆ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಸಂಸತ್ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಇಬ್ಬರೂ ಆಗ್ರಹಿಸಿದ್ದಾರೆ.<br /> ಸಲಿಂಗರತಿ ವೈಯಕ್ತಿಕ ಸ್ವಾತಂತ್ರ್ಯಕ್ಕೆ ಸಂಬಂಧಿಸಿದ ವಿಷಯ. ವೈಯಕ್ತಿಕ ಸ್ವಾತಂತ್ರ್ಯವನ್ನು ನಾವು ಎತ್ತಿ ಹಿಡಿಯಬೇಕಿದೆ ಎಂದು ರಾಹುಲ್ ಹೇಳಿದ್ದಾರೆ.<br /> <br /> <strong>ಕ್ಯುರೇಟಿವ್ ಪಿಟಿಷನ್ ಅಂದರೇನು?</strong><br /> ಕ್ಯುರೇಟಿವ್ ಪಿಟಿಷನ್ (ಪರಿಹಾರಕ ಅರ್ಜಿ) ಪರಿಕಲ್ಪನೆ ಬಂದಿದ್ದು 2002ರಲ್ಲಿ ಸುಪ್ರೀಂ ಕೋರ್ಟ್ನ ಐವರು ನ್ಯಾಯಮೂರ್ತಿಗಳು ನೀಡಿದ ತೀರ್ಪೊಂದರ ಮೂಲಕ. ರೂಪಾ ಅಶೋಕ್ ಹುರ್ರಾ ಮತ್ತು ಅಶೋಕ್ ಹುರ್ರಾ ನಡುವಣ ಪ್ರಕರಣದ ತೀರ್ಪಿನಲ್ಲಿ ಪರಿಹಾರಕ ಅರ್ಜಿಯ ಕುರಿತು ನ್ಯಾಯಪೀಠ ವಿಸ್ತೃತವಾಗಿ ಚರ್ಚೆ ನಡೆಸಿದೆ.<br /> ಸುಪ್ರೀಂ ಕೋರ್ಟ್ ನೀಡಿದ ಅಂತಿಮ ತೀರ್ಪು ಕೂಡ ಅರ್ಜಿದಾರ ಅಥವಾ ಪ್ರತಿವಾದಿಗೆ ಸಮಾಧಾನ ತಾರದಿದ್ದರೆ, ಪರಿಹಾರಕ ಅರ್ಜಿ ಸಲ್ಲಿಸಬಹುದು. ಆದರೆ, ಅತ್ಯಂತ ಅಪರೂಪದ ಸಂದರ್ಭಗಳಲ್ಲಿ ಮಾತ್ರ ಇಂಥ ಅರ್ಜಿ ಪರಿಗಣಿಸಲಾಗುವುದು ಎಂದು ಸುಪ್ರೀಂ ಪೀಠ ಹೇಳಿದೆ.<br /> <br /> <strong>ಸ್ಪಷ್ಟ ನಿಲುವಿಗೆ ಬಿಜೆಪಿ ನಕಾರ<br /> ನವದೆಹಲಿ:</strong> ಸಲಿಂಗರತಿ ಅಪರಾಧ ಎಂಬ ಸುಪ್ರೀಂ ಕೋರ್ಟ್ ತೀರ್ಪಿನ ಬಗ್ಗೆ ಕೇಂದ್ರ ಸರ್ಕಾರ ಸರ್ವ ಪಕ್ಷ ಸಭೆ ಕರೆಯಬೇಕು. ಸೆಕ್ಷನ್ 377 ತಿದ್ದುಪಡಿಗೆ ಪ್ರಸ್ತಾವನೆ ಮುಂದಿರಿಸಬೇಕು. ಆಗ ತನ್ನ ನಿಲುವು ಪ್ರಕಟಿಸುವುದಾಗಿ ಬಿಜೆಪಿ ಹೇಳಿದೆ.<br /> ವಿಷಯದ ಬಗ್ಗೆ ಯಾವುದೇ ಸ್ಪಷ್ಟ ನಿಲುವು ಕೈಗೊಳ್ಳಲು ಬಿಜೆಪಿ ನಿರಾಕರಿಸಿದೆ.</td> </tr> </tbody> </table>.<p>ಸರ್ಕಾರ ಗಣನೆಗೆ ತೆಗೆದುಕೊಳ್ಳಲಿದೆ. ವಯಸ್ಕರ ನಡುವಣ ಸಮ್ಮತಿಯ ಸಂಬಂಧವನ್ನು ನಾವು ಅಪರಾಧ ಮುಕ್ತಗೊಳಿಸಲೇಬೇಕಿದೆ’ ಎಂದು ಕಾನೂನು ಸಚಿವ ಕಪಿಲ್ ಸಿಬಲ್ ಹೇಳಿದ್ದಾರೆ.<br /> <br /> <strong>ಸಂವಿಧಾನ ಪೀಠ ನಿರ್ಧರಿಸಲಿ:</strong> ಸುಪ್ರೀಂ ಕೋರ್ಟ್ನ ತೀರ್ಪು ‘ತಪ್ಪು’ ಮತ್ತು ನಿರಾಶಾದಾಯಕ ಎಂದಿರುವ ಹಣಕಾಸು ಸಚಿವ ಪಿ.ಚಿದಂಬರಂ, ಸದ್ಯದ ಸಾಮಾಜಿಕ ಮತ್ತು ನೈತಿಕ ಮೌಲ್ಯಗಳನ್ನು ಸುಪ್ರೀಂ ಕೋರ್ಟ್ ಪರಿಗಣಿಸಬೇಕಿತ್ತು ಎಂದು ಅಭಿಪ್ರಾಯಪಟ್ಟಿದ್ದಾರೆ.<br /> <br /> ಸರ್ಕಾರ ಮರುಪರಿಶೀಲನೆ ಅಥವಾ ಪರಿಹಾರ ದೂರನ್ನು ಸಲ್ಲಿಸಬೇಕು ಮತ್ತು ವಿಷಯವನ್ನು ಐವರು ನ್ಯಾಯಾಧೀಶರಿರುವ ಸಂವಿಧಾನ ಪೀಠ ವಿಚಾರಣೆ ನಡೆಸಬೇಕು ಎಂದೂ ಅವರು ಹೇಳಿದ್ದಾರೆ.<br /> <br /> ಅತ್ಯುತ್ತಮ ಸಂಶೋಧನೆ ಹಿನ್ನೆಲೆಯಲ್ಲಿ ದೆಹಲಿ ಹೈಕೋರ್ಟ್ ತೀರ್ಪು ನೀಡಿತ್ತು. ಹೀಗಾಗಿಯೇ ಅದನ್ನು ಸ್ವೀಕರಿಸಿದ ಕೇಂದ್ರ ಸರ್ಕಾರ ಅದರ ಮೇಲೆ ಮೇಲ್ಮನವಿ ಸಲ್ಲಿಸಿರಲಿಲ್ಲ. ಹೈಕೋರ್ಟ್ ತೀರ್ಪನ್ನು ಸುಪ್ರೀಂ ಕೋರ್ಟ್ನಲ್ಲಿ ಪ್ರಶ್ನಿಸದಿರುವುದೇ ತಮ್ಮ ಪಕ್ಷದ ನಿಲುವೂ ಆಗಿದೆ ಎಂದು ಚಿದಂಬರಂ ವಿವರಿಸಿದ್ದಾರೆ.<br /> <br /> ಈ ಆದೇಶವನ್ನು ನೀಡಿದ ಸುಪ್ರೀಂ ಕೋರ್ಟ್ ಪೀಠ ವಿಷಯವನ್ನು ಐವರು ನ್ಯಾಯಾಧೀಶರ ಪೀಠಕ್ಕೆ ವರ್ಗಾಯಿಸಬೇಕಿತ್ತು ಎಂದಿರುವ ಚಿದಂಬರಂ, ಕಾನೂನು ಯಾವತ್ತೂ ಜಡವಾಗಬಾರದು ಎಂದು ಅಭಿಪ್ರಾಯಪಟ್ಟಿದ್ದಾರೆ.<br /> <br /> 377ನೇ ಸೆಕ್ಷನ್ 1860ರಲ್ಲಿ ರಚನೆಯಾಯಿತು. ಈ ತೀರ್ಪು ನಾವು ಆ ಕಾಲಕ್ಕೆ ಮರಳುವಂತೆ ಮಾಡಿದೆ. ಈ ಸೆಕ್ಷನ್ ಆ ಕಾಲದ ಸಾಮಾಜಿಕ ಮತ್ತು ನೈತಿಕ ಮೌಲ್ಯಗಳನ್ನು ಪ್ರತಿಬಿಂಬಿಸುತ್ತದೆ. ಆ ಕಾಲದಲ್ಲಿ ಮನುಷ್ಯನ ದೈಹಿಕ, ಮಾನಸಿಕ ಮತ್ತು ವಂಶವಾಹಿ ವಿಷಯಗಳ ಬಗ್ಗೆ ಇದ್ದ ಜ್ಞಾನ ಅತ್ಯಲ್ಪ. ಆದರೆ 2013ರಲ್ಲಿ ಹಾಗಲ್ಲ. ಸಮ್ಮತಿಯ ಸಲಿಂಗರತಿಯನ್ನು ಈಗ ನಿಸರ್ಗ ವಿರುದ್ಧ ಎಂದು ಹೇಳುವ ಹಾಗಿಲ್ಲ ಎಂದು ಚಿದಂಬರಂ ವಿವರಿಸಿದ್ದಾರೆ.<br /> <br /> ಒಂದು ಅಂದಾಜಿನ ಪ್ರಕಾರ, ದೇಶದಲ್ಲಿ ಸಲಿಂಗಿ, ಮತ್ತು ಲೈಂಗಿಕ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ಕನಿಷ್ಠ 10 ಕೋಟಿ ಜನರಿದ್ದಾರೆ. ಹೀಗಾಗಿ ನ್ಯಾಯಾಲಯ ಅಭಿಪ್ರಾಯಪಟ್ಟಂತೆ ಈ ಸಮುದಾಯವನ್ನು ಅತಿ ಅಲ್ಪಸಂಖ್ಯಾತರು ಎಂದು ಹೇಳುವುದರಲ್ಲಿ ಅರ್ಥ ಇಲ್ಲ. ಒಬ್ಬನೇ ಒಬ್ಬ ವ್ಯಕ್ತಿಯ ಹಕ್ಕನ್ನೂ ರಕ್ಷಿಸಬೇಕು ಎಂದು ಚಿದಂಬರಂ ತೀರ್ಪಿನ ಬಗ್ಗೆ ತಮ್ಮ ಅತೃಪ್ತಿ ಹೊರಹಾಕಿದ್ದಾರೆ.<br /> <br /> ಸರಿಯಾದ ತೀರ್ಪು–ಕಮಲ್ನಾಥ್: ಈ ವಿಷಯದ ಬಗ್ಗೆ ಸಂಸತ್ ಸೂಕ್ತ ನಿರ್ಧಾರ ಕೈಗೊಳ್ಳಲಿದೆ. ಬಹಳ ಮುಖ್ಯ ವಿಷಯವೆಂದರೆ, ಸಂಸತ್ ಈ ವಿಷಯದ ಬಗ್ಗೆ ಕಾನೂನು ರಚಿಸಬೇಕು ಎಂದು ದೀರ್ಘ ಸಮಯದ ನಂತರ ಸುಪ್ರೀಂ ಕೋರ್ಟ್ ಹೇಳಿದೆ ಎಂದು ಸಂಸದೀಯ ವ್ಯವಹಾರಗಳ ಸಚಿವ ಕಮಲ್ನಾಥ್ ಹೇಳಿದ್ದಾರೆ.<br /> <br /> ಸಂಸತ್ ಮತ್ತು ನ್ಯಾಯಾಂಗ ಅತ್ಯಂತ ಭಿನ್ನವಾದ ಪಾತ್ರಗಳನ್ನು ಹೊಂದಿವೆ. ಈ ವಿಷಯವನ್ನು ಸಂಸತ್ಗೆ ಬಿಟ್ಟುಕೊಡುವ ಮೂಲಕ ಸುಪ್ರೀಂ ಕೋರ್ಟ್ ಸರಿಯಾದ ನಿರ್ಧಾರ ಕೈಗೊಂಡಿದೆ ಎಂದು ಕಮಲ್ನಾಥ್ ಅಭಿಪ್ರಾಯ ಪಟ್ಟಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>