<p><strong>ಚಿತ್ರದುರ್ಗ(ಟಿ.ಎಸ್.ವೆಂಕಣ್ಣಯ್ಯ ವೇದಿಕೆ): </strong>ಪೂರ್ಣಗೊಳ್ಳದ ಭದ್ರಾ ಮೇಲ್ದಂಡೆ ಯೋಜನೆಗೆ ವಿಷಾದ, ಜಿಲ್ಲಾ ಉತ್ಸವ ನಡೆಸದ ಜಿಲ್ಲಾಡಳಿತ ಕ್ರಮಕ್ಕೆ ಆಕ್ಷೇಪ, ಅಭಿವೃದ್ಧಿಯಾಗದ ಪ್ರವಾಸೋದ್ಯಮದ ಬಗ್ಗೆ ಬೇಸರ, ಬರದಲ್ಲೂ ಸಾಂಸ್ಕೃತಿಕ ಶ್ರೀಮಂತಿಕೆ ಮೆರೆಯುತ್ತಿರುವ ಜಿಲ್ಲೆಯ ಬಗ್ಗೆ ಹೆಮ್ಮೆ, ಭಾಷೆ, ಪ್ರದೇಶಾಭಿವೃದ್ಧಿಯ ಪೂರಕ ಚಟುವಟಿಕೆಗಳಿಗೆ ಆದ್ಯತೆ ನೀಡಿ ಎಂಬ ಸಲಹೆ...<br /> <br /> ಇವು ಹನ್ನೊಂದನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಖ್ಯಾತ ಕಾದಂಬರಿಕಾರ ಬಿ.ಎಲ್.ವೇಣು ಅವರ ಭಾಷಣದ ಮುಖ್ಯಾಂಶಗಳು.<br /> <br /> ನಗರದ ಎಸ್ಜೆಎಂ ಸಭಾಂಗಣದಲ್ಲಿ ಸೋಮವಾರದಿಂದ ಆರಂಭವಾಗಿರುವ ಸಾಹಿತ್ಯ ಸಮ್ಮೇಳನದ ಅಧ್ಯಕ್ಷೀಯ ಭಾಷಣದಲ್ಲಿ, `ಚಿತ್ರದುರ್ಗ ಜಿಲ್ಲೆಯ ಸಾಂಸ್ಕೃತಿಕ ವೈಭವ ಕೊಂಡಾಡಿದ ವೇಣು, ಈ ನೆಲದಲ್ಲಿ ಹುಟ್ಟಿದವರು ರಾಜಕೀಯವಾಗಿ, ಧಾರ್ಮಿಕವಾಗಿ, ಸಾಹಿತ್ಯಿಕವಾಗಿ ಜನಪದ, ಸಂಶೋಧನೆ, ರಂಗಕಲೆ, ಚಿತ್ರಕಲೆ ಎಲ್ಲಾ ಕ್ಷೇತ್ರದಲ್ಲೂ ಪ್ರಸಿದ್ಧಿ ಪಡೆದಿದ್ದಾರೆ ಎಂದು ಹೆಮ್ಮೆಯಿಂದ ನುಡಿದರು.<br /> <br /> ಇಂಥ ಹೆಮ್ಮೆಯ ವಿಚಾರಗಳ ನಡುವೆಯೇ ಚಿತ್ರದುರ್ಗ ಜಿಲ್ಲೆಯನ್ನು ರಾಜಕೀಯವಾಗಿ ಕಡೆಗಣಿಸಲಾಗುತ್ತಿದೆ ಎಂದು ವಿಷಾದಿಸಿದರು. ಇಲ್ಲಿನ ಜನಪ್ರತಿನಿಧಿಗಳಿಗೆ ಓಟು ಬೇಕೇ ಹೊರತು, ಪುರೋಭಿವೃದ್ಧಿ, ಜಿಲ್ಲಾಭಿವೃದ್ಧಿಯ ಬಗ್ಗೆ ಕಿಂಚಿತ್ತೂ ಚಿಂತೆಯಿಲ್ಲ. ಕನಿಷ್ಠ ಮೂಲಸೌಕರ್ಯಗಳನ್ನು ಕಲ್ಪಿಸಬೇಕು ಎಂಬ ಮನಸ್ಸೂ ಇಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು.<br /> <br /> <strong>ಪೂರ್ಣಗೊಳ್ಳದ ಭದ್ರಾ: </strong>ನಾಲ್ಕು ಬಾರಿ ರಾಜ್ಯದ ಮುಖ್ಯಮಂತ್ರಿಯಾಗಿದ್ದ ರಾಷ್ಟ್ರನಾಯಕ ನಿಜಲಿಂಗಪ್ಪ ಅವರು, ಆ ಕಾಲದಲ್ಲಿ ಮನಸ್ಸು ಮಾಡಿದ್ದರೆ, ್ಙ 3 ಕೋಟಿಯಲ್ಲಿ ಭದ್ರಾ ಮೇಲ್ದಂಡೆ ಯೋಜನೆಯನ್ನು ಪೂರ್ಣಗೊಳಿಸಬಹುದಿತ್ತು. ಇದೀಗ ಕೊಳಕು ರಾಜಕೀಯದಲ್ಲಿ ಸಿಲುಕಿ ಸಾವಿರ ಕೋಟಿ ರೂಪಾಯಿಗಳನ್ನು ವೆಚ್ಚ ಮಾಡಿದರೂ, ಹಣವೆಲ್ಲ ಅವರಿವರ ಜೇಬು ತುಂಬಿಕೊಳ್ಳುತ್ತಾ, ಆ ಯೋಜನೆ ಭರವಸೆಯಾಗಿಯೇ ಉಳಿದಿದೆ. ಇದಕ್ಕೆ ನಮ್ಮ ನಾಯಕರಲ್ಲಿರುವ ಇಚ್ಛಾಶಕ್ತಿಯ ಕೊರತೆಯೇ ಕಾರಣ ಎಂದು ಅಭಿಪ್ರಾಯಪಟ್ಟರು.<br /> <br /> <strong>ಪ್ರವಾಸೋದ್ಯಮಕ್ಕೆ ಆದ್ಯತೆ ನೀಡಿ:</strong> `ಚಿತ್ರದುರ್ಗ ಪ್ರವಾಸಿ ತಾಣವಾಗಬೇಕೆಂದು ಹಂಬಲಿಸಿ ನಡೆಸಿದ ಹೋರಾಟಕ್ಕೆ ಈಗ 60ರ ಹರೆಯ. ಆದರೆ ದುರ್ಗವನ್ನಾಳಿದ ಜನಪ್ರತಿನಿಧಿಗಳು ಈ ಕೂಗಿಗೆ ದನಿಗೂಡಿಸಲೇ ಇಲ್ಲ. ಈ ಕುರಿತು ಆಗಾಗ ನನ್ನಂಥ ಸಾಹಿತಿಗಳು ಬರೆದು ಭಾಷಣ ಬಿಗಿದದ್ದಷ್ಟೇ ಭಾಗ್ಯ' ಎಂದು ಬೇಸರ ವ್ಯಕ್ತಪಡಿಸಿದರು.<br /> <br /> `ಪ್ರವಾಸೋದ್ಯಮ ಅಭಿವೃದ್ಧಿಯಿಂದ ಸಾವಿರಾರು ಮಂದಿಗೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಉದ್ಯೋಗ ಸಿಗುತ್ತದೆ. ಈ ಬಗ್ಗೆ ಹಿಂದಿನ ಸರ್ಕಾರದ ಪ್ರವಾಸೋದ್ಯಮ ಸಚಿವರಿಗೆ ಮನವಿ ಸಲ್ಲಿಸಿದ್ದೆವು. ಆ ಮನವಿ ಅವರೊಡನೆಯೇ ಜೈಲು ಪಾಲಾಗಿದೆ' ಎಂದ ಮಾರ್ಮಿಕವಾಗಿ ನುಡಿದರು.<br /> <br /> ನಾಲ್ಕೈದು ವರ್ಷಗಳಲ್ಲಿ ಯಾರ್ಯೋರೋ ಜಿಲ್ಲಾ ಉಸ್ತುವಾರಿ ಸಚಿವರಾದರು. ಅವರೆಲ್ಲ ಆಗಸ್ಟ್ 15, ಜನವರಿ 26ಕ್ಕೆ ಬಂದು ಹೋಗುವವರಾಗಿದ್ದರು. ಜಿಲ್ಲೆಗೆ ಬರುವ ಸರ್ಕಾರಿ ಅಧಿಕಾರಿಗಳ ಪಾಲಿಗೆ ದುರ್ಗವೊಂದು `ಹುಲ್ಲುಗಾವಲು'. ಹಾಯಾಗಿ ಮೇಯ್ದುಕೊಂಡು ಹೋಗುವುದನ್ನು ಬಿಟ್ಟರೆ ಉಳಿದಂತೆ ಪರಮ ತಾತ್ಸರ' ಎಂದು ವ್ಯಂಗ್ಯವಾಡಿದರು.<br /> <br /> <strong>ಜಿಲ್ಲಾ ಉತ್ಸವ ನಡೆಯಲಿ:</strong> ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ನಿಗದಿತ ಅವಧಿಯಲ್ಲಿ `ಜಿಲ್ಲಾ ಉತ್ಸವ'ಗಳು ನಡೆಯುತ್ತವೆ. ಆದರೆ ಆಳುವ ಸರ್ಕಾರಕ್ಕಾಗಲಿ, ಆಡಳಿತ ನಡೆಸುವ ಅಧಿಕಾರಿಗಳಿಗಾಗಲಿ `ಚಿತ್ರದುರ್ಗದ ಉತ್ಸವ' ನೆನಪಾಗುವುದೇ ಇಲ್ಲ. ಇದು ಶೋಚನೀಯ. ಬುಡಕ್ಕಟ್ಟು ನೆಲದಲ್ಲಿ ಸಾಂಸ್ಕೃತಿಕ ಚೆಲುವು ಬಿಂಬಿಸಬೇಕಾಗಿರುವ ಜನಪ್ರತಿನಿಧಿಗಳು, ನಿರ್ಲಕ್ಷ್ಯ ತಾಳಿದ್ದಾರೆ' ಎಂದು ಅಧ್ಯಕ್ಷರು ಬೇಸರ ವ್ಯಕ್ತಪಡಿಸಿದರು.<br /> <br /> `ಚಳ್ಳಕೆರೆಯಲ್ಲಿ ಜವಳಿ ಪಾರ್ಕ್ ನಿರ್ಮಾಣವಾಗುತ್ತಿದೆ. ಇದರಿಂದ ನೂರಾರು ಜನರಿಗೆ ನೌಕರಿ ದೊರೆಯಬಹುದೆಂಬ ನಿರೀಕ್ಷೆ ಇದೆ. ಚಿತ್ರದುರ್ಗ - ತುಮಕೂರು ಜಿಲ್ಲೆ ರೈಲು ಮಾರ್ಗದ ಯೋಜನೆ ನನೆಗುದಿಗೆ ಬಿದ್ದಿದೆ. ದೊಡ್ಡಸಿದ್ದವ್ವನಹಳ್ಳಿಯಲ್ಲಿ ರೈಲ್ವೆ ವರ್ಕ್ಶಾಪ್ ಆಗಬೇಕಾಗಿದೆ. ವಾಣಿ ವಿಲಾಸ ಸಕ್ಕರೆ ಕಾರ್ಖಾನೆ ಪುನರಾರಂಭವಾಗಬೇಕಿದೆ. ನನೆಗುದಿಗೆ ಬಿದ್ದಿರುವ ಯೋಜನೆಗಳ ಬಗ್ಗೆ ಜನಪ್ರತಿನಿಧಿಗಳು ತುರ್ತು ಗಮನ ಹರಿಸಬೇಕಿದೆ' ಎಂದು ಅಧ್ಯಕ್ಷರು ಸಲಹೆ ನೀಡಿದರು.<br /> <br /> ಈಗ ಎಚ್.ಆಂಜನೇಯ ಅವರು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದಾರೆ. ಕನಿಷ್ಠ ಅವರ ಅವಧಿಯಲ್ಲಾದರೂ ಚಿತ್ರದುರ್ಗದ ಜನರ ಅಭಿವೃದ್ಧಿಯ ಕನಸುಗಳು ಈಡೇರಲಿ. ಅವರ ಕನಸುಗಳಿಗೆ ಸಚಿವರು ಬಣ್ಣ ತುಂಬಲಿ ಎಂದರು.<br /> <br /> ಪರಿಶ್ರಮ, ಪರಾಕ್ರಮ ಪ್ರೀತಿ-ವಾತ್ಸಲ್ಯದಿಂದಾಗಿ ಅದ್ಧೂರಿಯಾಗಿ ಈ ಸಮ್ಮೇಳನ ನಡೆದಿದೆ. ಸಾಸಿವೆ ಕಾಳಿನಷ್ಟು ಸಾಧನೆಗೆ ಸಾಗರದಷ್ಟು ಪ್ರೀತಿ ತೋರಿಸಿ, ನನ್ನನ್ನು ಸಮ್ಮೇಳನಾಧ್ಯಕ್ಷನನ್ನಾಗಿ ಮಾಡಿದ್ದೀರಿ. ಮುಂದಿನ ಕೆಲಸಗಳಿಗೆ ನೀವೆಲ್ಲ ನನಗೆ ಪ್ರೇರಕ ಶಕ್ತಿಯಾಗಿ ನಿಲ್ಲಿರಿ ಎಂದು ಚಿತ್ರದುರ್ಗ ಜಿಲ್ಲೆಯ ಜನರಲ್ಲಿ ವಿನಂತಿಸಿಕೊಂಡರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚಿತ್ರದುರ್ಗ(ಟಿ.ಎಸ್.ವೆಂಕಣ್ಣಯ್ಯ ವೇದಿಕೆ): </strong>ಪೂರ್ಣಗೊಳ್ಳದ ಭದ್ರಾ ಮೇಲ್ದಂಡೆ ಯೋಜನೆಗೆ ವಿಷಾದ, ಜಿಲ್ಲಾ ಉತ್ಸವ ನಡೆಸದ ಜಿಲ್ಲಾಡಳಿತ ಕ್ರಮಕ್ಕೆ ಆಕ್ಷೇಪ, ಅಭಿವೃದ್ಧಿಯಾಗದ ಪ್ರವಾಸೋದ್ಯಮದ ಬಗ್ಗೆ ಬೇಸರ, ಬರದಲ್ಲೂ ಸಾಂಸ್ಕೃತಿಕ ಶ್ರೀಮಂತಿಕೆ ಮೆರೆಯುತ್ತಿರುವ ಜಿಲ್ಲೆಯ ಬಗ್ಗೆ ಹೆಮ್ಮೆ, ಭಾಷೆ, ಪ್ರದೇಶಾಭಿವೃದ್ಧಿಯ ಪೂರಕ ಚಟುವಟಿಕೆಗಳಿಗೆ ಆದ್ಯತೆ ನೀಡಿ ಎಂಬ ಸಲಹೆ...<br /> <br /> ಇವು ಹನ್ನೊಂದನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಖ್ಯಾತ ಕಾದಂಬರಿಕಾರ ಬಿ.ಎಲ್.ವೇಣು ಅವರ ಭಾಷಣದ ಮುಖ್ಯಾಂಶಗಳು.<br /> <br /> ನಗರದ ಎಸ್ಜೆಎಂ ಸಭಾಂಗಣದಲ್ಲಿ ಸೋಮವಾರದಿಂದ ಆರಂಭವಾಗಿರುವ ಸಾಹಿತ್ಯ ಸಮ್ಮೇಳನದ ಅಧ್ಯಕ್ಷೀಯ ಭಾಷಣದಲ್ಲಿ, `ಚಿತ್ರದುರ್ಗ ಜಿಲ್ಲೆಯ ಸಾಂಸ್ಕೃತಿಕ ವೈಭವ ಕೊಂಡಾಡಿದ ವೇಣು, ಈ ನೆಲದಲ್ಲಿ ಹುಟ್ಟಿದವರು ರಾಜಕೀಯವಾಗಿ, ಧಾರ್ಮಿಕವಾಗಿ, ಸಾಹಿತ್ಯಿಕವಾಗಿ ಜನಪದ, ಸಂಶೋಧನೆ, ರಂಗಕಲೆ, ಚಿತ್ರಕಲೆ ಎಲ್ಲಾ ಕ್ಷೇತ್ರದಲ್ಲೂ ಪ್ರಸಿದ್ಧಿ ಪಡೆದಿದ್ದಾರೆ ಎಂದು ಹೆಮ್ಮೆಯಿಂದ ನುಡಿದರು.<br /> <br /> ಇಂಥ ಹೆಮ್ಮೆಯ ವಿಚಾರಗಳ ನಡುವೆಯೇ ಚಿತ್ರದುರ್ಗ ಜಿಲ್ಲೆಯನ್ನು ರಾಜಕೀಯವಾಗಿ ಕಡೆಗಣಿಸಲಾಗುತ್ತಿದೆ ಎಂದು ವಿಷಾದಿಸಿದರು. ಇಲ್ಲಿನ ಜನಪ್ರತಿನಿಧಿಗಳಿಗೆ ಓಟು ಬೇಕೇ ಹೊರತು, ಪುರೋಭಿವೃದ್ಧಿ, ಜಿಲ್ಲಾಭಿವೃದ್ಧಿಯ ಬಗ್ಗೆ ಕಿಂಚಿತ್ತೂ ಚಿಂತೆಯಿಲ್ಲ. ಕನಿಷ್ಠ ಮೂಲಸೌಕರ್ಯಗಳನ್ನು ಕಲ್ಪಿಸಬೇಕು ಎಂಬ ಮನಸ್ಸೂ ಇಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು.<br /> <br /> <strong>ಪೂರ್ಣಗೊಳ್ಳದ ಭದ್ರಾ: </strong>ನಾಲ್ಕು ಬಾರಿ ರಾಜ್ಯದ ಮುಖ್ಯಮಂತ್ರಿಯಾಗಿದ್ದ ರಾಷ್ಟ್ರನಾಯಕ ನಿಜಲಿಂಗಪ್ಪ ಅವರು, ಆ ಕಾಲದಲ್ಲಿ ಮನಸ್ಸು ಮಾಡಿದ್ದರೆ, ್ಙ 3 ಕೋಟಿಯಲ್ಲಿ ಭದ್ರಾ ಮೇಲ್ದಂಡೆ ಯೋಜನೆಯನ್ನು ಪೂರ್ಣಗೊಳಿಸಬಹುದಿತ್ತು. ಇದೀಗ ಕೊಳಕು ರಾಜಕೀಯದಲ್ಲಿ ಸಿಲುಕಿ ಸಾವಿರ ಕೋಟಿ ರೂಪಾಯಿಗಳನ್ನು ವೆಚ್ಚ ಮಾಡಿದರೂ, ಹಣವೆಲ್ಲ ಅವರಿವರ ಜೇಬು ತುಂಬಿಕೊಳ್ಳುತ್ತಾ, ಆ ಯೋಜನೆ ಭರವಸೆಯಾಗಿಯೇ ಉಳಿದಿದೆ. ಇದಕ್ಕೆ ನಮ್ಮ ನಾಯಕರಲ್ಲಿರುವ ಇಚ್ಛಾಶಕ್ತಿಯ ಕೊರತೆಯೇ ಕಾರಣ ಎಂದು ಅಭಿಪ್ರಾಯಪಟ್ಟರು.<br /> <br /> <strong>ಪ್ರವಾಸೋದ್ಯಮಕ್ಕೆ ಆದ್ಯತೆ ನೀಡಿ:</strong> `ಚಿತ್ರದುರ್ಗ ಪ್ರವಾಸಿ ತಾಣವಾಗಬೇಕೆಂದು ಹಂಬಲಿಸಿ ನಡೆಸಿದ ಹೋರಾಟಕ್ಕೆ ಈಗ 60ರ ಹರೆಯ. ಆದರೆ ದುರ್ಗವನ್ನಾಳಿದ ಜನಪ್ರತಿನಿಧಿಗಳು ಈ ಕೂಗಿಗೆ ದನಿಗೂಡಿಸಲೇ ಇಲ್ಲ. ಈ ಕುರಿತು ಆಗಾಗ ನನ್ನಂಥ ಸಾಹಿತಿಗಳು ಬರೆದು ಭಾಷಣ ಬಿಗಿದದ್ದಷ್ಟೇ ಭಾಗ್ಯ' ಎಂದು ಬೇಸರ ವ್ಯಕ್ತಪಡಿಸಿದರು.<br /> <br /> `ಪ್ರವಾಸೋದ್ಯಮ ಅಭಿವೃದ್ಧಿಯಿಂದ ಸಾವಿರಾರು ಮಂದಿಗೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಉದ್ಯೋಗ ಸಿಗುತ್ತದೆ. ಈ ಬಗ್ಗೆ ಹಿಂದಿನ ಸರ್ಕಾರದ ಪ್ರವಾಸೋದ್ಯಮ ಸಚಿವರಿಗೆ ಮನವಿ ಸಲ್ಲಿಸಿದ್ದೆವು. ಆ ಮನವಿ ಅವರೊಡನೆಯೇ ಜೈಲು ಪಾಲಾಗಿದೆ' ಎಂದ ಮಾರ್ಮಿಕವಾಗಿ ನುಡಿದರು.<br /> <br /> ನಾಲ್ಕೈದು ವರ್ಷಗಳಲ್ಲಿ ಯಾರ್ಯೋರೋ ಜಿಲ್ಲಾ ಉಸ್ತುವಾರಿ ಸಚಿವರಾದರು. ಅವರೆಲ್ಲ ಆಗಸ್ಟ್ 15, ಜನವರಿ 26ಕ್ಕೆ ಬಂದು ಹೋಗುವವರಾಗಿದ್ದರು. ಜಿಲ್ಲೆಗೆ ಬರುವ ಸರ್ಕಾರಿ ಅಧಿಕಾರಿಗಳ ಪಾಲಿಗೆ ದುರ್ಗವೊಂದು `ಹುಲ್ಲುಗಾವಲು'. ಹಾಯಾಗಿ ಮೇಯ್ದುಕೊಂಡು ಹೋಗುವುದನ್ನು ಬಿಟ್ಟರೆ ಉಳಿದಂತೆ ಪರಮ ತಾತ್ಸರ' ಎಂದು ವ್ಯಂಗ್ಯವಾಡಿದರು.<br /> <br /> <strong>ಜಿಲ್ಲಾ ಉತ್ಸವ ನಡೆಯಲಿ:</strong> ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ನಿಗದಿತ ಅವಧಿಯಲ್ಲಿ `ಜಿಲ್ಲಾ ಉತ್ಸವ'ಗಳು ನಡೆಯುತ್ತವೆ. ಆದರೆ ಆಳುವ ಸರ್ಕಾರಕ್ಕಾಗಲಿ, ಆಡಳಿತ ನಡೆಸುವ ಅಧಿಕಾರಿಗಳಿಗಾಗಲಿ `ಚಿತ್ರದುರ್ಗದ ಉತ್ಸವ' ನೆನಪಾಗುವುದೇ ಇಲ್ಲ. ಇದು ಶೋಚನೀಯ. ಬುಡಕ್ಕಟ್ಟು ನೆಲದಲ್ಲಿ ಸಾಂಸ್ಕೃತಿಕ ಚೆಲುವು ಬಿಂಬಿಸಬೇಕಾಗಿರುವ ಜನಪ್ರತಿನಿಧಿಗಳು, ನಿರ್ಲಕ್ಷ್ಯ ತಾಳಿದ್ದಾರೆ' ಎಂದು ಅಧ್ಯಕ್ಷರು ಬೇಸರ ವ್ಯಕ್ತಪಡಿಸಿದರು.<br /> <br /> `ಚಳ್ಳಕೆರೆಯಲ್ಲಿ ಜವಳಿ ಪಾರ್ಕ್ ನಿರ್ಮಾಣವಾಗುತ್ತಿದೆ. ಇದರಿಂದ ನೂರಾರು ಜನರಿಗೆ ನೌಕರಿ ದೊರೆಯಬಹುದೆಂಬ ನಿರೀಕ್ಷೆ ಇದೆ. ಚಿತ್ರದುರ್ಗ - ತುಮಕೂರು ಜಿಲ್ಲೆ ರೈಲು ಮಾರ್ಗದ ಯೋಜನೆ ನನೆಗುದಿಗೆ ಬಿದ್ದಿದೆ. ದೊಡ್ಡಸಿದ್ದವ್ವನಹಳ್ಳಿಯಲ್ಲಿ ರೈಲ್ವೆ ವರ್ಕ್ಶಾಪ್ ಆಗಬೇಕಾಗಿದೆ. ವಾಣಿ ವಿಲಾಸ ಸಕ್ಕರೆ ಕಾರ್ಖಾನೆ ಪುನರಾರಂಭವಾಗಬೇಕಿದೆ. ನನೆಗುದಿಗೆ ಬಿದ್ದಿರುವ ಯೋಜನೆಗಳ ಬಗ್ಗೆ ಜನಪ್ರತಿನಿಧಿಗಳು ತುರ್ತು ಗಮನ ಹರಿಸಬೇಕಿದೆ' ಎಂದು ಅಧ್ಯಕ್ಷರು ಸಲಹೆ ನೀಡಿದರು.<br /> <br /> ಈಗ ಎಚ್.ಆಂಜನೇಯ ಅವರು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದಾರೆ. ಕನಿಷ್ಠ ಅವರ ಅವಧಿಯಲ್ಲಾದರೂ ಚಿತ್ರದುರ್ಗದ ಜನರ ಅಭಿವೃದ್ಧಿಯ ಕನಸುಗಳು ಈಡೇರಲಿ. ಅವರ ಕನಸುಗಳಿಗೆ ಸಚಿವರು ಬಣ್ಣ ತುಂಬಲಿ ಎಂದರು.<br /> <br /> ಪರಿಶ್ರಮ, ಪರಾಕ್ರಮ ಪ್ರೀತಿ-ವಾತ್ಸಲ್ಯದಿಂದಾಗಿ ಅದ್ಧೂರಿಯಾಗಿ ಈ ಸಮ್ಮೇಳನ ನಡೆದಿದೆ. ಸಾಸಿವೆ ಕಾಳಿನಷ್ಟು ಸಾಧನೆಗೆ ಸಾಗರದಷ್ಟು ಪ್ರೀತಿ ತೋರಿಸಿ, ನನ್ನನ್ನು ಸಮ್ಮೇಳನಾಧ್ಯಕ್ಷನನ್ನಾಗಿ ಮಾಡಿದ್ದೀರಿ. ಮುಂದಿನ ಕೆಲಸಗಳಿಗೆ ನೀವೆಲ್ಲ ನನಗೆ ಪ್ರೇರಕ ಶಕ್ತಿಯಾಗಿ ನಿಲ್ಲಿರಿ ಎಂದು ಚಿತ್ರದುರ್ಗ ಜಿಲ್ಲೆಯ ಜನರಲ್ಲಿ ವಿನಂತಿಸಿಕೊಂಡರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>