ಸಾಕಾನೆ ಸಾಹಸ: ಬನ್ನೇರುಘಟ್ಟದತ್ತ ಹೆಜ್ಜೆ

ತುಮಕೂರು: ಮಲ್ಲಸಂದ್ರ ಕೆರೆಯಲ್ಲಿ ಒಂದು ವಾರದಿಂದ ಬೀಡುಬಿಟ್ಟಿದ್ದ ಆರು ಕಾಡಾನೆಗಳ ಹಿಂಡನ್ನು ಸೋಮವಾರ ಕುಶಾಲನಗರದ ದುಬಾರೆ ಆನೆ ಶಿಬಿರದ ಹರ್ಷ, ಪ್ರಶಾಂತ್ ಹಾಗೂ ವಿಕ್ರಂ ಸಹಾಯದಿಂದ ಕಾಡಿಗೆ ಅಟ್ಟುವ ಕಾರ್ಯಾಚರಣೆ ಆರಂಭಿಸಲಾಯಿತು.
ಭಾನುವಾರ ರಾತ್ರಿ ನಗರಕ್ಕೆ ಬಂದಿಳಿದು, ಗೊಲ್ಲಹಳ್ಳಿಯಲ್ಲಿ ಬಿಡಾರ ಹೂಡಿದ್ದ ಸಾಕಾನೆಗಳು ಸೋಮವಾರ ಮಧ್ಯಾಹ್ನ 3 ಗಂಟೆಗೆ ಕಾರ್ಯಾಚರಣೆಗೆ ಇಳಿದವು.
ಕೆರೆಯ ಮಧ್ಯಭಾಗದಲ್ಲಿ ತಂಗಿದ್ದ ಕಾಡಾನೆಗಳನ್ನು ನೀರಿನಿಂದ ಹೊರ ಬರುವಂತೆ ಮಾಡಲು ಅರಣ್ಯ ಇಲಾಖೆ ಸಿಬ್ಬಂದಿ ಹರಸಾಹಸ ಪಟ್ಟರು. ಸಾಕಾನೆಗಳ ಕಾರ್ಯಾಚರಣೆ ವೀಕ್ಷಿಸಲು ಸುತ್ತಮುತ್ತಲಿನ ಗ್ರಾಮಗಳ ಗ್ರಾಮಸ್ಥರು, ಸಾರ್ವಜನಿಕರು ನೆರೆದಿದ್ದರು.
ಕಾಡಾನೆ ಹಿಂಡು ಹೊರಬರುತ್ತಿದ್ದಂತೆ ಸಾಕಾನೆಗಳು ಅವುಗಳ ಜತೆಯಲ್ಲೇ ಮುಂದೆ ಸಾಗಿದವು. ಮಲ್ಲಸಂದ್ರ, ಹೊನ್ನುಡಿಕೆ ಮಾರ್ಗದಲ್ಲಿ ಆನೆಗಳನ್ನು ಬನ್ನೇರುಘಟ್ಟ ಅರಣ್ಯ ಪ್ರದೇಶದತ್ತ ಓಡಿಸುವ ಕಾರ್ಯಾಚರಣೆ ನಡೆಯಿತು.
ಸಾಕಾನೆಗಳು ಹೆಜ್ಜೆ ಹಾಕುತ್ತಿದ್ದರೆ, ಅವುಗಳನ್ನು ಕಾಡಾನೆಗಳು ಹಿಂಬಾಲಿಸಿದವು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.