<p><strong>ವಿಜಾಪುರ: </strong>`ಕಾರ್ಮಿಕರು ಸಾಕ್ಷರರಾಗುವ ತನಕ ಮಾನವ ಹಕ್ಕುಗಳ ಉಲ್ಲಂಘನೆ ನಡೆಯುತ್ತಿರುತ್ತದೆ. ಸಮಾಜ ಸಾಕ್ಷರವಾದಾಗ ಕಾರ್ಮಿಕರ ಬದುಕಿಗೆ ನಿಜವಾದ ಅಸ್ತಿತ್ವ ದೊರೆಯತ್ತದೆ~ ಎಂದು ಬಿ.ಎಲ್.ಡಿ.ಇ. ಅಧ್ಯಕ್ಷ ಎಂ.ಬಿ. ಪಾಟೀಲ ಹೇಳಿದರು.<br /> <br /> ಇಲ್ಲಿಯ ಎ.ಎಸ್.ಪಿ. ವಾಣಿಜ್ಯ ಮಹಾವಿದ್ಯಾಲಯದಲ್ಲಿ ಯು.ಜಿ.ಸಿ. ಸಹಯೋಗದಲ್ಲಿ ಶುಕ್ರವಾರ ಆಯೋಜಿಸಿದ್ದ `ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ~ ಕುರಿತ ರಾಷ್ಟ್ರೀಯ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು. <br /> <br /> `ಬಳ್ಳಾರಿ ಹಾಗೂ ಸುತ್ತಲಿನ ಪ್ರದೇಶಗಳಲ್ಲಿ ಸಹಸ್ರಾರು ಕಾರ್ಮಿಕರನ್ನು ಗಣಿಗಳಲ್ಲಿ ದುಡಿಸಿಕೊಳ್ಳಲಾಯಿತು. ಗಣಿಗಾರಿಕೆ ಮುಚ್ಚಿದ ಮೇಲೆ ಅವರು ನಿರ್ಗತಿಕರಾಗಿದ್ದಾರೆ. ಅವರಿಗೆ ನ್ಯಾಯಯುತವಾಗಿ ದೊರೆಯಬೇಕಾದ ಕನಿಷ್ಠ ಸವಲತ್ತುಗಳು ದೊರಕಲಿಲ್ಲ. ಆ ಜನ ಇಂದು ಬೀದಿಗೆ ಬಂದಿದ್ದಾರೆ~ ಎಂದು ವಿಷಾದಿಸಿದರು.<br /> <br /> ಬೆಳಗಾವಿಯ ಆರ್.ಎಲ್. ಕಾನೂನು ಕಾಲೇಜಿನ ನಿರ್ದೇಶಕ ಡಾ. ಡಿ.ವೈ. ಕುಲಕರ್ಣಿ, ಪಾಶ್ಚಿಮಾತ್ಯ ಜಗತ್ತಿನಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಹೇರಳವಾಗಿ ನಡೆಯುತ್ತಿದೆ ಎಂದರು.<br /> <br /> ಬಿಎಲ್ಡಿಇ ವೈದ್ಯಕೀಯ ವಿವಿ ಕುಲಪತಿ ಡಾ.ಬಿ.ಜಿ. ಮೂಲಿಮನಿ, ಗಣಿ ಉದ್ದಿಮೆ ಕರ್ನಾಟಕ ಮತ್ತು ಆಂಧ್ರ ಪ್ರದೇಶದಲ್ಲಿ ಸಾಮಾಜಿಕ ಹಾಗೂ ರಾಜಕೀಯ ಜೀವನದ ಸ್ವರೂಪವನ್ನೇ ಬದಲಿಸಿದೆ ಎಂದು ಹೇಳಿದರು.<br /> <br /> ಆಡಳಿತಾಧಿಕಾರಿ ಎಸ್.ಎಚ್. ಲಗಳಿ, ಕೆ.ಎಸ್. ಬಿರಾದಾರ, ಸಂಸ್ಥೆಯ ಮುಖ್ಯ ಹಣಕಾಸು ಅಧಿಕಾರಿ ದೇವೇಂದ್ರ ಅಗರವಾಲ್, ಎಸ್.ಎಸ್. ಕೋರಿ, ಡಾ.ಮಹಾಂತೇಶ ಬಿರಾದಾರ ಮತ್ತಿತರರು ಉಪಸ್ಥಿತರಿದ್ದರು. <br /> <br /> ವೈ.ಬಿ. ಪಟ್ಟಣಶೆಟ್ಟಿ, ಎಂ.ಎಸ್. ಝಳಕಿ, ಶರದ್ ರೂಡಗಿ, ವಿಲಾಸ ಬಗಲಿ ಮತ್ತಿತರರು ಭಾಗವಹಿಸಿದ್ದರು.<br /> ಪ್ರಾಚಾರ್ಯ ಎಸ್.ಎಸ್. ಚೌಕಿಮಠ ಸ್ವಾಗತಿಸಿದರು. ಎಸ್.ಜಿ. ತಾಳಿಕೋಟಿ ವಂದಿಸಿದರು. ಪ್ರೊ.ಸಂಜೀವಿನಿ ಪಾಟೀಲ ಕಾರ್ಯಕ್ರಮ ನಿರೂಪಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ವಿಜಾಪುರ: </strong>`ಕಾರ್ಮಿಕರು ಸಾಕ್ಷರರಾಗುವ ತನಕ ಮಾನವ ಹಕ್ಕುಗಳ ಉಲ್ಲಂಘನೆ ನಡೆಯುತ್ತಿರುತ್ತದೆ. ಸಮಾಜ ಸಾಕ್ಷರವಾದಾಗ ಕಾರ್ಮಿಕರ ಬದುಕಿಗೆ ನಿಜವಾದ ಅಸ್ತಿತ್ವ ದೊರೆಯತ್ತದೆ~ ಎಂದು ಬಿ.ಎಲ್.ಡಿ.ಇ. ಅಧ್ಯಕ್ಷ ಎಂ.ಬಿ. ಪಾಟೀಲ ಹೇಳಿದರು.<br /> <br /> ಇಲ್ಲಿಯ ಎ.ಎಸ್.ಪಿ. ವಾಣಿಜ್ಯ ಮಹಾವಿದ್ಯಾಲಯದಲ್ಲಿ ಯು.ಜಿ.ಸಿ. ಸಹಯೋಗದಲ್ಲಿ ಶುಕ್ರವಾರ ಆಯೋಜಿಸಿದ್ದ `ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ~ ಕುರಿತ ರಾಷ್ಟ್ರೀಯ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು. <br /> <br /> `ಬಳ್ಳಾರಿ ಹಾಗೂ ಸುತ್ತಲಿನ ಪ್ರದೇಶಗಳಲ್ಲಿ ಸಹಸ್ರಾರು ಕಾರ್ಮಿಕರನ್ನು ಗಣಿಗಳಲ್ಲಿ ದುಡಿಸಿಕೊಳ್ಳಲಾಯಿತು. ಗಣಿಗಾರಿಕೆ ಮುಚ್ಚಿದ ಮೇಲೆ ಅವರು ನಿರ್ಗತಿಕರಾಗಿದ್ದಾರೆ. ಅವರಿಗೆ ನ್ಯಾಯಯುತವಾಗಿ ದೊರೆಯಬೇಕಾದ ಕನಿಷ್ಠ ಸವಲತ್ತುಗಳು ದೊರಕಲಿಲ್ಲ. ಆ ಜನ ಇಂದು ಬೀದಿಗೆ ಬಂದಿದ್ದಾರೆ~ ಎಂದು ವಿಷಾದಿಸಿದರು.<br /> <br /> ಬೆಳಗಾವಿಯ ಆರ್.ಎಲ್. ಕಾನೂನು ಕಾಲೇಜಿನ ನಿರ್ದೇಶಕ ಡಾ. ಡಿ.ವೈ. ಕುಲಕರ್ಣಿ, ಪಾಶ್ಚಿಮಾತ್ಯ ಜಗತ್ತಿನಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಹೇರಳವಾಗಿ ನಡೆಯುತ್ತಿದೆ ಎಂದರು.<br /> <br /> ಬಿಎಲ್ಡಿಇ ವೈದ್ಯಕೀಯ ವಿವಿ ಕುಲಪತಿ ಡಾ.ಬಿ.ಜಿ. ಮೂಲಿಮನಿ, ಗಣಿ ಉದ್ದಿಮೆ ಕರ್ನಾಟಕ ಮತ್ತು ಆಂಧ್ರ ಪ್ರದೇಶದಲ್ಲಿ ಸಾಮಾಜಿಕ ಹಾಗೂ ರಾಜಕೀಯ ಜೀವನದ ಸ್ವರೂಪವನ್ನೇ ಬದಲಿಸಿದೆ ಎಂದು ಹೇಳಿದರು.<br /> <br /> ಆಡಳಿತಾಧಿಕಾರಿ ಎಸ್.ಎಚ್. ಲಗಳಿ, ಕೆ.ಎಸ್. ಬಿರಾದಾರ, ಸಂಸ್ಥೆಯ ಮುಖ್ಯ ಹಣಕಾಸು ಅಧಿಕಾರಿ ದೇವೇಂದ್ರ ಅಗರವಾಲ್, ಎಸ್.ಎಸ್. ಕೋರಿ, ಡಾ.ಮಹಾಂತೇಶ ಬಿರಾದಾರ ಮತ್ತಿತರರು ಉಪಸ್ಥಿತರಿದ್ದರು. <br /> <br /> ವೈ.ಬಿ. ಪಟ್ಟಣಶೆಟ್ಟಿ, ಎಂ.ಎಸ್. ಝಳಕಿ, ಶರದ್ ರೂಡಗಿ, ವಿಲಾಸ ಬಗಲಿ ಮತ್ತಿತರರು ಭಾಗವಹಿಸಿದ್ದರು.<br /> ಪ್ರಾಚಾರ್ಯ ಎಸ್.ಎಸ್. ಚೌಕಿಮಠ ಸ್ವಾಗತಿಸಿದರು. ಎಸ್.ಜಿ. ತಾಳಿಕೋಟಿ ವಂದಿಸಿದರು. ಪ್ರೊ.ಸಂಜೀವಿನಿ ಪಾಟೀಲ ಕಾರ್ಯಕ್ರಮ ನಿರೂಪಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>