<p>ಈಚಲಕರಂಜಿಯ ದೊರೆ ಶ್ರೀಮಂತ ಬಾಬಾಸಾಹೇಬರು ಬೆಳಗಾವಿ ಸಮೀಪವಿರುವ ಮಹಾರಾಷ್ಟ್ರದ ಹಳ್ಳಿ ಆಜರಾದಲ್ಲಿ ಒಮ್ಮೆ ವಾಸ್ತವ್ಯ ಹೂಡಿದ್ದರು. ಅದೇ ದಿನ ಅಕಸ್ಮಾತ್ತಾಗಿ ಶಿವರಾಮಬುವಾ ವಝೆ ಕೂಡ ಆಜರಾಕ್ಕೆ ಆಗಮಿಸಿದ್ದರು. <br /> <br /> ಶಿವರಾಮಬುವಾರಿಗೆ ದೊರೆ ಎದುರಿಗೆ ಹಾಡಬೇಕು ಅನ್ನಿಸಿತು. ಮರುದಿನ ಬೆಳಿಗ್ಗೆ ಅವರು ಬಾಬಾಸಾಹೇಬರು ಉಳಿದುಕೊಂಡಲ್ಲಿಗೆ ಧಾವಿಸಿದರು. ಮೊದಲು ಶ್ರೀಮಂತರ ಖಾಸಾ ಕಾರಭಾರಿ ಮಾಧವರಾವ ಲೇಲೆಯವರನ್ನು ಕಂಡು `ನಾನೊಬ್ಬ ಗವಾಯಿ. ನಾನು ದೊರೆಗಳನ್ನು ಕಾಣಬೇಕು~ ಎಂದು ನಿವೇದಿಸಿಕೊಂಡರು. ಮಾಧವರಾವ್ ಅವರಿಗೆ ಬಂದವ ಗಾಯಕ ಎಂದೇನೂ ಅನ್ನಿಸಲಿಲ್ಲ. <br /> <br /> ವೇಷಭೂಷಣಗಳಿಗೆ ಮಹತ್ವ ಕೊಡದ ಶಿವರಾಮಬುವಾ, ಕೆಲವು ಸಲ ಗಲೀಜು ಬಟ್ಟೆ ಧರಿಸುತ್ತಿದ್ದರು. ಅವರ ಅಂದಿನ ವೇಷವೂ ಅದೇ ರೀತಿಯಿತ್ತು. ಹೀಗಾಗಿ ಮಾಧವರಾಯರಿಗೆ ಅನುಮಾನ ಉಂಟಾಗಿತ್ತು. ಪ್ರಶ್ನೋತ್ತರ ಆರಂಭವಾಯಿತು.<br /> `ನೀನು ಗಾಯಕ ಎಂಬುದಕ್ಕೇನು ಆಧಾರ? ಹಾಡಿ ತೋರಿಸು~<br /> `ನಾನು ದೊರೆಗಳ ಎದುರಿಗೆ ಮಾತ್ರ ಹಾಡುತ್ತೇನೆ~<br /> `ಹಾಗಿದ್ದರೆ ನೀನು ಗಾಯಕನೆಂಬುದಕ್ಕೆ ಆಧಾರವೇನಿದೆ?~<br /> <br /> ಪಕ್ಕದ ಕೋಣೆಯ ತೂಗುಮಂಚದ ಮೇಲೆ ಪತ್ರಿಕೆಯನ್ನೋದುತ್ತಿದ್ದ ಶ್ರಿಮಂತರು ಈ ಸಂಭಾಷಣೆ ಕೇಳಿಸಿಕೊಳ್ಳುತ್ತಿದ್ದರು. ಅವರೊಬ್ಬ ಅಪ್ರತಿಮ ಸಂಗೀತ ಪ್ರೇಮಿ. ಅವರು ಮಾಧವರಾಯರಿಗೆ ಬಂದಿರುವ ಗವಾಯಿಯನ್ನು ಒಳಗೆ ಕಳಿಸುವಂತೆ ಸೂಚಿಸಿದರು. <br /> ದೊರೆಗಳು ಗವಾಯಿಗೆ ಕುರ್ಚಿಯ ಮೇಲೆ ಕುಳಿತುಕೊಳ್ಳುವಂತೆ ಸೂಚಿಸಿದರು.<br /> `ನಾನು ಶಿವರಾಮ. ಪಂ.ರಾಮಕೃಷ್ಣಬುವಾ ವಝೆ ಅವರ ಮಗ. ನಿಮಗೆ ನನ್ನ ಹಾಡು ಕೇಳಿಸಬೇಕೆಂದು ಬಂದಿದ್ದೇನೆ~.<br /> <br /> ದೊರೆಗಳು ಪಂ.ರಾಮಕೃಷ್ಣಬುವಾ ವಝೆಯವರ ಪಾಂಡಿತ್ಯವನ್ನು ಕೇಳಿಬಲ್ಲವರಾಗಿದ್ದರು. ಅವರ ಮಗನೆಂದ ಮೇಲೆ ಚೆನ್ನಾಗಿಯೇ ಹಾಡುವವನಿರಬೇಕು ಅನ್ನಿಸಿತು.<br /> <br /> `ಸರಿ, ಯಾವಾಗ ಕೇಳಿಸುತ್ತೀರಿ?~<br /> `ದೊರೆಗಳು ಹೇಳಿದಾಗ~.<br /> `ಜೊತೆ ವಾದ್ಯಗಳು ಇವೆಯೋ~<br /> `ಇಲ್ಲ~<br /> `ತಂಬೂರಿ~<br /> `ಅದೂ ಇಲ್ಲ~<br /> `ಮತ್ತೆ? ಆಧಾರಶ್ರುತಿಯಿಲ್ಲದೆ ಹೇಗೆ ಹಾಡುತ್ತೀರಿ?~<br /> `ತಮ್ಮಲ್ಲಿ ಬರುವುದು ಮೊದಲೇ ಗೊತ್ತಿದ್ದರೆ ಎಲ್ಲ ವ್ಯವಸ್ಥೆಯೊಂದಿಗೆ ಬರುತ್ತಿದ್ದೆ. ಹೀಗಾಗಿ....~<br /> <br /> `ಸಾಥಿದಾರರು ಸಿಗುತ್ತಾರೇನು ನೋಡಿ. ರಾತ್ರಿ ಒಂಬತ್ತಕ್ಕೆ ಬನ್ನಿ~<br /> ಶಿವರಾಮಬುವಾ ಅಂದು ದಿನವಿಡೀ ಆಜರಾವನ್ನು ಗಸ್ತು ಹೊಡೆದರೂ ಅವರಿಗೆ ಪಕ್ಕವಾದ್ಯ ನುಡಿಸುವ ಸಾಥಿದಾರರು ಸಿಗಲೇ ಇಲ್ಲ. <br /> <br /> ಆದರೆ ಒಂದು ಹಳೆಯ ತಂಬೂರಿ ಮಾತ್ರ ದೊರಕಿತು. ಅದೊಂದನ್ನೇ ಎತ್ತಿಕೊಂಡು ರಾತ್ರಿ ಒಂಬತ್ತಕ್ಕೆ ಶಿವರಾಮಬುವಾ ಶ್ರಿಮಂತರಿದ್ದಲ್ಲಿಗೆ ಆಗಮಿಸಿದರು. <br /> <br /> ತಂಬೂರಿಯೊಂದನ್ನೇ ಆಧಾರವಾಗಿಟ್ಟುಕೊಂಡು ಸೊಗಸಾಗಿ ಹಾಡಿದರು. ಅವರ ಹಾಡಿಗೆ ಶ್ರಿಮಂತರೊಬ್ಬರೇ ಶೋತೃ! ನಿರಂತರ ಕೆಲಸಕಾರ್ಯಗಳಿಂದ ದಣಿದಿದ್ದ ಮಾಧವರಾಯರು ಶಿವರಾಮಬುವಾ ಹಾಡುವಾಗ ನಿದ್ರಿಸಿದ್ದರು!<br /> <br /> ಮರುದಿನ ಬೆಳಿಗ್ಗೆ ದೊರೆಗಳು ಕೇಳಿದರು-<br /> `ನಿನ್ನೆ ರಾತ್ರಿ ಗವಾಯಿಯ ಹಾಡನ್ನು ನೀವು ಕೇಳಿದಿರಾ?~. ಮಾಧವರಾಯರು ವಾಸ್ತವ ಸಂಗತಿಯನ್ನು ಹೇಳಿದರು.<br /> <br /> `ಒಂದು ಪ್ರಬುದ್ಧ ಗಾಯನ ಕೇಳುವುದನ್ನು ನೀವು ಕಳೆದುಕೊಂಡಿರಿ. ಸರಿ ಬಿಡಿ, ಆ ಗವಾಯಿ ಇನ್ನೇನು ಬರುತ್ತಾರೆ, ಅವರಿಗೆ ಬಿದಾಗಿ ಎಷ್ಟು ಕೊಡುವುದು?~<br /> ಶಿವರಾಮಬುವಾರ ವಿದ್ವತ್ನ ಕಲ್ಪನೆಯೇ ಇಲ್ಲದ ಮಾಧವರಾಯರು ಐದು ರೂಪಾಯಿ (ಆ ಕಾಲದಲ್ಲದು ದೊಡ್ಡ ಮೊತ್ತವೇ!) ಕೊಡಲು ಸಲಹೆಯಿತ್ತರು. ಶಿವರಾಮಬುವಾ ಶ್ರಿಮಂತರೆದುರು ಹಾಜರಾದಾಗ ಅವರಿಗೆ ಇಪ್ಪತ್ತೈದು ರೂಪಾಯಿಗಳ ಸಂಭಾವನೆ ದೊರೆಯಿತು. ದೊರೆಗಳು ಹೇಳಿದರು-<br /> <br /> `ನೋಡಿ, ನಿಮ್ಮ ಹಾಡುಗಾರಿಕೆಗೆ ಈ ಸಂಭಾವನೆ ತಕ್ಕುದಲ್ಲ ಎಂದು ನನಗೆ ಗೊತ್ತು. ಈಚಲಕರಂಜಿಯ ನವರಾತ್ರಿ ಉತ್ಸವಕ್ಕೆ ಬನ್ನಿ. ನಿಮಗೆ ಕೈತುಂಬ ಬಿದಾಗಿ ಕೊಡುತ್ತೇನೆ~. ಶಿವರಾಮಬುವಾ ಅಲ್ಲಿಂದ ಸಂತೃಪ್ತಿಯಿಂದ ಹೊರಟರು. <br /> <br /> ಸಾಥಿದಾರರಿಲ್ಲದೆ ಕೇವಲ ಮುರುಕು ತಂಬೂರಿಯೊಂದರ ಸಹಾಯದಿಂದ ಹಾಡಿ ಅವರು ಸಂಗೀತಪ್ರೇಮಿ ದೊರೆಯ ಮನಸ್ಸನ್ನು ಗೆದ್ದಿದ್ದರು. ನಿಜವಾದ ಹಾಡುಗಾರನಿಗೆ ರಾಗಗಳು, ಅವುಗಳ ಸ್ವರಗಳು, ಅವುಗಳ ಶ್ರುತಿ ಇವೆಲ್ಲವೂ ಅಂತರ್ಗತವಾಗಿರುತ್ತವೆ, ಪಕ್ಕ ವಾದ್ಯಗಳು ನೆಪ ಮಾತ್ರ.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಈಚಲಕರಂಜಿಯ ದೊರೆ ಶ್ರೀಮಂತ ಬಾಬಾಸಾಹೇಬರು ಬೆಳಗಾವಿ ಸಮೀಪವಿರುವ ಮಹಾರಾಷ್ಟ್ರದ ಹಳ್ಳಿ ಆಜರಾದಲ್ಲಿ ಒಮ್ಮೆ ವಾಸ್ತವ್ಯ ಹೂಡಿದ್ದರು. ಅದೇ ದಿನ ಅಕಸ್ಮಾತ್ತಾಗಿ ಶಿವರಾಮಬುವಾ ವಝೆ ಕೂಡ ಆಜರಾಕ್ಕೆ ಆಗಮಿಸಿದ್ದರು. <br /> <br /> ಶಿವರಾಮಬುವಾರಿಗೆ ದೊರೆ ಎದುರಿಗೆ ಹಾಡಬೇಕು ಅನ್ನಿಸಿತು. ಮರುದಿನ ಬೆಳಿಗ್ಗೆ ಅವರು ಬಾಬಾಸಾಹೇಬರು ಉಳಿದುಕೊಂಡಲ್ಲಿಗೆ ಧಾವಿಸಿದರು. ಮೊದಲು ಶ್ರೀಮಂತರ ಖಾಸಾ ಕಾರಭಾರಿ ಮಾಧವರಾವ ಲೇಲೆಯವರನ್ನು ಕಂಡು `ನಾನೊಬ್ಬ ಗವಾಯಿ. ನಾನು ದೊರೆಗಳನ್ನು ಕಾಣಬೇಕು~ ಎಂದು ನಿವೇದಿಸಿಕೊಂಡರು. ಮಾಧವರಾವ್ ಅವರಿಗೆ ಬಂದವ ಗಾಯಕ ಎಂದೇನೂ ಅನ್ನಿಸಲಿಲ್ಲ. <br /> <br /> ವೇಷಭೂಷಣಗಳಿಗೆ ಮಹತ್ವ ಕೊಡದ ಶಿವರಾಮಬುವಾ, ಕೆಲವು ಸಲ ಗಲೀಜು ಬಟ್ಟೆ ಧರಿಸುತ್ತಿದ್ದರು. ಅವರ ಅಂದಿನ ವೇಷವೂ ಅದೇ ರೀತಿಯಿತ್ತು. ಹೀಗಾಗಿ ಮಾಧವರಾಯರಿಗೆ ಅನುಮಾನ ಉಂಟಾಗಿತ್ತು. ಪ್ರಶ್ನೋತ್ತರ ಆರಂಭವಾಯಿತು.<br /> `ನೀನು ಗಾಯಕ ಎಂಬುದಕ್ಕೇನು ಆಧಾರ? ಹಾಡಿ ತೋರಿಸು~<br /> `ನಾನು ದೊರೆಗಳ ಎದುರಿಗೆ ಮಾತ್ರ ಹಾಡುತ್ತೇನೆ~<br /> `ಹಾಗಿದ್ದರೆ ನೀನು ಗಾಯಕನೆಂಬುದಕ್ಕೆ ಆಧಾರವೇನಿದೆ?~<br /> <br /> ಪಕ್ಕದ ಕೋಣೆಯ ತೂಗುಮಂಚದ ಮೇಲೆ ಪತ್ರಿಕೆಯನ್ನೋದುತ್ತಿದ್ದ ಶ್ರಿಮಂತರು ಈ ಸಂಭಾಷಣೆ ಕೇಳಿಸಿಕೊಳ್ಳುತ್ತಿದ್ದರು. ಅವರೊಬ್ಬ ಅಪ್ರತಿಮ ಸಂಗೀತ ಪ್ರೇಮಿ. ಅವರು ಮಾಧವರಾಯರಿಗೆ ಬಂದಿರುವ ಗವಾಯಿಯನ್ನು ಒಳಗೆ ಕಳಿಸುವಂತೆ ಸೂಚಿಸಿದರು. <br /> ದೊರೆಗಳು ಗವಾಯಿಗೆ ಕುರ್ಚಿಯ ಮೇಲೆ ಕುಳಿತುಕೊಳ್ಳುವಂತೆ ಸೂಚಿಸಿದರು.<br /> `ನಾನು ಶಿವರಾಮ. ಪಂ.ರಾಮಕೃಷ್ಣಬುವಾ ವಝೆ ಅವರ ಮಗ. ನಿಮಗೆ ನನ್ನ ಹಾಡು ಕೇಳಿಸಬೇಕೆಂದು ಬಂದಿದ್ದೇನೆ~.<br /> <br /> ದೊರೆಗಳು ಪಂ.ರಾಮಕೃಷ್ಣಬುವಾ ವಝೆಯವರ ಪಾಂಡಿತ್ಯವನ್ನು ಕೇಳಿಬಲ್ಲವರಾಗಿದ್ದರು. ಅವರ ಮಗನೆಂದ ಮೇಲೆ ಚೆನ್ನಾಗಿಯೇ ಹಾಡುವವನಿರಬೇಕು ಅನ್ನಿಸಿತು.<br /> <br /> `ಸರಿ, ಯಾವಾಗ ಕೇಳಿಸುತ್ತೀರಿ?~<br /> `ದೊರೆಗಳು ಹೇಳಿದಾಗ~.<br /> `ಜೊತೆ ವಾದ್ಯಗಳು ಇವೆಯೋ~<br /> `ಇಲ್ಲ~<br /> `ತಂಬೂರಿ~<br /> `ಅದೂ ಇಲ್ಲ~<br /> `ಮತ್ತೆ? ಆಧಾರಶ್ರುತಿಯಿಲ್ಲದೆ ಹೇಗೆ ಹಾಡುತ್ತೀರಿ?~<br /> `ತಮ್ಮಲ್ಲಿ ಬರುವುದು ಮೊದಲೇ ಗೊತ್ತಿದ್ದರೆ ಎಲ್ಲ ವ್ಯವಸ್ಥೆಯೊಂದಿಗೆ ಬರುತ್ತಿದ್ದೆ. ಹೀಗಾಗಿ....~<br /> <br /> `ಸಾಥಿದಾರರು ಸಿಗುತ್ತಾರೇನು ನೋಡಿ. ರಾತ್ರಿ ಒಂಬತ್ತಕ್ಕೆ ಬನ್ನಿ~<br /> ಶಿವರಾಮಬುವಾ ಅಂದು ದಿನವಿಡೀ ಆಜರಾವನ್ನು ಗಸ್ತು ಹೊಡೆದರೂ ಅವರಿಗೆ ಪಕ್ಕವಾದ್ಯ ನುಡಿಸುವ ಸಾಥಿದಾರರು ಸಿಗಲೇ ಇಲ್ಲ. <br /> <br /> ಆದರೆ ಒಂದು ಹಳೆಯ ತಂಬೂರಿ ಮಾತ್ರ ದೊರಕಿತು. ಅದೊಂದನ್ನೇ ಎತ್ತಿಕೊಂಡು ರಾತ್ರಿ ಒಂಬತ್ತಕ್ಕೆ ಶಿವರಾಮಬುವಾ ಶ್ರಿಮಂತರಿದ್ದಲ್ಲಿಗೆ ಆಗಮಿಸಿದರು. <br /> <br /> ತಂಬೂರಿಯೊಂದನ್ನೇ ಆಧಾರವಾಗಿಟ್ಟುಕೊಂಡು ಸೊಗಸಾಗಿ ಹಾಡಿದರು. ಅವರ ಹಾಡಿಗೆ ಶ್ರಿಮಂತರೊಬ್ಬರೇ ಶೋತೃ! ನಿರಂತರ ಕೆಲಸಕಾರ್ಯಗಳಿಂದ ದಣಿದಿದ್ದ ಮಾಧವರಾಯರು ಶಿವರಾಮಬುವಾ ಹಾಡುವಾಗ ನಿದ್ರಿಸಿದ್ದರು!<br /> <br /> ಮರುದಿನ ಬೆಳಿಗ್ಗೆ ದೊರೆಗಳು ಕೇಳಿದರು-<br /> `ನಿನ್ನೆ ರಾತ್ರಿ ಗವಾಯಿಯ ಹಾಡನ್ನು ನೀವು ಕೇಳಿದಿರಾ?~. ಮಾಧವರಾಯರು ವಾಸ್ತವ ಸಂಗತಿಯನ್ನು ಹೇಳಿದರು.<br /> <br /> `ಒಂದು ಪ್ರಬುದ್ಧ ಗಾಯನ ಕೇಳುವುದನ್ನು ನೀವು ಕಳೆದುಕೊಂಡಿರಿ. ಸರಿ ಬಿಡಿ, ಆ ಗವಾಯಿ ಇನ್ನೇನು ಬರುತ್ತಾರೆ, ಅವರಿಗೆ ಬಿದಾಗಿ ಎಷ್ಟು ಕೊಡುವುದು?~<br /> ಶಿವರಾಮಬುವಾರ ವಿದ್ವತ್ನ ಕಲ್ಪನೆಯೇ ಇಲ್ಲದ ಮಾಧವರಾಯರು ಐದು ರೂಪಾಯಿ (ಆ ಕಾಲದಲ್ಲದು ದೊಡ್ಡ ಮೊತ್ತವೇ!) ಕೊಡಲು ಸಲಹೆಯಿತ್ತರು. ಶಿವರಾಮಬುವಾ ಶ್ರಿಮಂತರೆದುರು ಹಾಜರಾದಾಗ ಅವರಿಗೆ ಇಪ್ಪತ್ತೈದು ರೂಪಾಯಿಗಳ ಸಂಭಾವನೆ ದೊರೆಯಿತು. ದೊರೆಗಳು ಹೇಳಿದರು-<br /> <br /> `ನೋಡಿ, ನಿಮ್ಮ ಹಾಡುಗಾರಿಕೆಗೆ ಈ ಸಂಭಾವನೆ ತಕ್ಕುದಲ್ಲ ಎಂದು ನನಗೆ ಗೊತ್ತು. ಈಚಲಕರಂಜಿಯ ನವರಾತ್ರಿ ಉತ್ಸವಕ್ಕೆ ಬನ್ನಿ. ನಿಮಗೆ ಕೈತುಂಬ ಬಿದಾಗಿ ಕೊಡುತ್ತೇನೆ~. ಶಿವರಾಮಬುವಾ ಅಲ್ಲಿಂದ ಸಂತೃಪ್ತಿಯಿಂದ ಹೊರಟರು. <br /> <br /> ಸಾಥಿದಾರರಿಲ್ಲದೆ ಕೇವಲ ಮುರುಕು ತಂಬೂರಿಯೊಂದರ ಸಹಾಯದಿಂದ ಹಾಡಿ ಅವರು ಸಂಗೀತಪ್ರೇಮಿ ದೊರೆಯ ಮನಸ್ಸನ್ನು ಗೆದ್ದಿದ್ದರು. ನಿಜವಾದ ಹಾಡುಗಾರನಿಗೆ ರಾಗಗಳು, ಅವುಗಳ ಸ್ವರಗಳು, ಅವುಗಳ ಶ್ರುತಿ ಇವೆಲ್ಲವೂ ಅಂತರ್ಗತವಾಗಿರುತ್ತವೆ, ಪಕ್ಕ ವಾದ್ಯಗಳು ನೆಪ ಮಾತ್ರ.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>