<p><strong>ಬಾಗಲಕೋಟೆ</strong>: ಸಂಕಷ್ಟದಲ್ಲಿರುವ ನಾಡಿನ ಸಂಗೀತ, ನೃತ್ಯ, ರಂಗಭೂಮಿ, ಯಕ್ಷಗಾನ, ಜಾನಪದ, ಲಲಿತಕಲೆ, ಶಿಲ್ಪಕಲಾ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿರುವ ಅಸಕ್ತ ಮತ್ತು ವಯೋವೃದ್ಧ ಕಲಾವಿದರಿಗೆ ಪ್ರತಿ ತಿಂಗಳು ರೂ. 1 ಸಾವಿರ ಮಾಸಾಶನ ನೀಡುವ ಮಹತ್ವದ ಯೋಜನೆ ನೆನೆಗುದಿಗೆ ಬಿದ್ದಿದೆ.<br /> <br /> ಕಷ್ಟ ಪರಿಸ್ಥಿತಿಯಲ್ಲಿರುವ ಸಾಹಿತಿ ಮತ್ತು ಕಲಾವಿದರಿಗೆ ಮಾಸಾಶನ ನೀಡುವ ಸಂಬಂಧ ಡಾ. ಹಂಪ ನಾಗರಾಜಯ್ಯ ಅಧ್ಯಕ್ಷತೆಯಲ್ಲಿ ಸರ್ಕಾರ 2006ರಲ್ಲಿ ನೇಮಿಸಿದ್ದ ಆಯ್ಕೆ ಸಮಿತಿ ಶಿಫಾರಸು ಮಾಡಿರುವ 1200 ಕಲಾವಿದರು ಮಾಸಾಶನಕ್ಕಾಗಿ ಜಾತಕಪಕ್ಷಿಗಳಂತೆ ಕಾಯುತ್ತಿದ್ದು, ಅದರಲ್ಲಿ ಅನೇಕರು ಈಗಾಗಲೇ ಮೃತಪಟ್ಟಿದ್ದಾರೆ.<br /> <br /> 2006-07, 2007-08 ಮತ್ತು 2008-09ನೇ ಸಾಲಿಗೆ ಒಟ್ಟು 1200 ಅರ್ಹ ಸಾಹಿತಿ ಮತ್ತು ಕಲಾವಿದರನ್ನು ಮಾಸಾಶನ ನೀಡಲು ಆಯ್ಕೆ ಮಾಡಲಾಗಿದೆ. ಆದರೆ ಈ ಕಲಾವಿದರಿಗೆ ಇನ್ನೂ ಮಾಸಾಶನ ಸಿಗದೇ ಆಯಾ ಜಿಲ್ಲೆಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಚೇರಿಗೆ ಅಲೆದು ಅಲೆದು ಮಾಸಾಶನದ ಆಸೆಯ<br /> ನ್ನೇ ಕೈಬಿಟ್ಟಿದ್ದಾರೆ. <br /> <br /> ಅಲ್ಲದೇ 2009-10 ಮತ್ತು 2010-11ನೇ ಸಾಲಿಗೆ ಸಾವಿರಾರು ಕಲಾವಿದರು ಮಾಸಾಶನಕ್ಕಾಗಿ ಅರ್ಜಿ ಹಾಕಿದ್ದು, ಇನ್ನೂ ಸಂದರ್ಶನ ಪೂರ್ಣಗೊಂಡಿಲ್ಲ.<br /> <br /> ಮಾಸಾಶನಕ್ಕಾಗಿ ಅಲೆದು ಸುಸ್ತಾದ ಬಾಗಲಕೋಟೆ ಜಿಲ್ಲೆಯ ಜನಪದ ಕಲಾವಿದೆ ಸತ್ಯವ್ವ ತಳಗೇರಿ ಈ ಸಂಬಂಧ `ಪ್ರಜಾವಾಣಿ~ಯೊಂದಿಗೆ ಮಾತನಾಡಿ, ಕಳೆದ 10 ವರ್ಷಗಳಿಂದ ಮಾಸಾಶನಕ್ಕೆ ಅರ್ಜಿ ಹಾಕಿಕೊಂಡು ಕಾಯುತ್ತಿದ್ದೇನೆ, ಈಗ ಬರಬಹುದು, ಆಗ ಬರಬಹುದು ಎಂದು ಕಾದುಕಾದು ಅದರ ಆಸೆಯನ್ನೇ ಬಿಟ್ಟಿದ್ದೇನೆ ಎಂದು ಹತಾಶೆ ವ್ಯಕ್ತಪಡಿಸಿದರು.<br /> <br /> 40 ವರ್ಷದಿಂದ ಗೀಗೀಪದ, ಭಜನೆ ಮಾಡುತ್ತಾ ಬರುತ್ತಿದ್ದೇನೆ, ಬರುವ ಅಲ್ಪ ಹಣದಲ್ಲಿ ಜೀವನ ಸರಿದೂಗಿಸುವುದು ಕಷ್ಟವಾಗಿದೆ. ಸರ್ಕಾರ ಈಗಲಾದರೂ ನಮ್ಮತ್ತ ಕಣ್ಣು ತೆರೆದು ನೋಡಬೇಕು ಎಂದು ಮನವಿ ಮಾಡಿದರು.<br /> <br /> ಮುಧೋಳ ತಾಲ್ಲೂಕಿನ ರನ್ನ ಬೆಳಗಲಿಯ ಜಾನಪದ ಅಂಧ ಕಲಾವಿದ ನಾರಾಯಣ ಡಿ. ಬಡಿಗೇರ `ಪ್ರಜಾವಾಣಿ~ಯೊಂದಿಗೆ ಮಾತನಾಡಿ, ಮಾಸಾಶನಕ್ಕಾಗಿ 2006ರಲ್ಲೇ ಅರ್ಜಿ ಸಲ್ಲಿಸಿದ್ದೇ, ವಿಜಾಪುರದಲ್ಲಿ 2009ರಲ್ಲಿ ಸಂದರ್ಶನ ಮಾಡಿ ಮಾಸಾಶನ ನೀಡಲು ಆಯ್ಕೆ ಮಾಡಿದ್ದಾರೆ, ಆದರೆ ಇದುವರೆಗೂ ಮಾಸಾಶನ ಬಂದಿಲ್ಲ, ಜೀವನ ನಡೆಸುವುದು ಕಷ್ಟವಾಗಿದೆ ಎಂದು ಹೇಳಿದರು.<br /> <br /> ಮಾಸಾಶನ ಪಡೆಯಲು 25 ವರ್ಷ ಕಲಾವಿದರಾಗಿ ಸೇವೆ ಸಲ್ಲಿಸಿರಬೇಕು, 58 ವರ್ಷ ವಯಸ್ಸಾಗಿರಬೇಕು ಎಂಬ ಸರ್ಕಾರದ ಕಟ್ಟುಪಾಡಿಗೆ ಜಮಖಂಡಿ ತಾಲ್ಲೂಕಿನ ಅಲಗೂರ ಗ್ರಾಮದ ರಂಗಭೂಮಿ ಕಲಾವಿದ ಶಿವಲಿಂಗ ಸಿದ್ದರಾಯ ದೊಡ್ಡಮನಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ. <br /> <br /> ಒಂದಲ್ಲ ಒಂದು ಚಟಕ್ಕೆ ದಾಸರಾಗಿರುವ ಕಲಾವಿದರು 58 ವರ್ಷ ಬದುಕುವುದೇ ಕಷ್ಟ, ಅಲ್ಲದೇ ಊರಿನಿಂದ ಊರಿಗೆ ಅಲೆದು, ಸರಿಯಾಗಿ ಊಟೋಪಚಾರವಿಲ್ಲದೇ 40ರಿಂದ 50 ವರ್ಷದೊಳಗೆ ನಿತ್ರಾಣಗೊಳ್ಳುತ್ತಾರೆ. ಹೀಗಾಗಿ ಮಾಸಾಶನಕ್ಕೆ ಅರ್ಜಿ ಸಲ್ಲಿಸಲು 40 ವರ್ಷ ಸೀಮಿತಗೊಳಿಸಬೇಕು ಎಂದು ಅವರು ಮನವಿ ಮಾಡಿದರು.<br /> <br /> ರಾಜ್ಯದಲ್ಲಿ ಸಾವಿರಾರು ಅಸಕ್ತ ಮತ್ತು ವಯೋವೃದ್ಧ ಕಲಾವಿದರು ಇದ್ದು, ಪ್ರತಿ ವರ್ಷ ಅರ್ಜಿ ಸಲ್ಲಿಸುವ ಕಲಾವಿದರ ಸಂದರ್ಶನ ನಡೆಸುವ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕೇವಲ 400 ಕಲಾವಿದರನ್ನು ಮಾತ್ರ ಆಯ್ಕೆ ಮಾಡುತ್ತದೆ. <br /> <br /> ಹೀಗಾಗಿ ಅದೆಷ್ಟೋ ಕಲಾವಿದರನ್ನು ಯೋಜನೆಯಿಂದ ಕೈಬಿಡಲಾಗಿದೆ.ಯೋಜನೆ ವಂಚಿತ ಅರ್ಹ ಎಲ್ಲಾ ಕಲಾವಿದರಿಗೂ ಮಾಸಾಶನ ದೊರೆಯುವಂತಾಗಬೇಕು ಎಂಬುದು ಅವರ ಅಭಿಪ್ರಾಯವಾಗಿದೆ.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬಾಗಲಕೋಟೆ</strong>: ಸಂಕಷ್ಟದಲ್ಲಿರುವ ನಾಡಿನ ಸಂಗೀತ, ನೃತ್ಯ, ರಂಗಭೂಮಿ, ಯಕ್ಷಗಾನ, ಜಾನಪದ, ಲಲಿತಕಲೆ, ಶಿಲ್ಪಕಲಾ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿರುವ ಅಸಕ್ತ ಮತ್ತು ವಯೋವೃದ್ಧ ಕಲಾವಿದರಿಗೆ ಪ್ರತಿ ತಿಂಗಳು ರೂ. 1 ಸಾವಿರ ಮಾಸಾಶನ ನೀಡುವ ಮಹತ್ವದ ಯೋಜನೆ ನೆನೆಗುದಿಗೆ ಬಿದ್ದಿದೆ.<br /> <br /> ಕಷ್ಟ ಪರಿಸ್ಥಿತಿಯಲ್ಲಿರುವ ಸಾಹಿತಿ ಮತ್ತು ಕಲಾವಿದರಿಗೆ ಮಾಸಾಶನ ನೀಡುವ ಸಂಬಂಧ ಡಾ. ಹಂಪ ನಾಗರಾಜಯ್ಯ ಅಧ್ಯಕ್ಷತೆಯಲ್ಲಿ ಸರ್ಕಾರ 2006ರಲ್ಲಿ ನೇಮಿಸಿದ್ದ ಆಯ್ಕೆ ಸಮಿತಿ ಶಿಫಾರಸು ಮಾಡಿರುವ 1200 ಕಲಾವಿದರು ಮಾಸಾಶನಕ್ಕಾಗಿ ಜಾತಕಪಕ್ಷಿಗಳಂತೆ ಕಾಯುತ್ತಿದ್ದು, ಅದರಲ್ಲಿ ಅನೇಕರು ಈಗಾಗಲೇ ಮೃತಪಟ್ಟಿದ್ದಾರೆ.<br /> <br /> 2006-07, 2007-08 ಮತ್ತು 2008-09ನೇ ಸಾಲಿಗೆ ಒಟ್ಟು 1200 ಅರ್ಹ ಸಾಹಿತಿ ಮತ್ತು ಕಲಾವಿದರನ್ನು ಮಾಸಾಶನ ನೀಡಲು ಆಯ್ಕೆ ಮಾಡಲಾಗಿದೆ. ಆದರೆ ಈ ಕಲಾವಿದರಿಗೆ ಇನ್ನೂ ಮಾಸಾಶನ ಸಿಗದೇ ಆಯಾ ಜಿಲ್ಲೆಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಚೇರಿಗೆ ಅಲೆದು ಅಲೆದು ಮಾಸಾಶನದ ಆಸೆಯ<br /> ನ್ನೇ ಕೈಬಿಟ್ಟಿದ್ದಾರೆ. <br /> <br /> ಅಲ್ಲದೇ 2009-10 ಮತ್ತು 2010-11ನೇ ಸಾಲಿಗೆ ಸಾವಿರಾರು ಕಲಾವಿದರು ಮಾಸಾಶನಕ್ಕಾಗಿ ಅರ್ಜಿ ಹಾಕಿದ್ದು, ಇನ್ನೂ ಸಂದರ್ಶನ ಪೂರ್ಣಗೊಂಡಿಲ್ಲ.<br /> <br /> ಮಾಸಾಶನಕ್ಕಾಗಿ ಅಲೆದು ಸುಸ್ತಾದ ಬಾಗಲಕೋಟೆ ಜಿಲ್ಲೆಯ ಜನಪದ ಕಲಾವಿದೆ ಸತ್ಯವ್ವ ತಳಗೇರಿ ಈ ಸಂಬಂಧ `ಪ್ರಜಾವಾಣಿ~ಯೊಂದಿಗೆ ಮಾತನಾಡಿ, ಕಳೆದ 10 ವರ್ಷಗಳಿಂದ ಮಾಸಾಶನಕ್ಕೆ ಅರ್ಜಿ ಹಾಕಿಕೊಂಡು ಕಾಯುತ್ತಿದ್ದೇನೆ, ಈಗ ಬರಬಹುದು, ಆಗ ಬರಬಹುದು ಎಂದು ಕಾದುಕಾದು ಅದರ ಆಸೆಯನ್ನೇ ಬಿಟ್ಟಿದ್ದೇನೆ ಎಂದು ಹತಾಶೆ ವ್ಯಕ್ತಪಡಿಸಿದರು.<br /> <br /> 40 ವರ್ಷದಿಂದ ಗೀಗೀಪದ, ಭಜನೆ ಮಾಡುತ್ತಾ ಬರುತ್ತಿದ್ದೇನೆ, ಬರುವ ಅಲ್ಪ ಹಣದಲ್ಲಿ ಜೀವನ ಸರಿದೂಗಿಸುವುದು ಕಷ್ಟವಾಗಿದೆ. ಸರ್ಕಾರ ಈಗಲಾದರೂ ನಮ್ಮತ್ತ ಕಣ್ಣು ತೆರೆದು ನೋಡಬೇಕು ಎಂದು ಮನವಿ ಮಾಡಿದರು.<br /> <br /> ಮುಧೋಳ ತಾಲ್ಲೂಕಿನ ರನ್ನ ಬೆಳಗಲಿಯ ಜಾನಪದ ಅಂಧ ಕಲಾವಿದ ನಾರಾಯಣ ಡಿ. ಬಡಿಗೇರ `ಪ್ರಜಾವಾಣಿ~ಯೊಂದಿಗೆ ಮಾತನಾಡಿ, ಮಾಸಾಶನಕ್ಕಾಗಿ 2006ರಲ್ಲೇ ಅರ್ಜಿ ಸಲ್ಲಿಸಿದ್ದೇ, ವಿಜಾಪುರದಲ್ಲಿ 2009ರಲ್ಲಿ ಸಂದರ್ಶನ ಮಾಡಿ ಮಾಸಾಶನ ನೀಡಲು ಆಯ್ಕೆ ಮಾಡಿದ್ದಾರೆ, ಆದರೆ ಇದುವರೆಗೂ ಮಾಸಾಶನ ಬಂದಿಲ್ಲ, ಜೀವನ ನಡೆಸುವುದು ಕಷ್ಟವಾಗಿದೆ ಎಂದು ಹೇಳಿದರು.<br /> <br /> ಮಾಸಾಶನ ಪಡೆಯಲು 25 ವರ್ಷ ಕಲಾವಿದರಾಗಿ ಸೇವೆ ಸಲ್ಲಿಸಿರಬೇಕು, 58 ವರ್ಷ ವಯಸ್ಸಾಗಿರಬೇಕು ಎಂಬ ಸರ್ಕಾರದ ಕಟ್ಟುಪಾಡಿಗೆ ಜಮಖಂಡಿ ತಾಲ್ಲೂಕಿನ ಅಲಗೂರ ಗ್ರಾಮದ ರಂಗಭೂಮಿ ಕಲಾವಿದ ಶಿವಲಿಂಗ ಸಿದ್ದರಾಯ ದೊಡ್ಡಮನಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ. <br /> <br /> ಒಂದಲ್ಲ ಒಂದು ಚಟಕ್ಕೆ ದಾಸರಾಗಿರುವ ಕಲಾವಿದರು 58 ವರ್ಷ ಬದುಕುವುದೇ ಕಷ್ಟ, ಅಲ್ಲದೇ ಊರಿನಿಂದ ಊರಿಗೆ ಅಲೆದು, ಸರಿಯಾಗಿ ಊಟೋಪಚಾರವಿಲ್ಲದೇ 40ರಿಂದ 50 ವರ್ಷದೊಳಗೆ ನಿತ್ರಾಣಗೊಳ್ಳುತ್ತಾರೆ. ಹೀಗಾಗಿ ಮಾಸಾಶನಕ್ಕೆ ಅರ್ಜಿ ಸಲ್ಲಿಸಲು 40 ವರ್ಷ ಸೀಮಿತಗೊಳಿಸಬೇಕು ಎಂದು ಅವರು ಮನವಿ ಮಾಡಿದರು.<br /> <br /> ರಾಜ್ಯದಲ್ಲಿ ಸಾವಿರಾರು ಅಸಕ್ತ ಮತ್ತು ವಯೋವೃದ್ಧ ಕಲಾವಿದರು ಇದ್ದು, ಪ್ರತಿ ವರ್ಷ ಅರ್ಜಿ ಸಲ್ಲಿಸುವ ಕಲಾವಿದರ ಸಂದರ್ಶನ ನಡೆಸುವ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕೇವಲ 400 ಕಲಾವಿದರನ್ನು ಮಾತ್ರ ಆಯ್ಕೆ ಮಾಡುತ್ತದೆ. <br /> <br /> ಹೀಗಾಗಿ ಅದೆಷ್ಟೋ ಕಲಾವಿದರನ್ನು ಯೋಜನೆಯಿಂದ ಕೈಬಿಡಲಾಗಿದೆ.ಯೋಜನೆ ವಂಚಿತ ಅರ್ಹ ಎಲ್ಲಾ ಕಲಾವಿದರಿಗೂ ಮಾಸಾಶನ ದೊರೆಯುವಂತಾಗಬೇಕು ಎಂಬುದು ಅವರ ಅಭಿಪ್ರಾಯವಾಗಿದೆ.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>